ರಸ್ತೆ ಕಾಮಗಾರಿ ವೇಳೆ ಗುಡ್ಡ ಕುಸಿತ ➤ಮೂವರು ಕಾರ್ಮಿಕರ ದುರ್ಮರಣ

 

(ನ್ಯೂಸ್ ಕಡಬ) newskadaba.com ಬೆಳಗಾವಿ, ಮೇ.27. ಸೋಮವಾರ ತಾಲೂಕಿನ ದೇಸೂರು ಬಳಿ  ರಸ್ತೆ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಖಾನಾಪುರ-ಬೆಳಗಾವಿ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕರಾದ ದುರ್ಗೆಶ್ ಕುಮಾರ್(22ವರ್ಷ), ಅರ್ಜುನ್ ಸಿಂಗ್ (21ವರ್ಷ), ಸುಖಾನ್ ಎಂದು ಗುರುತಿಸಲಾಗಿದೆ.ಸುಖಾನ್ ಎಂಬ ಕಾರ್ಮಿಕನನ್ನು ಜೆಸಿಬಿ ಮೂಲಕ ಮಣ್ಣು ಅಗೆದು ಶವವನ್ನು ಹೊರತೆಗೆಯಲಾಯಿತು ಎಂದು ವರದಿ ತಿಳಿಸಿದೆ. ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಂಗಳೂರು: ಹೆಲ್ಮೆಟ್ ಜೀವ ಉಳಿಸಿತು; ಆರೋಗ್ಯವಾಗಿದ್ದೇನೆ  ➤ ಅರವಿಂದ ಬೋಳಾರ್

error: Content is protected !!
Scroll to Top