(ನ್ಯೂಸ್ ಕಡಬ) newskadaba.com ಕಡಬ, ಜ.15. ಕಡಬ ತಾಲೂಕು ಕೊೈಲ ಗ್ರಾಮ ಯುವ ಒಕ್ಕಳಿಗ ಸಂಘದ ಅದ್ಯಕ್ಷರಾಗಿ ಕೊೈಲ ಗ್ರಾ.ಪಂ ಸದಸ್ಯ ಸುದೀಶ್ ಪಟ್ಟೆ , ಕಾರ್ಯದರ್ಶಿಯಾಗಿ ಚಿದಾನಂದ ಪಾನ್ಯಾಲು ಆಯ್ಕೆಯಾಗಿದ್ದಾರೆ .ಸಂಕೇಶ ತಿಮ್ಮಪ್ಪ ಗೌಡ ಎಂಬುವವರ ಮನೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಸಂಚಾಲಕರಾಗಿ ಕೊೈಲ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಪ್ಪ ಗೌಡ ಸಂಕೇಶ, ಕ್ರೀಡಾಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ನೀಡೇಲು, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಉಮೇಶ್ ಬುಡಲೂರು, ಕೋಶಾದಿಕಾರಿಯಾಗಿ ಜಗದೀಶ್ ಪಟ್ಟೆ, ಸದಸ್ಯರಾಗಿ ನಾಗೇಶ್ ಕಡೆಂಬ್ಯಾಲು, ಗಂಗಾದರ ಪರಂಗಾಜೆ, ರವೀಂದ್ರ ಸಂಕೇಶ, ಗಣೇಶ್ ಕೊಲ್ಯ, ನಾಗೇಶ ನೀಲಮೆ, ಮನೋಜ್ ನೀಲಮೆ, ವಸಂತ ಪಲ್ಲಡ್ಕ, ಕೃಷ್ಣಪ್ಪ ಕಾಯರಕಟ್ಟ, ಗಣೇಶ್ ಎರ್ಮಡ್ಕಆಯ್ಕೆಯಾಗಿದ್ದಾರೆ. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯರಾದ ಜಯಂತಿ ಆರ್ ಗೌಡ, ತೇಜಶ್ವಿಣಿ ಕಟ್ಟಪುಣಿ, ಸಮೂದಾಯದ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಕೇಶವ ಗೌಡ ಆಲಡ್ಕ, ಚಕ್ರಪಾಣಿ ಆಲಂಕಾರು, ಲಿಂಗಪ್ಪ ಗೌಡ ಕಡೆಂಬ್ಯಾಲು ಮೊದಲಾದವರು ಇದ್ದರು.









