ಪುಣ್ಯತಿಥಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯ ಮೇಲೆ ►ಯುವಕರ ಗುಪೊಂದರಿಂದ ಹಲ್ಲೆ

(ನ್ಯೂಸ್ ಕಡಬ) newskadaba.comಕಡಬ,ಫೆ.05.ಸಂಬದಿಕಕರ ಮನೆಯಿಂದ  ಪುಣ್ಯತಿಥಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಪೊಂದು ಹಲ್ಲೆ ನಡೆಸಿದ ಪ್ರಕರಣ ಕಡಬ ಪೊಲೀಸ್ ಠಾಣೆಯಿಂದ ವರದಿಯಾಗಿದೆ.ಪುತ್ತೂರು ತಾಲೂಕು ದೋಳ್ಪಾಡಿ ಗ್ರಾಮದ ಕೂರೇಲು ನಿವಾಸಿಯಾದ ವಿಶ್ವನಾಥ ಎಂಬವರ ಮೇಲೆ  ಅದೇ ಗ್ರಾಮದ ವಿಶ್ವನಾಥ, ದಯಾನಂದ, ಪುರಂದರ, ಯುವರಾಜ್, ಎಂಬವರು ಹಲ್ಲೆನಡೆಸಿದ್ದಾರೆ.

ಯುವಕರ  ಗುಂಪು ವಿಶ್ವನಾಥ,ರಿಗೆದೋಣ್ಣೆಯಿಂದ ಹೊಡೆದ ಪರಿಣಾಮ ಅವರಿಗೆ ವಿಪರೀತ ಗಾಯವಾಗಿದ್ದು  ಚಿಕಿತ್ಸೆ ಗಾಗಿ  ಕಡಬ ಸರಕಾರಿ ಆಸ್ಬತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: Content is protected !!

Join the Group

Join WhatsApp Group