Kadaba News

RSS ಕಾರ್ಯಕರ್ತನಿಗೆ ಚೂರಿ ಇರಿದಾಗ ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕ ►ಮಾನವೀಯತೆಯ ಮೂಲಕ ಹೀರೋ ಆದ ಬಂಟ್ವಾಳದ ಯುವಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.06. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ ಎಂಬುದನ್ನು ಬಿ.ಸಿ. ರೋಡಿನ ಯುವಕನೊಬ್ಬ ತನ್ನ ಮಹತ್ಕಾರ್ಯದ ಮೂಲಕ ಸಾದರಪಡಿಸಿದ್ದಾನೆ. ಕೋಮು ಸಂಘರ್ಷದಿಂದ ಕರಾವಳಿ ಜಿಲ್ಲೆ ಉರಿಯುತ್ತಿದ್ದರೆ ಜಾತಿ, ಧರ್ಮದ ಹಂಗು ತೊರೆದು ಗೆಳೆಯನ ರಕ್ಷಣೆಗೆ ಧಾವಿಸಿ ಬಂದಿದ್ದಾರೆ ಹಣ್ಣಿನ ವ್ಯಾಪಾರಿ ಅಬ್ದುಲ್ ರವೂಫ್. ಹೌದು, ಕಳೆದ ಮಂಗಳವಾರ ರಾತ್ರಿ ಸುಮಾರು ಹತ್ತು ಗಂಟೆಗೆ ಬಿ.ಸಿ.ರೋಡಿನ ಉದಯ ಲಾಂಡ್ರಿ ಮಾಲೀಕ, RSS ಕಾರ್ಯಕರ್ತ ಶರತ್‍ನಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಕ್ಷಣವೇ ಅಕ್ಕಪಕ್ಕದವರು […]

RSS ಕಾರ್ಯಕರ್ತನಿಗೆ ಚೂರಿ ಇರಿದಾಗ ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕ ►ಮಾನವೀಯತೆಯ ಮೂಲಕ ಹೀರೋ ಆದ ಬಂಟ್ವಾಳದ ಯುವಕ Read More »

ಕರಾವಳಿ

ಬಿಳಿನೆಲೆ ದೇವಸ್ಥಾನದ ಮೂರ್ತಿಗೆ ಪುಸ್ತಕ ತೂಗುಹಾಕಿದ ಕಿರಾತಕರು ► ಭಕ್ತ ವೃಂದದಿಂದ ತೀವ್ರ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಜು.06. ಇಲ್ಲಿನ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮಹಾದ್ವಾರದ ಬಳಿಯ ಮೂರ್ತಿಯ ಮೇಲೆ ಪೊಲೀಸ್ ಬೀಟ್ ಗೆ ಸಹಿ ಹಾಕುವ ಪುಸ್ತಕವನ್ನು ನೇತಾಡಿಸಲಾಗಿದ್ದು, ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರದಂದು ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ಪೊಲೀಸ್ ಬೀಟ್ ಪುಸ್ತಕವನ್ನು ಕಂಡು ಪೊಲೀಸರು ಈ ರೀತಿ ಬೇಜವಾಬ್ದಾರಿಯಿಂದ ಇಟ್ಟಿದ್ದಾರೋ ಅಥವಾ ಕಿಡಿಗೇಡಿಗಳು ಗಲಭೆ ಸೃಷ್ಟಿಸುವ ಉದ್ದೇಶದಿಂದ ಇಟ್ಟಿದ್ದಾರೋ ಎಂದು ಆಕ್ರೋಶಗೊಂಡಿದ್ದಾರೆ. ಭಕ್ತರಲ್ಲೊಬ್ಬರು ಫೊಟೊ ತೆಗೆದು ವಾಟ್ಸಾಪ್ ನಲ್ಲಿ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ

ಬಿಳಿನೆಲೆ ದೇವಸ್ಥಾನದ ಮೂರ್ತಿಗೆ ಪುಸ್ತಕ ತೂಗುಹಾಕಿದ ಕಿರಾತಕರು ► ಭಕ್ತ ವೃಂದದಿಂದ ತೀವ್ರ ಆಕ್ರೋಶ Read More »

ಕರಾವಳಿ

ಕಡಬ ಗಣೇಶೋತ್ಸವ ಸಮಿತಿಗೆ ಗಣಪತಿ ಪೀಠ ಸಮರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜು.06. ಗಣೇಶೋತ್ಸವ ಸಮಿತಿಗೆ ಕಡಬದಲ್ಲಿರುವ ಸ್ವಾತಿ ಇಲೆಕ್ಟ್ರಿಕಲ್ಸ್‌ ಮತ್ತು ಇಲೆಕ್ಟ್ರಾನಿಕ್ಸ್‌ನ ಮಾಲಕರಾದ ಮೈನಾ ಮತ್ತು ರಾಜೇಶ್ ಕಂಡೂರುರವರು ಸುಮಾರು 10ಸಾವಿರ ರೂ. ವೆಚ್ಚದಲ್ಲಿ ಗಣಪತಿ ಪೀಠ ನಿರ್ಮಿಸಿ ಕಡಬ ವಿದ್ಯಾನಗರದಲ್ಲಿರುವ ಸ್ವಾತಿ ನಿಲಯದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷರಾದ ಸುಂದರ ಗೌಡ ಮಂಡೆಕರ, 44ನೇ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಿ, ಜೊತೆಕಾರ್ಯದರ್ಶಿ ಯತೀಶ್ ಹೊಸಮನೆ, ಕೋಶಾಧಿಕಾರಿ ಜಯರಾಮ ಆರ್ತಿಲ, ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣ

ಕಡಬ ಗಣೇಶೋತ್ಸವ ಸಮಿತಿಗೆ ಗಣಪತಿ ಪೀಠ ಸಮರ್ಪಣೆ Read More »

ಕರಾವಳಿ

ಮತ್ತೆ ಸುದ್ದಿಯಾದ ಕಡಬದ MSIL ಮದ್ಯದಂಗಡಿ ► ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ

(ನ್ಯೂಸ್ ಕಡಬ) newskadaba.com ಕಡಬ, ಜು.06. ಸುಪ್ರೀಂ ಕೋರ್ಟ್ ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಮುಚ್ಚಿ ಆದೇಶ ಹೊರಡಿಸಿದ್ದೇ ಕಡಬದ MSIL ಮದ್ಯದಂಗಡಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಮದ್ಯದ ಭರ್ಜರಿ ವ್ಯಾಪಾರದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಅದೇ ಮದ್ಯದಂಗಡಿಯ ಬೀಗ ಮುರಿದು ಕಳ್ಳತನ ನಡೆಸಲು ವಿಫಲ ಯತ್ನ ನಡೆದಿದ್ದು, ಕಡಬದ ಮದ್ಯದಂಗಡಿ ಮತ್ತೆ ಸುದ್ದಿಯಲ್ಲಿದೆ. ಗುರುವಾರ ಬೆಳಿಗ್ಗೆ ನೌಕರರು ಅಂಗಡಿಗೆ ಆಗಮಿಸಿದಾಗ ಶಟರ್ ನ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಈ

ಮತ್ತೆ ಸುದ್ದಿಯಾದ ಕಡಬದ MSIL ಮದ್ಯದಂಗಡಿ ► ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ Read More »

ಕರಾವಳಿ

ಆಲಂಕಾರು: ಗುರುದೇವಾನಂದ ಸ್ವಾಮೀಜಿಯವರ 57ನೇ ಜನ್ಮದಿನೋತ್ಸವ

(ನ್ಯೂಸ್ ಕಡಬ) newskadaba.com ಆಲಂಕಾರು, ಜು.06. ಒಡಿಯೂರು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌, ಒಡಿಯೂರು ಗ್ರಾಮ ವಿಕಾಸ ಯೋಜನೆ ಘಟ ಸಮಿತಿ ಕುಂಡಾಜೆ ರಾಮಕುಂಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುದೇವಾನಂದ ಸ್ವಾಮೀಜಿಯವರ 57ನೇ ಜನ್ಮದಿನೋತ್ಸವದ(ಗ್ರಾಮೋತ್ಸವ) ಪ್ರಯುಕ್ತವಾಗಿ ಸಂಘದ ಸದಸ್ಯರಿಂದ ಸ್ವಚ್ಚತಾ ಕಾರ್ಯಕ್ರಮ ಮತ್ತು ಒಂದು ದಿನದ ಶ್ರಮದಾನವು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ಶಾಲಾ ಆವರಣವನ್ನು ಸ್ವಚ್ಚತೆ ಮಾಡುವ ಮೂಲಕ ಶ್ರಮದಾನವನ್ನು ಪ್ರಾರಂಭಿಸಲಾಯಿತು. ಬಳಿಕ ಶಾಲೆಗೆ ಕೈತೋಟ ರಚನೆ ಮತ್ತು ಶಾಲಾ ಆವರಣದಲ್ಲಿ ತರಕಾರಿ

ಆಲಂಕಾರು: ಗುರುದೇವಾನಂದ ಸ್ವಾಮೀಜಿಯವರ 57ನೇ ಜನ್ಮದಿನೋತ್ಸವ Read More »

ಕರಾವಳಿ

ಪಾಲ್ತಾಡಿ: ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

(ನ್ಯೂಸ್ ಕಡಬ) newskadaba.com ಸವಣೂರು, ಜು.06. ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣೆ ಮತ್ತು ದಾನಿಗಳಿಂದ ಒಂದನೇ ತರಗತಿಗೆ ಸೇರ್ಪಡೆಯಾದ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಸಮಾರಂಭ ಇತ್ತೀಚೆಗೆ ನಡೆಯಿತು. ಶಾಲಾಭಿವೃದ್ದಿ ಸಮಿತಿ ಸದಸ್ಯ ಉಚಿತ ಸಮವಸ್ತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಒಂದನೇ ತರಗತಿಗೆ ಸೇರ್ಪಡೆಯಾದ ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿ ಕೆಯ್ಯೂರು ಸ.ಪ್ರೌ.ಶಾಲಾ ಮುಖ್ಯಗುರು ವಿನೋದ್ ಕುಮಾರ್ ಕೆ.ಎಸ್ ಮತ್ತು ಮಂಜುನಾಥನಗರ ಹಿ.ಪ್ರಾ.ಶಾಲಾ ಶಿಕ್ಷಕಿ ನಂದಿನಿ ಆರ್. ದೇವಾಡಿಗ ದಂಪತಿ ನೀಡಿದ ಶಾಲಾ ಬ್ಯಾಗನ್ನು ವಿತರಿಸಲಾಯಿತು.

ಪಾಲ್ತಾಡಿ: ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ Read More »

ಕರಾವಳಿ

ಕಲ್ಲಡ್ಕ: ಬೈಕ್ ಅಪಘಾತ ► ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು.06. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕೆ.ಸಿ.ರೋಡ್ ಎಂಬಲ್ಲಿ ಸ್ಕಾರ್ಪಿಯೋ ಕಾರೋದು ಬೈಕಿಗೆ ಢಿಕ್ಕಿ ಹೊಡೆದುದರ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಕೆಎ.19.ಇವಿ.497 ಸಂಖ್ಯೆಯ ಬಜಾಜ್ ಪಲ್ಸರ್ ಬೈಕ್ ಗೆ ಸ್ಕಾರ್ಪಿಯೋ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಬೈಕ್ ಸವಾರನನ್ನು ನಂದರಬೆಟ್ಟು ನಿವಾಸಿ ಉವೈಸ್ (21) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್

ಕಲ್ಲಡ್ಕ: ಬೈಕ್ ಅಪಘಾತ ► ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಕರೋಪಾಡಿ ಗ್ರಾ.ಪಂ. ಉಪಚುನಾವಣೆ ► ದುಷ್ಕರ್ಮಿಗಳಿಗೆ ಬಲಿಯಾದ ಜಲೀಲ್ ಕರೋಪಾಡಿಯವರ ಸಹೋದರನಿಗೆ ಜಯ

(ನ್ಯೂಸ್ ಕಡಬ) newskadaba.com ವಿಟ್ಲ, ಜು.05. ಕರೋಪಾಡಿ ಗ್ರಾಮ ಪಂಚಾಯತ್ನ ಮಿತ್ತನಡ್ಕ ವಾರ್ಡ್ಗೆ ನಡೆದ ಉಪ ಚುನಾವಣೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಅಬ್ದುಲ್ ಜಲೀಲ್ ಕರೋಪಾಡಿ ಅವರ ಸಹೋದರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನ್ವರ್ ಕರೋಪಾಡಿ 449 ಮತಗಳನ್ನು ಗಳಿಸುವ ಮೂಲಕ ಜಯಗಳಿಸಿದ್ದಾರೆ. ಅನ್ವರ್ ಕರೋಪಾಡಿಯವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ ಕೋಡ್ಲ 320 ಮತಗಳನ್ನು ಗಳಿಸಿದ್ದಾರೆ. ಜುಲೈ 2ರಂದು ಮಿತ್ತನಡ್ಕ ಸರಕಾರಿ ಶಾಲೆಯಲ್ಲಿ ಮತದಾನ ನಡೆದಿದ್ದು 790 ಮತಗಳು ದಾಖಲಾಗಿತ್ತು. ಅವುಗಳಲ್ಲಿ 21

ಕರೋಪಾಡಿ ಗ್ರಾ.ಪಂ. ಉಪಚುನಾವಣೆ ► ದುಷ್ಕರ್ಮಿಗಳಿಗೆ ಬಲಿಯಾದ ಜಲೀಲ್ ಕರೋಪಾಡಿಯವರ ಸಹೋದರನಿಗೆ ಜಯ Read More »

ಕರಾವಳಿ

ಅರಿಯಡ್ಕ: ಕಾರು – ಲಾರಿ ಮುಖಾಮುಖಿ ►ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.5. ಲಾರಿ ಮತ್ತು ಕಾರು ಮಧ್ಯೆ ಢಿಕ್ಕಿ ಸಂಭವಿಸಿ, ವಿದೇಶ ಪ್ರಯಾಣಕ್ಕಾಗಿ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಇಬ್ಬರ ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡಿರುವ ಗಾಯಾಳುಗಳನ್ನು ಕೊಡಗು ಜಿಲ್ಲೆಯ ನಾಪೊಕ್ಲು ನಿವಾಸಿಗಳಾದ ಖಾಸಿಂ (40), ಹಾರೀಸ್ (28) ಮತ್ತು ಅಶ್ಫಾಕ್ (40) ಮತ್ತು ಕಾರು ಚಾಲಕ ಅರ್ಷದ್ (27) ಎಂದು ಗುರುತಿಸಲಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ

ಅರಿಯಡ್ಕ: ಕಾರು – ಲಾರಿ ಮುಖಾಮುಖಿ ►ನಾಲ್ವರು ಗಂಭೀರ Read More »

ಕರ್ನಾಟಕ

ಅಕ್ರಮ ಗೋಸಾಗಾಟ ಪತ್ತೆ ►14 ಗೋವುಗಳನ್ನು ವಶಪಡಿಸಿದ ವಿಟ್ಲ ಪೊಲೀಸರು

(ನ್ಯೂಸ್ ಕಡಬ) newskadaba.com ವಿಟ್ಲ, ಜು.05. ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಘಟನೆಯನ್ನು ಪತ್ತೆಹಚ್ಚಿರುವ ವಿಟ್ಲ ಪೊಲೀಸರು 14 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಕರ್ನಾಟಕದಿಂದ ಜಾನುವಾರುಗಳನ್ನು ಕೇರಳದ ಗೋಶಾಲೆಯ ನೆಪದಲ್ಲಿ ದಾಖಲಿ ಸೃಷ್ಟಿಸಿ ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಅನೇಕ ಸಮಯಗಳಿಂದ ಕೇಳಿಬರುತ್ತಿತ್ತು. ಅದರಂತೆ ಇಂದು ಕೇರಳ ನೋಂದಣಿಯ ಈಚರ್ ಲಾರಿಯೊಂದರಲ್ಲಿ 14 ಗೋವುಗಳನ್ನು ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿರುವ ವಿಟ್ಲ ಪೊಲೀಸರು ಲಾರಿ ಸಹಿತ ಗೋವುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಕ್ರಮ ಗೋಸಾಗಾಟ ಪತ್ತೆ ►14 ಗೋವುಗಳನ್ನು ವಶಪಡಿಸಿದ ವಿಟ್ಲ ಪೊಲೀಸರು Read More »

ಕರಾವಳಿ
Scroll to Top