(ನ್ಯೂಸ್ ಕಡಬ) newskadaba.com ಜೂ. 26. ರಾಜ್ಯದಲ್ಲಿ ಈಗಾಗಲೇ ಜೂನ್ 16 ರಿಂದ ಬೈಕ್ ಟ್ಯಾಕ್ಸಿಗಳ ಮೇಲೆ ನಿಷೇಧ ಹೇರಿ ಆದೇಶಿಸಲಾಗಿದ್ದು, ಇದೀಗ ನಿಷೇಧವನ್ನು ರದ್ದುಗೊಳಿಸುವಂತೆ ಬೈಕ್ ಟ್ಯಾಕ್ಸಿ ಸಂಘಟನೆಯವರು ಕರ್ನಾಟಕ ಸಾರಿಗೆ ಸಚಿವರಿ ರಾಮಲಿಂಗಾ ರೆಡ್ಡಿಗೆ ಮನವಿ ಸಲ್ಲಿಸಿದ್ದಾರೆ.
ಪತ್ರದಲ್ಲಿ ಸಾವಿರಾರು ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ತಿಳಿಸಿದ್ದಾರೆ. ಹಲವಾರು ಉದ್ಯೋಗಿಗಳು ಈ ಮೂಲಕ 30 ರಿಂದ 35 ಸಾವಿರದ ತನಕ ಆದಾಯ ಗಳಿಸಿ ಅವರ ಕುಟುಂಬಕ್ಕೆ ನೆರವಾಗಿದ್ದರು.
ಈ ರೀತಿಯಾಗಿ ಬೈಕ್ ಟ್ಯಾಕ್ಸಿಗಳಲ್ಲಿ ಉದ್ಯೋಗ ಹೊಂದಿರುವ ಅನೇಕರು ಪದವೀಧರರಾಗಿದ್ದು, ಇದೀಗ ಅವರಿಗೆ ಕೆಲಸ ಇಲ್ಲದ ಕಾರಣ ಅವರ ಕುಟುಂಬಗಳಿಗೆ ಬಡತನದ ಸಿಡಿಲು ಬಡಿದಂತಾಗಿದೆ ಎಂದು ಮನವಿಯಲ್ಲಿ ಹೇಳಿದ್ದು, ಈ ನಿಷೇಧವನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ.













