Kadaba News

ಸುರತ್ಕಲ್: ಪ್ರಿಯತಮೆಯ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೂವಿನ ವ್ಯಾಪಾರಿ…!

(ನ್ಯೂಸ್ ಕಡಬ) newskadaba.com ಸುರತ್ಕಲ್, ನ. 18. ಹೂವಿನ ವ್ಯಾಪಾರಿಯೊಬ್ಬ ತನ್ನ ಪಿಯತಮೆಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ನಲ್ಲಿ ಇಂದು ನಡೆದಿದೆ.     ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಕುಳಾಯಿ ನಿವಾಸಿ ವಸಂತ್(44) ಎಂದು ಗುರುತಿಸಲಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಹೂವು ವ್ಯಾಪಾರ ಮಾಡುತ್ತಿದ್ದ ಈತನ ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ಸೂರಿಂಜೆಯ ವಿವಾಹಿತ ಮಹಿಳೆಯೋರ್ವರ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಆದರೆ ಈತನಿಗೆ ದ್ವೇಷ್ಯ ಇದ್ದ ಕಾರಣ ಮಹಿಳೆಯನ್ನೂ ಕೊಂದು […]

ಸುರತ್ಕಲ್: ಪ್ರಿಯತಮೆಯ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೂವಿನ ವ್ಯಾಪಾರಿ…! Read More »

ಕರಾವಳಿ, ಕ್ರೈಮ್ ನ್ಯೂಸ್

ದ.ಕ. ಜಿಲ್ಲೆಯಲ್ಲಿ ಇಳಿಮುಖದತ್ತ ಕೋವಿಡ್ -19 ಕೇಸ್

(ನ್ಯೂಸ್ ಕಡಬ) newskadaba.com ಮಂಗಳೂರು ನ. 18:  ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಕಳೆದ ದಿನ  30 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ನಿನ್ನೆ 91 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ ಉತ್ತಮವಾಗಿದ್ದು, 29962ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 681 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ದಿನ ಇಬ್ಬರು ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸಾವಿನ ಸಂಖ್ಯೆ 696ಕ್ಕೆ ಏರಿಕೆಯಾಗಿದೆ. ಇನ್ನು ದ.ಕ. ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು

ದ.ಕ. ಜಿಲ್ಲೆಯಲ್ಲಿ ಇಳಿಮುಖದತ್ತ ಕೋವಿಡ್ -19 ಕೇಸ್ Read More »

ಕರಾವಳಿ, ಕರ್ನಾಟಕ

ಸುಳ್ಯ: ಪ್ರಜ್ಞಾ ಆಶ್ರಮದಲ್ಲಿ ಜ್ಞಾನದೀಪ ಸಂಸ್ಥೆಯಿಂದ ದೀಪಾವಳಿ ಆಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ ನ. 18: ನಾಡಿನೆಲ್ಲೆಡೆ ಹಬ್ಬದ ಸಂಭ್ರಮ ಮೇಳೈಸುತ್ತಿದ್ದರೆ ಪುತ್ತೂರು ಸಮೀಪದ ಕರ್ಮಲ ಬನ್ನೂರಿನ ಪ್ರಜ್ಞಾ ವಿಕಚೇತನರ ಪುನರ್ವಸತಿ ಕೇಂದ್ರದ ಆಶ್ರಮದಲ್ಲಿ ಸುಳ್ಯ ಮತ್ತು ಬೆಳ್ಳಾರೆಯಲ್ಲಿ ಕಾರ್ಯರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ, ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ವತಿಯಿಂದ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ ನಡೆಯಿತು. ಬರ್ನೂರು ಕರ್ಮಲದ ಬಾಡಿಗೆ ಮನೆಯೊಂದರಲ್ಲಿ ನಾಲ್ಕು ವರ್ಷಗಳಿಂದ 12 ಮಂದಿ ಮಾನಸಿಕ ವಿಕಲಚೇತನರನ್ನು ಸಲಹಿ ಅವರ ಬದುಕಿಗೆ ಬೆಳಕು ತೋರುತ್ತಿರುವ ಪ್ರಜ್ಞಾ ಆಶ್ರಮದಲ್ಲಿ ಬುಧವಾರ ಹಬ್ಬದ ವಾತಾವರಣ ಕಲೆಕಟ್ಟಿತ್ತು.

ಸುಳ್ಯ: ಪ್ರಜ್ಞಾ ಆಶ್ರಮದಲ್ಲಿ ಜ್ಞಾನದೀಪ ಸಂಸ್ಥೆಯಿಂದ ದೀಪಾವಳಿ ಆಚರಣೆ Read More »

ಕರಾವಳಿ

ಕುಲ್ಕುಂದ: ದೀಪಾವಳಿ ಪ್ರಯುಕ್ತ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಂಬಿಲ

(ನ್ಯೂಸ್ ಕಡಬ) newskadaba.com ಕುಲ್ಕುಂದ, ನ. 18:  ಕಳೆದ ದಿನ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೀಪಾವಳಿ ತಂಬಿಲ ಕಾರ್ಯಕ್ರಮ ನಡೆಯಿತು. ವಿವಿಧ ವೈದಿಕ ವಿದಿ ವಿಧಾನಗಳನ್ನು ಪುರೋಹಿರ ರಘುರಾಮ ಅಮ್ಮಣ್ಣಾಯವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.     ಬಳಿಕ ಗುಳಿಗನ ಕಟ್ಟೆಯಲ್ಲಿ ತಂಬಿಲ ಮತ್ತು ಪೂಜೆ ನೆರವೇರಿಸಿದರು. ನಂತರ ಬಲೀಂದ್ರ ಕಂಬಕ್ಕೆ ಪೂಜೆ ಮಾಡಿ, ಪ್ರಸಾದ ವಿತರಿಸಿದರು. ಕಾರ್ಯಕ್ರಮದಲ್ಲಿ ದೈವಸ್ಥಾನದ ಅರ್ಚಕ ರಾಮಚಂದ್ರ ಮಣಿಯಾಣಿ, ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಭಟ್, ನಿಯೋಜಿತ ಅಧ್ಯಕ್ಷ ಅವೀಂದ್ರ

ಕುಲ್ಕುಂದ: ದೀಪಾವಳಿ ಪ್ರಯುಕ್ತ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಂಬಿಲ Read More »

ಕರಾವಳಿ

ಪುತ್ತೂರು: ಸ್ಥಗಿತಗೊಂಡಿದ್ದ ರೈಲ್ವೇ ಟಿಕೇಟ್ ವಿತರಣೆ ಪುನರಾಂಭ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 18: ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ರೈಲ್ವೇ ಟಿಕೇಟ್ ವಿತರಣೆ ಇಂದಿನಿಂದ ಪುನರಾಂಭಗೊಂಡಿದೆ. ಈ ಹಿಂದೆ ಎಲ್ಲಾ ಕಡೆ ರೈಲ್ವೇ ಕೌಂಟರ್ ತೆರೆದಿದ್ದರೂ ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಮಾತ್ರ ರೈಲ್ವೇ ಟಿಕೇಟ್ ತೆರೆದಿಲ್ಲ.     ಇದೀಗ ಕ್ಯಾನ್ಸಲ್ ಮತ್ತು ಸ್ಥಗಿತ ಮಾಡುವ ಸೌಲಭ್ಯವನ್ನು ವಾರದ ರಜಾ ದಿನವನ್ನು ಹೊರತು ಪಡಿಸಿ ಮಧ್ಯಾಹ್ನ 12 ಗಂಟೆಯ ತನಕ ಟಿಕೇಟ್ ಪಡೆದುಕೊಳ್ಳಬಹುದು. ಈ ಕುರಿತು ಸಾಮಾಜಿಕ ಕಾರ್ಯಕರ್ತ ಸುದರ್ಶನ್ ಅವರು

ಪುತ್ತೂರು: ಸ್ಥಗಿತಗೊಂಡಿದ್ದ ರೈಲ್ವೇ ಟಿಕೇಟ್ ವಿತರಣೆ ಪುನರಾಂಭ Read More »

ಕರಾವಳಿ

ರಾಜ್ಯಮಟ್ಟದ ಅಂತರ್ಜಾಲ ಚಿತ್ರಕಲಾ ಸ್ಪರ್ಧೆ ➤ ಸುಳ್ಯದ ವಿದ್ಯಾರ್ಥಿನಿ ಮನುಜ್ಞ ಯು.ಬಿ ರಾಜ್ಯಕ್ಕೆ ಪ್ರಥಮ

(ನ್ಯೂಸ್ ಕಡಬ) newskadaba.com ಸುಳ್ಯ ನ. 18: ಕರುನಾಡು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಚಿಂತಾಮಣಿ ಇವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.     ಈ ಸ್ಪರ್ಧೆಯಲ್ಲಿ 1ರಿಂದ 5ನೇ ತರಗತಿ ವಿಭಾಗದಲ್ಲಿ ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯ 5ನೇ ತರಗತಿಯ ವಿದ್ಯಾರ್ಥಿನಿ ಮನುಜ್ಞ ಯು.ಬಿ.ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಕರುನಾಡು ಕಲಾಕುಂಚ ಇ-ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೂ 6 ರಿಂದ 10ನೇ ತರಗತಿ ವಿಭಾಗದಲ್ಲಿ

ರಾಜ್ಯಮಟ್ಟದ ಅಂತರ್ಜಾಲ ಚಿತ್ರಕಲಾ ಸ್ಪರ್ಧೆ ➤ ಸುಳ್ಯದ ವಿದ್ಯಾರ್ಥಿನಿ ಮನುಜ್ಞ ಯು.ಬಿ ರಾಜ್ಯಕ್ಕೆ ಪ್ರಥಮ Read More »

ಕರಾವಳಿ

ಮಂಗಳೂರು: “ನಂದಿನಿ ಆನ್ ವೀಲ್ಸ್ ಸಂಚಾರಿ” ವಾಹನಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 18: ದ. ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಹಾಗೂ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 67 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕೋರೊನಾ ಸೋಂಕು_ ಅತ್ಮನಿರ್ಭರ ಭಾರತ,ಸಹಕಾರ ಸಂಸ್ಥೆಗಳು ಎಂಬ ಧ್ಯೇಯದೊಂದಿದೆ ವ್ಯವಹಾರ ಉದ್ಯೋಗ ಕಳೆದುಕೊಂಡವರು ,ಭಾದಿತರು ಪುನರುದ್ಯೋಗಸ್ಥರಾಗಲು ಕೌಶಲ್ಯಾಭಿವೃದ್ದಿ ದಿನಾಚರಣೆ ಕಾರ್ಯಕ್ರಮ ನಗರದ ಮಂಗಳೂರು ಡೇರಿ ಅವರಣದಲ್ಲಿ ನಡೆಯಿತು‌‌.     “ನಂದಿನಿ ಆನ್ ವೀಲ್ಸ್ ಸಂಚಾರಿ”

ಮಂಗಳೂರು: “ನಂದಿನಿ ಆನ್ ವೀಲ್ಸ್ ಸಂಚಾರಿ” ವಾಹನಕ್ಕೆ ಚಾಲನೆ Read More »

ಕರಾವಳಿ

ಮುಲ್ಕಿ: ಶಿಕ್ಷಕಿಗೆ ಕಳಪೆ ಬೆಡ್‌ಶೀಟ್ ಮಾರಿ, ಯುವಕರಿಂದ ಸಾವಿರಾರು ರೂ. ವಂಚನೆ

(ನ್ಯೂಸ್ ಕಡಬ) newskadaba.com ಮುಲ್ಕಿ ನ. 18: ಬಳ್ಕುಂಜೆ ಪ್ರದೇಶದಲ್ಲಿ ಇಬ್ಬರು ಬೆಡ್‌ಶೀಟ್ ಮಾರಿಕೊಂಡು ಟೀಚರ್ ಮನೆಗೆ ಬಂದು ಕಳಪೆ ಬೆಡ್‌ಶೀಟ್ ನೀಡಿ ಹಣ ವಂಚನೆ ಮಾಡಿದ ಘಟನೆ ನಡೆದಿದೆ. ಬಳ್ಕುಂಜೆಯ ತುಂಡುಪಡ್ಪು ಎಂಬಲ್ಲಿ ವಾಸವಿರುವ ಕರ್ನಿರೆ ಮೂಲದ ಟೀಚರ್ ಮನೆಗೆ ಆಗಮಿಸಿದ ಇಬ್ಬರು ಯುವಕರು ಬೆಡ್‌ಶೀಟ್ ಮಾರಾಟಕ್ಕೆಂದು ಬಂದು ವಂಚನೆ ಮಾಡಿದ್ದಾರೆ. ಯುವಕರು ಸೀದಾ ಮನೆಯೊಳಗೆ ಬಂದು ಟೀಚರ್ ಅವರ ಕಾಲಿಗೆ ನಮಸ್ಕರಿಸಿ ನಾವು ನಿಮ್ಮ ಶಿಷ್ಯಂದಿರು, ಕಟೀಲು ನೇಕಾರ ಸೌಧದಿಂದ ಬಂದಿದ್ದೇವೆ ಎಂದೆಲ್ಲ ಹೇಳಿ, ಕೂಡಲೇ

ಮುಲ್ಕಿ: ಶಿಕ್ಷಕಿಗೆ ಕಳಪೆ ಬೆಡ್‌ಶೀಟ್ ಮಾರಿ, ಯುವಕರಿಂದ ಸಾವಿರಾರು ರೂ. ವಂಚನೆ Read More »

ಕರಾವಳಿ

ಬಿಳಿನೆಲೆ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಬಿಳಿನೆಲೆ, ನ. 18: ಬಿಳಿನೆಲೆಯಲ್ಲಿ ಕರೆಂಟ್ ಕಂಬಕ್ಕೆ ಯಾತ್ರಾರ್ಥಿಗಳ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.   ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಕರ ಕಾರು ನಿದ್ರೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ. ಸದ್ಯ ಕಾರಿನಲ್ಲಿ ಐವರಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  

ಬಿಳಿನೆಲೆ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು Read More »

ಕರಾವಳಿ

ನಟಿ,ಬಿಜೆಪಿ ನಾಯಕಿ ಖುಷ್ಬೂ ಕಾರು ಅಪಘಾತ

(ನ್ಯೂಸ್ ಕಡಬ) newskadaba.com ಚೆನ್ನೈ  ನ. 18:  ಬಹುಭಾಷಾ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿನ ಮೆಲ್ಮರುವಾತ್ತೂರ್ ಎಂಬಲ್ಲಿ ಈ ಘಟನೆ ನಡೆದಿದೆ. ಟ್ಯಾಂಕರ್ ವೊಂದು ಖುಷ್ಬೂ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಸಾತ್​ ಖುಷ್ಬೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ಸಂಪೂರ್ಣ ಜಖಂಗೊಂಡಿದೆ.ಈ ಘಟನೆ ಕುರಿತು ಖುಶ್ಭೂ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.

ನಟಿ,ಬಿಜೆಪಿ ನಾಯಕಿ ಖುಷ್ಬೂ ಕಾರು ಅಪಘಾತ Read More »

ಕರಾವಳಿ
Scroll to Top