ಕಡಬ ಸರಸ್ವತಿ ವಿದ್ಯಾಲಯ: ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.16. ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನೆಡೆಗೆ ನಡೆಸುವವನೇ ನಿಜವಾದ ಗುರು ಇಂತಹ ಗುರುಗಳನ್ನು ನಾವು ಪುಜಿಸುವುದು ಕರ್ತವ್ಯವಾಗಿಸಿಕೊಳ್ಳಬೇಕು ಎಂದು ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ ಹೇಳಿದರು. ಕಡಬದ ಸರಸ್ವತಿ ವಿದ್ಯಾಲಯದ ಪ್ರೌಢಶಾಲೆಯಲ್ಲಿ ನಡೆದ ಗುರುಪುರ್ಣಿಮೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರ ಜೀವನದ ಯಶಸ್ಸಿನಲ್ಲಿ ತಂದೆ ತಾಯಿಯಷ್ಟೆ ಪಾತ್ರ ಗುರುವಿನದ್ದಿದೆ. ಇಂತಹ ಗುರುಗಳನ್ನು ಗೌರವಿಸುವುದು ಜೀವನದ ಒಂದು ಭಾಗವರಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಅದ್ಯಕ್ಷರಾದ ರವಿರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢ ವಿಭಾಗದ ಮುಖ್ಯಸ್ಥರಾದ […]

ಕಡಬ ಸರಸ್ವತಿ ವಿದ್ಯಾಲಯ: ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ Read More »

ಕರಾವಳಿ

ಪುತ್ತೂರು: 50 ಲಕ್ಷ ನಿಷೇಧಿತ ಹಳೆನೋಟು ವಶ ► ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.16. ದಾಖಲೆ ರಹಿತವಾಗಿ 50 ಲಕ್ಷ ರೂ. ನಿಷೇಧಿತ ಹಳೆನೋಟುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಭೇಧಿಸಿರುವ ಪುತ್ತೂರು ನಗರ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಆರೋಪಿಗಳಾದ ಻ಬ್ದುಲ್ ನಿಸಾರ್, ಮಹಮ್ಮದ್ ಸಿರಾಜ್ ಹಾಗೂ ಅಬ್ದುಲ್ ಹಾರೀಸ್ ಎಂಬವರು ಮಡಿಕೇರಿಯಿಂದ ಮಾಣಿ ಕಡೆಗೆ ಕಾರಿನಲ್ಲಿ ಹಳೆನೋಟುಗಳನ್ನು ಸಾಗಿಸುತ್ತಿದ್ದಾಗ ಪುತ್ತೂರು ಬೈಪಾಸ್ ಉರ್ಲಾಂಡಿ ಸಮೀಪ ತಪಾಸಣೆ ನಡೆಸಿದ ಪೊಲೀಸರು ಾರೋಪಗಳ ಸಹಿತ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ

ಪುತ್ತೂರು: 50 ಲಕ್ಷ ನಿಷೇಧಿತ ಹಳೆನೋಟು ವಶ ► ಮೂವರು ಆರೋಪಿಗಳ ಬಂಧನ Read More »

ಕರಾವಳಿ

ಆಲಂಕಾರು ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜು: ಗಣಕ ಯಂತ್ರ ಘಟಕ ಉದ್ಟಾಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.16. ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ಕಂಪ್ಯುಟರ್ ಶಿಕ್ಷಣವು ಪುರಕವಾಗಲಿದೆ ಎಂದು ಕಾರ್ಪೋರೇಟ್ ಟ್ರೈನರ್ ನಿರಂಜನ್ ರೈ ಹೇಳಿದರು. ಅವರು ಶ್ರೀ ದುರ್ಗಾಂಬ ಪದವಿಪುರ್ವ ವಿದ್ಯಾಲಯದ ಗಣಕ ಯಂತ್ರ ಘಟಕವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಭವಿಷ್ಯದ ಉನ್ನತ ಜೀವನಕ್ಕೆ ಪಠ್ಯ ಪುಸ್ತಕದ ಜ್ಞಾನದ ಜೊತೆಗೆ ಕಂಪ್ಯುಟರ್ ಶಿಕ್ಷಣವು ಇಂದಿನ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳ ಮುಂದಿನ ವೃತ್ತಿಪರ ಜೀವನಕ್ಕೆ ವಿದ್ಯಾರ್ಥಿ ದೆಸೆಯಲ್ಲಿಯೇ ಗಣಕ ಯಂತ್ರದ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.ನ್ಯಾಯವಾದಿ ಮನೋಹರ್ ಮಾತನಾಡಿ,

ಆಲಂಕಾರು ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜು: ಗಣಕ ಯಂತ್ರ ಘಟಕ ಉದ್ಟಾಟನೆ Read More »

ಕರಾವಳಿ

ಪುತ್ತೂರು: ನಾಯಿಯ ಬಾಯಲ್ಲಿ ಮಗುವಿನ ಮೃತದೇಹ ► ಮೂರು ದಿನಗಳ ಹಿಂದೆ ಮೃತಪಟ್ಟ ಮಗು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.15. ಮೂರು ದಿನಗಳ ಹಿಂದೆ ಮೃತಪಟ್ಟ ನವಜಾತ ಶಿಶುವಿನ ಮೃತದೇಹವನ್ನು ನಾಯಿಯೊಂದು ಕಚ್ಚಿಕೊಂಡು ಹೋದ ಘಟನೆ ಪುತ್ತೂರು ಸರ್ಕಾರಿ ಆಸ್ಪತ್ರೆಯ ಬಳಿ ಶನಿವಾರ ಸಂಜೆ ನಡೆದಿದೆ. ಸರಕಾರಿ ಆಸ್ಪತ್ರೆಯ ಹಿಂಬದಿಯ ಆವರಣ ಗೋಡೆಯ ಹೊರಗೆ ಬೀದಿ ನಾಯಿಯೊಂದು ಏನನ್ನೋ ಕಚ್ಚಿಕೊಂಡು ಓಡುತ್ತಿರುವುದನ್ನು ಕಂಡ ಸ್ಥಳೀಯರು ನಾಯಿಯನ್ನು ಬೆನ್ನಟ್ಟಿದಾಗ ನಾಯಿಯ ಬಾಯಲ್ಲಿ ಮಗುವಿನ ಮೃತದೇಹ ಕಂಡು ಬಂದಿತ್ತು. ಜನರು ನಾಯಿಯನ್ನು ಓಡಿಸಿದಾಗ ಆಸ್ಪತ್ರೆಯ ಹಿಂಬದಿ ಕಳೇಬರವನ್ನು ಬಿಟ್ಟು ಓಡಿತು. ಹತ್ತಿರ ಹೋಗಿ ಪರಿಶೀಲಿಸಿದಾಗ ಪುಟ್ಟ

ಪುತ್ತೂರು: ನಾಯಿಯ ಬಾಯಲ್ಲಿ ಮಗುವಿನ ಮೃತದೇಹ ► ಮೂರು ದಿನಗಳ ಹಿಂದೆ ಮೃತಪಟ್ಟ ಮಗು Read More »

ಕರಾವಳಿ

ಆಲಂಕಾರು: ಅಪಘಾತದ ಗಾಯಾಳು ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜು.15. ಏಳು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೋಮಾವಸ್ಥೆಯಲ್ಲಿದ್ದ ಗಾಯಳು ಶುಕ್ರವಾರ ತಡ ರಾತ್ರಿ ಸಾವನ್ನಪ್ಪಿದ ಘಟನೆ ಆಲಂಕಾರಿನಲ್ಲಿ ನಡೆದಿದೆ. ಆಲಂಕಾರು ಗ್ರಾಮದ ನೆಕ್ಕಿಲಾಡಿ ನೋಣಯ್ಯ ಆಚಾರಿ (75) 2016ರ ಡಿಸೆಂಬರ್ 4ರಂದು ಆಲಂಕಾರು ಪೇಟೆಯಲ್ಲಿ ರಸ್ತೆ ದಾಟುವ ಸಂಧರ್ಭದಲ್ಲಿ ಕಡಬ ಕಡೆಯಿಂದ ಬಂದ ದ್ವಿ-ಚಕ್ರ ವಾಹನವೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಕೋಮಾವಸ್ಥೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದರು. ಸುಮಾರು ನಾಲ್ಕು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಚಿಕಿತ್ಸಗೆ

ಆಲಂಕಾರು: ಅಪಘಾತದ ಗಾಯಾಳು ಮೃತ್ಯು Read More »

ಕರಾವಳಿ

ಕಲ್ಲುಗುಡ್ಡೆ: ಮದ್ಯದಂಗಡಿ ತೆರೆಯುವುದಕ್ಕೆ ತೀವ್ರ ಆಕ್ಷೇಪ

(ನ್ಯೂಸ್ ಕಡಬ) newskadaba.com ಕಡಬ, ಜು.15. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿ ಮದ್ಯದಂಗಡಿ ಆರಂಭಗೊಳ್ಳುವ ನಿಟ್ಟಿನಲ್ಲಿ ಗುಮಾನಿ ಇದ್ದು ಇದಕ್ಕೆ ಕಡಬ ಸಿ ಎ ಬ್ಯಾಂಕ್ ಮಾಜಿ ನಿರ್ದೇಶಕ ಚಂದ್ರಶೇಖರ ಗೌಡ ಹಳೆನೂಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಹೇಳಿಕೆ ನೀಡ, ಸುಪ್ರೀಂ ಕೋರ್ಟ್ನ ಆದೇಶದಂತೆ ಹೆದ್ದಾರಿಗಳ ಬದಿಯಲ್ಲಿರುವ ಮದ್ಯದಂಗಡಿಯನ್ನು ಬಂದ್ ಮಾಡಲಾಗಿದೆ.ಮುಚ್ಚಲ್ಪಟ್ಟ ಮದ್ಯದಂಗಡಿಯನ್ನು ನೂಜಿಬಾಳ್ತಿಲದಲ್ಲಿ ತೆರಯುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದೆ. ಕಲ್ಲುಗುಡ್ಡೆ ಎಂಬಲ್ಲಿ ಈ ಹಿಂದೆ ಇದ್ದ ಸರಕಾರಿ ಸ್ಥಳದ ಕಲ್ಲುಗುಡ್ಡೆ-ಕೊಣಾಜೆ ಸಡಕ್ ರಸ್ತೆಯ ಬದಿಯಲ್ಲಿ ಸರ್ವೇ

ಕಲ್ಲುಗುಡ್ಡೆ: ಮದ್ಯದಂಗಡಿ ತೆರೆಯುವುದಕ್ಕೆ ತೀವ್ರ ಆಕ್ಷೇಪ Read More »

ಕರಾವಳಿ

ಶರತ್ ಮಡಿವಾಳ ಹಂತಕರ ಸೆರೆ…? ► ಮಾಧ್ಯಮಗಳಿಗೆ ತಲುಪಿದ ರಹಸ್ಯ ಮಾಹಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.15. ಇತ್ತೀಚೆಗೆ ಬಿ.ಸಿ.ರೋಡ್‍ನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ವಲಯ ಐಜಿಪಿ ಪಿ. ಹರಿಶೇಖರನ್ ನೇತೃತ್ವದಲ್ಲಿ ಆರು ತನಿಖಾ ತಂಡಗಳನ್ನು ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಿಗೆ ತಲುಪಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು

ಶರತ್ ಮಡಿವಾಳ ಹಂತಕರ ಸೆರೆ…? ► ಮಾಧ್ಯಮಗಳಿಗೆ ತಲುಪಿದ ರಹಸ್ಯ ಮಾಹಿತಿ Read More »

ಕರಾವಳಿ

ಬಿಜೆಪಿಯವರು ರಾಜ್ಯಕ್ಕೆ ಬೆಂಕಿ ಹಚ್ಚಿದ್ರೆ ಕಾಂಗ್ರೆಸ್ ನಂದಿಸುತ್ತೆ ► ಬೆಂಕಿ ಹಚ್ಚಿದವರನ್ನು ಸುಮ್ಮನೆ ಬಿಡಲ್ಲ: ಸಿದ್ಧರಾಮಯ್ಯ ತಿರುಗೇಟು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.15. ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ನಾವು ಬಿಡುವುದಿಲ್ಲ. ಬಿಜೆಪಿಯವರು ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ಬಿಜೆಪಿಯವರು ಹಚ್ಚುವ ಬೆಂಕಿಯನ್ನು ನಾವು ನಂದಿಸುವ ಕಾರ್ಯ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಳಿನ್ ಕುಮಾರ್ ಕಟೀಲ್ ರವರು ಜಿಲ್ಲೆಗೆ ಬೆಂಕಿ ಹಚ್ಚೋಕೆ ಹೊರಟಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರು ರಾಜ್ಯಕ್ಕೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಬಿಜೆಪಿಯವರು ಬೆಂಕಿ ಹಚ್ಚೋದರಲ್ಲೇ ನಿಸ್ಸೀಮರು. ರಾಮಜನ್ಮಭೂಮಿ

ಬಿಜೆಪಿಯವರು ರಾಜ್ಯಕ್ಕೆ ಬೆಂಕಿ ಹಚ್ಚಿದ್ರೆ ಕಾಂಗ್ರೆಸ್ ನಂದಿಸುತ್ತೆ ► ಬೆಂಕಿ ಹಚ್ಚಿದವರನ್ನು ಸುಮ್ಮನೆ ಬಿಡಲ್ಲ: ಸಿದ್ಧರಾಮಯ್ಯ ತಿರುಗೇಟು Read More »

ಕರ್ನಾಟಕ

ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆ: ಹವಾಮಾನ ಇಲಾಖೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.15. ಈ ಬಾರಿ ಉತ್ತಮ ಮಳೆಯ ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ಮಳೆಯು ಮೊದಲ ತಿಂಗಳು ಕೊಂಚ ನಿರಾಸೆ ಉಂಟು ಮಾಡಿತ್ತಾದರೂ ಜುಲೈ 17 ರ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಒಡಿಸ್ಸಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿರುವುದರಿಂದ ಉತ್ತಮ ಮಳೆಯನ್ನು ನಿರೀಕ್ಷಿಸಲಾಗಿದ್ದು, ಜುಲೈ 17 ರಿಂದ ನಾಲ್ಕು ದಿನಗಳ ಕಾಲ ಉತ್ತಮ ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಕರಾವಳಿ

ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆ: ಹವಾಮಾನ ಇಲಾಖೆ Read More »

ಕರ್ನಾಟಕ

ಸುಬ್ರಹ್ಮಣ್ಯ: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ► ಶವದ ಮಾಂಸ ಕೊಳೆತು ಎಲುಬುಗಳು ಮಾತ್ರ ಬಾಕಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.14. ಅಪರಿಚಿತ ಮಹಿಳೆಯೋರ್ವರ ಶವವೊಂದು ಕುಕ್ಕೇ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆಯ ಸಮೀಪದ ಕಾಡಿನಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ. ಸುಮಾರು 40 ರಿಂದ 50 ವರ್ಷ ಪ್ರಾಯದ ಮಹಿಳೆಯ ಶವವು ಇದಾಗಿರಬಹುದೆಂದು ಅಂದಾಜಿಸಲಾಗಿತ್ತು, ಶವದ ಪಕ್ಕದಲ್ಲೇ ವಿಷದ ಬಾಟಲಿಯೊಂದು ಪತ್ತೆಯಾಗಿರುವುದರಿಂದ ಮಹಿಳೆ ಆತ್ಮಹತ್ಯೆಗೈದಿರಬಹುದೆಂದು ಅಂದಾಜಿಸಲಾಗಿದೆ. ಆತ್ಮಹತ್ಯೆಗೈದು ಎರಡರಿಂದ ಮೂರು ತಿಂಗಳುಗಳಾಗಿರಬಹುದೆಂದು ಅಂದಾಜಿಸಲಾಗಿದ್ದು, ಶವವು ಸಂಪೂರ್ಣ ಕೊಳೆತು ಎಲುಬುಗಳು ಮಾತ್ರ ಕಂಡುಬಂದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಸುಬ್ರಹ್ಮಣ್ಯ: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ► ಶವದ ಮಾಂಸ ಕೊಳೆತು ಎಲುಬುಗಳು ಮಾತ್ರ ಬಾಕಿ Read More »

ಕರಾವಳಿ
Scroll to Top