theft

ಬಿಳಿನೆಲೆ, ಕುಲ್ಕುಂದ ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ ► ಕಾಣಿಕೆ ಹುಂಡಿ, ಮೊಬೈಲ್ ಕಳ್ಳರ ಪಾಲು

(ನ್ಯೂಸ್ ಕಡಬ) newskadaba.com ಕಡಬ, ಅ.24. ಠಾಣಾ ವ್ಯಾಪ್ತಿಯ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಒಳ ನುಗ್ಗಿರುವ ಕಳ್ಳರು ಮುಖ್ಯದ್ವಾರದ ಬೀಗವನ್ನು ಮುರಿದು ಒಳ‌ಪ್ರವೇಶಿಸಿ ನಮಸ್ಕಾರ ಮಂಟಪದ ಬದಿಯಲ್ಲಿದ್ದ 2 ಕಾಣಿಕೆ ಡಬ್ಬಿ ಹಾಗೂ ಗಣಪತಿ ಗುಡಿಯ ಕಾಣಿಕೆ ಡಬ್ಬಿ ಸೇರಿದಂತೆ ಒಟ್ಟು ಮೂರು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 12000 ಹಾಗೂ ಒಂದು ಮೈಕ್ರೋಮ್ಯಾಕ್ಸ್ ಮೊಬೈಲನ್ನು ಕದ್ದೊಯ್ದಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ. ಸೋಮವಾರ ಸಂಜೆ ಅರ್ಚಕರು ಎಂದಿನಂತೆ ಬೀಗ ಹಾಕಿ ಹೋಗಿದ್ದು, ಮಂಗಳವಾರ ಬೆಳಿಗ್ಗೆ ಆಗಮಿಸಿದಾಗ […]

ಬಿಳಿನೆಲೆ, ಕುಲ್ಕುಂದ ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ ► ಕಾಣಿಕೆ ಹುಂಡಿ, ಮೊಬೈಲ್ ಕಳ್ಳರ ಪಾಲು Read More »

ಕರಾವಳಿ

ಹಗಲು ಐಎಎಸ್ ಅಧಿಕಾರಿಯ ಕಾರು ಚಾಲಕ, ರಾತ್ರಿ ಸ್ನೇಹಿತರೊಡನೆ ಸರ ಕಳ್ಳತನ ► ಖತರ್ನಾಕ್ ಕಳ್ಳ ಇದೀಗ ಪೊಲೀಸರ ಅತಿಥಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.19. ಹಗಲಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ರಾತ್ರಿ ಹೊತ್ತು ಚಿನ್ನದ ಸರ ಎಗರಿಸುವ ಖತರ್ನಾಕ್ ಕಳ್ಳನನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಖತರ್ನಾಕ್ ಕಳ್ಳನನ್ನು ಬೆಂಗಳೂರಿನ ಕೆಂಗೇರಿ ನಿವಾಸಿ ಪೊರೋಷತ್ತಮ್ ಎಂದು ಗುರುತಿಸಲಾಗಿದೆ. ಬೆಳಗ್ಗೆ ಎದ್ದು ಸೀರಿಯಸ್ ಆಗಿ ಆ ಅಧಿಕಾರಿಯ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುರುಷೋತ್ತಮ್ ಡ್ಯೂಟಿ ಮುಗಿಯುತ್ತಿದ್ದಂತೆ ಸ್ನೇಹಿತರಾದ ಪ್ರದೀಪ್, ಪ್ರಜ್ವಲ್ ಜೊತೆ ಸೇರಿ ಕಳ್ಳತನಕ್ಕೆ ಇಳಿಯುತ್ತಿದ್ದ.

ಹಗಲು ಐಎಎಸ್ ಅಧಿಕಾರಿಯ ಕಾರು ಚಾಲಕ, ರಾತ್ರಿ ಸ್ನೇಹಿತರೊಡನೆ ಸರ ಕಳ್ಳತನ ► ಖತರ್ನಾಕ್ ಕಳ್ಳ ಇದೀಗ ಪೊಲೀಸರ ಅತಿಥಿ Read More »

ಕರ್ನಾಟಕ

ಸಂಪ್ಯ: ನಾಲ್ವರು ಖತರ್ನಾಕ್ ಕಳ್ಳರ ಬಂಧನ ► ಆರ್ಲಪದವು ಕಾಳುಮೆಣಸು ಕಳವು ಪ್ರಕರಣ ಬೇಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.13. ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಆರ್ಲಪದವು ಎಂಬಲ್ಲಿನ ಮಳಿಗೆಯೊಂದರಲ್ಲಿ ಸೆಪ್ಟೆಂಬರ್ 24 ರಂದು ನಡೆದಿದ್ದ ಲಕ್ಷಾಂತರ ಮೌಲ್ಯದ ಕಾಳುಮೆಣಸು ಕಳವು ಪ್ರಕರಣವನ್ನು ಭೇದಿಸಿರುವ ಸಂಪ್ಯ ಠಾಣಾ ಪೊಲೀಸರು ಎರಡು ಕಾರು, ನಾಲ್ವರು ಆರೋಪಿಗಳೊಂದಿಗೆ 741 ಕೆಜಿ ಕಾಳುಮೆಣಸನ್ನು ವಶಪಡಿಸಿಕೊಂಡಿದ್ದಾರೆ. ಬೊಲೆರೋ ವಾಹನದಲ್ಲಿ ಏನೋ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ‌ ದಾಳಿ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಆರ್ಲಪದವು ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ

ಸಂಪ್ಯ: ನಾಲ್ವರು ಖತರ್ನಾಕ್ ಕಳ್ಳರ ಬಂಧನ ► ಆರ್ಲಪದವು ಕಾಳುಮೆಣಸು ಕಳವು ಪ್ರಕರಣ ಬೇಧಿಸಿದ ಪೊಲೀಸರು Read More »

ಕರಾವಳಿ

ಮುಖ್ಯಮಂತ್ರಿಗೂ ತಟ್ಟಿದ ಕಳ್ಳತನದ ಬಿಸಿ ► ಸಿಎಂ ಕಾರನ್ನೇ ಹೊತ್ತೊಯ್ದ ಕಳ್ಳರು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.12. ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರನ್ನು ದೆಹಲಿ ಸಚಿವಾಲಯದ ಬಳಿಯಿಂದಲೇ ಎಗರಿಸುವ ಮೂಲಕ ಕಳ್ಳರು ಮುಖ್ಯಮಂತ್ರಿಯವರಿಗೇ ಕಳ್ಳತನದ ಬಿಸಿ ಮುಟ್ಟಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಕೇಜ್ರಿವಾಲ್ ಸಾಮಾನ್ಯವಾಗಿ ಉಪಯೋಗಿಸುತ್ತಿದ್ದ ನೀಲಿ ಬಣ್ಣದ ವ್ಯಾಗನರ್ ಕಾರನ್ನು ಕಳವು ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಡುತ್ತಿದ್ದಾರೆ. ಕಾರ್ ಕಳವಾಗುವ ಸ್ಥಳದಲ್ಲಿನ ದೃಶ್ಯಗಳು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋದ ಗುಣಮಟ್ಟ ಸರಿಯಿಲ್ಲದೇ ಮಂಕಾಗಿದೆ. ಮುಖ್ಯಮಂತ್ರಿಯ

ಮುಖ್ಯಮಂತ್ರಿಗೂ ತಟ್ಟಿದ ಕಳ್ಳತನದ ಬಿಸಿ ► ಸಿಎಂ ಕಾರನ್ನೇ ಹೊತ್ತೊಯ್ದ ಕಳ್ಳರು Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಒಂಟಿ ವೃದ್ಧರನ್ನು ಟಾರ್ಗೆಟ್ ಮಾಡಿ ► ಚಿನ್ನಾಭರಣ ಎಗರಿಸುತ್ತಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.09. ಒಂಟಿ ವೃದ್ಧರನ್ನು ತನ್ನ ಮಾತಿನ ಮೋಡಿಯಿಂದ ವಂಚಿಸಿ ಚಿನ್ನಾಭರಣ ಎಗರಿಸುತ್ತಿದ್ದ ಆರೋಪಿಯೋರ್ವನನ್ನು ಪುತ್ತೂರು ನಗರ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ. ಆರೋಪಿಯನ್ನು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಮರಾಠಿಮೂಲೆ ನಿವಾಸಿ ಸುರೇಶ್ ನಾಯ್ಕ(51) ಎಂದು ಗುರುತಿಸಲಾಗಿದ್ದು, ಬಂಧಿತನಿಂದ ಸುಮಾರು 1.70 ಲಕ್ಷ ರೂ.ವೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ‌. ಆರೋಪಿಯು ವೃದ್ಧರನ್ನೇ ಗುರಿಯಾಗಿರಿಸಿ ಅವರೊಂದಿಗೆ ಪರಿಚಯಸ್ಥನಂತೆ ನಟಿಸಿ, ನಂಬಿಕೆ ಹುಟ್ಟಿಸಿ ಬಳಿಕ ಅವರಿಂದ ಬೆಲೆ ಬಾಳುವ ಸೊತ್ತುಗಳನ್ನು ಎಗರಿಸುತ್ತಿದ್ದನೆನ್ನಲಾಗಿದೆ. ಪುತ್ತೂರು ಹಾಗೂ ಉಪ್ಪಿನಂಗಡಿ ಬಸ್ಸು

ಪುತ್ತೂರು: ಒಂಟಿ ವೃದ್ಧರನ್ನು ಟಾರ್ಗೆಟ್ ಮಾಡಿ ► ಚಿನ್ನಾಭರಣ ಎಗರಿಸುತ್ತಿದ್ದ ಆರೋಪಿಯ ಬಂಧನ Read More »

ಕರಾವಳಿ

ಉಪ್ಪಿನಂಗಡಿ: ಸರಣಿ ಕಳ್ಳತನ ►14 ಸಾವಿರ ನಗದು, ಕಾಲೇಜಿನ ಸಿಸಿ ಕ್ಯಾಮರದ ಡಿವಿಆರ್ ಕಳ್ಳತನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಸೆ.27. ಇಲ್ಲಿನ ಹಲವು ಅಂಗಡಿ ಸೇರಿದಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನುಗ್ಗಿದ ಕಳ್ಳರು ಸುಮಾರು 14 ಸಾವಿರ ನಗದು ದೋಚಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಬ್ಯಾಂಕ್ ರಸ್ತೆಯ ಜೆರಾಕ್ಸ್ ಅಂಗಡಿ, ದೊಡ್ಡಣ್ಣ ಕಿಣಿ ಅಂಗಡಿ, ಸಫಾ ಫರ್ನಿಚರ್, ಯಮ್ ಯಮ್ ಎಸ್ ಟ್ರೇಡರ್ಸ್ ಗೆ ನುಗ್ಗಿದ ಕಳ್ಳರು ಎಲ್ಲಾ ಕಡೆಯಿಂದ ಒಟ್ಟು ಸುಮಾರು 14 ಸಾವಿರ ನಗದು ಹಾಗು ಕಾಲೇಜಿನಿಂದ ಸಿಸಿ

ಉಪ್ಪಿನಂಗಡಿ: ಸರಣಿ ಕಳ್ಳತನ ►14 ಸಾವಿರ ನಗದು, ಕಾಲೇಜಿನ ಸಿಸಿ ಕ್ಯಾಮರದ ಡಿವಿಆರ್ ಕಳ್ಳತನ Read More »

ಕರಾವಳಿ

ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುತ್ತಿದ್ದ ರೈತನ ಜೇಬಿಗೆ ಕನ್ನ ಹಾಕಿದ ಕಳ್ಳರು ► ಬಟ್ಟೆ ಮೇಲೆ ಶಾಯಿ ಎರಚಿ ಕೃತ್ಯ

(ನ್ಯೂಸ್ ಕಡಬ) newskadaba.com ಮಂಡ್ಯ,ಸೆ.26. ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುತ್ತಿದ್ದ ರೈತರೋರ್ವರನ್ನು ಹಿಂಬಾಲಿಸಿದ ಕಳ್ಳರು  15 ಸಾವಿರ ರೂ. ಹಣವನ್ನು ದೋಚಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ಮಂಗಳವಾರ 11.30ರ ಸುಮಾರಿಗೆ ನಡೆದಿದೆ. ರೈತ ನಿಂಗೇಗೌಡ ಎಂಬುವವರು ವಿಜಯ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುತ್ತಿದ್ದರು. ಈ ವೇಳೆ ನಿಂಗೇಗೌಡರನ್ನು ಹಿಂಬಾಲಿಸಿದ ಕಳ್ಳರು ಶರ್ಟ್ ಮೇಲೆ ಉಪಾಯವಾಗಿ ಶಾಯಿ ಚೆಲ್ಲಿದ್ದಾರೆ. ನಂತರ ಬಟ್ಟೆಯನ್ನು ಕ್ಲೀನ್ ಮಾಡುವ ನೆಪದಲ್ಲಿ ಬಂದು ನಿಂಗೇಗೌಡರ ಶರ್ಟ್ ನಲ್ಲಿದ್ದ ಹಣವನ್ನು ದೋಚಿ

ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುತ್ತಿದ್ದ ರೈತನ ಜೇಬಿಗೆ ಕನ್ನ ಹಾಕಿದ ಕಳ್ಳರು ► ಬಟ್ಟೆ ಮೇಲೆ ಶಾಯಿ ಎರಚಿ ಕೃತ್ಯ Read More »

ಕರ್ನಾಟಕ

ಬೆಳ್ತಂಗಡಿ: ಮಕ್ಕಳಾಗುವ ಔಷಧಿ ನೀಡಿ ದಂಪತಿಗಳ ಪ್ರಜ್ಞೆ ತಪ್ಪಿಸಿ ►ಮನೆ ದರೋಡೆ..!!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಸೆ.26. ದೇವಸ್ಥಾನಕ್ಕೆಂದು ಹೊರಟ ದಂಪತಿಗಳು ರಸ್ತೆ ಬದಿ ನಿಂತಿರುವುದನ್ನು ಗಮನಿಸಿದ ಅಪರಿಚಿತರು ನಿಮಗೆ ಮಕ್ಕಳಾಗುವ ಕಷಾಯ ನೀಡುತ್ತೇವೆಂದು ಹೇಳಿ ಮನೆಯಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸೆ. 16 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಳಂಜದ ಪುರುಷೋತ್ತಮ ದಂಪತಿಗಳು ದೇವಸ್ಥಾನಕ್ಕೆ ಹೋಗುವ ಸಲುವಾಗಿ ತೆಂಕ ಕಾರಂದುರು ಬಳಿಯ ಕಾಪಿನಡ್ಕದಲ್ಲಿ ನಿಂತಿದ್ದರು. ಈ ವೇಳೆ  ಕಾರಿನಲ್ಲಿ ಆಗಮಿಸಿದ ಅಪರಿಚಿತರು ಇವರ ಮುಂದೆ ಕಾರು

ಬೆಳ್ತಂಗಡಿ: ಮಕ್ಕಳಾಗುವ ಔಷಧಿ ನೀಡಿ ದಂಪತಿಗಳ ಪ್ರಜ್ಞೆ ತಪ್ಪಿಸಿ ►ಮನೆ ದರೋಡೆ..!!! Read More »

ಕರಾವಳಿ

ಎಟಿಎಂನಿಂದ ಹಣ ಕಳ್ಳತನಕ್ಕೆ ವಿಫಲ ಯತ್ನ ► ಹೂವಿನ ವ್ಯಾಪಾರಿಯನ್ನು ಬಂಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಚಿತ್ರದುರ್ಗ,ಸೆ.23. ಎಟಿಎಂ ಮಷೀನ್ ಒಡೆದು ಹಣ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಜಾಜೂರು ಗ್ರಾಮದ ಕೆನೆರಾ ಬ್ಯಾಂಕ್ ಪಕ್ಕದಲ್ಲೇ ಇದ್ದ ಕೆನೆರಾ ಎಟಿಎಂನಿಂದ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಅದೇ ಗ್ರಾಮದ ಹೂವಿನ ವ್ಯಾಪಾರಿ ನಂದೀಶ(26) ಎಂಬ ವ್ಯಕ್ತಿ ಕುಡಿದ ಆಮಲಿನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಆರೋಪಿಯು ಎಟಿಎಂ ಮಷೀನನ್ನು ಜಖಂಗೊಳಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆಯ ವೇಳೆ ಸಾರ್ವಜನಿಕರು ನೀಡಿದ

ಎಟಿಎಂನಿಂದ ಹಣ ಕಳ್ಳತನಕ್ಕೆ ವಿಫಲ ಯತ್ನ ► ಹೂವಿನ ವ್ಯಾಪಾರಿಯನ್ನು ಬಂಧಿಸಿದ ಪೊಲೀಸರು Read More »

ಕರ್ನಾಟಕ

ನೆಟ್ಟಣ: ಎಟಿಎಂ ದರೋಡೆಗೆ ವಿಫಲ ಯತ್ನ ► ಕಟ್ಟಡ ಮಾಲಕರ ಸಮಯ ಪ್ರಜ್ಞೆಯಿಂದ ಕಳ್ಳರು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಸೆ.16. ಇಲ್ಲಿನ ಬಿಳಿನೆಲೆ ಗ್ರಾಮದ ನೆಟ್ಟಣ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜಯ ಬ್ಯಾಂಕ್ ನ ಎಟಿಎಂಗೆ ನುಗ್ಗಿದ ಕಳ್ಳರು ಕಟ್ಟಡ ಮಾಲಕರ ಸಮಯಪ್ರಜ್ಞೆಯಿಂದ ಪರಾರಿಯಾದ ಘಟನೆ ಶನಿವಾರ ಬೆಳಗ್ಗಿನ ಜಾವ ನಡೆದಿದೆ. ವಿಜಯ ಬ್ಯಾಂಕ್ ಎಟಿಎಂ ನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದ ಸಮಯ ನೋಡಿ ತಂಡವೊಂದು ಕಳ್ಳತನ ನಡೆಸಲು ಎಟಿಎಂ ಒಳನುಗ್ಗಿದೆ. ಸಿಸಿ ಕ್ಯಾಮರಾ ಹಾಗೂ ಸೈರನ್ ಕನೆಕ್ಷನ್ ತಪ್ಪಿಸಿರುವ ಕಳ್ಳರು ಎಟಿಎಂ ಯಂತ್ರವನ್ನು ಒಡೆಯುವ ವೇಳೆ ಶಬ್ದ ಕೇಳಿ

ನೆಟ್ಟಣ: ಎಟಿಎಂ ದರೋಡೆಗೆ ವಿಫಲ ಯತ್ನ ► ಕಟ್ಟಡ ಮಾಲಕರ ಸಮಯ ಪ್ರಜ್ಞೆಯಿಂದ ಕಳ್ಳರು ಪರಾರಿ Read More »

ಕರಾವಳಿ
Scroll to Top