ಜನವಸತಿ ಪ್ರದೇಶದಲ್ಲಿ ತಂಡದಿಂದ ಯುವಕನ ಬರ್ಬರ ಹತ್ಯೆ..!

(ನ್ಯೂಸ್ ಕಡಬ) newskadaba.com  ನವದೆಹಲಿ , ಡಿ 23 : ಯುವಕಯೋರ್ವನನ್ನು ತಂಡವೊಂದು ಥಳಿಸಿ ಜನರ ಎದುರೇ ಹರಿತವಾದ ಆಯುಧದಿಂದ ಇರಿದು ಕೊಲೆಗೈದ ಭೀಕರ ಘಟನೆ ದೆಹಲಿಯ ಬದರ್ ಪುರದಲ್ಲಿ ವರದಿಯಾಗಿದೆ.

ಮೃತ ಯುವಕನನ್ನು ಕೇಶವ್ (30) ಎಂದು ಗುರುತಿಸಲಾಗಿದೆ.

ಮೂವರು ಯುವಕರ ತಂಡವೊಂದು ಕೇಶವ್ ಬಳಿ ಯಾವುದೋ ವಿಚಾರವಾಗಿ ಮಾತು ಬೆಳೆಸಿದೆ . ಈ ವೇಳೆ ಓರ್ವ ಯುವಕ  ಚಾಕುವಿನಿಂದ ಇರಿಯುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಏಮ್ಸ್ ಆಸ್ಪತ್ರೆ ದಾಖಲಿಸುವ ಹೊತ್ತಿಗೆ ಯುವಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಯುವಕ ಹಾಗೂ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಎನ್ನಲಾಗಿದೆ.

error: Content is protected !!
Scroll to Top