america

ಭಾರತೀಯ ಮೂಲದ ಖ್ಯಾತ ವೈದ್ಯನ ಗುಂಡಿಕ್ಕಿ ಹತ್ಯೆ..!

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಆ. 26. ಭಾರತೀಯ ಮೂಲದ ಖ್ಯಾತ ವೈದ್ಯರೋರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಕುರಿತು ಅಮೇರಿಕಾದಿಂದ ವರದಿಯಾಗಿದೆ. ಹತ್ಯೆಗೊಳಗಾದವರನ್ನು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯವರಾದ ಡಾ. ರಮೇಶ್ ಎಂದು ಗುರುತಿಸಲಾಗಿದೆ. ರಮೇಶ್ ರವರು ಕ್ರಿಮ್ಸನ್ ನೆಟ್‌ ವರ್ಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ವೈದ್ಯಕೀಯ ಅಧಿಕಾರಿಗಳ ಗುಂಪಿನ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಅಲಬಾಮಾದ ಟಸ್ಕಲೂಸಾ ಎಂಬ ನಗರದಲ್ಲಿ ಭಾರತೀಯ ಮೂಲದ ವೈದ್ಯರ ಮೇಲೆ ಅಮೆರಿಕದಲ್ಲಿ ಗುಂಡು ಹಾರಿಸಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ.

ಭಾರತೀಯ ಮೂಲದ ಖ್ಯಾತ ವೈದ್ಯನ ಗುಂಡಿಕ್ಕಿ ಹತ್ಯೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಅಮೆರಿಕ, ಜು.21. ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಯುನೈಟೆಡ್ ಸ್ಟೇಟ್ಸ್‌ನ ನೆವಾಡಾದಲ್ಲಿ ನಡೆದಿದೆ. ವುಡ್ರೋ ಟರ್ನರ್ ಬಂಡಿ ಮೃತ ಬಾಲಕ ಎಂದು ಗುರುತಿಸಲಾಗಿದೆ. ನೆವಾಡಾದಲ್ಲಿ ಎರಡು ವರ್ಷದ ಬಾಲಕ ಅಪರೂಪದ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಬಾಲಕನ ಆರೋಗ್ಯದಲ್ಲಿ ಆಗಿರುವ ಏರುಪೇರು ಗಮನಕ್ಕೆ ಬಂದು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರಿಗೆ ರೋಗದ ಲಕ್ಷಣದ ಬಗ್ಗೆ ತಿಳಿದಿದೆ. ಎರಡು ವರ್ಷದ ಮಗುವಿಗೆ ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ್ದಾರೆ. ಏಕೆಂದರೆ,

ಮೆದುಳು ತಿನ್ನುವ ಅಮೀಬಾದಿಂದ 2 ವರ್ಷದ ಮಗು ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಖಲಿಸ್ತಾನಿಗಳ ದಾಳಿ ವಿರೋಧಿಸಿ ಭಾರತೀಯರ ಪ್ರತಿಭಟನೆ

(ನ್ಯೂಸ್ ಕಡಬ)newskadaba.com ಅಮೇರಿಕಾ, ಜು.18. ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ದೂತವಾಸ ಕಚೇರಿ ಮೇಲೆ ಇತ್ತೀಚೆಗೆ ಖಲಿಸ್ತಾನಿ ಬೆಂಬಲಿಗರು ದಾಳಿ ಖಂಡಿಸಿ ಭಾರತೀಯ ಸಮುದಾಯದವರು ಮೌನ ಪ್ರತಿಭಟನೆ ನಡೆಸಿದ್ದಾರೆ. ಸ್ಯಾನ್‌ ಫ್ರಾನ್ಸಿಸ್ಕೊದ ದೂತವಾಸ ಕಚೇರಿ ಎದುರು ಭಾರತವನ್ನು ಬೆಂಬಲಿಸಿ ನೂರಾರು ಭಾರತೀಯ ಸಮುದಾಯದವರು ಬೃಹತ್‌ ಮೌನ ರ್ಯಾಲಿ ನಡೆಸಿದ್ದಾರೆ. ಇನ್ನು ಇದೇ ವೇಳೆ ದಾಳಿಯನ್ನು ಉಗ್ರರ ಕೃತ್ಯವೆಂದು ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಖಲಿಸ್ತಾನಿಗಳ ದಾಳಿ ವಿರೋಧಿಸಿ ಭಾರತೀಯರ ಪ್ರತಿಭಟನೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಪೊಲೀಸ್ ವಾಹನ ಢಿಕ್ಕಿ-ಅಮೆರಿಕಾದಲ್ಲಿ ಭಾರತ ಮೂಲದ ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com ಅಮೆರಿಕಾ, ಜ.27. ಸಿಯಾಟಲ್ ಪೊಲೀಸ್ ಗಸ್ತು ವಾಹನ ಢಿಕ್ಕಿ ಹೊಡೆದು ಭಾರತ ಮೂಲದ 23 ವರ್ಷದ ಯುವತಿ ಮೃತಪಟ್ಟ ಘಟನೆ ಅಮೆರಿಕದ ಸೌತ್ ಲೇಕ್ ಯೂನಿಯನ್‌ನಲ್ಲಿ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜಾಹ್ನವಿ ಕಂದುಲಾ ಮೃತ ಯುವತಿ ಎನ್ನಲಾಗಿದೆ. ಈಕೆ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವಿದ್ಯಾರ್ಥಿನಿಯಾಗಿದ್ದಳು ಎಂದು ವರದಿಯಾಗಿದೆ. ಸಂತ್ರಸ್ತೆ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.  

ಪೊಲೀಸ್ ವಾಹನ ಢಿಕ್ಕಿ-ಅಮೆರಿಕಾದಲ್ಲಿ ಭಾರತ ಮೂಲದ ಯುವತಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ನಾಸಾದ ಮುಖ್ಯ ತಂತ್ರಜ್ಞರಾಗಿ ಭಾರತ ಮೂಲದ ‘ಎಸಿ ಚರಾನಿಯಾ’ ಆಯ್ಕೆ..!  

(ನ್ಯೂಸ್ ಕಡಬ)newskadaba.com  ಅಮೇರಿಕಾ, ಜ.11. ನಾಸಾದ ಮುಖ್ಯ ತಂತ್ರಜ್ಞರಾಗಿ ಭಾರತೀಯ-ಅಮೆರಿಕನ್ ಏರೋಸ್ಪೇಸ್ ತಜ್ಞ ಎಸಿ ಚರಾನಿಯಾ ಅವರನ್ನ ನೇಮಿಸಲಾಗಿದೆ ಎಂದು ವರದಿಯಾಗಿದೆ. ಎಸಿ ಚರಾನಿಯಾ ಅವರು ತಂತ್ರಜ್ಞಾನ ನೀತಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳ ಬಗ್ಗೆ ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಅವರ ಪ್ರಧಾನ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ನಾಸಾದ ಆರು ಮಿಷನ್ಗಳ ಅಗತ್ಯತೆಗಳೊಂದಿಗೆ ಎಸಿ ಚರಾನಿಯಾ ಏಜೆನ್ಸಿಯ ತಂತ್ರಜ್ಞಾನ ಹೂಡಿಕೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ ಎನ್ನಲಾಗಿದೆ.      

ನಾಸಾದ ಮುಖ್ಯ ತಂತ್ರಜ್ಞರಾಗಿ ಭಾರತ ಮೂಲದ ‘ಎಸಿ ಚರಾನಿಯಾ’ ಆಯ್ಕೆ..!   Read More »

ರಾಷ್ಟ್ರೀಯ ನ್ಯೂಸ್

ಅಮೆರಿಕದಲ್ಲಿ ಭಾರತೀಯ ಟೆಕ್ಕಿಗಳಿಗೆ ಸಂಕಷ್ಟ ➤  ಸಾವಿರಾರು ಪದವೀಧರರು ಉದ್ಯೋಗ ಕಡಿತದಿಂದ ತತ್ತರ..!!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ.08. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಅಮೆರಿಕದ ಐಟಿ ಕಂಪನಿಗಳು ಸೇರಿದಂತೆ ಬೃಹತ್‌ ಉದ್ದಿಮೆಗಳು ಉದ್ಯೋಗ ಕಡಿತ ಮಾಡಿವೆ. ಅಷ್ಟೇ ಅಲ್ಲ, ಬಹುತೇಕ ಕಂಪನಿಗಳು ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿದ ಪರಿಣಾಮವಾಗಿ ಭಾರತದ ಸಾವಿರಾರು ಟೆಕ್ಕಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಅಮೆಜಾನ್‌, ಸೇಲ್ಸ್‌ಫೋರ್ಸ್‌, ಮೆಟಾ, ಟ್ವಿಟರ್‌, ಊಬರ್‌ ಸೇರಿದಂತೆ ಹಲವಾರು ಟೆಕ್‌ ಕಂಪನಿಗಳು ಇತ್ತೀಚೆಗೆ ಉದ್ಯೋಗ ಕಡಿತ ಆರಂಭಿಸಿದ್ದು, ಹೊಸ ನೇಮಕಾತಿ ಸ್ಥಗಿತಗೊಳಿಸಿವೆ. ಒಂದೆಡೆ ಮಿತಿಮೀರಿದ ಹಣದುಬ್ಬರ, ಮತ್ತೊಂದೆಡೆ ಆರ್ಥಿಕ ಹಿಂಜರಿತದ

ಅಮೆರಿಕದಲ್ಲಿ ಭಾರತೀಯ ಟೆಕ್ಕಿಗಳಿಗೆ ಸಂಕಷ್ಟ ➤  ಸಾವಿರಾರು ಪದವೀಧರರು ಉದ್ಯೋಗ ಕಡಿತದಿಂದ ತತ್ತರ..!! Read More »

ರಾಷ್ಟ್ರೀಯ ನ್ಯೂಸ್

ಅಮೇರಿಕಾದಲ್ಲಿ ರಸ್ತೆ ಅಪಘಾತ ➤ ಭಾರತೀಯ ಮೂಲದ ಮಗು ಮೃತ್ಯು.!

(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್, ಡಿ. 31. ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಎರಡು ವರ್ಷದ ಮಗು ಮೃತಪಟ್ಟ ಘಟನೆ ಅಮೇರಿಕಾದ ನೆವಡಾ ರಾಜ್ಯದಿಂದ ವರದಿಯಾಗಿದೆ‌. ಮೃತ ಬಾಲಕನನ್ನು ಕ್ಯಾಲಿಫೋರ್ನಿಯಾದ ಐರ್ವಿನ್ ನಲ್ಲಿ ವಾಸವಾಗಿದ್ದ ಆರವ್ ಮುತ್ಯಾಲ ಎಂದು ಗುರುತಿಸಲಾಗಿದೆ. ರಸ್ತೆ ಅಪಘಾತದಲ್ಲಿ ಈತನ ತಲೆಗೆ ಗಂಭೀರ ಗಾಯವಾಗಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಮೇರಿಕಾದಲ್ಲಿ ರಸ್ತೆ ಅಪಘಾತ ➤ ಭಾರತೀಯ ಮೂಲದ ಮಗು ಮೃತ್ಯು.! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಅಮೆರಿಕದಲ್ಲಿ ಭೀಕರವಾಗಿ ಹತ್ಯೆಯಾದ ಭಾರತೀಯ ಮೂಲದ ಮನೋವೈದ್ಯ ► ಆರೋಪಿಯ ಸೆರೆ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್,ಸೆ.15, ಭಾರತೀಯ ಮೂಲದ ವೈದ್ಯರೊಬ್ಬರನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆಯೊಂದು ಅಮೆರಿಕದಲ್ಲಿ ಬುಧವಾರ ನಡೆದಿದೆ. ಮೃತ ವೈದ್ಯರನ್ನು ತೆಲಂಗಾಣದ ಅಚ್ಚುತ್ ರೆಡ್ಡಿ (57 ವರ್ಷ) ಎಂಬುವುದಾಗಿ ಗುರುತಿಸಲಾಗಿದ್ದು. ಇವರು ಕಳೆದ 7 ತಿಂಗಳುಗಳಿಂದ ಅಮೆರಿಕಾದ  ಕೆನ್ಸಾಸ್ ನಗರದಲ್ಲಿರೋ ತನ್ನ ಕ್ಲಿನಿಕ್ ನಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ವ್ಯಕ್ತಿಯನ್ನು 21 ವರ್ಷದ ಉಮರ್ ರಷೀದ್ ದತ್ ಎಂದು ಗುರುತಿಸಲಾಗಿದೆ ಅಂತ ಅಮೆರಿಕಾದ

ಅಮೆರಿಕದಲ್ಲಿ ಭೀಕರವಾಗಿ ಹತ್ಯೆಯಾದ ಭಾರತೀಯ ಮೂಲದ ಮನೋವೈದ್ಯ ► ಆರೋಪಿಯ ಸೆರೆ Read More »

ಕರಾವಳಿ
Scroll to Top