Kadaba News

ಉಳ್ಳಾಲದಲ್ಲಿ ಕೊರೋನಾ ತಾಂಡವ ➤ ಸಾವಿನ ಸಂಖ್ಯೆ 24 ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.06: ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಏರಿಕೆಯೊಂದಿಗೆ, ಕೊರೊನಾಗೆ ಬಲಿಯಾಗುತ್ತಿರವವ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಅಂಕೆ ಮೀರುತ್ತಿದೆ. ಇಂದು ಬೆಳಿಗ್ಗೆ ಇಬ್ಬರು ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ. ಮಂಗಳೂರು ಹೊರವಲಯದ ಸಂತೋಷ್ ನಗರ ನಿವಾಸಿ ಮತ್ತು ಉಳ್ಳಾಲ ನಿವಾಸಿ ಇಂದು ಕೋವಿಡ್ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಸಂತೋಷ್ ನಗರದ 52 ವರ್ಷದ ವ್ಯಕ್ತಿ ಹೃದಯರೋಗ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಉಳ್ಳಾಲದ ವ್ಯಕ್ತಿಯ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಇಂದಿನ […]

ಉಳ್ಳಾಲದಲ್ಲಿ ಕೊರೋನಾ ತಾಂಡವ ➤ ಸಾವಿನ ಸಂಖ್ಯೆ 24 ಕ್ಕೆ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಗ್ಲಗುಡ್ಡೆಯಲ್ಲಿ ಭೂಕುಸಿತ ➤ ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು,ಜು.05: ಮಂಗಳೂರಿನ ಕೈಕಂಬ ಬಂಗ್ಲಗುಡ್ಡೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಸುಮಾರು ಮನೆಗಳಿಗೆ ಸಂಪೂರ್ಣವಾಗಿ ಹಾನಿ ಉಂಟಾದರೆ ಹಲವು ಮನೆಗಳು ಅಪಾಯದಲ್ಲಿದೆ. ಈ ಘಟನೆಯಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ, ಇಬ್ಬರು ಪುಟಾಣಿಗಳು ದುರ್ಮರಣ ಹೊಂದಿದ್ದಾರೆ.   ಮೃತಪಟ್ಟವರನ್ನು ಮಕ್ಕಳನ್ನು ಸಫ್ವಾನ್ (16), ಸಹಾಲ (10) ಎಂದು ತಿಳಿದುಬಂದಿದೆ.ಗಂಟೆಗಳ ಪ್ರಯತ್ನದ ನಂತರ, ಪೊಲೀಸರ ಸಹಾಯದಿಂದ ಸ್ಥಳೀಯರು ಮಕ್ಕಳನ್ನು ಹೊರಗೆ ತರಲು ಸಾಧ್ಯವಾಯಿತ್ತಾದರೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಸುತ್ತಮುತ್ತಲಿನ 14 ಮನೆಗಳಲ್ಲಿ ವಾಸಿಸುವ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಬಂಗ್ಲಗುಡ್ಡೆಯಲ್ಲಿ ಭೂಕುಸಿತ ➤ ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಮೃತ್ಯು Read More »

ಕರಾವಳಿ, ಕರ್ನಾಟಕ

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸ್ತಬ್ಧವಾದ ಮಂಗಳೂರು

(ನ್ಯೂಸ್ ಕಡಬ) newskadaba.com ಮಂಗಳೂರು ,ಜು.05: ಕಫ್ಯೂ ಹಿನ್ನೆಲೆಯಲ್ಲಿ ಮಂಗಳೂರು ನಗರ ಅಕ್ಷರಶಃ ಸ್ತಬ್ದವಾಗಿದೆ. ನಗರದ ಹಾದಿ ಬೀದಿಗಳಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಓಡಾಡುತ್ತಿದ್ದು ಅಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಪಹರೆ ನೀಡುತ್ತಿಸ್ದಾರೆ. ನಗರದ ಪ್ರಮುಖ ರಸ್ತೆಗಳು ಮಾತ್ರ ವಲ್ಲದೆ ಒಳ ರಸ್ತೆ ಗಳು ಬಹುತೇಕ ನಿರ್ಜನವಾಗಿವೆ. ಕೆಲವೇ ಕೆಲವರು ಮನೆ ಸಮೀಪದ ಹಾಲಿನ ಅಂಗಡಿಗಳಿಗೆ ತೆರಳುತ್ತಿರುವುದು ಕಂಡು ಬರುತ್ತಿದೆ.   ನಗರದ ಪ್ರಮುಖ ರಸ್ತೆಗಳಲ್ಕಿ ಕೆಲವೊಂದು ಸರಕು ಸಾಗಾಣಿಕೆಯ ವಾಹನ, ಆಸ್ಪತ್ರೆ ಸಿಬ್ಬಂದಿ ಸಾಗಿಸುವ ವಾಹನಗಳು ಮಾತ್ರ ಓಡಾಡುತ್ತಿವೆ.

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸ್ತಬ್ಧವಾದ ಮಂಗಳೂರು Read More »

ಕರಾವಳಿ, ಕರ್ನಾಟಕ

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಬಿ.ಸಿ ರೋಡ್ ಸ್ತಬ್ಧ

(ನ್ಯೂಸ್ ಕಡಬ) newskadaba.com ಬಿ.ಸಿ ರೋಡ್,ಜು.05: ಸರ್ಕಾರದ ಸೂಚನೆಯಂತೆ ಶನಿವಾರ ರಾತ್ರಿಯಿಂದಲೇ ಜನಸಂಚಾರ ನಿಷೇದಿಸಿದ ಕಾರಣ ಭಾರುವರ ಬೆಳಗ್ಗೆಯೇ ಬಂಟ್ವಾಳ, ಬಿ.ಸಿ ರೋಡ್ ಸಹಿತ ಪೊಳಲಿ ದ್ವಾರ, ಕೈಕಂಬ ಸ್ತಬ್ಧಗೊಂಡಿತ್ತು.   ಇನ್ನು ಕಳೆದ ಎರಡುವರೆ ತಿಂಗಲಲ್ಲಿ ನಾಲ್ಕು ಸಾವುಗಳು ಪುರಸಭೆ ವ್ಯಾಪ್ತಿಯಲ್ಲಿ ಸಂಬವಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಾಗಿಲು ಹಾಕುವ ನಿರ್ಧಾರಕ್ಕೂ ಬಂದಿದ್ದು, ಸೋಮವಾರವೂ ನಿರ್ದಿಷ್ಟ ಹೊತ್ತಷ್ಟೇ ಅಂಗಡಿ ತೆರೆಯಲು ಅಲೋಚಿಸಿದ್ದಾರೆ.  

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಬಿ.ಸಿ ರೋಡ್ ಸ್ತಬ್ಧ Read More »

ಕರಾವಳಿ, ಕರ್ನಾಟಕ

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಬೆಳ್ತಂಗಡಿ ತಾಲೂಕಿನಾದ್ಯಂತ ಬಂದ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ,ಜು.05: ಮಾಹಾಮಾರಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಭಾನುವಾರದಂದು ಲಾಕ್ ಡೌನ್ ಜಾರಿ ಮಾಡಿದೆ.   ಇದರಿಂದ್ದಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದೆ. ಹಾಲು ದಿನಪತ್ರಿಕೆ ಔಷಧಿ, ಅಂಗಡಿ ಮುಂಗಟ್ಟುಗಲನ್ನು ಹೊರತು ಪಡಿಸಿ, ಉಳಿದ ಎಲ್ಲಾ ಅಮಗಡಿ ಮುಂಗಟ್ಟುಗಳು ಬಂದ್ ಆಗಿದೆ. ಕೆಎಸ್ಸಾರ್ಟಿಸಿ, ಖಾಸಗಿ ಬಸ್ಸುಗಳು ರಸ್ತೆಗೆ ಇಳಿದಿಲ್ಲ, ಆಟೋ ಹಾಗು ಇತರ ಯಾವುದೇ ವಾಹನಗಳು ಇಂದು ರಸ್ತೆಗಿಳಿದಿಲ್ಲ. ಶನಿವಾರ ರಾತ್ರಿ 8 ಗಂಟೆಂದ

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಬೆಳ್ತಂಗಡಿ ತಾಲೂಕಿನಾದ್ಯಂತ ಬಂದ್ Read More »

ಕರಾವಳಿ, ಕರ್ನಾಟಕ

ಸುಸೈಡ್ ಪಾಯಿಂಟ್ ಖ್ಯಾತಿಯ ನೇತ್ರಾವತಿ ಸೇತುವೆಗೆ ಬಿತ್ತು ರಕ್ಷಣಾ ಬೇಲಿ

(ನ್ಯೂಸ್ ಕಡಬ) newskadaba.com.ಉಳ್ಳಾಲ,ಜು.5:  ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಪದೇ ಪದೇ ನಡೆಯುತ್ತಿರುವ ಅನಾಹುತಗಳನ್ನು ಮನಗೊಂಡು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೇತುವೆಯ ಉದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನಡೆಯಿತು. ಕಾಮಗಾರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್‌ರವರು ಚಾಲನೆ ನೀಡಿದರು. ಉಳ್ಳಾಲ ನೇತ್ರಾವತಿ ಸೇತುವೆಗೆ 55 ಲಕ್ಷ ರೂ. ವೆಚ್ಚದಲ್ಲಿ ರಕ್ಷಣಾ ಬೇಲಿ ಮತ್ತು ಸಿಸಿ ಕೆಮರಾ

ಸುಸೈಡ್ ಪಾಯಿಂಟ್ ಖ್ಯಾತಿಯ ನೇತ್ರಾವತಿ ಸೇತುವೆಗೆ ಬಿತ್ತು ರಕ್ಷಣಾ ಬೇಲಿ Read More »

ಕರ್ನಾಟಕ

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸವಣೂರು ಪೇಟೆ ಅಕ್ಷರಶ: ಸಬ್ಧ

(ನ್ಯೂಸ್ ಕಡಬ) newskadaba.com ಸವಣೂರು,ಜು.05:ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಸವಣೂರು ಪೇಟೆ ಜು. 5ರಂದು ಸಂಪೂರ್ಣ ಲಾಕ್ ಡೌನ್ ಆಗಿದ್ದು,ಸವಣೂರು ಪೇಟೆ ಅಕ್ಷರಶ: ಸಬ್ಧವಾಗಿದೆ.   ಪ್ರತಿ ನಿತ್ಯ ಸವಣೂರು ಪೇಟೆ ಸಾವಿರಾರು ಮಂದಿ ಸೇರುವ ಅತೀದೊಡ್ಡ ವಾಣಿಜ್ಯ ಕೇಂದ್ರ ಹಾಗೂ ರಾಜ್ಯದ ಮನೆ ಮಾತಾಗಿರುವ ಶಿಕ್ಷಣ ಕಾಶಿ ಹಾಗೂ ಧಾರ್ಮಿಕ ನೆಲೆಬೀಡು ಸವಣೂರು ಪೇಟೆಯಲ್ಲಿ ಆನೇಕ ಬ್ಯಾಂಕ್ ಗಳು ಸೇರಿದಂತೆ, ಅಡಿಕೆ ಖರೀದಿ ಕೇಂದ್ರ, ಜಿನಸು ಅಂಗಡಿಗಳು, 7 ಹೋಟೆಲ್ ಗಳು, ಸಹಿತ ವಿವಿಧ ಬಗೆಯ

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸವಣೂರು ಪೇಟೆ ಅಕ್ಷರಶ: ಸಬ್ಧ Read More »

ಕರಾವಳಿ, ಕರ್ನಾಟಕ

ಮತ್ತೆ ಸುದ್ದಿಯಾಗುತ್ತಿದೆ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್‍ನ ಕಹಾನಿ ➤ ವ್ಯಕ್ತಿಯೊಬ್ಬರು ನದಿಗೆ ಹಾರಿರುವ ಶಂಕೆ

(ನ್ಯೂಸ್ ಕಡಬ) newskadaba.com.ಉಳ್ಳಾಲ,ಜು.4:ವ್ಯಕ್ತಿಯೊಬ್ಬರು ಸೇತುವೆಯ ಮೇಲೆ ಕೊಡೆ ಇಟ್ಟು ನೀರಿಗೆ ಹಾರಿರುವ ಘಟನೆ ಜೆಪ್ಪಿನಮೊಗರು ನೇತ್ರಾವತಿ ಸೇತುವೆಯ ಬಳಿ ಇಂದು ನಡೆದಿದೆ. ಉಳ್ಳಾಲದ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗಿ ಮಾರ್ಪಾಡಾಗಿದ್ದು ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯು ಹೆಚ್ಚುತ್ತಿದೆ. ಉಳ್ಳಾಲ ಠಾಣಾ ಪೊಲೀಸರು ಕೊರೋನಾ ಮಹಾಮಾರಿಯಿಂದಾಗಿ ಕ್ವಾರಂಟೈನ್ ನಲ್ಲಿದ್ದು ಸ್ಥಳಕ್ಕೆ ಪೊಲೀಸರು ಇನ್ನಷ್ಟೇ ಆಗಮಿಸಿ ಪರಿಶೀಲನೆ ನಡೆಸಬೇಕಾಗಿದೆ.

ಮತ್ತೆ ಸುದ್ದಿಯಾಗುತ್ತಿದೆ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್‍ನ ಕಹಾನಿ ➤ ವ್ಯಕ್ತಿಯೊಬ್ಬರು ನದಿಗೆ ಹಾರಿರುವ ಶಂಕೆ Read More »

ಕರಾವಳಿ

ಬೆಳ್ತಂಗಡಿ ಕಳಿಯ ಗ್ರಾಮ ಪಂಚಾಯತ್‍ಗೆ ಎಸಿಬಿ ದಾಳಿ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.4: ತಾಲೂಕಿನ ಗೇರುಕಟ್ಟೆ ಕಳಿಯ ಗ್ರಾಮ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಎಸಿಬಿ ಇನ್ಸ್‌ಪೆಕ್ಟರ್ ಯೊಗೀಶ್ ಕುಮಾರ್ ಬಿ.ಸಿ. ತಂಡ ಶನಿವಾರ ದಾಳಿ ನಡೆಸಿ ದಾಖಲೆಗಳ ಪರೀಶೀಲನೆ ನಡೆಸಿದೆ. ಗ್ರಾಮ ಲೆಕ್ಕಿಗ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿ ಒಂದೇ ಕುಟುಂಬಕ್ಕೆ ಎರಡು, ಮೂರು 94ಸಿ ಹಕ್ಕು ಪತ್ರ ನೀಡಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿ ಮನೆ ನಿರ್ಮಾಣವಾಗದಿದ್ದರೂ ಹಕ್ಕು ಪತ್ರ ನೀಡಲಾಗಿದೆ ಎಂದು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹದ ದಳದ ಪೊಲೀಸರಿಗೆ ದೂರು ನೀಡಿದ್ದರು.

ಬೆಳ್ತಂಗಡಿ ಕಳಿಯ ಗ್ರಾಮ ಪಂಚಾಯತ್‍ಗೆ ಎಸಿಬಿ ದಾಳಿ Read More »

ಕರಾವಳಿ

ಮುಂಗಾರಿನ ಅಬ್ಬರಕ್ಕೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಜು.4: ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಶುಕ್ರವಾರ ಬಂಟ್ವಾಳ ವ್ಯಾಪ್ತಿಯಲ್ಲಿ ನೀರಿನ ಮಟ್ಟ 3.6 ಮೀ.ನಷ್ಟು ದಾಖಲಾಗಿದೆ. ಘಟ್ಟ ಪ್ರದೇಶದಲ್ಲಿ ಮಳೆಯಾದಾಗ ನೇತ್ರಾವತಿ, ಕುಮಾರಧಾರಾ ನದಿಗಳಲ್ಲಿ ನೀರು ಹೆಚ್ಚಾಗುತ್ತದೆ. ನೀರಿನ ಹರಿವು ಹೆಚ್ಚಳವಾಗುತ್ತಿದ್ದಂತೆ ತುಂಬೆ ಡ್ಯಾಂನಲ್ಲಿ ಗೇಟ್‌ಗಳನ್ನು ತೆರೆಯಲಾಗುತ್ತಿದೆ. ಪ್ರಸ್ತುತ 30ರ ಪೈಕಿ 11 ಗೇಟ್‌ಗಳನ್ನು ತೆರೆಯಲಾಗಿದೆ. ಮಳೆಗಾಲದಲ್ಲಿ ಬಂಟ್ವಾಳ ತಾಲೂಕು ಆಡಳಿತವು ಗೂಡಿನಬಳಿ ಸಮೀಪದಲ್ಲಿರುವ ಅಳತೆ ಮಾಪನದ ಮೂಲಕ ನೀರಿನ ಮಟ್ಟ

ಮುಂಗಾರಿನ ಅಬ್ಬರಕ್ಕೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ Read More »

ಕರ್ನಾಟಕ
Scroll to Top