ಕತಾರ್ : ಕಂಪ್ರೆಶರ್ ಸಿಡಿದು ಮೃತಪಟ್ಟ ದ.ಕ ಮೂಲದ ಸಂದೇಶ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.24.ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಮೂಲದ ಯುವಕ ಸಂದೇಶ್ ಶೆಟ್ಟಿ (30) ಕಂಪ್ರೆಶರ್ ಸಿಡಿದು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಮೂಲತಃ ಪುಂಜಾಲಕಟ್ಟೆ ಸಮೀಪದ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪುರಿಯ ನಿವಾಸಿ ಗಣೇಶ್ ಶೆಟ್ಟಿ – ವಾರಿಜಾ ಶೆಟ್ಟಿ ದಂಪತಿ ಕೊನೆಯ ಪುತ್ರ ಸಂದೇಶ್ ಉದ್ಯೋಗ ನಿಮಿತ್ತ ಕತಾರ್ ನಲ್ಲಿದ್ದರು. ಸಂದೇಶ್ ಅವರ ಅಜ್ಜಿ ಮನೆ (ತಾಯಿಯ ಮನೆ) ಪುರಿಯಲ್ಲಿದ್ದು, ಪುಂಜಾಲಕಟ್ಟೆಯಲ್ಲಿ ಶಿಕ್ಷಣ ಪಡೆದಿದ್ದರು. ಸಂದೇಶ್ ಎಸಿ ಮೆಕ್ಯಾನಿಕ್ ಆಗಿದ್ದು, ಸ್ಟೇಡಿಯಂನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಕಂಪ್ರೆಶರ್ ಸಿಡಿದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂದೇಶ್ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರ ಪತ್ನಿ 20 ದಿನಗಳ ಹಿಂದೆಯಷ್ಟೇ ಕತಾರ್ ಗೆ ತೆರಳಿದ್ದರು. ಜುಲೈ 23ರಂದು ನಡೆದ ದುರ್ಘಟನೆಯಲ್ಲಿ ಸಂದೇಶ್ ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

 

Scroll to Top