karnataka

ತೀವ್ರ ಚಳಿಗೆ ವೃದ್ದ ಮೃತ್ಯು….!

(ನ್ಯೂಸ್ ಕಡಬ ) newskadaba.com ವಿಜಯಪುರ, ಡಿ. 10. ವೃದ್ದನೋರ್ವ ಚಳಿಯ ತೀವ್ರತೆಯನ್ನು ತಡೆಯಲಾರದೆ ಮೃತಪಟ್ಟಿರುವ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.     ಮೃತರನ್ನು ಬಸವೇಶ್ವರ ವೃತ್ತದ ಬಳಿಯ ನೇತಾಜಿ ನಗರದ ನಿವಾಸಿ ಭೀಮಪ್ಪ ಹಾದಿಮನಿ (75) ಎಂದು ಗುರುತಿಸಲಾಗಿದೆ. ಬಸವೇಶ್ವರ ವೃತ್ತದ ಬಳಿ ಇರುವ ಮದ್ಯದಂಗಡಿಗೆ ಬೆಳಗ್ಗೆ ಬಂದಿದ್ದ ಇವರು ಸ್ವಲ್ಪ ಹೊತ್ತಿನ ಬಳಿಕ ವೃದ್ದ ಕೈಯ್ಯಲ್ಲಿ ಒಂದಿಷ್ಟು ಹಣ ಹಿಡಿದುಕೊಂಡು ಅಂಗಾತ ಸ್ಥಿತಿಯಲ್ಲಿ ಮಲಗಿದ್ದುದನ್ನು ಗಮನಿಸಿದ ಸ್ಥಳೀಯರು ಅನುಮಾನ ಬಂದು ವೃದ್ದನನ್ನುಎಬ್ಬಿಸಲು ಪ್ರಯತ್ನಿಸಿದಾಗ […]

ತೀವ್ರ ಚಳಿಗೆ ವೃದ್ದ ಮೃತ್ಯು….! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಸ್ ಅಪಘಾತ ➤ಓರ್ವ ಮಹಿಳೆ ಬಲಿ …!!!!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 10. ಬಸ್ ಚಾಲಕನ ನಿರ್ಲಕ್ಷದಿಂದಾಗಿ ಓರ್ವ ಮಹಿಳೆ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.     ಮೃತ ಮಹಿಳೆಯನ್ನು ಮೇಘ ರಂಜಿತ್(34) ಎಂದು ಗುರುತಿಸಲಾಗಿದೆ. ಚಾಲಕನ ಅತಿವೇಗದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಮೀಪದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      

ಬಸ್ ಅಪಘಾತ ➤ಓರ್ವ ಮಹಿಳೆ ಬಲಿ …!!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಶಾಲಾ ವಾಹನ ಢಿಕ್ಕಿ ➤ ಪಾದಾಚಾರಿ ಸ್ಥಳದಲ್ಲೇ ಮೃತ್ಯು…!!!!

(ನ್ಯೂಸ್ ಕಡಬ) newskadaba.com  ಪುತ್ತೂರು, ಡಿ. 10. ಶಾಲಾ ವಾಹನ ಡಿಕ್ಕಿಯಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಎಂಬಲ್ಲಿ ಸಂಭವಿಸಿದೆ.   ಮೃತರನ್ನು ಕಾಪು ಮಲ್ಲಾರು ನಿವಾಸಿ ರವೀಂದ್ರನಾಥ ಶೆಟ್ಟಿರವರ ಪತ್ನಿ ಸಪ್ನ(54) ಎಂದು ಗುರುತಿಸಲಾಗಿದೆ. ಇವರು ದಿನಸಿ ಅಂಗಡಿಗೆ ತೆರಳಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮಂಗಳೂರಿನಿಂದ ಉಡುಪಿಗೆ ಚಲಿಸುತ್ತಿದ್ದ ಖಾಸಗಿ ವಿದ್ಯಾಸಂಸ್ಥೆಯ ವಾಹನ ಡಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.    

ಶಾಲಾ ವಾಹನ ಢಿಕ್ಕಿ ➤ ಪಾದಾಚಾರಿ ಸ್ಥಳದಲ್ಲೇ ಮೃತ್ಯು…!!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಾಲಕರ ಮೇಲೆ ಚಿರತೆ ದಾಳಿ ➤ ಕೂದಲೆಳೆ ಅಂತರದಲ್ಲಿ ಪಾರು….!!!!

(ನ್ಯೂಸ್ ಕಡಬ) newskadaba.com ಕೊರಟಗೆರೆ, ಡಿ. 10. ಹಸುವಿನ ಹಾಲು ಕರೆಯಲು ಹೋಗಿದ್ದ ಬಾಲಕರಿಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಇರಕಸಂದ್ರ ಕಾಲನಿಯಲ್ಲಿ ಸಂಭವಿಸಿದೆ.     ಚಿರತೆ ದಾಳಿಗೆ ಒಳಗಾದವರನ್ನು ಧನುಷ್(13) ಮತ್ತು ಚೇತನ್(15) ಎಂದು ಗುರುತಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದ್ದು, ಗಾಯಾಳು ಬಾಲಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.    

ಬಾಲಕರ ಮೇಲೆ ಚಿರತೆ ದಾಳಿ ➤ ಕೂದಲೆಳೆ ಅಂತರದಲ್ಲಿ ಪಾರು….!!!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉದ್ಯಮಿಯೋರ್ವನ ಕಿಡ್ನಾಪ್ ➤ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ.10. ಉದ್ಯಮಿಯೋರ್ವನನ್ನು ಕಿಡ್ನಾಪ್ ಮಾಡಿ ಒಂದು ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.       ಅಪಹರಣಕ್ಕೆ ಒಳಗಾದ ವ್ಯಕ್ತಿಯನ್ನು ಯರಗಟ್ಟಿ ತಾಲೂಕಿನ ಸೊಪ್ಪಡ್ಲ ಗ್ರಾಮದ ಹೋಟೆಲೊಂದರ ಉದ್ಯಮಿ ಸಾಬಣ್ಣ ಮೆಗಾಡಿ ಎಂದು ಗುರುತಿಸಲಾಗಿದೆ. ಇವರನ್ನು ಅಪಹರಣ ಮಾಡಿದ ನಂತರ ಬೆದರಿಕೆ ಹಾಕಿ ಒಂದು ರೂಪಾಯಿ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸಾಬಣ್ಣ ಮೆಗಾಡಿರವರು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಬೆಳಗಾವಿ ಪೊಲೀಸರು

ಉದ್ಯಮಿಯೋರ್ವನ ಕಿಡ್ನಾಪ್ ➤ ಆರೋಪಿಗಳ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹಾಡಹಗಲೇ ಪೊಲೀಸ್ ಮನೆಯಲ್ಲಿ ಕಳ್ಳ ತನ

(ನ್ಯೂಸ್ ಕಡಬ) newskadaba.com  ಮಂಡ್ಯ, ಡಿ. 10. ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಸಮೀಪದ ಗ್ರಾಮದಲ್ಲಿ ಪೊಲೀಸ್ ಮುಖ್ಯ ಪೇದೆಯೊಬ್ಬರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ ಘಟನೆ ನಡೆದಿದೆ.   ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕನ್ಸ್ ಟೇಬಲ್ ರವಿ ಅವರು ಪತ್ನಿ ಜೊತೆ ಅಸ್ಪತ್ರೆಗೆ ತೆರಳಿದ್ದು, ಮರಳಿ ಬಂದು ನೋಡಿದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ. ಮನೆಯ ಬಾಗಿಲು ಅಥವಾ ಬೀರುವನ್ನು ಒಡೆಯದೆ ಕೀ ಬಳಸಿ, ಅಂದಾಜು 3.80 ಲಕ್ಷ ರೂ. ಮೌಲ್ಯದ

ಹಾಡಹಗಲೇ ಪೊಲೀಸ್ ಮನೆಯಲ್ಲಿ ಕಳ್ಳ ತನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಮುಕ ಶಿಕ್ಷಕ ಅಮಾನತಿಗೆ ಪೋಷಕರ ಒತ್ತಾಯ

(ನ್ಯೂಸ್ ಕಡಬ) newskadaba.com ಮಂಡ್ಯ, ಡಿ.10. ವಿದ್ಯಾರ್ಥಿನಿಯರ ಜೊತೆ ಶಿಕ್ಷಕನೋರ್ವ ಅಸಭ್ಯ ವರ್ತನೆ ನಡೆಸಿದ ಘಟನೆ ಮಂಡ್ಯ ತಾಲೂಕಿನ ಬೇಬಿ ಸರ್ಕಾರಿ ಪೌಢಶಾಲೆಯಲ್ಲಿ ಸಂಭವಿಸಿದೆ.   ಕಾಮುಕ ಶಿಕ್ಷಕನ ದೌರ್ಜನ್ಯದಿಂದ ಬೇಸತ್ತ ವಿದ್ಯಾರ್ಥಿಗಳು ಆತನ ವಿರುದ್ದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರದ ಮೂಲಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ದಿಢೀರ್ SDMC ಸಭೆ ಆಯೋಜಿಸಿದ ಪೋಷಕರು ಶಿಕ್ಷಕರ ವಿರುದ್ದ ರೊಚ್ಚಿಗೆದ್ದು ಹಲ್ಲೆಗೆ ಯತ್ನಿಸಿದ್ದಲ್ಲದೇ, ಆರೋಪಿ ಶಿಕ್ಷಕನ ಅಮಾನತಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.    

ಕಾಮುಕ ಶಿಕ್ಷಕ ಅಮಾನತಿಗೆ ಪೋಷಕರ ಒತ್ತಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಹಾಸನ, ಡಿ.10. ಒಂಟಿ ಕಾಡಾನೆಯೊಂದು ಪ್ರತ್ಯಕ್ಷವಾದ ಘಟನೆ ಬೇಲೂರು ತಾಲೂಕಿನ ಆರೇಹಳ್ಳಿ ಗ್ರಾಮದಲ್ಲಿ ನಡೆದಿದೆ.     ಇದು ಆರೇಹಳ್ಳಿಯ ಗ್ರಾಮದ ಪ್ರಮುಖ ರಸ್ತೆ ಓಡಾಡುತ್ತಿದ್ದು, ಇದರ ವಿಡಿಯೋವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ನಾಡಿಗೆ ಬರಲು ಪ್ರಾರಂಭಿಸಿವೆ. ಇದರಿಂದ ಜನರಿಗೆ ಹೊರಗಡೆ ಬರಲು ಕಷ್ಟವಾಗುತ್ತಿದೆ.

ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ➤ ವಿಡಿಯೋ ವೈರಲ್ Read More »

ಕರ್ನಾಟಕ

ಚಂಡಮಾರುತ ಎಫೆಕ್ಟ್ ➤ಬೆಂಗಳೂರು ಗಡ ಗಡ…!!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 10. ತೀವ್ರ ಚಳಿಗೆ ಅಕ್ಷರಶಃ ನಡುಗಿದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಇನ್ನೂ ಎರಡು ಮೂರು ದಿನ ಹೀಗೆಯೇ ತೀವ್ರ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ಐದಾರು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಕುಸಿತ ದಾಖಲಾಗಿರುವುದಾಗಿ ತಿಳಿದುಬಂದಿದೆ.   ಶುಕ್ರವಾರ ನಸುಕಿನ ಹೊತ್ತು ದಿನದ ಕನಿಷ್ಠ ತಾಪಮಾನ 18.2 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಮಧ್ಯಾಹ್ನದ ವೇಳೆಗೆ 17.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು ಎಂದು ರಾಜ್ಯ ಹವಾಮಾನ ಕೇಂದ್ರದ

ಚಂಡಮಾರುತ ಎಫೆಕ್ಟ್ ➤ಬೆಂಗಳೂರು ಗಡ ಗಡ…!!!! Read More »

ಕರ್ನಾಟಕ

ಖಾಸಗಿ ಬಸ್ಸು ಮತ್ತು ಕಾರು ಡಿಕ್ಕಿ➤ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ. 10. ಖಾಸಗಿ ಬಸ್ಸು ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಉಡುಪಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಎಂಬಲ್ಲಿ ನಡೆದಿದೆ.     ಮೃತಪಟ್ಟವರನ್ನು ಆಂಧ್ರದ ಮೂಲದವರೆಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ಖಾಸಗಿ ಬಸ್ಸು ಮತ್ತು ಕಾರು ಡಿಕ್ಕಿ➤ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ
Scroll to Top