ಮಂಗಳೂರು

ಸುಳ್ಯ: ಕಾರಿಗೆ ಬೈಕ್‌ ಢಿಕ್ಕಿ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 27. ಸುಳ್ಯ ಶ್ರೀ ರಾಂಪೇಟೆಯಲ್ಲಿ ಸ್ವಿಫ್ಟ್‌ ಡಿಝೈರ್‌ ಕಾರಿಗೆ ಹೀರೊ ಸ್ಪ್ಲೆಂಡರ್‌ ಬೈಕ್‌ ಡಿಕ್ಕಿಯಾದ ಘಟನೆ ಸಂಭವಿಸಿದೆ.     ಬೈಕ್‌ ಸವಾರ ಗಾಯಗೊಂಡಿದ್ದು, ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿದು ಬಂದಿದೆ.  

ಸುಳ್ಯ: ಕಾರಿಗೆ ಬೈಕ್‌ ಢಿಕ್ಕಿ Read More »

ಕರಾವಳಿ

ಕಾಸರಗೋಡು: ವಿಷ ಸೇವಿಸಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 27. ಕುತ್ತಿಗೋಲ್‌ ನಲ್ಲಿ ವಿಷ ಸೇವಿಸಿ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಕುತ್ತಿಗೋಲು ಪಂಚಾಯತ್‌ ಸದಸ್ಯ ಜೋಸ್‌ ರವರ ಪತ್ನಿ ಜಿನೋ (35 ವ.) ಎಂದು ಗುರುತಿಸಲಾಗಿದೆ.     ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದ ಜಿನೋ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇವರ ಸಾವಿನ ಕೃತ್ಯಕ್ಕೆ ಪತಿ ಹಾಗೂ ಪತಿಯ ಮನೆಯವರು ಕಿರುಕುಳದಿಂದ ಬೇಸತ್ತು ವಿಷ ಸೇವನೆ ಮಾಡಿದ್ದಾಗಿ

ಕಾಸರಗೋಡು: ವಿಷ ಸೇವಿಸಿ ಮಹಿಳೆ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ:‌ ವರ್ತಕರಿಗೆ ಉಚಿತ ಕೋವಿಡ್‌ ಟೆಸ್ಟ್

(ನ್ಯೂಸ್ ಕಡಬ) newskadaba.com ಕಡಬ, ಅ. 27. ಇಲ್ಲಿನ ವರ್ತಕರಿಗೆ ಉಚಿತ ಕೋವಿಡ್‌ ತಪಾಸಣೆ ಕಡಬ ಅಂಬೇಡ್ಕರ್‌ ಭವನದಲ್ಲಿ ಇಂದು ನಡೆಯಿತು.     ವರ್ತಕರು ಹಾಗೂ ವಾಹನ ಚಾಲಕರು ಕಡ್ಡಾಯವಾಗಿ ಕೊರೋನಾ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ನೋಟಿಸು ನೀಡಿದ್ದರು. ಈ ಹಿನ್ನಲೆಯಲ್ಲಿ ಬಹುತೇಕ ವರ್ತಕರು ಕೊರೋನಾ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.  

ಕಡಬ:‌ ವರ್ತಕರಿಗೆ ಉಚಿತ ಕೋವಿಡ್‌ ಟೆಸ್ಟ್ Read More »

ಕರಾವಳಿ

ಕೊಂಬೆಟ್ಟು: ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ಗೆಲ್ಲುಗಳ ತೆರವು

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 27. ಶಾಸಕ ಸಂಜೀವ ಮಠಂದೂರು ಅವರ ಸೂಚನೆಯಂತೆ ಕೊಂಬೆಟ್ಟು ಬಳಿ ವಿದ್ಯುತ್‌ ತಂತಿಗಳಿಗೆ ಬಾಗಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ಗೆಲ್ಲುಗಳನ್ನು ಇಂದು ನಗರ ಸಭೆ ಸ್ಥಳೀಯ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್‌ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.     ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಕಾರ್ಯಚರಣೆ ಮಾಡಲಾಯಿತು. ನಗರಸಭೆ ಮತ್ತು ಸಂಚಾರ ಪೊಲೀಸ್‌ ಠಾಣೆ ಸಹಕಾರ ನೀಡಿದರು.    

ಕೊಂಬೆಟ್ಟು: ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ಗೆಲ್ಲುಗಳ ತೆರವು Read More »

ಕರಾವಳಿ

ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ➤ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ

(ನ್ಯೂಸ್ ಕಡಬ) newskadaba.com ಮೈಸೂರು ಅ. 27: ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ಹೊತ್ತಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುಟುಂಬ ಮಂಗಳವಾರ ಚಾಮುಂಡಿ ಬೆಟ್ಟದಲ್ಲಿ ಹರಕೆ ತೀರಿಸಿದರು. ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರದ ಅಧಿದೇವತೆ ಚಾಮುಂಡೇಶ್ವರಿಗೆ ಹರಕೆ ತೀರಿಸಿದರು.ರೋಹಿಣಿ ಸಿಂಧೂರಿ ಅವರು ಮೈಸೂರು ದಸರಾ ಮಹೋತ್ಸವ ಕೆಲವೇ ದಿನಗಳಿರುವಾಗ ಮೈಸೂರು ಜಿಲ್ಲಾಧಿಕಾರಿಯಾಗಿ ಬಂದಿದ್ದರು.ಮೈಸೂರು ದಸರಾ ಉತ್ಸವ ಸುಸೂತ್ರವಾಗಿ ನಡೆಯುವಂತೆ ಆಶಿಸಿ ಹರಕೆ

ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ➤ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ Read More »

ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯ : ರಾತ್ರಿ ಅನ್ನದಾನ ಸೇವೆಯ ವ್ಯವಸ್ಥೆ ಆರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ಅ. 27: ಕೋವಿಡ್ ಹಿನ್ನೆಲೆಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಗಾಗಲೇ ನಿಧಾನಗತಿಯಲ್ಲಿ ದೇವರ ಸೇವೆಗಳು ದಿನಕ್ಕಿಷ್ಟು ಎಂಬಂತೆ ಆರಂಭಗೊಂಡಿದೆ. ಭಕ್ತರ ಸಂಖ್ಯೆಯು ಹೆಚ್ಚುತ್ತಿದೆ. ಆದರೆ ಅನ್ನದಾನ ಸೇವೆ ಸ್ಥಗಿತಗೊಳಿಸಲಾಗಿತ್ತು. ಈಗ ಅನ್ಲಾ ಕ್ ಪ್ರಕ್ತಿಯೆಗಳು ಆರಂಭಗೊಂಡಿದ್ದು, ಮತ್ತೆ ರಾತ್ರಿ ವೇಳೆಯ ಅನ್ನದಾನ ವ್ಯವಸ್ಥೆ ಆರಂಭವಾಗಿದೆ.ದೇವಳದಲ್ಲಿ ರಾತ್ರಿ ಅನ್ನದಾನ ಸೇವೆ ಇಲ್ಲದೆ ಭಕ್ತರು ಪರದಾಡುವಂತಾಗಿತ್ತು. ಇದರಿಂದಾಗಿ ಹಲವು ಚರ್ಚೆಗಳು ನಡೆದಿತ್ತು. ಆದ್ದರಿಂದ ದೇವಳದ ಆಡಳಿತ ಅಧಿಕಾರಿಯವರ ಸೂಚನೆಯೊಂದಿಗೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಭಾನುವಾರದಿಂದ ರಾತ್ರಿ

ಕುಕ್ಕೆ ಸುಬ್ರಹ್ಮಣ್ಯ : ರಾತ್ರಿ ಅನ್ನದಾನ ಸೇವೆಯ ವ್ಯವಸ್ಥೆ ಆರಂಭ Read More »

ಕರಾವಳಿ

ಸುಳ್ಯ :ಕ್ಯಾನ್ಸರ್ ಆಸ್ಪತ್ರೆಗೆ ಕೇಶದಾನ ಮಾಡಿದ ಯುವಕ

(ನ್ಯೂಸ್ ಕಡಬ) newskadaba.com ಸುಳ್ಯ ಅ. 27:  ದಿನಕ್ಕೊಂದು ಹೇರ್ ಸ್ಟೈಲ್ ಮಾಡಿಕೊಂಡು, ತಮ್ಮ ಕೇಶವನ್ನು ಹಾಳು ಮಾಡಿಕೊಳ್ಳುವ ಯುವಕರಿಗೆ, ಇಲ್ಲೊಬ್ಬ ಹುಡುಗ ತನ್ನ ಕೇಶದಾನ ಮಾಡುವ ಮೂಲಕ ಮಚ್ಚುಗೆಗೆ ಹಾಗೂ ಹಲವರಿಗೆ ಪ್ರೇರಣೆಯಗಿದ್ದಾನೆ. ಸುಳ್ಯದ ಯುವಕನೊಬ್ಬ ತಾನು ಇಷ್ಟ ಪಟ್ಟು ಅತೀ ಹೆಚ್ಚು ಕೂದಲನ್ನು ಬೆಳೆಸಿಕೊಂಡಿದ್ದಾನೆ. ಬಳಿಕ ಅದನ್ನ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡುವ ಮೂಲಕ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಇವರು, ಸಾಮಾಜಿಕ ಜಾಲತಾಣದಲ್ಲಿನ “ಹೇರ್ ಫೋರ್ ಹೋಪ್ ಇಂಡಿಯ” ( Hair for hope India) ಎಂಬ

ಸುಳ್ಯ :ಕ್ಯಾನ್ಸರ್ ಆಸ್ಪತ್ರೆಗೆ ಕೇಶದಾನ ಮಾಡಿದ ಯುವಕ Read More »

ಕರಾವಳಿ

ಕಾಸರಗೋಡು: ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 27. ಟ್ರಾಲಿ ಬ್ಯಾಗ್‌ನ ಟಯರ್‌ನಲ್ಲಿ ಬಚ್ಚಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕಾಸರಗೋಡು ನಿವಾಸಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕಾಸರಗೋಡಿನ ಹಂಝ ಎಂದು ಗುರುತಿಸಲಾಗಿದೆ.     ಟ್ರಾಲಿ ಬ್ಯಾಗ್‌ನ ಟಯರ್ ನಲ್ಲಿ ಬಚ್ಚಿಟ್ಟು ಚಿನ್ನಾಭರಣವನ್ನು ಸಾಗಿಸುತ್ತಿದ್ದನು. ಕಳೆದ ದಿನ ಸಂಜೆ ದುಬಾಯಿ ಯಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಈತ ಬಂದಿಳಿದಿದ್ದನು. ಕಾಸರಗೋಡು ನಿವಾಸಿಯನ್ನು ಕೋಜಿಕ್ಕೋಡ್‌ನ ಕರಿಪ್ಪೂರ್‌ ವಿಮಾನ ನಿಲ್ದಾಣದಿಂದ ಅಧಿಕಾರಿಗಳು ವಶಕ್ಕೆ ತೆಗೆದು

ಕಾಸರಗೋಡು: ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪಿಲಿಕುಳ ಜೈವಿಕ ಉದ್ಯಾನವನದ “ವಿಕ್ರಂ ಹುಲಿ” ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 27:  2003ರಲ್ಲಿ ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು. ವಿಕ್ರಂ ಹುಲಿಗೆ ಹತ್ತು ಮರಿಗಳಿದ್ದು, ಅವು ದೇಶದ ವಿವಿಧ ಮೃಗಾಲಯಗಳಲ್ಲಿವೆ. 21 ವರ್ಷದ ವಿಕ್ರಂ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹುಲಿಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು. ವಿಕ್ರಮ್ ಕಳೆದ ಒಂದು ವಾರದಿಂದ ಆಹಾರ ಸೇವನೆ ನಿಲ್ಲಿಸಿತ್ತುಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ದೃಷ್ಟಿಹೀನತೆಯಿಂದ ಬಳಲುತ್ತಿತ್ತು. ಇದರಿಂದ ಒಂದು ವಾರದಿಂದ ಆಹಾರ ಸೇವನೆಗೂ ಹಿಂದೇಟು ಹಾಕುತ್ತಿತ್ತು.

ಪಿಲಿಕುಳ ಜೈವಿಕ ಉದ್ಯಾನವನದ “ವಿಕ್ರಂ ಹುಲಿ” ಇನ್ನಿಲ್ಲ Read More »

ಕರಾವಳಿ

ಮಂಗಳೂರು ದಸರಾ ಉತ್ಸವಕ್ಕೆ ತೆರೆ ➤ ಸರಳವಾಗಿ ಸಂಪ್ನನಗೊಂಡ ನವರಾತ್ರಿ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 27: ರಾಜ್ಯದಲ್ಲೇ ಮೈಸೂರು ಬಳಿಕ ಎರಡನೇ ಅತೀ ದೊಡ್ಡ ದಸರಾ ಎಂದು ಕರೆಸಿಕೊಳ್ಳುವ ಮಂಗಳೂರು ದಸರಾ ಉತ್ಸವಕ್ಕೆ ತೆರೆ ಬಿದ್ದಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ಆರಾಧನೆಗೊಂಡ ನವದುರ್ಗೆಯರ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಕೋವಿಡ್ ಗೈಡ್‍ಲೈನ್ಸ್ ಪ್ರಕಾರ ಅತ್ಯಂತ ಸರಳವಾಗಿ ಈ ಬಾರಿ ದಸರಾ ಉತ್ಸವ ನೆರವೇರಿತು.ಅತ್ಯಂತ ವೈಭವದಿಂದ ನಡೆಯುತ್ತಿದ್ದ ಮಂಗಳೂರು ದಸರಾ ಈ ಬಾರಿ ಸರಳವಾಗಿ ನಡೆದಿದೆ. ಕುದ್ರೋಳಿ ದೇವಸ್ಥಾನದ ಆವರಣಕ್ಕೆ ಮಾತ್ರ ಸೀಮಿತವಾಗಿದ್ದ ದಸರಾ ಮಹೋತ್ಸವಕ್ಕೆ

ಮಂಗಳೂರು ದಸರಾ ಉತ್ಸವಕ್ಕೆ ತೆರೆ ➤ ಸರಳವಾಗಿ ಸಂಪ್ನನಗೊಂಡ ನವರಾತ್ರಿ Read More »

ಕರಾವಳಿ, ಕರ್ನಾಟಕ
Scroll to Top