ನ್ಯೂಸ್ ಕಡಬ

ಸುಬ್ರಹ್ಮಣ್ಯ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ► ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ,ಸೆ.26. ಇತ್ತೀಚೆಗೆ ಐಟಿ ದಾಳಿಗೆ ಒಳಗಾಗಿದ್ದ ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಭಾನುವಾರ ಆಗಮಿಸಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ತಮ್ಮ ಮನೆಯ ಮೇಲೆ ಇತ್ತೀಚೆಗೆ ಐಟಿ ದಾಳಿ ನಡೆದ ಬಳಿಕ ಸ್ವಲ್ಪಮಟ್ಟಿಗೆ ಕುಗ್ಗಿ ಹೋಗಿದ್ದ ಡಿಕೆಶಿ ಅವರು ಇದೀಗ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಮನ ಶಾಂತಿಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಡಿಕೆಶಿ ಶ್ರೀ ದೇವಳದಲ್ಲಿ ವಿಶೇಷ ಪೂಜೆ […]

ಸುಬ್ರಹ್ಮಣ್ಯ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ► ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ Read More »

ಕರಾವಳಿ

ಕುಂಡಾಜೆ: ಕೋಮು ಘರ್ಷಣೆ ಪ್ರಕರಣ ► ಮೂವರ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಕಡಬ ಠಾಣಾ ವ್ಯಾಪ್ತಿಯ ಕುಂಡಾಜೆ ಎಂಬಲ್ಲಿ ಭಾನುವಾರ ಸಂಜೆ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಸೆಕ್ಷನ್ 307ರ ಪ್ರಕಾರ ಕೊಲೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಘಟನೆ ಸಂಬಂದಿಸಿದಂತೆ ಕುಂಡಾಜೆ ನಿವಾಸಿ ಝಕರಿಯಾ ಮತ್ತು ಅವರ ತಂಗಿ ಜಮೀಳಾ ಎಂಬವರಿಗೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ರಾಮಕುಂಜ ನಿವಾಸಿಗಳಾದ ಅಶ್ವತ್, ರಿತೇಶ್ ಹಾಗೂ ಕೃಷ್ಣ ಎಂಬವರನ್ನು ಬಂಧಿಸಲಾಗಿದ್ದು, ಝಕರಿಯಾ ಅವರು ಭಾನುವಾರ ಸಂಜೆ ಉಪ್ಪಿನಂಗಡಿಯಿಂದ ಜೀಪಿನಲ್ಲಿ ಬಂದು ಕುಂಡಾಜೆಯಲ್ಲಿ

ಕುಂಡಾಜೆ: ಕೋಮು ಘರ್ಷಣೆ ಪ್ರಕರಣ ► ಮೂವರ ಆರೋಪಿಗಳ ಬಂಧನ Read More »

ಕರಾವಳಿ

ಏಳು ಬೆಟ್ಟಗಳ ಒಡೆಯನಿಗೆ 28 ಕೆ.ಜಿ. ತೂಕದ ಚಿನ್ನದ ನೆಕ್ಲೇಸ್ ಉಡುಗೋರೆ …!!! ► ಈ ಹಾರದ ವಿಶೇಷತೆ ಏನು ಗೊತ್ತಾ..???

(ನ್ಯೂಸ್ ಕಡಬ) newskadaba.com  ತಿರುಪತಿ,ಸೆ.25. ಏಳು ಬೆಟ್ಟಗಳ ಒಡೆಯನೆಂದೇ ಪ್ರಸಿದ್ಧಿ ಪಡೆದ ತಿರುಪತಿ ತಿಮ್ಮಪ್ಪನಿಗೆ ಆಂಧ್ರಪ್ರದೇಶದ ವಿಜಯವಾಡದ ಉದ್ಯಮಿ ಭಕ್ತರೊಬ್ಬರು ಸುಮಾರು 8.36 ಕೋಟಿ ರೂ. ಮೌಲ್ಯದ ಚಿನ್ನದ ಹಾರವನ್ನು ಉಡುಗೊರೆಯಾಗಿ ಅರ್ಪಿಸಿದ್ದಾರೆ. ಒಂಬತ್ತು ದಿನಗಳ ವಾರ್ಷಿಕ ಬ್ರಹ್ಮೋತ್ಸವ ಹಬ್ಬದ ಮೊದಲ ದಿನ, ಸುಮಾರು 28 ಕೆ.ಜಿ. ತೂಕ ತೂಗುವ ಈ ಹಾರದಲ್ಲಿ, ವೆಂಕಟೇಶ್ವರ ದೇವರ 1008 ಪವಿತ್ರ ಹೆಸರುಗಳ ಹಾಗೂ 1008 ಚಿನ್ನದ ನಾಣ್ಯಗಳನ್ನು ಒಳಗೊಂಡಿರುವುದು ವಿಶೇಷ. ಬೃಹತ್ ಚಿನ್ನದ ಹಾರವನ್ನು ಆಂಧ್ರಪ್ರದೇಶ ಮೂಲದ ವಿಜಯವಾಡ ಉದ್ಯಮಿಯಾದ

ಏಳು ಬೆಟ್ಟಗಳ ಒಡೆಯನಿಗೆ 28 ಕೆ.ಜಿ. ತೂಕದ ಚಿನ್ನದ ನೆಕ್ಲೇಸ್ ಉಡುಗೋರೆ …!!! ► ಈ ಹಾರದ ವಿಶೇಷತೆ ಏನು ಗೊತ್ತಾ..??? Read More »

ಕರ್ನಾಟಕ

ಜಗತ್ತಿನ ಅತೀ ಹೆಚ್ಚು ತೂಕದ ಮಹಿಳೆ ► ಇಮಾನ್ ಅಹ್ಮದ್ ನಿಧನ

(ನ್ಯೂಸ್ ಕಡಬ) newskadaba.com ಅಬುಧಾಬಿ,ಸೆ.25, ಜಗತ್ತಿನ ಅತೀ ಹೆಚ್ಚು ತೂಕದ ಮಹಿಳೆ ಎಂದೇ ಹೆಸರಾಗಿದ್ದ ಈಜಿಪ್ಟ್​ನ ಇಮಾನ್ ಅಹ್ಮದ್ ಸೋಮವಾರ ನಿಧನರಾಗಿದ್ದಾರೆ.   ಇಮಾನ್ ಅಹ್ಮದ್( 37) ನಿಧನ ಕುರಿತಂತೆ ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದು, ಹೃದ್ರೋಗ ಹಾಗೂ ಕಿಡ್ನಿಗಳ ವೈಫಲ್ಯವೇ ಸಾವಿಗೆ ಕಾರಣ ಎಂದು ಮಾಹಿತಿ ನೀಡಿದ್ದಾರೆ. ಈಜಿಪ್ಟ್ ನ ಅಲೆಕ್ಸಾಂಡ್ರಿಯಾದ ನಿವಾಸಿಯಾಗಿರುವ ಇಮಾನ್ ಬರೋಬ್ಬರಿ 500 ಕೆಜಿ ತೂಗುತ್ತಿದ್ದ ದೇಹದ ತೂಕ ಕಡಿಮೆ ಮಾಡಲು ಕಳೆದ ಫೆಬ್ರವರಿ ತಿಂಗಳಿನಲ್ಲಿ ಮುಂಬೈಗೆ ಕರೆತರಲಾಗಿತ್ತು. ಮುಂಬೈ ವೈದ್ಯರು ಆಕೆಯ

ಜಗತ್ತಿನ ಅತೀ ಹೆಚ್ಚು ತೂಕದ ಮಹಿಳೆ ► ಇಮಾನ್ ಅಹ್ಮದ್ ನಿಧನ Read More »

ಅಂತರ್ರಾಷ್ಟ್ರೀಯ ನ್ಯೂಸ್

ಅಡುಗೆ ಮಾಹಿತಿ ► ಸಿಹಿ ಗೆಣಸಿನ ಪಾಯಸ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ, ಸೆ.25. ಪುಷ್ಟಿದಾಯಕ ಆಹಾರಗಳಲ್ಲೊಂದಾದ ಸಿಹಿ ಗೆಣಸು ಯಾರಿಗೆ ತಾನೆ ಹಿಡಿಸಲ್ಲ… ಎಲ್ಲಾರಿಗೂ ಇಷ್ಟ ಅಲ್ಲವೇ?…. ಹೌದು ಸಿಹಿಗೆಣಸಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು.  ಇದರಿಂದ ಪಾಯಸ ಕೂಡ ತಯಾರಿಸಬಹುದು. ಸಿಹಿಗೆಣಸಿನ ಪಾಯಸ ಹೇಗೆ ಮಾಡುವುದು ಅನ್ನೋ ಸರಳವಾದ ವಿಧಾನವನ್ನು  ಕೆಳಗೆ ತಿಳಿಸಲಾಗಿದೆ.. ಬೇಕಾಗುವ ಸಾಮಾಗ್ರಿಗಳು:  ·         ಸಿಹಿಗೆಣಸು – ಕತ್ತರಿಸಿಕೊಂಡದ್ದು 1 ಬಟ್ಟಲು ·         ತೆಂಗಿನ ಹಾಲು – 1 ಬಟ್ಟಲು ·         ಬೆಲ್ಲ – ಸಿಹಿಗೆ

ಅಡುಗೆ ಮಾಹಿತಿ ► ಸಿಹಿ ಗೆಣಸಿನ ಪಾಯಸ ಮಾಡುವ ವಿಧಾನ Read More »

ಅಡುಗೆ

ವಿವಿಧ ಕಡೆ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ► ಆಲಂಕಾರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಆಶ್ಲೇಷ್ ಬಾಕಿಲ

(ನ್ಯೂಸ್ ಕಡಬ) newskadaba.com ಕಡಬ,ಸೆ.25, ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಲವು ಕಡೆಗಳಲ್ಲಿ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಆಲಂಕಾರು ಹಿರಿಯ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ ವಿದ್ಯಾರ್ಥಿ ಆಶ್ಲೇಷ್ ಬಾಕಿಲ ಭಾಗವಹಿಸಿ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ. ಪುತ್ತೂರು ಕಲ್ಲೇಗ ಶಿವಾಜಿ ಯುವಕ ಮಂಡಲ ಆಯೋಜಿಸಿದ್ದ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ, ಶ್ರೀದೇವಿ ತುಳುನಾಡ ಬಳಗ ನಗ್ರಿ ಶರವೂರು ಸಂಘಟಿಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ, ಆಲಂಕಾರು ಹಿಂದೂ ಜಾಗರಣ ವೇದಿಕೆ ನಡೆಸಿದ ಕೃಷ್ಣ ಸ್ಫರ್ಧೆಯಲ್ಲಿ ಪ್ರಥಮ, ಹಿಂದೂ ಜಾಗರಣ ವೇದಿಕೆ ಮತ್ತು

ವಿವಿಧ ಕಡೆ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ► ಆಲಂಕಾರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಆಶ್ಲೇಷ್ ಬಾಕಿಲ Read More »

ಕರಾವಳಿ

NCC ಕ್ಯಾಂಪ್‍ ಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.25, NCC ಕ್ಯಾಂಪ್‍ಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಕನಕಪುರದ ರಾವಗೊಂಡ್ಲು ಬೆಟ್ಟದ ಹತ್ತಿರ ಭಾನುವಾರ ನಡೆದಿದೆ. ವಿಶ್ವಾಸ್ (17) ಸಾವನ್ನಪ್ಪಿರುವ ವಿದ್ಯಾರ್ಥಿ. ವಿಶ್ವಾಸ್ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಭಾನುವಾರದಂದು ಕಾಲೇಜಿನಿಂದ 25 ವಿದ್ಯಾರ್ಥಿಗಳನ್ನ ಎನ್‍ಸಿಸಿ ಕ್ಯಾಂಪ್‍ಗೆ ಕನಕಪುರದ ರಾವಗೊಂಡ್ಲು ಬೆಟ್ಟಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ 10 ಅಡಿಯ ಕಲ್ಯಾಣಿಗೆ ಬಿದ್ದು ವಿಶ್ವಾಸ್ ಸಾವನ್ನಪ್ಪಿದ್ದಾನೆ. ಬೇರೆ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಂಡ ಫೋಟೋಗಳಲ್ಲಿ ವಿಶ್ವಾಸ್ ಮುಳುಗುತ್ತಿರುವುದು ಕಾಣಿಸಿದರೂ ಯಾರೋಬ್ಬರು

NCC ಕ್ಯಾಂಪ್‍ ಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲು Read More »

ಕರ್ನಾಟಕ

ಸವಣೂರು: ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ► ಮನೆಮನೆಗೆ ಬೇಟಿ ನೀಡಿ ಮನವಿ

(ನ್ಯೂಸ್ ಕಡಬ) newskadaba.com ಸವಣೂರು,ಸೆ.25, ಇಲ್ಲಿನ ಗ್ರಾಮ ಪಂಚಾಯತ್, ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘ, ಅರುಂಧತಿ ಮಾತೃ ಮಂಡಳಿ, ಮಂಜುನಾಥನಗರ, ವಿವೇಕಾನಂದ ಯುವಕ ಮಂಡಲ ಮತ್ತು ಶ್ರೀಗೌರಿ ಯುವತಿ ಮಂಡಲ, ಮಂಜುನಾಥನಗರ ಇವುಗಳ ಜಂಟಿ ಆಶ್ರಯದಲ್ಲಿ ಅ.2ರಂದು ಬಂಬಿಲದಲ್ಲಿ ನಡೆಯುವ ಸ್ವಚ್ಚತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನೆಮನೆ ಬೇಟಿ ನೀಡಿ ಮನವಿ ಮಾಡಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಂಬಿಲ ಕ್ರಾಸ್ನಿಂದ ಗೌರಿ ಹೊಳೆಯ ತನಕದ ರಸ್ತೆಗಳ ರಿಪೇರಿ, ಹೊಂಡಗಳಿಗೆ ಕಾಂಕ್ರೀಟಿಕರಣ, ಪೊದರು ಸವರುವುದು ಮತ್ತು

ಸವಣೂರು: ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ► ಮನೆಮನೆಗೆ ಬೇಟಿ ನೀಡಿ ಮನವಿ Read More »

ಕರಾವಳಿ

ಇಂದು ಸಂಜೆ (ಸೆ.25 ರಂದು) ಶರವೂರು ದೇವಾಸ್ಥಾನದಲ್ಲಿ ►”ಶ್ರೀರಾಮ ಪಟ್ಟಾಭಿಷೇಕ” ಯಕ್ಷಗಾನ ತಾಳ ಮದ್ದಳೆ

(ನ್ಯೂಸ್ ಕಡಬ) newskadaba.com ಕಡಬ,ಸೆ.25, ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಂಬ ಕಲಾ ಸಂಗಮ ವಾರ್ಷಿಕ ಯಕ್ಷಗಾನ ತಾಳಮದ್ದಳೆ ಕೂಟ ಮತ್ತು ಕಲಾ ಸಂಗಮದ ಹಿರಿಯ ಕಲಾವಿದ ದಿ|.ಎಸ್.ಪಿ. ಸೇಸಪ್ಪ ಶೆಟ್ಟಿಯವರ ಸ್ಮರಣಾರ್ಥವಾಗಿ ಇಂದು ಸಾಯಂಕಾಲ (ಸೆ.25 ರಂದು) ಅತಿಥಿ ಕಲಾವಿದ ಕೂಡುವಿಕೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ಎಂಬ ಯಕ್ಷಗಾನ ತಾಳ ಮದ್ದಳೆ ಶರವೂರು ದೇವಾಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಭಾಗವತರಾಗಿ ಪದ್ಯಾಣ ಗಣಪತಿ ಭಟ್, ಚೆಂಡೆ-ಮದ್ದಳೆ ವಿನಯ ಆಚಾರ್ಯ ಕಡಬ, ಶ್ರೀಶ ರಾವ್ ನಿಡ್ಲೆ ನಿರ್ವಹಿಸಲಿದ್ದಾರೆ. ಡಾ|.ಎಂ. ಪ್ರಭಾಕರ ಜೋಷಿ, ಶಂಭುಶರ್ಮ

ಇಂದು ಸಂಜೆ (ಸೆ.25 ರಂದು) ಶರವೂರು ದೇವಾಸ್ಥಾನದಲ್ಲಿ ►”ಶ್ರೀರಾಮ ಪಟ್ಟಾಭಿಷೇಕ” ಯಕ್ಷಗಾನ ತಾಳ ಮದ್ದಳೆ Read More »

ಕರಾವಳಿ

ಭಜರಂಗದಳ ಆಲಂಕಾರು ಘಟಕದ ಸಂಚಾಲಕರಾಗಿ ► ಮನೋಹರ್ ಮಡ್ಯೋಟ್ಟು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.25, ಭಜರಂಗದಳ ಆಲಂಕಾರು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಇತ್ತೀಚೆಗೆ ನಡೆಯಿತು. ಘಟಕದ ಸಂಚಾಲಕರಾಗಿ ಮನೋಹರ್ ಮಡ್ಯೋಟ್ಟು ಅವರನ್ನು ಈ ಸಂದ್ರರ್ಭದಲ್ಲಿ ಅಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ದೇವರಾಯ ಪ್ರಭು, ಸಹ ಸಂಚಾಲಕರಾಗಿ ಹರೀಶ್ ಕುಂತೂರು, ಗೋಪಾಲ ಆತೂರು, ಗೋರಕ್ಷಾ ಪ್ರಮುಖರಾಗಿ ರಾಧಾಕೃಷ್ಣ  ಕುಂಟ್ಯಾನ, ಸತ್ಸಂಗ ಪ್ರಮುಖರಾಗಿ ಹರ್ಷಿತ್, ಸಂಪರ್ಕ ಪ್ರಮುಖರಾಗಿ ವಸಂತ್ ದೇವಾಡಿಗ, ಸುರಕ್ಷಾ ಪ್ರಮುಖರಾಗಿ ಶಿವಪ್ಪ ಕಜೆ ಇವರುಗಳನ್ನು ಆಯ್ಕೆ ಮಾಡಲಾಯಿತು. ದ.ಕ.ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಬಿ.ಎಸ್.ಸತೀಶ್, ಜಿಲ್ಲಾ ಕೋಶಾಧಿಕಾರಿ ಡಾ||.

ಭಜರಂಗದಳ ಆಲಂಕಾರು ಘಟಕದ ಸಂಚಾಲಕರಾಗಿ ► ಮನೋಹರ್ ಮಡ್ಯೋಟ್ಟು ಆಯ್ಕೆ Read More »

ಕರಾವಳಿ
Scroll to Top