ನೆಟ್ಟಣ: ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ.15. ಬದ್ರಿಯಾ ಜುಮ್ಮಾ ಮಸೀದಿ ನೆಟ್ಟಣ ಇದರ ವತಿಯಿಂದ 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಜಮಾಅತಿನ ಅಧ್ಯಕ್ಷರಾದ ಹಾಜಿ ಹುಸೇನ್ ಎನ್. ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಖತೀಬರಾದ ಅಬ್ದುಲ್ ಜಲೀಲ್ ಅರ್ಶದಿ ದುವಾ ನೆರವೇರಿಸಿದರು. ಪ್ರಮುಖರಾದ ಅಬ್ದುಲ್ ರಹಿಮಾನ್ ಹಾಜಿ, ಮಹಮ್ಮದ್ ಕೂರಲ್ಗುಂಡಿ, ಇಬ್ರಾಹಿಂ ಸಖಾಫಿ, ಇಸ್ಮಾಯಿಲ್ ನೆಟ್ಟಣ ಮೊದಲಾದವರು ಉಪಸ್ಥಿತರಿದ್ದರು.

ನೆಟ್ಟಣ: ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ Read More »

ಕರಾವಳಿ

ಜನವರಿ 1 ರಂದು ಸತ್ತ ವ್ಯಕ್ತಿ ಜೀವಂತವಾಗಿ ಪತ್ತೆ ► ಎಂಟು ತಿಂಗಳ ನಂತರ ಪ್ರತ್ಯಕ್ಷವಾದ ಸೆಕ್ಯೂರಿಟಿ ಗಾರ್ಡ್

(ನ್ಯೂಸ್ ಕಡಬ) newskadaba.com ಹಾವೇರಿ, ಆ.14. 2017 ರ ವರ್ಷಾರಂಭದ ಜನವರಿ 1ರಂದು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ರಾಣೆಬೆಣ್ಣೂರು ಬಸ್ ಡಿಪೋದಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದ ವ್ಯಕ್ತಿ ಇಂದು ಪ್ರತ್ಯಕ್ಷವಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ. ಜನವರಿ 1 ರಂದು ರಾಣೆಬೆಣ್ಣೂರು ಬಸ್ ಡಿಪೋದಲ್ಲಿ ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ನಿಂಗರಾಜ್ ಬೆಳಗುಟ್ಟಿ ಎಂಬವರನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅಂದು ಕೊಲೆ ನಡೆದ ಸ್ಥಳದಲ್ಲಿ ಡ್ಯೂಟಿಯಲ್ಲಿದ್ದ ನಿಂಗರಾಜ್ ಇದ್ದಕ್ಕಿದಂತೆ ನಾಪತ್ತೆಯಾಗಿದ್ದು, ಅಗ್ನಿ ದುರಂತದಲ್ಲಿ ಸಜೀವ

ಜನವರಿ 1 ರಂದು ಸತ್ತ ವ್ಯಕ್ತಿ ಜೀವಂತವಾಗಿ ಪತ್ತೆ ► ಎಂಟು ತಿಂಗಳ ನಂತರ ಪ್ರತ್ಯಕ್ಷವಾದ ಸೆಕ್ಯೂರಿಟಿ ಗಾರ್ಡ್ Read More »

ಕರ್ನಾಟಕ

ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ .14, ರಾಜ್ಯ ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿಯೂ ಆದ ಶಕುಂತಳಾ ಶೆಟ್ಟಿಯವರು ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನೀತ್ ರಾಜ್ ಶೆಟ್ಟಿ ಆರ್ವಾರ, ಸದಸ್ಯರುಗಳಾದ ಪುರಂದರ ರೈ ಸಬಳೂರು, ಬಿ.ಕೆ.ಚಂದ್ರಶೇಖರ, ಚಂದ್ರಶೇಖರ ಗೌಡ, ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಕುಮಾರ್ ಬಾನಡ್ಕ ಉಪಸ್ಥಿತರಿದ್ದರು.

ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ Read More »

ಕರಾವಳಿ

ಪ್ರಾಮಾಣಿಕ ದಕ್ಷ ನಿಷ್ಠಾವಂತರಿಗೆ ಎಲ್ಲೂ ಗೌರವವಿದೆ – ಸತೀಶ್ ಕೆ

(ನ್ಯೂಸ್ ಕಡಬ) newskadaba.com ಕಡಬ, ಆ .14,  ದಕ್ಷರಾಗಿದ್ದು ಪ್ರಾಮಾಣಿಕತೆಯಿಂದ ಜವಾಬ್ದಾರಿಯುತ ಹುದ್ದೆ ನಿರ್ವಹಿಸಿದ ವ್ಯಕ್ತಿ ಎಲ್ಲಿ ಹೋದರು ಅಂತಹವರಿಗೆ ಗೌರವ ಸಲ್ಲುತ್ತದೆ ಎಂದು ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ ಹೇಳಿದರು. ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ತೋಟದ ಅಧೀಕ್ಷಕರಾಗಿ 2010 ರಿಂದ ಕರ್ತವ್ಯ ನಿರ್ವಹಿಸಿ ಇದೀಗ ಬೆಳಗಾಂ ಜಿಲ್ಲೆಯ ಗೋಕಾಕ್ ಪ್ರಾದೇಶಿಕ ವಲಯಕ್ಕೆ ವರ್ಗಾವಣೆಗೊಳ್ಳುತ್ತಿರುವ ವನ್ನೂರು ರವರನ್ನು ಐತ್ತೂರು ಗ್ರಾ.ಪಂ.ವತಿಯಿಂದ ಶುಕ್ರವಾರ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ವರ್ಗಾವಣೆಗೊಳ್ಳುತ್ತಿರುವ ತೋಟದ ಅಧೀಕ್ಷಕ ವನ್ನೂರು ರವರನ್ನು, ಗ್ರಾ.ಪಂ.ಅಧ್ಯಕ್ಷ ಸತೀಶ್

ಪ್ರಾಮಾಣಿಕ ದಕ್ಷ ನಿಷ್ಠಾವಂತರಿಗೆ ಎಲ್ಲೂ ಗೌರವವಿದೆ – ಸತೀಶ್ ಕೆ Read More »

ಕರಾವಳಿ

ಜೆಸಿಬಿ ಆಪರೇಟರ್ ಆದ ಸಚಿವ ಯು.ಟಿ.ಖಾದರ್

(ನ್ಯೂಸ್ ಕಡಬ) newskadaba.com ಕೊಣಾಜೆ, ಆ.14. ವಿವಿಧ ಸಮಾರಂಭಗಳಲ್ಲಿ ಅತಿಥಿಗಳು ಆಗಮಿಸಿ ಕಾರ್ಯಕ್ರಮಕ್ಕೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿ ತಾನು ಇನ್ನೊಬ್ಬರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅಂತಹ ಕಾರ್ಯಕ್ರಮವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಎಂಬ ಊರು ಸಾಕ್ಷಿಯಾಯಿತು. ಇಂದು ಬೆಳಿಗ್ಗೆ ಮುಡಿಪುವಿನಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಷೇತ್ರದ ಶಾಸಕರೂ, ರಾಜ್ಯ ಅಹಾರ ಸಚಿವರೂ ಆದ ಸನ್ಮಾನ್ಯ ಯು.ಟಿ. ಖಾದರ್‌ರವರು ಆಗಮಿಸಿದ್ದರು. ಸಚಿವರು ಜೆಸಿಬಿ ಹತ್ತಿ ಸ್ವತಃ ತಾನೇ ಜೆಸಿಬಿಯನ್ನು

ಜೆಸಿಬಿ ಆಪರೇಟರ್ ಆದ ಸಚಿವ ಯು.ಟಿ.ಖಾದರ್ Read More »

ಕರಾವಳಿ

ಸಬಳೂರು: ತುಳುಸಂಸ್ಕೃತಿಯ ಪುನರುತ್ಥಾನಕ್ಕೆಮುನ್ನುಡಿ ಬರೆಯಬೇಕು – ಉಮೇಶ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಕಡಬ, ಆ .14, ನಮ್ಮ ಹಿರಿಯರ ಕಾಲದಲ್ಲಿ ಬಡತನವಿದ್ದರೂ ಸಂಸ್ಕೃತಿಯ ಆಚರಣೆಯಲ್ಲಿ ವೈಭವವಿತ್ತು, ಆದರೆ ನಮಗೆ ಇಂದು ಸಿರಿತನ ವಿದ್ದರೂ ನಮ್ಮ ಸಂಸ್ಕೃತಿಯ ಆಚರಣೆಯಲ್ಲಿ ಬಡತನವಿದೆ ಎಂದು ನೂಜಿಬಾಳ್ತಿಲ ತೆಗರ್ ತುಳುಕೂಟದ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ ಹೇಳಿದರು. ಅವರು ಭಾನುವಾರ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಬಳೂರು ರಾಣಿ ಅಬ್ಬಕ್ಕ ಜ್ಞಾನವಿಕಾಸ ಕೇಂದ್ರದ ವತಿಯಿಂದ ನಡೆದ ಆಟಿಡೊಂಜಿ ದಿನ

ಸಬಳೂರು: ತುಳುಸಂಸ್ಕೃತಿಯ ಪುನರುತ್ಥಾನಕ್ಕೆಮುನ್ನುಡಿ ಬರೆಯಬೇಕು – ಉಮೇಶ್ ಶೆಟ್ಟಿ Read More »

ಕರಾವಳಿ

ಕುಟ್ರುಪಾಡಿ: ಗ್ರಾ.ಪಂ.ನಲ್ಲಿ ಪೈಪು ಖರೀದಿ ಅವ್ಯವಹಾರ ಪ್ರಕರಣ; ಹಿಂದಿನ ಪಿಡಿಒರವರಿಗೆ ನಿರೀಕ್ಷಣಾ ಜಾಮೀನು

(ನ್ಯೂಸ್ ಕಡಬ) newskadaba.com ಕಡಬ, ಆ .14. ಕುಟ್ರುಪಾಡಿ ಗ್ರಾಮ ಪಂಚಾಯತ್ನಲ್ಲಿ ಕಾಂಪೋಸ್ಟ್‌ ಪೈಪ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದಲ್ಲಿ ಜಿಲ್ಲಾ ಭ್ರಷ್ಟಚಾರ ದಳದಿಂದ ಕೇಸು ದಾಖಲಿಸಿಲ್ಪಟ್ಟ ಅಂದಿನ ಪ್ರಭಾರ ಪಿಡಿಒ ವಸಂತಿಯವರಿಗೆ ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕುಟ್ರುಪಾಡಿ ಗ್ರಾ.ಪಂ.ನಲ್ಲಿ 2015ರಲ್ಲಿ ನಿರ್ಮಲ ಗ್ರಾಮ ಯೋಜನೆಯಡಿಯಲ್ಲಿ ಕಾಂಪೋಸ್ಟ್‌ ಪೈಪ್ ಖರೀದಿಯ ಸಂದರ್ಭದಲ್ಲಿ ನಕಲಿ ಬಿಲ್, ಟಿನ್ ನಂಬರ್ ಬಳಸಿ ಪೈಪ್ ಖರೀದಿಸಲಾಗಿದೆ ಎಂದು ಗ್ರಾ.ಪಂ. ಮಾಜಿ ಸದಸ್ಯ ಕ್ಷೇವಿಯರ್

ಕುಟ್ರುಪಾಡಿ: ಗ್ರಾ.ಪಂ.ನಲ್ಲಿ ಪೈಪು ಖರೀದಿ ಅವ್ಯವಹಾರ ಪ್ರಕರಣ; ಹಿಂದಿನ ಪಿಡಿಒರವರಿಗೆ ನಿರೀಕ್ಷಣಾ ಜಾಮೀನು Read More »

ಕರಾವಳಿ

ಕಡಬ: ಅಖಂಡ ಭಾರತ ಸಂಕಲ್ಪ ದಿನ – ಪಂಜಿನ ಮೆರವಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಆ .14, ಹಿಂದು ಜಾಗರಣ ವೇದಿಕೆ ಕಡಬ ತಾಲೂಕು ವತಿಯಿಂದ ದೇಶ ವಿಭಜನೆಯ ಕರಾಳ ದಿನವನ್ನು ನೆನಪಿಸುವ ಅಖಂಡ ಭಾರತ ಸಂಕಲ್ಪ ದಿನ-ಪಂಜಿನ ಮೆರವಣಿಗೆ ಕಾರ್ಯಕ್ರಮ ಆದಿತ್ಯವಾರ ರಾತ್ರಿ ಕಡಬದಲ್ಲಿ ನಡೆಯಿತು. ಕಡಬ ಎಪಿಎಂಸಿ ಸಂತೆ ಮಾರುಕಟ್ಟೆ ಬಳಿಯಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಕಡಬ ಪೇಟೆಯಲ್ಲಿ ಸಾಗಿ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ವಿಟ್ಲ ತಾಲೂಕು ಹಿಂದೂ

ಕಡಬ: ಅಖಂಡ ಭಾರತ ಸಂಕಲ್ಪ ದಿನ – ಪಂಜಿನ ಮೆರವಣಿಗೆ Read More »

ಕರಾವಳಿ

ಪುತ್ತೂರು: ನವವಿವಾಹಿತ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.14. ಕಳೆದ ಎಪ್ರಿಲ್ ತಿಂಗಳಿನಲ್ಲಿ ಮದುವೆಯಾಗಿದ್ದ ನವ ವಿವಾಹಿತ ವ್ಯಕ್ತಿಯೊಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ಬೀರುಮಲೆ ಗುಡ್ಡದಲ್ಲಿ ಭಾನುವಾರದಂದು ಕಂಡುಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೋಡಿಂಬಾಡಿ ಗ್ರಾಮದ ನಿಡ್ಯ ನಿವಾಸಿ ಕೇಶವ ಗೌಡ (30) ಎಂದು ಗುರುತಿಸಲಾಗಿದೆ. ಬಡಗಿ ಕೆಲಸ ಮಾಡುತ್ತಿದ್ದ ಕೇಶವ ಕೆಲಸದ ನಿಮಿತ್ತ ಶನಿವಾರದಂದು ಬೆಳಗ್ಗೆ ಮನೆಯಿಂದ ಹೊರ ಹೋದವರು ರಾತ್ರಿಯಾದರೂ ಮನೆಗೆ ಆಗಮಿಸಿದೇ ಇದ್ದಾಗ ಮನೆಯವರು ಹುಡುಕಾಟ ಆರಂಭಿಸಿದ್ದರು. ಭಾನುವಾರದಂದು ಬೆಳಗ್ಗೆ

ಪುತ್ತೂರು: ನವವಿವಾಹಿತ ಆತ್ಮಹತ್ಯೆ Read More »

ಕರಾವಳಿ

ಅಮಿತ್ ಷಾ ಅಲ್ಲ, ಮೋದಿ ಬಂದರೂ ಭಯವಿಲ್ಲ: ಸಿದ್ಧರಾಮಯ್ಯ ► ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ

(ನ್ಯೂಸ್ ಕಡಬ) newskadaba.com ಗುಲ್ಬರ್ಗ, ಆ.13. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಬಂದು ಕರ್ನಾಟಕದಲ್ಲಿ ಠಿಕಾಣಿ ಹೂಡಿದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಭಾನುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿ, ಅಮಿತ್ ಶಾ, ನರೇಂದ್ರ ಮೋದಿ ಇಬ್ಬರೂ ಇಲ್ಲೇ ಬಂದು ಠಿಕಾಣಿ ಹೂಡಿದರೂ ನಮಗೆ ಯಾವುದೇ ಭಯವಿಲ್ಲ. ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದರು. ರಾಜ್ಯದಲ್ಲಿ

ಅಮಿತ್ ಷಾ ಅಲ್ಲ, ಮೋದಿ ಬಂದರೂ ಭಯವಿಲ್ಲ: ಸಿದ್ಧರಾಮಯ್ಯ ► ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ Read More »

ಕರ್ನಾಟಕ
Scroll to Top