ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ದಾಂಪತ್ಯ ಜೀವನ ಸುಖವಾಗಿರುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆ ಕಾರ್ಯಗಳನ್ನು ಏರ್ಪಡಿಸುವಾಗ ಗಂಡು-ಹೆಣ್ಣಿನ ಜಾತಕವನ್ನು ತೋರಿಸಿ ಹೊಂದಾಣಿಕೆ ಆದಾಗ ಮದುವೆ ಕಾರ್ಯಗಳನ್ನು ಮುಂದುವರಿಸಲಾಗುತ್ತದೆ, ಅದೇ ರೀತಿಯಾಗಿ ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗಬಹುದು ಮತ್ತು ಯಾವ ರಾಶಿಯವರು ಯಾವ ನಕ್ಷತ್ರದವರಿಗೆ ಅಥವಾ ಯಾವ ನಕ್ಷತ್ರವಿದ್ದರೆ ಅವರು ಯಾವ ನಕ್ಷತ್ರದ ವ್ಯಕ್ತಿಗೆ ಮದುವೆಯಾಗಬಹುದು ಯಾರ ದಂಪತಿ ಜೀವನ ಸುಖವಾಗಿರುತ್ತದೆ ಎಂಬುವುದು ತಿಳಿದುಕೊಳ್ಳುವುದು ಅತಿ ಮುಖ್ಯ, ಹಾಗಾದರೆ ಜಾತಕದಲ್ಲಿ ಯಾವ ರಾಶಿಗಳು ನಕ್ಷತ್ರಗಳು ಗಣಗಳು ಹೊಂದಾಣಿಕೆಯನ್ನು ಹೊಂದಿವೆ, ಯಾವ ರಾಶಿಯವರು ಮದುವೆಯಾದರೆ ಸುಖವಾಗಿರುತ್ತಾರೆ, ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ರೋಹಿಣಿ, ಆರಿದ್ರ, ಪುಷ್ಯ, ಶ್ರಾವಣ, ಮುಖ, ವಿಶಾಖ, ಉತ್ತರಾಭಾದ್ರ, ಅಶ್ವಿನಿ ಮತ್ತು ರೇವತಿ ಇದಿಷ್ಟು ನಕ್ಷತ್ರದ ವ್ಯಕ್ತಿ ಯಾವ ನಕ್ಷತ್ರದವರನ್ನು ಕೂಡ ಇದರ ಜೊತೆ ಬೇರೆ ಯಾವ ರಾಶಿಯವರನ್ನೂ ಕೂಡ ಮದುವೆಯಾಗಬಹುದು, ಯಾವುದೇ ರೀತಿಯ ಅಶುಭ ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ. ಇನ್ನು ಅಶ್ವಿನಿ, ಕೃತಿಕಾ, ಮೃಗಶಿರಾ, ಪುನರ್ವಸು, ಚಿತ್ತ, ಅನುರಾಧ, ಮಧ್ಯಮ ನಕ್ಷತ್ರಗಳು. ಈ ರೀತಿಯ ನಕ್ಷತ್ರದೊಂದಿಗೆ ಒಂದೇ ರೀತಿಯ ನಕ್ಷತ್ರ ಅಥವಾ ಒಂದೇ ರೀತಿಯ ರಾಶಿಗಳು ಇದ್ದರೂ ಕೂಡ ಆ ವ್ಯಕ್ತಿಗೆ ಮದುವೆ ಮಾಡಿಸುವುದು ಅಶುಭ ಎಂದು ಹೇಳಲಾಗುತ್ತದೆ, ಇವರಲ್ಲಿ ಒಂದೇ ಗಣಕೂಟ ಅಥವಾ ಪಾದಗಳು ಹೊಂದಾಣಿಕೆಯಾದರೆ ಮದುವೆ ಮಾಡಿಸದೆ ಇರುವುದೇ ಉತ್ತಮ ಯಾಕೆಂದರೆ ಇವರ ದಾಂಪತ್ಯ ಜೀವನದಲ್ಲಿ ಬಿರುಕುಗಳು ಉಂಟಾಗಬಹುದು. ಇನ್ನು ಸಾಮಾನ್ಯವಾಗಿ, ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ, ಮತ್ತು ಮದುವೆಯಾಗಬೇಕು ಅನ್ನೋದಾದರೆ ಆ ಇಬ್ಬರು ವ್ಯಕ್ತಿಯ ರಾಶಿ ನಕ್ಷತ್ರ ಗಣಕೂಟ, ಪಾದಗಳನ್ನು ಹೊಂದಾಣಿಕೆಯಾಗುತ್ತದೆಯೇ ಎಂದು ನೋಡುತ್ತಾರೆ, ಈ ಎಲ್ಲ ಅಂಶಗಳು ಹೊಂದಾಣಿಕೆಯಾದ ಮೇಲೆಯೇ ಮದುವೆಯನ್ನು ಮಾಡಿಸಲಾಗುತ್ತದೆ. ಜಾತಕ ಹೊಂದಾಣಿಕೆಯಾಗಿಲ್ಲ ಅಂತ ಎಷ್ಟೋ ಜನ ಮದುವೆಯನ್ನು ಮುರಿದಿರುವುದನ್ನು ಕೂಡ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆಹಾಗಾದರೆ ಈ ರೀತಿ ಜಾತಕ ಹೊಂದಾಣಿಕೆ ಆಗದಿದ್ದಾಗ ಯಾಕೆ ಮದುವೆಯನ್ನು ಮಾಡಬಾರದು ಅಂತ ಹೇಳೋದಾದರೆ ಜಾತಕ ಹೊಂದಾಣಿಕೆಯಾಗದೆ ಇದ್ದಾಗ ವ್ಯಕ್ತಿಯ ರಾಶಿಯ ಮೇಲೆ ತನ್ನ ಸಂಗಾತಿಯ ರಾಶಿಯ ಫಲವು ಕೂಡ ಪರಿಣಾಮ ಬೀರುತ್ತದೆ, ಇದರಿಂದ ಗಂಡ ಹೆಂಡತಿಯ ನಡುವೆ ಹೊಂದಾಣಿಕೆ ಎನ್ನುವುದು ಇರುವುದಿಲ್ಲ, ಹೊಂದಾಣಿಕೆಯೇ ಇಲ್ಲ ಎಂದಮೇಲೆ ದಾಂಪತ್ಯ ಜೀವನವು ಸುಖವಾಗಿರಲು ಸಾಧ್ಯವಿಲ್ಲ, ಆ ಕಾರಣದಿಂದಾಗಿ ಯಾವುದೇ ರೀತಿಯ ಅಶುಭ ಜರುಗಬಾರದು ಅನ್ನೋ ಒಂದು ಕಾರಣಕ್ಕೆ ಈ ರೀತಿಯ ಜಾತಕ ನೋಡುವ ಪದ್ಧತಿ ಬೆಳೆಸಿಕೊಂಡು ಬರಲಾಗಿದೆ, ಹಾಗಾಗಿ ಮದುವೆಯಾಗಬೇಕಾದರೆ ತಮ್ಮ ಜಾತಕಕ್ಕೆ ರಾಶಿಗೆ ಅನುಗುಣವಾಗಿ ಇರುವಂತಹ ಸಂಗಾತಿಯನ್ನು ಮದುವೆಯಾಗುವುದರಿಂದ ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಸುಖ ದಾಂಪತ್ಯ ಎನ್ನುವುದು ನಿಮ್ಮದಾಗುತ್ತದೆ.

Also Read  ಇನ್ಸ್ಟಾಗ್ರಾಮ್ ನಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್ ➤ ಯುವಕನೋರ್ವನ ವಿರುದ್ಧ ಕೇಸ್ ದಾಖಲು

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top