ಮಂಗಳೂರು: ಬಿಪಿನ್ ರಾವತ್ ವಿರುದ್ದ ಅವಹೇಳನಕಾರಿ ಪೋಸ್ಟ್ ➤ ಮೂವರ ವಿರುದ್ದ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 11. ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಅವರು ಮೃತಪಟ್ಟ ಬಳಿಕ‌ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪಕ್ಕೆ ಸಂಬಂಧಿಸಿ, ಮೂವರ ಮೇಲೆ ಮಂಗಳೂರು ಪೊಲೀಸರು ಕೇಸು ದಾಖಲಿಸಿದ್ದಾರೆ.

ಮೂವರ ಪೈಕಿ ಓರ್ವ ಕಾರ್ಕಳದ ವ್ಯಕ್ತಿ, ಮತ್ತೋರ್ವ ಬೆಂಗಳೂರು ಮತ್ತು ಇನ್ನೋರ್ವನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ. ಶುಕ್ರವಾರವಷ್ಟೇ ಸಿಎಂ ಬೊಮ್ಮಯಿ ಅವರು ರಾವತ್ ವಿರುದ್ಧ ಸ್ಟೇಟಸ್ ಹಾಕುವವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದರು.

 

 

Scroll to Top