crime

ಲಾಡ್ಜ್ ವೊಂದರಲ್ಲಿ  ವ್ಯಾಪಾರಿಯೊಬ್ಬರ ಮೃತದೇಹ ಪತ್ತೆ  

 (ನ್ಯೂಸ್ ಕಡಬ) newskadaba.com   ಮಂಗಳೂರು, ಡಿ.13  ಲಾಡ್ಜ್ ವೊಂದರಲ್ಲಿ ವ್ಯಾಪಾರಿಯೊಬ್ಬರ ಮೃತದೇಹ ಮಲಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಮೃತರನ್ನು ಮೂಲತಃ ಕುಂಬಳೆ ನಿವಾಸಿ ಅಬ್ದುಲ್ ಕರೀಂ (55) ಎಂದು ಗುರುತಿಸಲಾಗಿದೆ. ನಗರದಲ್ಲಿ ವ್ಯಾಪಾರ ವಹಿವಾಟು ಹೊಂದಿದ್ದು, ನಿರಂತರ ಕರೆ ಮಾಡಿದರೂ ಸ್ವೀಕರಿಸಿಲ್ಲ ಎನ್ನಲಾಗಿದೆ.  ಸಂಶಯಗೊಂಡು ಲಾಡ್ಜ್ ಸಿಬ್ಬಂದಿ 11 ಗಂಟೆ ವೇಳೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ತನಿಖೆ ಮುಂದುವರೆದಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ..  

ಲಾಡ್ಜ್ ವೊಂದರಲ್ಲಿ  ವ್ಯಾಪಾರಿಯೊಬ್ಬರ ಮೃತದೇಹ ಪತ್ತೆ   Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

(ನ್ಯೂಸ್ ಕಡಬ) newskadaba.com ಕೋಲಾರ, ಡಿ. 13. ಹಳ್ಳಬಿದ್ದ ರಸ್ತೆಗಳಲ್ಲಿ ಸಂಚರಿಸುವಾಗ ಗೂಡ್ಸ್ ಲಾರಿ ಪಲ್ಟಿಯಾದ ಘಟನೆ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ.   ಕಾಟನ್ ತುಂಬಿದ್ದ ಲಾರಿಯು ಮಾಲೂರಿನಿಂದ ಬೆಂಗಳೂರಿಗೆ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದ ಮಹಿಳೆ  ➤ ವ್ಯಕ್ತಿ ಮೃತ್ಯು              

(ನ್ಯೂಸ್ ಕಡಬ) newskadaba.com ತಿರುವನಂತಪುರ, ಡಿ. 13.  ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ಮಹಿಳೆಯು ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದು, 31 ವರ್ಷದ ವ್ಯಕ್ತಿಯು ಮೃತಪಟ್ಟಿರುವ ಘಟನೆ ಕೇರಳದ ಪಟ್ಟಣಂತಿಟ್ಟ ಎಂಬಲ್ಲಿ ಸಂಭವಿಸಿದೆ. ಈ ಜೋಡಿಯು ತಾವು ಮೊದಲೇ ಕೈಗೊಂಡಿದ್ದ ನಿರ್ಧಾರದಂತೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಹೊಟೇಲ್ ಗೆ ತೆರಳಿದ್ದು, ಈ ವೇಳೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಿಳೆ ಭಯದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಮಹಿಳೆಯ ಚೀರಾಟವನ್ನು ಕೇಳಿ ಹೋಟೆಲ್ ಸಿಬ್ಬಂದಿ ಕೊಠಡಿಗೆ ಧಾವಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದ ಮಹಿಳೆ  ➤ ವ್ಯಕ್ತಿ ಮೃತ್ಯು               Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೊತ್ತಲ್ಲದ ಹೊತ್ತಲ್ಲಿ ಲಾಂಗ್ ಹಿಡಿದು ರೌಡಿಗಳ ಪುಂಡಾಟ   

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 13.  ಬೆಂಗಳೂರಿನಲ್ಲಿ ರೌಡಿಗಳ ಸಾಮ್ರಾಜ್ಯ ಶುರುವಾಗಿದ್ದು, ರೌಡಿಗಳು ಹೊತ್ತಲ್ಲದ ಹೊತ್ತಲ್ಲಿ ಲಾಂಗ್ ಹಿಡಿದು ಸುತ್ತುತ್ತಿದ್ದಾರೆಂದು ವರದಿ ತಿಳಿಸಿದೆ. ಮಚ್ಚು ಹಿಡಿದುಕೊಂಡು ಕಿರಾತಕರಿಬ್ಬರು ಸುತ್ತುತ್ತಿದ್ದು, ಕೂಲಾಗಿದ್ದ ಏರಿಯಾದಲ್ಲಿ ಲಾಂಗ್ ಹಿಡಿದು ಜನರನ್ನು ಭಯಪಡಿಸುವ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. .  

ಹೊತ್ತಲ್ಲದ ಹೊತ್ತಲ್ಲಿ ಲಾಂಗ್ ಹಿಡಿದು ರೌಡಿಗಳ ಪುಂಡಾಟ    Read More »

ಕರ್ನಾಟಕ, ಕ್ರೈಮ್ ನ್ಯೂಸ್

20 ಟನ್ ಫಿಶ್ ಕಳವು ➤ಆರೋಪಿಯ ವಿರುದ್ದ ದೂರು ದಾಖಲು      

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13. ಫಿಶ್ ಮಿಲ್ ನ ತಲಾ 50 ಕೆ.ಜಿ ತೂಕದ 400 ಚೀಲಗಳು ಕಳವಾದ ಘಟನೆ ಬೈಕಂಪಾಡಿಯ ಗೋದಾಮಿನಲ್ಲಿ ಸಂಭವಿಸಿದೆ. ಗೋದಾಮಿನ ಮೇಲ್ವಿಚಾರಕ ಇರ್ಫಾನ್ ಈ ಫಿಶ್ ಮಿಲ್  ಚೀಲಗಳನ್ನು ಕದ್ದೊಯ್ದಿರುವುದಾಗಿ ಅದರ ವ್ಯವಸ್ಥಾಪಕ ಪಣಂಬೂರು ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ. ಉಳ್ಳಾಲದ ಕೋಟೆಪುರದ ಮಹಮ್ಮದ್ ಸಮೀರ್ ಎಂಬವರ ಮಾಲಕತ್ವದ “ಯುನೈಟೆಡ್ ಮೆರೈನ್ ಪ್ರಾಡಕ್ಟ್ಸ್” ಕಾರ್ಖಾನೆಯಲ್ಲಿ ಫಿಶ್ ಮಿಲ್ ಅನ್ನು ತಯಾರಿಸಿ 50 ಕೆ.ಜಿ. ತೂಕದ ಚೀಲಗಳಲ್ಲಿ ತುಂಬಿಸಿಡುತ್ತಿದ್ದು, ಗೋದಾಮಿಗೆ

20 ಟನ್ ಫಿಶ್ ಕಳವು ➤ಆರೋಪಿಯ ವಿರುದ್ದ ದೂರು ದಾಖಲು       Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪೊಲೀಸ್ ಠಾಣೆಗೆ ಬೆಂಕಿ ➤ ಕಾನ್ಸ್ಟೇಬಲ್ ಗೆ ಗಾಯ

(ನ್ಯೂಸ್ ಕಡಬ) newskadaba.com ಮುಂಬೈ ,ಡಿ,13: ಪೊಲೀಸ್ ಠಾಣೆಯ ರೆಕಾರ್ಡ್ ರೂಮ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸಿಬ್ಬಂದಿಯೊಬ್ಬರು ಗಾಯಗೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಗಾಯಾಳುವನ್ನು ಕಾನ್ಸ್ ಸ್ಟೆಬಲ್ ಅರವಿಂದ ಖೋಟ್ ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಪ್ರಮುಖ ದಾಖಲೆಗಳು ಹಾನಿಗೀಡಾಗಿವೆ. ಖೋಟ್ ಅವರ ದೇಹ ಶೇ.95ರಷ್ಟು ಸುಟ್ಟುಹೋಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಠಾಣೆಗೆ ಬೆಂಕಿ ➤ ಕಾನ್ಸ್ಟೇಬಲ್ ಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿದ್ಯುತ್ ತಂತಿ ತುಳಿದು ರೈತ ಮೃತ್ಯು

(ನ್ಯೂಸ್ ಕಡಬ) newskadaba.com ರಿಪ್ಪನ್ ಪೇಟೆ , ಡಿ.13. ರೈತರೋರ್ವರು ವಿದ್ಯುತ್ ತಂತಿ ತುಳಿದು ಮೃತಪಟ್ಟ ಘಟನೆ ಹೋಬಳಿಯ ನಂಜವಳ್ಳಿ ಗ್ರಾಮದಲ್ಲಿ ನಡೆದಿದೆ.   ಮೃತರನ್ನು ಗ್ರಾಮದ ವೆಡ್ಡಿನಬೈಲು ಶೇಷಗಿರಿ (45) ಎಂದು ಗುರುತಿಸಲಾಗಿದೆ. ಶೇಷಗಿರಿ ಅವರ ಮನೆಯ ಬೇಲಿಗೆ ವಿದ್ಯುತ್ ಸಂಪರ್ಕಿಸಲಾಗಿತ್ತು. ಅವರ ಪತ್ನಿ ಬೆಳಿಗ್ಗೆ ಬೇಲಿಯಲ್ಲಿದ್ದ ಹೂ ಕೀಳಲೆಂದು ಹೋದಾಗ ವಿದ್ಯುತ್ ತಂತಿ ತಗುಲಿದ್ದು, ಈ ವೇಳೆ ಅವರು ಕೂಗಿಕೊಂಡಾಗ ಬಂದ ಶೇಷಗಿರಿ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿದ್ಯುತ್ ತಂತಿ ತುಳಿದು ರೈತ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಡ್ರಗ್ಸ್ ಮಾರಾಟ ➤ ನೈಜೀರಿಯಾದ ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.13  ಡ್ರಗ್ಸ್ ಸಾಗಣೆ ಮತ್ತು ಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿರುವ ಪೊಲೀಸರು ನೈಜೀರಿಯಾದ ಮೂವರು ಪ್ರಜೆಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬಂಧಿತರನ್ನು ನೈಜೀರಿಯಾದ ಕ್ನೇಚುವಾ ಡೇನಿಲ್, ಜೆರ್ರಿ ಎಂದು ಗುರುತಿಸಲಾಗಿದೆ. ಬಾಣಸವಾಡಿ ಹಾಗೂ ಡಿ,ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಎರಡೂ ಠಾಣೆಯ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿದಾಗ ಮೂವರು ಆರೋಪಿಗಳು ತಮ್ಮದೇ ದೇಶದ ಪೆಡ್ಲರ್ ಕಡೆಯಿಂದ ಡ್ರಗ್ಸ್ ಖರೀದಿಸಿ, ಪರಿಚಯಸ್ಥ ಗ್ರಾಹಕರಿಗೆ

ಡ್ರಗ್ಸ್ ಮಾರಾಟ ➤ ನೈಜೀರಿಯಾದ ಮೂವರು ಆರೋಪಿಗಳ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕುಸಿದು ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಉತ್ತರಖಂಡ್, ಡಿ. 13. ತನ್ನ ಮಗಳ ಮೆಹೆಂದಿಯಲ್ಲಿ ಸಂಬಂಧಿಕರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಧುವಿನ ತಂದೆ ಮೃತಪಟ್ಟ ಘಟನೆ ಉತ್ತರಖಂಡ್ ನಲ್ಲಿ ನಡೆದಿದೆ.   ಮಗಳ ಮದುವೆಯ ಸಂತಸದಲ್ಲಿದ್ದ ತಂದೆ ಸಂಬಂಧಿಕರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕುಸಿದುಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರು ಅದಾಗಲೇ ಹೃದಯಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕುಸಿದು ಬಿದ್ದು ವ್ಯಕ್ತಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತಂದೆಯನ್ನು ಕೊಂದು 30 ಪೀಸ್ ಮಾಡಿ ಕೊಳವೆ ಬಾವಿಗೆ ಹಾಕಿದ ಪಾಪಿ ಮಗ

(ನ್ಯೂಸ್‌ ಕಡಬ) newskadaba.com ಬಾಗಲಕೋಟೆ, ಡಿ. 13. ಪಾಪಿ ಮಗನೊಬ್ಬ ತನ್ನ ತಂದೆಯನ್ನು ಕೊಡಲಿಯಿಂದ ಕೊಂದು ದೇಹವನ್ನು 30 ತುಂಡುಗಳನ್ನು ಮಾಡಿ ಬೋರ್‌ವೆಲ್‌ಗೆ ಎಸೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದವರನ್ನು ಪರಶುರಾಮ್ ಕುಳಲಿ (54) ಎಂದು ಗುರುತಿಸಲಾಗಿದೆ. ಆರೋಪಿ ಮಗ ವಿಠ್ಠಲ್ ಕುಳಲಿ (20) ಎಂದು ಗುರುತಿಸಲಾಗಿದೆ. ತಂದೆ ಪ್ರತಿದಿನ ಕುಡಿದು ಹೆಂಡತಿ ಮತ್ತು ಮಗನಿಗೆ ಅವಾಚ್ಯ ಪದ ಬಳಸಿ ನಿಂದಿಸುತ್ತಿದ್ದನು ಎಂಬ ಕಾರಣಕ್ಕೆ ಮಗ ಈ ಕೃತ್ಯ ಎಸಗಿದ್ದಾನೆ ಎಂದು

ತಂದೆಯನ್ನು ಕೊಂದು 30 ಪೀಸ್ ಮಾಡಿ ಕೊಳವೆ ಬಾವಿಗೆ ಹಾಕಿದ ಪಾಪಿ ಮಗ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top