ಜೆಸಿಬಿ ಆಪರೇಟರ್ ಆದ ಸಚಿವ ಯು.ಟಿ.ಖಾದರ್

(ನ್ಯೂಸ್ ಕಡಬ) newskadaba.com ಕೊಣಾಜೆ, ಆ.14. ವಿವಿಧ ಸಮಾರಂಭಗಳಲ್ಲಿ ಅತಿಥಿಗಳು ಆಗಮಿಸಿ ಕಾರ್ಯಕ್ರಮಕ್ಕೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿ ತಾನು ಇನ್ನೊಬ್ಬರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅಂತಹ ಕಾರ್ಯಕ್ರಮವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಎಂಬ ಊರು ಸಾಕ್ಷಿಯಾಯಿತು.

ಇಂದು ಬೆಳಿಗ್ಗೆ ಮುಡಿಪುವಿನಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಷೇತ್ರದ ಶಾಸಕರೂ, ರಾಜ್ಯ ಅಹಾರ ಸಚಿವರೂ ಆದ ಸನ್ಮಾನ್ಯ ಯು.ಟಿ. ಖಾದರ್‌ರವರು ಆಗಮಿಸಿದ್ದರು. ಸಚಿವರು ಜೆಸಿಬಿ ಹತ್ತಿ ಸ್ವತಃ ತಾನೇ ಜೆಸಿಬಿಯನ್ನು ಚಲಾಯಿಸಿ ವಿಭಿನ್ನವಾಗಿ ಕಾಮಗಾರಿಗೆ ಚಾಲನೆ ನೀಡಿದರು. ಹಲವರು ಸಚಿವರು ಜೆಸಿಬಿ ಆಪರೇಟರ್ ಆಗಿದ್ದಾರಾ ಎಂದು ಹುಬ್ಬೇರಿಸಿದರೆ, ಇನ್ನು ಕೆಲವರು ಸಚಿವರ ಸರಳತೆಯನ್ನು ಕಂಡು ಸಂತಸಪಟ್ಟರು.

Scroll to Top