Mangalore

ಮೂಳೆ ಮುರಿತಕ್ಕೊಳಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಧನಸಹಾಯ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಮೇ.27.,  ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಹಿರಿಯ ಸದಸ್ಯರಾದ ಉಮೇಶ ಕೆ. ಸಣ್ಣಾರ ಅವರು ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಬಿದ್ದು ಅವರ ಕಾಲಿನ ಮೂಳೆ ಮುರಿತವಾಗಿದ್ದು,  ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಧನ ಸಂಗ್ರಹ ಮಾಡಿ ಅವರಿಗೆ ಹಸ್ತಾಂತರಿಸಲಾಯಿತು. ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಅಧ್ಯಕ್ಷರಾದ ಜನಾರ್ದನ ಸೂಡ್ಲು, ಕಾರ್ಯದರ್ಶಿ ಸುಂದರ ಒಗ್ಗು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೂಳೆ ಮುರಿತಕ್ಕೊಳಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಧನಸಹಾಯ ಹಸ್ತಾಂತರ Read More »

ಕರಾವಳಿ

ಜೂನ್ 1ರಿಂದ ದೇವರ ದರ್ಶನಕ್ಕೆ ಅನುಮತಿ ➤ ಬಿ.ಎಸ್ ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಕಡಬ, ಮೇ.27, ರಾಜ್ಯದಲ್ಲಿ ದೇವಸ್ಥಾನಗಳು ಜೂನ್ 1ನೇ ತಾರೀಖಿನಿಂದ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬುಧವಾರ ಹೇಳಿದರು. ಕೇಂದ್ರ ಸರಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ​ಜೂನ್ 1ನೇ ತಾರೀಖಿನ ಬಳಿಕ ಎಲ್ಲದಕ್ಕೂ ಬಹುಪಾಲು ಕೇಂದ್ರದಿಂದ ಅನುಮತಿ ಸಿಗಬಹುದು. ದೇವಸ್ಥಾನಗಳು ಓಪನ್ ಆದರೆ ಚರ್ಚ್​​, ಮಸೀದಿಗಳು ಆಗಲೇಬೇಕು ಎಂದು ಅವರು ತಿಳಿಸಿದ್ದಾರೆ. ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ತೆರೆದ ಬಳಿಕ ಅನುಸರಿಸಬೇಕಾದ ನಿಭಂದನೆಗಳ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ.ವೀರೇಂದ್ರ ಹೆಗ್ಗಡೆಯವರು ಕೆಲವು

ಜೂನ್ 1ರಿಂದ ದೇವರ ದರ್ಶನಕ್ಕೆ ಅನುಮತಿ ➤ ಬಿ.ಎಸ್ ಯಡಿಯೂರಪ್ಪ Read More »

ಕರಾವಳಿ

ಇಂದಿನ ಹೆಲ್ತ್ ಬುಲೆಟಿನ್ ► ದ.ಕ. 11, ಉಡುಪಿ 9 ಕೊರೋನಾ ಪ್ರಕರಣ

(ನ್ಯೂಸ್ ಕಡಬ) newskadaba.com  ಮಂಗಳೂರು ,ಮೇ27 : ರಾಜ್ಯದಲ್ಲಿ ಕೊರೋನಾ ರೌದ್ರ ನರ್ತನ ಮುಂದುವರಿಯುತ್ತಲೆ ಇದೆ. ಎಂದಿನಂತೆ ಇಂದು ಕೂಡ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಕೊವೀಡ್ -19 ಪ್ರಕರಣ ದೃಢ ಪಟ್ಟಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ದಕ್ಷಿಣ ಕನ್ನಡಲ್ಲಿ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.     ಜತೆಗೆ, ಉಡುಪಿಯಲ್ಲಿ ಇಂದು 9 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಕೊರೋನಾ

ಇಂದಿನ ಹೆಲ್ತ್ ಬುಲೆಟಿನ್ ► ದ.ಕ. 11, ಉಡುಪಿ 9 ಕೊರೋನಾ ಪ್ರಕರಣ Read More »

ಕರಾವಳಿ, ಕರ್ನಾಟಕ

ಮಾಸ್ಕ್ ವಿಚಾರ ಗುಂಪುಗಳ ಮಧ್ಯೆ ಮಾರಾಮಾರಿ

(ನ್ಯೂಸ್ ಕಡಬ) newskadaba.com ಕಡಬ, ಮೇ.27. ಪುತ್ತೂರು: ಮಾಸ್ಕ್ ಹಾಕದೆ ಖಾಸಗಿ ಮಳಿಗೆಗೆ ಆಗಮಿಸಿದ ಗ್ರಾಹಕನೊಂದಿಗೆ ವಿಚಾರಿಸಿದ್ದಕ್ಕೆ  ಹೊಡೆದಾಟ ನಡೆದಿರುವ ಘಟನೆ ಮಂಗಳವಾರದಂದು  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ  ನಡೆದಿದೆ. ಪುತ್ತೂರಿನಲ್ಲಿರುವ ಖಾಸಗಿ ಮಳಿಗೆಯ ಮುಂಭಾಗದಲ್ಲಿ ಖರೀದಿಗೆ ಆಗಮಿಸಿದ್ದ ಗ್ರಾಹಕನೊಬ್ಬ ಮಾಸ್ಕ್ ಹಾಕದೇ ಸಾಲಿನಲ್ಲಿ ನಿಂತಿದ್ದ. ಕೋವಿಡ್ ವೈರಸ್ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುವುದರಿಂದ ಮಾಸ್ಕ್ ಧರಿಸದ ಗ್ರಾಹನಿಗೆ ಮಳಿಗೆಯ ಸಿಬ್ಬಂದಿಗಳು ಖರೀದಿಗೆ ಪ್ರವೇಶ

ಮಾಸ್ಕ್ ವಿಚಾರ ಗುಂಪುಗಳ ಮಧ್ಯೆ ಮಾರಾಮಾರಿ Read More »

ಕರಾವಳಿ

ಪಲ್ಟಿ ಹೊಡೆದ ಟೆಂಪೋ

(ನ್ಯೂಸ್ ಕಡಬ) newskadaba.com ಕಡಬ, ಮೇ.27. ಉಡುಪಿ: ಶಿವಮೊಗ್ಗದಿಂದ ಮಂಗಳೂರು ಕಡೆ ಬಾಳೆಹಣ್ಣು ತುಂಬಿಸಿಕೊಂಡು ಸಾಗುತ್ತಿದ್ದ ಪಿಕ್ಆಪ್ ವಾಹನವೊಂದು ಹೆದ್ದಾರಿ ಮದ್ಯೆ ಪಲ್ಟಿ ಹೊಡೆದು ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ರಾ.ಹೆ. 66 ರ ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೇವಸ್ಥಾನದ ಬಳಿ ಬುಧವಾರ ಮುಂಜಾನೆ ನಡೆದಿದೆ. ಮಂಗಳೂರಿಗೆ ತೆರಳುತ್ತಿದ್ದ ಮಿನಿ ಟೆಂಫೋ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಹಿಂಬದಿಯಲ್ಲಿ ಮೀನು ತುಂಬಿಸಿಕೊಂಡು ಕಿನ್ನಿಗೋಳಿ ಕಡೆಗೆ ಸಾಗುತ್ತಿದ್ದ ವಾಹನ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಪಲ್ಟಿ ಹೊಡೆದ ಟೆಂಪೋ Read More »

ಕರಾವಳಿ

ಮೀನುಗಾರಿಕೆಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com ಕಡಬ, ಮೇ.27. ಮಂಗಳೂರು:  ಮುಂಗಾರು ಅವಧಿಯಲ್ಲಿ ಆಳ ಸಮುದ್ರ ಯಾಂತ್ರೀಕೃತ ಮೀನುಗಾರಿಕೆ ನಿಷೇಧದ ಅವಧಿಯನ್ನು ಕೇಂದ್ರ ಸರಕಾರದ ಆದೇಶದ ಮೇರೆಗೆ  ಜೂನ್ 14ರ ವರೆಗೆ ಮುಂದೂಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಟ್ವೀಟ್ ಮಾಡಿದ್ದಾರೆ. ಮೀನುಗಾರಿಕಾ ಇಲಾಖೆ ಋತುವಿನಂತೆ ಪಶ್ಚಿಮ ಕರಾವಳಿಯಲ್ಲಿ ಮೇ 31 ಆ ವರ್ಷದ ಮೀನುಗಾರಿಕೆಗೆ ಕೊನೆಯ ದಿನ.  ಆ ಬಳಿಕ 61 ದಿನಗಳ ಕಾಲ ನಿಷೇಧ ಇರುತ್ತಿತ್ತು. ಆದರೆ ಈ ವರ್ಷ ಲಾಕ್ಡೌನ್ ಕಾರಣದಿಂದ ಮೀನುಗಾರರು ಅಪಾರ

ಮೀನುಗಾರಿಕೆಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ Read More »

ಕರಾವಳಿ

ಇಂಟರ್ನೆಟ್ ನೋ ಕನೆಕ್ಟ್ ಹಳ್ಳಿಜನರ ಗೋಳು

(ನ್ಯೂಸ್ ಕಡಬ) newskadaba.com ಕಡಬ, ಮೇ.25.ಬೆಳ್ತಂಗಡಿ:  ನಗರಗಳಲ್ಲಿರುವ ಜನರು 5ಜಿಯತ್ತ ಮುಖಮಾಡಿದರೆ ಹಳ್ಳಿಗಳಲ್ಲಿ ಮಾತ್ರ ಇಂಟರ್ನೆಟ್ ಸಂಪರ್ಕ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಸ್ಥಿರ ದೂರವಾಣಿ ಸಂಪರ್ಕ ಕಲ್ಪಿಸಿದ ಬಳಿಕ ಮೊಬೈಲ್ ಇಂಟರ್ನೆಟ್ ಯುಗಕ್ಕೆ ಬಂದರೂ ಅದು ನಗರಕ್ಕೆ ಮಾತ್ರ ಸೀಮಿತವಾಗಿದೆ. ಹಳ್ಳಿಗಳಲ್ಲಿ ಸ್ಥಿರ ದೂರವಾಣಿ ಮೂಲಕ ಬ್ರಾಡ್ಬ್ಯಾಂಡ್, ಮೊಬೈಲ್ ಇಂಟರ್ನೆಟ್ ಸಂಪರ್ಕಗಳಿವೆ. ಆದರೆ ಇವುಗಳಲ್ಲಿ ಸಂಪರ್ಕ ಸಮಸ್ಯೆ, ವೇಗದ ಸಮಸ್ಯೆ ಇನ್ನೂ ಕೊನೆಗೊಂಡಿಲ್ಲ. ಡೋಂಗಲ್ಗಳೂ ಇದ್ದರೂ ಬರಿ ಹೆಸರಿಗಷ್ಟೆ ಸಿಮಿತವಾಗಿದೆ. ಮುಂಡಾಜೆ, ಕಕ್ಕಿಂಜೆ, ದಿಡುಪೆ, ನೆರಿಯ, ಚಾರ್ಮಾಡಿ,

ಇಂಟರ್ನೆಟ್ ನೋ ಕನೆಕ್ಟ್ ಹಳ್ಳಿಜನರ ಗೋಳು Read More »

ಕರಾವಳಿ

ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯಿಂದ ➤ ಆನ್ ಲೈನ್ ವಿಡಿಯೋ ಸರಿಯಲ್ಲ

(ನ್ಯೂಸ್ ಕಡಬ) newskadaba.com ಕಡಬ, ಮೇ.26. ಕೊರೊನಾ ಲಾಕ್‌ ಡೌನ್ ಘೋಷಣೆ ಆದ ಬಳಿಕ ಎಲ್ಲಾ ದೇವಸ್ಥಾನಗಳಲ್ಲಿ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ಮಾ.27ರ ಬಳಿಕ ದೇವಸ್ಥಾನವನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು. ಆದರೆ ದೈನಂದಿನ ಪೂಜಾ ಕಾರ್ಯವನ್ನು ಮಾತ್ರ ನಡೆಸಲಾಗುತ್ತಿತ್ತು. ಮೇ.3ರ ಲಾಕ್ ಡೌನ್ ನಿಯಮಗಳ ಸಡಿಲಿಕೆಯ ಬಳಿಕ  ವಾಹನ ಸಂಚಾರಗಳು ಆರಂಭವಾಗಿ, ಹೆಚ್ಚಿನ ಅಂಗಡಿಗಳು, ಬಾರ್, ವೈನ್ ಶಾಪ್‌ಗಳು ತೆರೆದುಕೊಂಡಿವೆ. ಆದರೆ ದೇವಸ್ಥಾನಗಳನ್ನು ತೆರೆದಿಲ್ಲ. ಸರಕಾರ ಮದ್ಯದಂಗಡಿಗೆ ಅವಕಾಶ ಕೊಟ್ಟಿದೆ. ಆದರೆ ಪವಿತ್ರವಾದ ದೇವರ ದರ್ಶನ ಮತ್ತು ಪೂಜೆಗೆ ಅವಕಾಶ

ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯಿಂದ ➤ ಆನ್ ಲೈನ್ ವಿಡಿಯೋ ಸರಿಯಲ್ಲ Read More »

ಕರಾವಳಿ

ಪುತ್ತೂರಿನ ಎಂಟು ಕೋರೊನಾ ವಾರಿಯರ್ಸ್ ಹೋಂಕ್ವಾರಂಟೈನ್ಗೆ

(ನ್ಯೂಸ್ ಕಡಬ) newskadaba.com ಕಡಬ, ಮೇ.26: ಪುತ್ತೂರು ನಗರ ಸಂಚಾರ, ಮಹಿಳಾ ಪೊಲೀಸ್‌ ಠಾಣೆಯ  ನಾಲ್ವರು ಸಿಬ್ಬಂದಿಗಳು ಜ್ವರದಿಂದಾಗಿ ಹೋಂಕ್ವಾರಂಟೈನ್‌ಗೆ  ತೆರಳಿದ್ದಾರೆ ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಹೊರರಾಜ್ಯದಿಂದ ಬಂದು ವಸತಿ ನಿಲಯಗಳಲ್ಲಿ ಹೋಂಕ್ವಾರಂಟೈನ್‌ ಆಗಿರುವ ಹಾಗೂ ಮನೆಯಲ್ಲಿ ಹೋಂಕ್ವಾರಂಟೈನ್‌ನಲ್ಲಿರುವವರ ಮಾಹಿತಿ ಪಡೆಯುವ ಕಾರ್ಯ ನಡೆಸಿದ ಹಾಗೂ ಗುಂಡ್ಯ ಮತ್ತು ಸಂಪಾಜೆ ಸೇರಿದಂತೆ ಬೇರೆ ಬೇರೆ ಗಡಿ ಭಾಗದ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಪೊಲೀಸ್‌ ಸಿಬ್ಬಂದಿಗಳಿಗೆ ಇಲಾಖೆಯ ನಿರ್ದೇಶನದಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಈ ನಡುವೆ ಕೆಲವರಿಗೆ ಗಂಟಲು ನೋವು,

ಪುತ್ತೂರಿನ ಎಂಟು ಕೋರೊನಾ ವಾರಿಯರ್ಸ್ ಹೋಂಕ್ವಾರಂಟೈನ್ಗೆ Read More »

ಕರಾವಳಿ

ಗಂಡಿಬಾಗಿಲು: ಶಾಲಾ ದುರಸ್ಥಿ ಕಾಮಗಾರಿಗೆ ರೂ. 3.50 ಲಕ್ಷ ಮಂಜೂರು

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಕೊಯಿಲ ಗ್ರಾಮದ ಗಂಡಿಬಾಗಿಲು ಸರ್ಕಾರಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾಮಗಾರಿಗೆ 3 ಲಕ್ಷದ 50 ಸಾವಿರ ರೂಪಾಯಿ ಮಂಜೂರು ಆಗಿದೆ ಎಂದು ನೆಲ್ಯಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಸರ್ವೋತ್ತಮ ಗೌಡ ತಿಳಿಸಿದ್ದಾರೆ. ಶಾಲೆಯ ಕಟ್ಟಡದ ಮಾಡು ಸಂಪೂರ್ಣವಾಗಿ ಹಳೆಯದಾಗಿ, ನಾದುರಸ್ಥಿಯಲ್ಲಿತ್ತು.ಮಳೆಗಾಲದಲ್ಲಿ ತೀರಾ ಅಪಾಯ ಕಾಡುವಂತಿತ್ತು, ಅದರ ಸಲುವಾಗಿ ದ.ಕ. ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಧಿಕಾರಿ ಮಳೆಹಾನಿ ನಿಧಿಯಿಂದ ಕಟ್ಟಡದ ಮಾಡು ರಿಪೇರಿಗೆ 2 ಲಕ್ಷ ರೂಪಾಯಿ

ಗಂಡಿಬಾಗಿಲು: ಶಾಲಾ ದುರಸ್ಥಿ ಕಾಮಗಾರಿಗೆ ರೂ. 3.50 ಲಕ್ಷ ಮಂಜೂರು Read More »

ಕರಾವಳಿ
Scroll to Top