ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿವೆ ಒಂದು ಕೆಲಸ ಮಾಡಿ ಕಷ್ಟಗಳು ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಸಾಮಾನ್ಯವಾಗಿ ಎಷ್ಟೋ ಜನರಿಗೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿರುತ್ತವೆ, ಈ ಹಿಂದೆ ಎಲ್ಲ ರೀತಿಯಲ್ಲಿ ಚೆನ್ನಾಗಿದ್ದು ರಾಜ ವೈಭೋಗದಿಂದ ಜೀವನ ನಡೆಸುತ್ತಿದ್ದವರು ತುಂಬಾ ನೀಚ ಸ್ಥಾನಕ್ಕೆ ಹೋಗುತ್ತಾರೆ, ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ ಇರುತ್ತವೆ, ಹಣಕಾಸಿನ ವ್ಯವಹಾರಗಳು ಕಡಿಮೆಯಾಗಿರುತ್ತವೆ, ಇಂತಹ ಸಂದರ್ಭದಲ್ಲಿ ಏನು ಮಾಡಿದರೆ ನಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು, ಹಣಕಾಸಿನ ವ್ಯವಹಾರಗಳನ್ನು ಹೇಗೆ ಅಭಿವೃದ್ಧಿ ಪಡಿಸಿಕೊಳ್ಳಬಹುದು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಪರಿಹಾರ ಶಾಸ್ತ್ರದಲ್ಲಿ ಹಲವಾರು ವಿಧಾನಗಳಿವೆ ಹಲವಾರು ಪರಿಹಾರಗಳು ಈ ಕಷ್ಟಗಳಿಗೆ ಇವೆ ಅವುಗಳಲ್ಲಿ ಪರಿಣಾಮಕಾರಿಯಾದ ಪರಿಹಾರಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ನಮ್ಮ ನಾಮ ನಕ್ಷತ್ರದ ದಿನ ಅಥವಾ ಜನುಮ ನಕ್ಷತ್ರದ ದಿನ ಇಂತಹ ತಿಥಿ ದಿನಗಳಲ್ಲಿ ನದಿ ಹರಿಯುವ ದೇವಸ್ಥಾನಗಳಿಗೆ ಪುಣ್ಯಕ್ಷೇತ್ರಗಳಿಗೆ ಹೋಗಿ ಅಲ್ಲಿ ಇರುವಂತಹ ದೇವಾಲಯದಲ್ಲಿ ನಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸುವುದರಿಂದ ನಮಗೆ ಆದಾಯದ ಮಾರ್ಗವು ಹೆಚ್ಚಾಗುತ್ತದೆ, ನಮ್ಮ ದಾರಿದ್ರ್ಯ ದೂರವಾಗುತ್ತದೆ ಹಾಗೂ ಹಣಕಾಸಿನ ವ್ಯವಹಾರವೂ ಅಭಿವೃದ್ಧಿಗೊಳ್ಳುತ್ತದೆ. ಇನ್ನು ಎರಡನೆಯ ಮಾರ್ಗ ಯಾವುದು ಎಂದರೆ ಮನೆಯ ಆವರಣದಲ್ಲಿ ಕರಿ ಬೇವಿನ ಮರವನ್ನು ಬೆಳೆಸುವುದರಿಂದ ಕರಿಬೇವಿನ ಮರ ಯಾವ ರೀತಿ ಚಿಗುರಾಗಿ ಹಸಿರಾಗಿ ಬೆಳೆಯುತ್ತದೆಯೋ ಅದೇ ರೀತಿಯಾಗಿ ನಮಗೆ ಆರ್ಥಿಕ ಸಮಸ್ಯೆಗಳು ದೂರವಾಗಿ ಹಣಕಾಸಿನ ವ್ಯವಹಾರಗಳು ಅಭಿವೃದ್ಧಿಗೊಳ್ಳುತ್ತದೆ, ನಮ್ಮ ಹಿಂದಿನ ಅದೃಷ್ಟವು ಮತ್ತೆ ಹಿಂದಿರುಗಿ ಬರುತ್ತದೆ,ಆದ್ದರಿಂದ ಮನೆಯ ಆವರಣದಲ್ಲಿ ಕರಿಬೇವಿನ ಸಸಿಯನ್ನು ಬೆಳೆಸುವುದು ಉತ್ತಮ. ಇನ್ನೊಂದು ಮಾರ್ಗ ಯಾವುದು ಎಂದರೆ ತುಳಸಿ ಗಿಡದಲ್ಲಿ ಲಕ್ಷ್ಮಿ ಮತ್ತು ವಿಷ್ಣು ಎಂಬ ಎರಡು ತುಳಸಿ ಗಿಡಗಳಿವೆ, ಈ ಎರಡು ಗಿಡವನ್ನು ಒಟ್ಟಿಗೆ ಸೇರಿಸಿ ಮನೆಯ ಮುಂದೆ ಬೆಳೆಸುವುದರಿಂದ ಮತ್ತು ಅದಕ್ಕೆ ತುಪ್ಪದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ, ಇದನ್ನು ಪ್ರತಿನಿತ್ಯವೂ ಮಾಡಬೇಕು, ಈ ರೀತಿ ಮಾಡುವುದರಿಂದ ನಮಗೆ ಇರುವಂತಹ ಆರ್ಥಿಕ ಸಂಕಷ್ಟಗಳು ದೂರವಾಗಿ ಆರ್ಥಿಕ ಸುಧಾರಣೆಗಳು ಕಂಡುಬರುತ್ತವೆ. ಇನ್ನು ನಮ್ಮ ನಾಮ ನಕ್ಷತ್ರದ ದಿನ ಅಥವಾ ಹುಟ್ಟಿದ ದಿನದಂದು ಲಕ್ಷ್ಮಿ ಮತ್ತು ವಿಷ್ಣು ತುಳಸಿ ಗಿಡವನ್ನು ಏನು ಮಾಡಬೇಕು ಎಂದರೆ ಈ ಎರಡು ಗಿಡಗಳನ್ನು ಒಟ್ಟಿಗೆ ಸೇರಿಸಿ ನೆಟ್ಟು ಅದಕ್ಕೆ ಸ್ವಲ್ಪ ದಕ್ಷಿಣೆಯನ್ನು ಇಟ್ಟು ಬ್ರಾಹ್ಮಣರಿಗೆ ದಾನವನ್ನು ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಗೊಳ್ಳುತ್ತದೆಆರ್ಥಿಕ ಅಭಿವೃದ್ಧಿ ಕಂಡುಬರುತ್ತದೆ. ಮತ್ತೊಂದು ಪರಿಹಾರ ಯಾವುದು ಎಂದರೆ, ಮೊದಲು ಒಂದು ಬಿಳಿ ಬಟ್ಟೆಯನ್ನು ತೆಗೆದುಕೊಳ್ಳಬೇಕು, ಅದಕ್ಕೆ ಕಪ್ಪುಎಳ್ಳು ಮತ್ತು ಸ್ವಲ್ಪ ಉದ್ದಿನಬೇಳೆಯನ್ನು ಹಾಕಬೇಕು, ಇದನ್ನು ಗಂಟಿನ ರೂಪದಲ್ಲಿ ಕೊಟ್ಟು ಮನೆಯಲ್ಲಿ ಇರುವಂತಹ ಹಿರಿಯರ ಕೈಯಿಗೆ ಕೊಟ್ಟು ಇದರಿಂದ ನಿಮಗೆ ಆಗಿರುವಂತಹ ದೃಷ್ಟಿಯನ್ನು ನಿವಾಳಿಸುವಂತೆ ಹೇಳಬೇಕು, ಇದನ್ನು ಯಾವ ದಿನ ಮಾಡಿಸಿಕೊಳ್ಳಬೇಕು ಎಂದರೆ ಹುಟ್ಟಿದ ದಿನ ಅಥವಾ ನಾಮ ನಕ್ಷತ್ರದ ದಿನ ಮಾಡಿಸಿಕೊಳ್ಳಬೇಕು, ತಿಂಗಳಿಗೆ ಒಮ್ಮೆ ಈ ರೀತಿಯಾಗಿ ಮಾಡುತ್ತ ಬರುವುದರಿಂದ ನಿಮಗೆ ಇರುವಂತಹ ಎಲ್ಲ ರೀತಿಯ ದೃಷ್ಟಿದೋಷಗಳು ದೂರವಾಗುತ್ತದೆ ಮತ್ತು ನಿಮಗೆ ಯಾವುದೇ ರೀತಿಯ ದೃಷ್ಟಿದೋಷಗಳು ತಗಲುವುದಿಲ್ಲ, ಆರ್ಥಿಕ ವ್ಯವಹಾರದಲ್ಲಿ ಹಣಕಾಸಿನ ವಿಚಾರದಲ್ಲಿ ಏನಾದರೂ ದೃಷ್ಟಿದೋಷಗಳು ಆಗಿದ್ದರೆ ಅವು ನಿವಾರಣೆಯಾಗುತ್ತವೆ,ಈ ರೀತಿಯಾಗಿ ದೃಷ್ಟಿದೋಷಗಳು ನಿವಾರಣೆಯಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿನಂತೆ ಸುಧಾರಣೆ ಗೊಳ್ಳುತ್ತದೆ, ಇನ್ನು ಈ ಒಂದು ಗಂಟ್ಟನ್ನು ಏನು ಮಾಡಬೇಕು ಎಂದರೆ ಯಾರು ತುಳಿಯದ ಅಂತಹ ಜಾಗದಲ್ಲಿ ಎಸೆದು ಬರಬೇಕು. ಮತ್ತೊಂದು ಪರಿಹಾರ ಯಾವುದು ಎಂದರೆ ನಮ್ಮ ಆರ್ಥಿಕ ಪರಿಸ್ಥಿತಿಯು ಚೆನ್ನಾಗಿ ಆಗಬೇಕು ಎಂದರೆ ದೇವಾಲಯದಲ್ಲಿ ದೇವರ ಸೇವೆಯನ್ನು ಮಾಡುತ್ತಿರುವಂತಹ ಜನರಿಗೆ ಅಂದರೆ ದೇವರಿಗೆ ಪೂಜೆಯನ್ನು ಮಾಡುವಂಥವರು, ದೇವಾಲಯವನ್ನು ಸ್ವಚ್ಛಗೊಳಿಸುವಂತವರು, ದೇವಾಲಯಕ್ಕೆ ಸಂಬಂಧಿಸಿದಂತಹ ಸಿಬ್ಬಂದಿಗಳು, ದೇವಾಲಯದಲ್ಲಿ ವಾದ್ಯ ಸೇವೆಯನ್ನು ಮಾಡುವಂಥವರು ಅತಿಯಾದ ಜನರಿಗೆ ಖಾರದ ಪೊಂಗಲ್ ಅನ್ನು ಮಾಡಿ ಅವರಿಗೆ ನೀಡುವುದರಿಂದ ನಮಗೆ ಇರುವಂತಹ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ, ಹಣಕಾಸಿನ ಸಮಸ್ಯೆಗಳು ದೂರವಾಗಿ ಆರ್ಥಿಕ ಸುಧಾರಣೆಗಳು ಕಂಡುಬರುತ್ತವೆ.ಇನ್ನು ಗೋರಕ್ಷಕರು ಅಂದರೆ ಗೋವನ್ನು ಪೋಷಿಸಿ ನೋಡಿಕೊಳ್ಳುತ್ತಿರುವವರಿಗೆ ಬೆಲ್ಲದ ಸಿಹಿಯನ್ನು ಮಾಡಿ ಅವರಿಗೆ ನೀಡುವುದರಿಂದ ನಮ್ಮ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿ ಮಾಡಿಕೊಳ್ಳಬಹುದು, ಎಲ್ಲ ರೀತಿಯ ಹಣಕಾಸಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು, ನಮ್ಮ ಹಿಂದಿನ ಆರ್ಥಿಕ ಪರಿಸ್ಥಿತಿಯು ಮತ್ತೆ ನಮಗೆ ಲಭಿಸುತ್ತದೆ, ಎಲ್ಲಾ ರೀತಿಯ ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ, ದಾರಿದ್ರ್ಯತೆಯು ದೂರವಾಗುತ್ತದೆ. ಈ ರೀತಿಯಾಗಿ ಇಷ್ಟು ಪರಿಹಾರಗಳಲ್ಲಿ ನಿಮಗೆ ಯಾವುದು ಅನುಕೂಲಕರವಾಗಿರುತ್ತದೆಯೋ ಅಂತಹ ಪರಿಹಾರವನ್ನು ಕ್ರಮೇಣವಾಗಿ ಮಾಡುತ್ತಾ ಬಂದರೆ ನಿಮಗೆ ಇರುವಂತಹ ಆರ್ಥಿಕ ಸಮಸ್ಯೆಗಳು ಹಣಕಾಸಿನ ಸಮಸ್ಯೆಗಳು ಕ್ರಮೇಣವಾಗಿ ದೂರವಾಗುತ್ತವೆ, ನಿಮಗೆ ಹಿಂದೆ ಇದ್ದಂತಹ ಆರ್ಥಿಕ ಸುಧಾರಣೆಯ ಮತ್ತೆ ಮರುಕಳಿಸುತ್ತದೆ, ಎಲ್ಲ ರೀತಿಯಿಂದಲೂ ಆರ್ಥಿಕ ಅಭಿವೃದ್ಧಿ ಗಳು ಉಂಟಾಗುತ್ತವೆ ಆದಾಯದ ಮೂಲಗಳು ಹೆಚ್ಚಾಗುತ್ತವೆ.

Also Read  ಡಿಸೆಂಬರ್‌ವರೆಗೆ ಶಾಲೆ ಇಲ್ಲ ➤ ಸಿಎಂ ಬಿಎಸ್‍ವೈ ಅಧಿಕೃತ ಘೋಷಣೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top