ಉಡುಪಿ :ಸಾಲಬಾಧೆಯಿಂದ ವ್ಯಕ್ತಿ ಆತ್ಮಹತ್ಯೆಗೆ ಶರಣು
(ನ್ಯೂಸ್ ಕಡಬ) newskadaba.com ಉಡುಪಿ, ಡಿ.24: ಮನನೊಂದ ವ್ಯಕ್ತಿಯೋರ್ವರು ಮನೆಯ ಮಲಗುವ ಕೊಠಡಿಯಲ್ಲಿ ಫ್ಯಾನಿಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ನಗರದ ಪುತ್ತೂರು ಗ್ರಾಮದ ನಾರಾಯಣ ನಗರದಲ್ಲಿ ಇಂದು ನಡೆದಿದೆ. ವಿಠಲ ಪ್ರಭು ಎಂಬವರ ಮಗ ಕೃಷ್ಣ ಪ್ರಭು (53) ಆತ್ಮಹತ್ಯೆ ಮಾಡಿಕೊಂಡವರು. ಮೃತರು ಸಾಲ ಬಾಧೆಯಿಂದ ಕಂಗೆಟ್ಟಿದ್ದರು ಎನ್ನಲಾಗಿದೆ.ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಜರು ಪ್ರಕ್ರಿಯೆಯನ್ನು ಪೋಲಿಸರು ನಡೆಸಿದರು.
ಉಡುಪಿ :ಸಾಲಬಾಧೆಯಿಂದ ವ್ಯಕ್ತಿ ಆತ್ಮಹತ್ಯೆಗೆ ಶರಣು Read More »
ಕರಾವಳಿ









