ವಂದೇ ಭಾರತ್ ರೈಲು ಢಿಕ್ಕಿ ➤ ಬಾಲಕಿ ಮೃತ್ಯು..!

(ನ್ಯೂಸ್ ಕಡಬ) newskadaba.com ಪಾಟಿಯಾಲಾ, ಡಿ. 28. ಮೂರು ವರ್ಷದ ಬಾಲಕಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಪಂಜಾಬ್ ನ ರೋಪಾರ್ ಜಿಲ್ಲೆಯ ಕರ್ತಾರ್ ಪುರದ ಸಾಹಿಬ್ ಬಳಿ ನಡೆದಿದೆ.

ಮೃತ ಬಾಲಕಿಯನ್ನು ಖುಷಿ (3) ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ ಪಿ) ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಖುಷಿಯ ತಂದೆ ಬೀದಿ ಬದಿ ವ್ಯಾಪಾರಿಯಾಗಿದ್ದು, ರೈಲು ಹಳಿ ದಾಟಿದ ತಂದೆಯನ್ನು ಹಿಂಬಾಲಿಸಿದ ಬಾಲಕಿಗೆ ರೈಲು ಢಿಕ್ಕಿ ಹೊಡೆದಿದೆ ಎಂದು ಜಿಆರ್ ಪಿ ಅಧಿಕಾರಿಗಳು ವಿವರ ನೀಡಿದ್ದಾರೆ.

Also Read  ತುಳು ಚಿತ್ರ ನಟ ನವೀನ್.ಡಿ ಪಡೀಲ್ ರವರ ಮಾತೃ ವಿಯೋಗ

 

error: Content is protected !!
Scroll to Top