(ನ್ಯೂಸ್ ಕಡಬ) newskadaba.com ಕಡಬ, ಜು. 29. ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಇದೀಗ ಚುನಾವಣಾ ಅಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ವಾರ್ಡ್ ನಂ. 1ರಿಂದ 7ರ ವರೆಗೆ (1-ಕಳಾರ, 2-ಕೋಡಿಬೈಲು, 3-ಪನ್ಯ, 4-ಬೆದ್ರಾಜೆ, 5-ಮಾಲೇಶ್ವರ, 6- ಕಡಬ, 7-ಪಣೆಮಜಲು) ಚುನಾವಣಾ ಅಧಿಕಾರಿಯಾಗಿ ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿ ವಿಮಲ ಬಾಬು, ಸಹಾಯಕ ಚುನಾವಣಾಧಿಕಾರಿಯಾಗಿ ತಾ.ಪಂ. ವ್ಯವಸ್ಥಾಪಕ (ಪ್ರಭಾರ) ಭುವನೇಂದ್ರ ಕುಮಾರ್ ಎಂ., ವಾರ್ಡ್ 8ರಿಂದ 13ರ ವರೆಗೆ (8-ಪಿಜಕಳ 9-ಮೂರಾಜೆ, 10-ದೊಡ್ಡಕೊಪ್ಪ, 11-ಕೋಡಿಂಬಾಳ, 12-ಮಜ್ಜಾರು, 13-ಪುಳಿಕುಕ್ಕು) ಚುನಾವಣಾಧಿಕಾರಿಯಾಗಿ ಸುಬ್ರಹ್ಮಣ್ಯ ವಿಶೇಷ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ಕೊಯಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್. ಅವರನ್ನು ನೇಮಕಗೊಳಿಸಲಾಗಿದೆ.
ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಗಳು ಇಂದಿನಿಂದ ಆರಂಭಗೊಂಡಿದ್ದು, ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕಛೇರಿಯು ಪ್ರಾರಂಭವಾಗಿದೆ.









