ಪುತ್ತೂರು: ಸ್ಥಗಿತಗೊಂಡಿದ್ದ ರೈಲ್ವೇ ಟಿಕೇಟ್ ವಿತರಣೆ ಪುನರಾಂಭ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 18: ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ರೈಲ್ವೇ ಟಿಕೇಟ್ ವಿತರಣೆ ಇಂದಿನಿಂದ ಪುನರಾಂಭಗೊಂಡಿದೆ. ಈ ಹಿಂದೆ ಎಲ್ಲಾ ಕಡೆ ರೈಲ್ವೇ ಕೌಂಟರ್ ತೆರೆದಿದ್ದರೂ ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಮಾತ್ರ ರೈಲ್ವೇ ಟಿಕೇಟ್ ತೆರೆದಿಲ್ಲ.

 

 

ಇದೀಗ ಕ್ಯಾನ್ಸಲ್ ಮತ್ತು ಸ್ಥಗಿತ ಮಾಡುವ ಸೌಲಭ್ಯವನ್ನು ವಾರದ ರಜಾ ದಿನವನ್ನು ಹೊರತು ಪಡಿಸಿ ಮಧ್ಯಾಹ್ನ 12 ಗಂಟೆಯ ತನಕ ಟಿಕೇಟ್ ಪಡೆದುಕೊಳ್ಳಬಹುದು. ಈ ಕುರಿತು ಸಾಮಾಜಿಕ ಕಾರ್ಯಕರ್ತ ಸುದರ್ಶನ್ ಅವರು ರೈಲ್ವೇ ಇಲಾಖೆಗೆ ಒತ್ತಡ ತಂದಿರುವ ಪರಿಣಾಮ ಇದೀಗ ಕಬಕ ಪುತ್ತೂರಿನಲ್ಲಿ ಇಂದಿನಿಂದ ಟಿಕೇಟ್ ವಿತರಣೆ ಆರಂಭಗೊಂಡಿದೆ.

 

Xl

 

Scroll to Top