Kadaba

ಅಪರಿಚಿತ ಲಾರಿ ಢಿಕ್ಕಿ ► ಸ್ಥಳದಲ್ಲೇ ಐವರ ಮೃತ್ಯು

(ನ್ಯೂಸ್ ಕಡಬ) newskadaba.com ಹೈದರಾಬಾದ್, ಆ.23, ಅಪರಿಚಿತ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿ, ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ಬೆನ್ದಾರದಲ್ಲಿ ನಡೆದಿದೆ. ಘಟನೆಯಲ್ಲಿ ಲೀಮುಗುಡ ಜಿಲ್ಲೆಯ ಮೊರೋಲೆ ಸಂತೋಷ್(18) ಹಾಗೂ ಅಡೇ ತಿರುಪತಿ(22). ಅಗರ್‍ವಾಡದಲ್ಲಿ ವಾಸಿಸುತ್ತಿದ್ದ ವೇದ್‍ಮ ಅಂಭರಾವ್(25), ಕೇರಮೇರಿ ಮಂಡಲ್‍ನ ಜಾರಿ ಜಿಲ್ಲೆಯ ಲೇಂದಗುಡ(14) ಸಾವನ್ನಪ್ಪಿರುವ ವ್ಯಕ್ತಿಗಳು ಎಂದು ವಾನ್‍ಕಿಡಿ ಪೊಲೀಸರು ತಿಳಿಸಿದ್ದಾರೆ. ವೇಗವಾಗಿ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ […]

ಅಪರಿಚಿತ ಲಾರಿ ಢಿಕ್ಕಿ ► ಸ್ಥಳದಲ್ಲೇ ಐವರ ಮೃತ್ಯು Read More »

ಕರ್ನಾಟಕ

ಅದೃಷ್ಟದ ಮನೆಗೆ ವಾಪಾಸಾದ ಮಾಜಿ ಸಿಎಂ ಹೆಚ್.ಡಿ. ಕೆ.

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.23, ಜೆಪಿ ನಗರದ ಮನೆಯಲ್ಲಿ ವಾಸ್ತು ಸರಿ ಇಲ್ಲ ಅಂತಾ ಬದಲಾಯಿಸೋಕೆ ಮುಂದಾಗಿದ್ದ ಅದೃಷ್ಟದ ಮನೆಗೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ವಾಪಸ್ ಆಗಿದ್ದಾರೆ. ಒಮ್ಮೆ ಮನೆ ಮಾರಾಟಕ್ಕೂ ಚಿಂತನೆ ಮಾಡಿದ್ದ ಇವರು, ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಕರಿನಾಗರ ಹಾವು ಕಾಣಿಸಿಕೊಂಡಿತ್ತು. ಆಗ ವಾಸ್ತುದೋಷ ಸರಿಪಡಿಸಿ ಇದೇ ಮನೆಯಲ್ಲಿ ವಾಸಿಸಿ ಅಂತ ಜ್ಯೋತಿಷಿಗಳು ಸಲಹೆ ನೀಡಿದರು. ಕಳೆದ ಎರಡೂವರೆ ವರ್ಷದಿಂದ ಮನೆಯನ್ನ ನವೀಕರಣ ಮಾಡಿದ ಬಳಿಕ ಮತ್ತೆ ಗೃಹ ಪ್ರವೇಶ ಮಾಡಿದ್ದಾರೆ.

ಅದೃಷ್ಟದ ಮನೆಗೆ ವಾಪಾಸಾದ ಮಾಜಿ ಸಿಎಂ ಹೆಚ್.ಡಿ. ಕೆ. Read More »

ಕರ್ನಾಟಕ

ಡಾ| ಮುರಲೀ ಮೋಹನ್ ಚೂಂತಾರು ► ಸುಬ್ರಹ್ಮಣ್ಯ ಘಟಕಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ. 23, ಡಾ| ಮುರಲೀ ಮೋಹನ್ ಚೂಂತಾರು ಸುಬ್ರಹ್ಮಣ್ಯ ಘಟಕಕ್ಕೆ ಇತ್ತೀಚೆಗೆ ಭೇಟಿ ನೀಡಿ ಕವಾಯತು ವೀಕ್ಷಿಸಿದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಠಾರ ಅಂಗಡಿಗುಡ್ಡೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿದರು. ಕಾರ್ಯಕ್ರಮಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯದರ್ಶಿಯವರಾದ ಶ್ರೀಯುತ ರವೀಂದ್ರರವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ ಗೃಹರಕ್ಷಕರು ದೇವಸ್ಥಾನದಲ್ಲಿ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮವನ್ನು

ಡಾ| ಮುರಲೀ ಮೋಹನ್ ಚೂಂತಾರು ► ಸುಬ್ರಹ್ಮಣ್ಯ ಘಟಕಕ್ಕೆ ಭೇಟಿ Read More »

ಕರಾವಳಿ

ಕೌಟುಂಬಿಕ ಕಲಹ ಹಿನ್ನಲೆ ► ಇಬ್ಬರು ಕಂದಮ್ಮಗಳಿಗೆ ನೇಣು ಹಾಕಿದ ತಂದೆ ಆತ್ಮಹತ್ಯೆಗೆ ಶರಣು..!!!

(ನ್ಯೂಸ್ ಕಡಬ) newskadaba.com ಮಂಡ್ಯ, ಆ.23, ಪ್ರಪಂಚದ ಪರಿಜ್ಞಾನವೇ ಇಲ್ಲದ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಮೊದಲು ನೇಣು ಹಾಕಿದ ತಂದೆ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಾಗಮಂಗಲ ತಾಲೂಕಿನ ಹೆಂಚಿನಕೊಪ್ಪಲು ಗ್ರಾಮದಲ್ಲಿ ಬುಧವಾರ ಬೆಳಿಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಜಯರಾಮ್(45) ಹಾಗೂ ತನ್ನ ಮಕ್ಕಳಾದ ಸೌಭಾಗ್ಯ(4), ಹರ್ಷಿಕ(2) ಅವರಿಗೆ ಮೊದಲು ನೇಣು ಹಾಕಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಯರಾಮ್ ರವರ ಮೊದಲ ಪತ್ನಿ ಬೆಂಗಳೂರಿನಲ್ಲಿ ವಾಸವಿದ್ದು, ಎರಡನೇ ಪತ್ನಿಯೊಂದಿಗೆ ವಾಸವಿದ್ದರು. ಆದ್ರೆ ಇತ್ತೀಚಿಗೆ ಇಬ್ಬರ

ಕೌಟುಂಬಿಕ ಕಲಹ ಹಿನ್ನಲೆ ► ಇಬ್ಬರು ಕಂದಮ್ಮಗಳಿಗೆ ನೇಣು ಹಾಕಿದ ತಂದೆ ಆತ್ಮಹತ್ಯೆಗೆ ಶರಣು..!!! Read More »

ಕರಾವಳಿ

ಭೀಕರ ರಸ್ತೆ ಅಪಘಾತ ► ಇಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ಮಂಡ್ಯ, ಆ.23, ಕ್ವಾಲಿಸ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಮಖಾಮುಖಿ ಢಿಕ್ಕಿಯಾಗಿ ಕ್ವಾಲಿಸ್‍ ನಲ್ಲಿದ್ದ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ಬಸವನಪುರ ಗೇಟ್ ಬಳಿ ಬುಧವಾರ ಮುಂಜಾನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರ ಹೆಸರು ಪತ್ತೆಯಾಗಿಲ್ಲ. ಉಳಿದಂತೆ ನಾಗರಾಜು, ಆನಂದ, ಪ್ರಭುಲಿಂಗದೇವರು ಎಂಬವರು ಗಾಯಗೊಂಡಿದ್ದಾರೆ. ಕ್ವಾಲಿಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದವರನ್ನು ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಜ್ಯೋತಿಷಿಗಳು ಎಂದು ಹೇಳಲಾಗ್ತಿದೆ. ಬುಧವಾರ ಬೆಳಗ್ಗೆ ಕೊಳ್ಳೆಗಾಲದಿಂದ ಬೆಂಗಳೂರಿನ ಕಡೆ ತೆರಳುತ್ತಿದ್ದ ಕ್ವಾಲಿಸ್‍ ಹಾಗೂ

ಭೀಕರ ರಸ್ತೆ ಅಪಘಾತ ► ಇಬ್ಬರ ದುರ್ಮರಣ Read More »

ಕರ್ನಾಟಕ

ಅತ್ತಿಗೆಯಿಂದ ಅಣ್ಣನ ಕೊಲೆ ಶಂಕೆ ► ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.23, ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಮಂಗಳವಾರದಂದು ಆನೇಕಲ್ ತಾಲೂಕಿನ ಹಂದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ಹಂದೇನಹಳ್ಳಿ ಗ್ರಾಮದ ಅಯ್ಯಪ್ಪ ರೆಡ್ಡಿ ಸಾಲ ತೀರಿಸುವ ಸಲುವಾಗಿ ತಮ್ಮ 39 ಗುಂಟೆ ಜಮೀನನ್ನು 80 ಲಕ್ಷಕ್ಕೆ ಮಾರಿದ್ರು. ಇದಾದ ಮೂರೇ ದಿನದಲ್ಲಿ ಅಂದ್ರೆ ಜುಲೈ 31ರಂದು ಸಾವನ್ನಪ್ಪಿದ್ರು. ಶವ ಸಂಸ್ಕಾರದವರೆಗೂ ಸುಮ್ಮನಿದ್ದ ಸಹೋದರ ರಾಮಕೃಷ್ಣ ರೆಡ್ಡಿ ಇದೀಗ ಅಣ್ಣನನ್ನು ಕೊಲೆ

ಅತ್ತಿಗೆಯಿಂದ ಅಣ್ಣನ ಕೊಲೆ ಶಂಕೆ ► ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ Read More »

ಕರಾವಳಿ

ಡೆತ್ ನೋಟ್ ಬರೆದಿಟ್ಟು ಮಹಿಳಾ ಎಎಸ್​ಐ ಆತ್ಮಹತ್ಯೆಗೆ ಯತ್ನ ► ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಹಾವೇರಿ, ಆ.23, ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳಾ ಎಎಸ್ಐ ಡೆತ್ ನೋಟ್ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ  ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಮಂಗಳವಾರ ನಡೆದಿದೆ.  ಮಹಿಳಾ ಎಎಸ್ಐ ಎಂ.ಎ.ಅಸಾದಿರವರು, ನನ್ನ ಸಾವಿಗೆ ಸಿಪಿಐ ಸಂಗನಾಥ ಕಾರಣ ಅಂತಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಹಂಸಭಾವಿ ಠಾಣೆಯ ಎಎಸ್​ಐ ಆಗಿರುವ ಅಸಾದಿ ಅವರು ಹಿರೇಕೆರೂರು ಪಟ್ಟಣದಲ್ಲಿ ರೈತರ ಪ್ರತಿಭಟನೆ ಇದ್ದುದರಿಂದ ಬಂದೋಬಸ್ತಗೆ ಬಂದಿದ್ದರು. ಈ ವೇಳೆ ಸಿಬ್ಬಂದಿ ಡ್ಯೂಟಿಯ ಪಾಸ್​ಪೋರ್ಟ್ ಬಿಟ್ಟು ಬಂದ ಹಿನ್ನೆಲೆಯಲ್ಲಿ ಸಿಪಿಐ

ಡೆತ್ ನೋಟ್ ಬರೆದಿಟ್ಟು ಮಹಿಳಾ ಎಎಸ್​ಐ ಆತ್ಮಹತ್ಯೆಗೆ ಯತ್ನ ► ಆಸ್ಪತ್ರೆಗೆ ದಾಖಲು Read More »

ಕರ್ನಾಟಕ

ನಾಳೆ ಕಡಬದಲ್ಲಿ ಬಳ್ಳೇರಿ ಬಿಲ್ಡರ್ಸ್ ನೂತನ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಆ.23. ಇಂಜಿನಿಯರ್ ಮನೋಜ್ ಕೃಷ್ಣ ಬಳ್ಳೇರಿಯವರ ನೂತನ ಕಛೇರಿ ಬಳ್ಳೇರಿ ಬಿಲ್ಡರ್ಸ್ ಕಡಬದ ಮುಖ್ಯ ರಸ್ತೆಯ ಭಾಗೀರಥಿ ಟವರ್ಸ್ ನಲ್ಲಿ ಆಗಸ್ಟ್ 25ನೇ ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ಶುಭಾರಂಭಗೊಳ್ಳಲಿದೆ. ಸುಂದರವಾದ ಕಟ್ಟಡ ನಿರ್ಮಾಣಕ್ಕೆ ರಚನಾತ್ಮಕ ಸಲಹೆ, ಎಸ್ಟಿಮೇಶನ್, ಪ್ಲಾನಿಂಗ್, ಇಂಟೀರಿಯರ್ ಡಿಸೈನಿಂಗ್, ಮಾಡೆಲಿಂಗ್ ಸೇವೆಗಳಿಗಾಗಿ ಸಂಪರ್ಕಿಸುವಂತೆ ಮನೋಜ್ ಕೃಷ್ಣ ಬಳ್ಳೇರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಕಡಬದಲ್ಲಿ ಬಳ್ಳೇರಿ ಬಿಲ್ಡರ್ಸ್ ನೂತನ ಕಛೇರಿ ಶುಭಾರಂಭ Read More »

ಕರಾವಳಿ

ಯಡಿಯೂರಪ್ಪರಿಗೆ ಮುಳುವಾಗಲಿದೆಯಾ ಡಿನೋಟಿಫಿಕೇಷನ್ ಗುಮ್ಮ ► ಅಲ್ಲ ಸರ್ಕಾರದ ತಂತ್ರಗಾರಿಕೆ ತಲೆಕೆಳಗಾಗಲಿದೆಯಾ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ .23, ಬಿಎಸ್ ಯಡಿಯೂರಪ್ಪ ವಿರುದ್ಧ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ಹೈಕೋರ್ಟ್ ನಲ್ಲಿ  ನಡೆಯಲಿದೆ. ಎಫ್ಐಆರ್ ಗೆ ಮಧ್ಯಂತರ ತಡೆ ಕೋರಿ ಸಲ್ಲಿಸಿರುವ ಮನವಿ ಕುರಿತು ಇಂದು ವಾದ ನಡೆಯಲಿದೆ. ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಗುತ್ತೋ ಇಲ್ಲವೋ ಅನ್ನೋದು ಇಂದು ನಿರ್ಧಾರವಾಗಲಿದೆ. ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ಹಾಗೂ ಎಸಿಬಿ ಪರ ಮಾಜಿ ಅಡ್ವೋಕೇಟ್ ಜನರಲ್ ರವಿ

ಯಡಿಯೂರಪ್ಪರಿಗೆ ಮುಳುವಾಗಲಿದೆಯಾ ಡಿನೋಟಿಫಿಕೇಷನ್ ಗುಮ್ಮ ► ಅಲ್ಲ ಸರ್ಕಾರದ ತಂತ್ರಗಾರಿಕೆ ತಲೆಕೆಳಗಾಗಲಿದೆಯಾ…? Read More »

ಕರಾವಳಿ

ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ► ಮನುಷ್ಯನಲ್ಲಿರುವ ರಾಕ್ಷಸಿ ಪ್ರವೃತ್ತಿ ಕಡಿಮೆಯಾಗಬೇಕು ►ವಿಶ್ವನಾಥ ರೈ

(ನ್ಯೂಸ್ ಕಡಬ) newskadaba.com ಕಡಬ, ಆ .23, ಮನುಷ್ಯನಲ್ಲಿರುವ ರಾಕ್ಷಸಿ ಪ್ರವೃತ್ತಿ ಕಡಿಮೆಯಾದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಕೊಕ್ಕಡ ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ರೈ ಹೇಳಿದರು. ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆದ 23ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮರೋಪ ಸಮಾರಂಭದಲ್ಲಿ ಮಾತನಾಡಿ ಅವರು, ನಾವು ನಮ್ಮ ಜೀವನದ ಉದ್ದೇಶವನ್ನು ಅರಿತುಕೊಂಡು ಜೀವನ ನಡೆಸಿದಾಗ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ, ನಾವು ಪ್ರಕೃತಿಗೆ ವಿರುದ್ದವಾಗಿ ಬದುಕಬಾರದು, ನಮ್ಮ ಆಂತರಿಕ ಪ್ರವೃತ್ತಿ ಉತ್ತಮವಾಗಿರಬೇಕು,

ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ► ಮನುಷ್ಯನಲ್ಲಿರುವ ರಾಕ್ಷಸಿ ಪ್ರವೃತ್ತಿ ಕಡಿಮೆಯಾಗಬೇಕು ►ವಿಶ್ವನಾಥ ರೈ Read More »

ಕರಾವಳಿ
Scroll to Top