ಕಡಬ: ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆ ➤ ಕಲ್ಲಾಜೆಯಲ್ಲಿ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರಗಳು ➤ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಎ. 05. ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು, ಮರ್ಧಾಳದಿಂದ ನೆಟ್ಟಣ ಮಧ್ಯದಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗೆ ಮುರಿದು ಬಿದ್ದುದರಿಂದ ರಸ್ತೆ ತಡೆ ಉಂಟಾಗಿದೆ.

ಮರ್ಧಾಳ ಸನೀಪದ ಕಲ್ಲಾಜೆ ಮತ್ತು ನೆಟ್ಟಣ ನಡುವಿನ ಪ್ರದೇಶದಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗಡ್ಡವಾಗಿ ಉರುಳಿದ್ದು, ಉಪ್ಪಿನಂಗಡಿಯಿಂದ ಮತ್ತು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರಯಾಣಿಕರು ಅರ್ಧ ದಾರಿಯಲ್ಲಿ ಉಳಿಯುವಂತಾಗಿದೆ. ಮರಗಳನ್ನು ತೆರವುಗೊಳಿಸುವಲ್ಲಿ ಸ್ಥಳೀಯರು ನಿರತರಾಗಿದ್ದಾರೆ.

Also Read  ಪಾದಚಾರಿಗೆ ಅಪಘಾತ

error: Content is protected !!
Scroll to Top