ಕಾಂಗ್ರೆಸ್‌ಗೆ ರಾಮಲಿಂಗಾರೆಡ್ಡಿ ಶಾಕ್: ಹೈಕಮಾಂಡ್‌ನ ‘ಡಬಲ್ ಆಫರ್’ ತಿರಸ್ಕರಿಸಿದ ಹಿರಿಯ ನಾಯಕ!



(ನ್ಯೂಸ್‌ ಕಡಬ) newskadaba.com,  ಜೂ.06 : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ನಡೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.







ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರೆಡ್ಡಿ ಅವರನ್ನು ಭೇಟಿ ಮಾಡಿ, ಸಹಕಾರ ಮತ್ತು ಮುಜರಾಯಿ ಎರಡೂ ಪ್ರಮುಖ ಖಾತೆಗಳನ್ನು ಒಟ್ಟಿಗೆ ವಹಿಸಿಕೊಳ್ಳುವ ಆಫರ್ ನೀಡಿದ್ದಾರೆ.ಸ್ವಾಭಿಮಾನ ಹಾಗೂ ತಮ್ಮ ರಾಜಕೀಯ ನಿಲುವುಗಳಿಗೆ ಬದ್ಧರಾಗಿರುವ ರಾಮಲಿಂಗಾರೆಡ್ಡಿ, ಹೈಕಮಾಂಡ್‌ನ ಈ ರಾಜಿ ಸೂತ್ರವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.






ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ರಂಗಪ್ರವೇಶ ಮಾಡಿದ್ದು, ಸುರ್ಜೇವಾಲಾ ಅವರೊಂದಿಗೆ ಸತತ ಸಮಾಲೋಚನೆ ನಡೆಸಿ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ.ಸರ್ಕಾರ ರಚನೆಯ ಆರಂಭದಲ್ಲೇ ಎದುರಾಗಿರುವ ಈ ಬಿಕ್ಕಟ್ಟು ಕಾಂಗ್ರೆಸ್ ನಾಯಕತ್ವಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

error: Content is protected !!
Scroll to Top