ನೆಲ್ಯಾಡಿ: ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಎಸ್.ಡಿ.ಪಿ.ಐ

(ನ್ಯೂಸ್ ಕಡಬ) newskadaba.com ಇಚಿಲಂಪಾಡಿ, ಆ. 20, ಕೊರೋನಾ ಸೋಂಕಿನಿಂದ ಮೃತಪಟ್ಟ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಇಚಿಲಂಪಾಡಿಯ ವ್ಯಕ್ತಿಯೋರ್ವರ ಮೃತದೇಹದ ಅಂತ್ಯ ಸಂಸ್ಕಾರವನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಸರಕಾರದ ನಿಯಮಾವಳಿ ಮತ್ತು ಮುಂಜಾಗೃತಾ ಕ್ರಮವನ್ನನುಸರಿಸಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು.

ಸಿದ್ದೀಕ್ ನೆಲ್ಯಾಡಿ ನೇತೃತ್ವದ ಎಸ್ ಡಿ ಪಿ ಐ ತಂಡದ ಸಹಕಾರದಿಂದ ಕ್ರೈಸ್ತ ಸಮುದಾಯದ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

Scroll to Top