ಫರಂಗಿಪೇಟೆ: ತನ್ನಿಂತಾನೇ ಹೊತ್ತಿ ಉರಿದ ಜೇಬಲ್ಲಿಟ್ಟಿದ್ದ ಮೊಬೈಲ್ ► ಕಡಿಮೆ ಬೆಲೆಯ ಮೊಬೈಲ್ ಖರೀದಿಸುವಾಗ ಎಚ್ಚರ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.07. ಇತ್ತೀಚೆಗೆ ಫ್ಲಿಪ್ಕಾರ್ಟ್ ನಲ್ಲಿ ಖರೀದಿಸಿದ ಮೊಬೈಲ್ ಫೋನೊಂದು ಕೈಯಲ್ಲಿ‌ ಹಿಡಿದಿರುವಾಗಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮಂಗಳೂರು ಹೊರವಲಯದ ಫರಂಗಿಪೇಟೆಯಲ್ಲಿ ಶನಿವಾರದಂದು ನಡೆದಿದೆ. ಫರಂಗಿಪೇಟೆ ನಿವಾಸಿ ಶರೀಖ್ ಮಹಮ್ಮದ್ ಇಬ್ರಾಹಿಂ ಎಂಬವರು 2018 ಜನವರಿ 19 ರಂದು ಫ್ಲಿಪ್ಕಾರ್ಟ್ ನಲ್ಲಿ ಐವೊಮಿ ಕಂಪನಿಗೆ ಸೇರಿದ 6500 ಬೆಲೆಯ ಮೊಬೈಲನ್ನು ಖರೀದಿಸಿದ್ದರು. ಶನಿವಾರದಂದು ಮೊಬೈಲನ್ನು ತನ್ನ ಕೈಯಲ್ಲಿ ಹಿಡಿದಿದ್ದ ಸಂದರ್ಭದಲ್ಲಿ ಏಕಾಏಕಿ ಮೊಬೈಲ್ ಒಳಗಿನಿಂದ ಶಬ್ದವೊಂದು ಕೇಳಿ ಬಂದಿದ್ದು, ಇದರಿಂದ […]

ಫರಂಗಿಪೇಟೆ: ತನ್ನಿಂತಾನೇ ಹೊತ್ತಿ ಉರಿದ ಜೇಬಲ್ಲಿಟ್ಟಿದ್ದ ಮೊಬೈಲ್ ► ಕಡಿಮೆ ಬೆಲೆಯ ಮೊಬೈಲ್ ಖರೀದಿಸುವಾಗ ಎಚ್ಚರ Read More »

ಕರಾವಳಿ

ಸಾವಿನ ದವಡೆಯಿಂದ ಮಹಿಳೆ ಮತ್ತು ಮಕ್ಕಳಿಬ್ಬರ ಪ್ರಾಣವುಳಿಸಿದ ಕೊಕ್ಕಡದ ಯುವಕರು ► ಯುವಕರಿಬ್ಬರ ಸಮಯೋಚಿತ ಕಾರ್ಯಕ್ಕೆ ಜಿಲ್ಲಾ ಎಸ್ಪಿಯವರಿಂದ ಪ್ರಶಂಸಾ ಪತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.07. ನಾಲ್ಕು ದಿನಗಳ ಹಿಂದೆ ಬೆಂಗಳೂರು ಮೂಲದ ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೈಯಲು ಬಂದಿರುವುದನ್ನು ತಿಳಿದು ಈ ಮೂವರನ್ನು ಪೋಲಿಸ್ ಇಲಾಖಾಧಿಕಾರಿಗಳಿಗೆ ತಿಳಿಸಿ ರಕ್ಷಿಸಿದ ಕಾರಣಕ್ಕಾಗಿ ಕೊಕ್ಕಡದ ಯುವಕರಿಬ್ಬರನ್ನು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ. ರವಿಕಾಂತೇ ಗೌಡರವರು ಶನಿವಾರದಂದು ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಿದರು. ಎಪ್ರಿಲ್ 04 ರಂದು ಬೆಂಗಳೂರಿನ ರಾಮನಗರ ಮೂಲದ ಶಿವಾಜಿ ರಾವ್ ಎಂಬವರ ಪತ್ನಿ ಚಂದ್ರಕಲಾ ಎಂಬಾಕೆ ಮನೆಯಲ್ಲಿ ಪತಿಯ ಹೆತ್ತವರ ಕಿರುಕುಳ ತಾಳಲಾರದೆ

ಸಾವಿನ ದವಡೆಯಿಂದ ಮಹಿಳೆ ಮತ್ತು ಮಕ್ಕಳಿಬ್ಬರ ಪ್ರಾಣವುಳಿಸಿದ ಕೊಕ್ಕಡದ ಯುವಕರು ► ಯುವಕರಿಬ್ಬರ ಸಮಯೋಚಿತ ಕಾರ್ಯಕ್ಕೆ ಜಿಲ್ಲಾ ಎಸ್ಪಿಯವರಿಂದ ಪ್ರಶಂಸಾ ಪತ್ರ Read More »

ಕರಾವಳಿ

ಆಲಂಕಾರು: ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಟೆಲಿಫೋನ್ ಕಂಬಕ್ಕೆ ಢಿಕ್ಕಿ ► ಕಂಬ ತಲೆಯ ಮೇಲೆ ಬಿದ್ದು ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.07. ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವೊಂದು ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು ಕಂಬ ತಲೆಯ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಆಲಂಕಾರಿನಲ್ಲಿ ಶನಿವಾರ ಅಪರಾಹ್ನ ನಡೆದಿದೆ. ಮೃತರನ್ನು ಕಡಬ ತಾಲೂಕಿನ ಪೆರಾಬೆ ಗ್ರಾಮದ ಬಾಲಾಜೆ ನಿವಾಸಿ ದಿ| ಅಂಗಾರ ಎಂಬವರ ಪುತ್ರ ಗಿರೀಶ್ (43) ಎಂದು ಗುರುತಿಸಲಾಗಿದೆ. ಆಲಂಕಾರು ಮದ್ಯದಂಗಡಿಯ ಮುಂಭಾಗದಲ್ಲಿದ್ದ ಟೆಲಿಫೋನ್ ಕಂಬಕ್ಕೆ ಭವಾನಿ ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವು ಹಿಮ್ಮುಖವಾಗಿ ಚಲಿಸಿ ಢಿಕ್ಕಿ ಹೊಡೆದಿದ್ದು, ಈ

ಆಲಂಕಾರು: ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಟೆಲಿಫೋನ್ ಕಂಬಕ್ಕೆ ಢಿಕ್ಕಿ ► ಕಂಬ ತಲೆಯ ಮೇಲೆ ಬಿದ್ದು ಓರ್ವ ಮೃತ್ಯು Read More »

ಕರಾವಳಿ

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಾಳೆ (ಎ.08) ‘ಮಿಂಚಿನ ನೋಂದಣಿ’ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.07. ಮುಂದಿನ ತಿಂಗಳು‌ ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲು ಬಾಕಿಯಾಗಿದೆಯೇ…? ಹಾಗಿದ್ದಲ್ಲಿ ನಿಮಗೊಂದು ಸುವರ್ಣಾವಕಾಶವೊಂದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು‌ ಬಿಟ್ಟು ಹೋಗಿರುವವರಿಗೆ, ತಿದ್ದುಪಡಿ ಮಾಡಲಿರುವವರಿಗೆ ನಾಳೆ (ಎಪ್ರಿಲ್ 8 ಭಾನುವಾರ)ದಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗವು “ಮಿಂಚಿನ ನೋಂದಣಿ” ಸೌಲಭ್ಯವನ್ನು ಆಯೋಜಿಸಿದೆ. ನಿಮ್ಮ ಹೆಸರು ಓಟರ್ ಲಿಸ್ಟ್ ನಲ್ಲಿ ಇದೆಯೋ ಇಲ್ಲವೋ

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಾಳೆ (ಎ.08) ‘ಮಿಂಚಿನ ನೋಂದಣಿ’ ಕಾರ್ಯಕ್ರಮ Read More »

ಕರ್ನಾಟಕ

ಬಿಜೆಪಿ ಸಬಳೂರು ಬೂತ್ ಭಾರತ ಮಾತ ಪೂಜನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಎ.7. ರಾಜ್ಯವನ್ನಾಳಿದ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ರಾಜ್ಯ ದಿವಾಳಿಯಾಗಿದೆ. ನಿರ್ಭಯತೆಯಿಂದ ಜನ ಓಡಾಟ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸುಭಿಕ್ಷೆಯಾಗಲು ಬಿಜೆಪಿ ಅಧಿಕಾರವೇರಬೇಕು. ಇದಕ್ಕಾಗಿ ಕಾರ್ಯಕರ್ತರು ವಿರಮಿಸಬಾರದು ಎಂದು ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ ಹೇಳಿದರು. ಅವರು ಕೊೖಲ ಗ್ರಾಮದ ಸಿಗೆತ್ತಡಿ ಶೀನಪ್ಪ ಪುಜಾರಿ ನಿವಾಸದಲ್ಲಿ ನಡೆದ ಸಬಳೂರು ಬೂತ್ ಮಟ್ಟದ ಭಾರತ ಮಾತ ಪೂಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋಮು ಸಂಘರ್ಷವೇರ್ಪಡಿಸಿ ತನ್ನ ಬೇಳೆ ಬೇಯಿಸುಕೊಳ್ಳುವ ಕಾಂಗ್ರೆಸ್ಸಿಗರು ಕೇಂದ್ರದ ಪ್ರತಿಯೊಂದು ಯೋಜನೆಯನ್ನು

ಬಿಜೆಪಿ ಸಬಳೂರು ಬೂತ್ ಭಾರತ ಮಾತ ಪೂಜನಾ ಕಾರ್ಯಕ್ರಮ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಕಾಲೇಜಿನಲ್ಲಿ ಝುಬೈರ್ ಗೆ ಸನ್ಮಾನ

  (ನ್ಯೂಸ್ ಕಡಬ) newskadaba.com ಕಡಬ, ಎ.7. ದೇಶಪ್ರೇಮದ ಕೊರತೆಯಿಂದ ದೇಶದೊಳಗೆ ಅಭದ್ರತೆ ಕಾಡುತ್ತಿದೆ. ಯುವ ಜನತೆ ದೇಶ ಪ್ರೇಮವನ್ನು ಬೆಳೆಸಿಕೊಂಡು ರಕ್ಷಣಾ ಇಲಾಖೆಗೆ ಬಲತುಂಬಬೇಕು . ಯುವ ಜನತೆ ಸೇನೆಗೆ ಸೇರಲು ಮುಂದಾಗಬೇಕು ಎಂದು ಯೋಧ ಝುಬೈರ್ ಹಳೆನೇರಿಂಕಿ ಹೇಳಿದರು. ಅವರು ಶ್ರೀ ರಾಮಕುಂಜೇಶ್ವರ ಕಾಲೇಜಿನಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯಾವೂದೇ ರೀತಿಯಲ್ಲೂ ದೇಶದ ಭದ್ರತೆಗೆ ದಕ್ಕೆಯಾಗದಂತೆ ಯೋಧರು ಹಗಲಿರುಳು ದುಡಿಯುತ್ತಾರೆ. ಇದನೆಲ್ಲ ಮನಗಂಡು ಯೋಧರ

ಶ್ರೀ ರಾಮಕುಂಜೇಶ್ವರ ಕಾಲೇಜಿನಲ್ಲಿ ಝುಬೈರ್ ಗೆ ಸನ್ಮಾನ Read More »

ಕರಾವಳಿ

ಎಪ್ರಿಲ್ 7 – ವಿಶ್ವ ಆರೋಗ್ಯ ದಿನ

(ನ್ಯೂಸ್ ಕಡಬ) newskadaba.com ಎ.7. ಜಾಗತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಎಪ್ರಿಲ್ 7ರಂದು “ವಿಶ್ವ ಆರೋಗ್ಯ ದಿನ” ಎಂದು ಆಚರಿಸುತ್ತದೆ. 1950 ಎಪ್ರಿಲ್ 7ರಂದು ಆರಂಭವಾದ ಈ ಆಚರಣೆ, ಪ್ರತಿ ವರ್ಷ ಯಾವುದಾದರೊಂದು ವಿಶೇಷ ದ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಸುಮಾರು 8 ವಿಶೇಷ ದಿನಗಳನ್ನು, ವಿಶೇಷ ಜಾಗತಿಕ ಆರೋಗ್ಯ ಜಾಗೃತಿಗೆ ಆಯ್ಕೆ ಮಾಡಿದ್ದು, ಅವುಗಳಲ್ಲಿ ವಿಶ್ವ ಆರೋಗ್ಯ ದಿನ ಎಪ್ರಿಲ್ 7 ಕೂಡ ಸೇರಿದೆ. ಉಳಿದ

ಎಪ್ರಿಲ್ 7 – ವಿಶ್ವ ಆರೋಗ್ಯ ದಿನ Read More »

ಆರೋಗ್ಯ ಮಾಹಿತಿ

ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ ► ಕಡಬ ವಲಾಯಾಧ್ಯಕ್ಷೆಯಾಗಿ ಜ್ಯೋತಿ ಕೋಲ್ಪೆ, ಬೆಳಂದೂರು ವಲಯಾಧ್ಯಕ್ಷೆಯಾಗಿ ತೇಜಾಕ್ಷಿ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಎ.7. ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ ವ್ಯಾಪ್ತಿಗೆ ಬರುವ  ಬೆಳಂದೂರು ವಲಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಬೆಳಂದೂರು ಗ್ರಾ.ಪಂ.ಸದಸ್ಯೆ ತೇಜಾಕ್ಷಿ ಕೊಡಂಗೆ ಹಾಗೂ ಕಡಬ ವಲಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಡಬ ಗ್ರಾ.ಪಂ.ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ ನೇಮಕಗೊಂಡಿದ್ದಾರೆ.  ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಅವರು ನೇಮಕ ಮಾಡಿದ್ದಾರೆ.  

ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ ► ಕಡಬ ವಲಾಯಾಧ್ಯಕ್ಷೆಯಾಗಿ ಜ್ಯೋತಿ ಕೋಲ್ಪೆ, ಬೆಳಂದೂರು ವಲಯಾಧ್ಯಕ್ಷೆಯಾಗಿ ತೇಜಾಕ್ಷಿ ನೇಮಕ Read More »

ಕರಾವಳಿ

ಸವಣೂರು ರಾಷ್ಟ್ರೀಯ ಯುವಸಪ್ತಾಹದಲ್ಲಿ ಮಾಹಿತಿ ಮೇಳ

(ನ್ಯೂಸ್ ಕಡಬ) newskadaba.com ಸವಣೂರು, ಎ.7. ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿವಿದ ಕ್ಷೇತ್ರಗಳ ಮಾಹಿತಿ ಅತ್ಯಗತ್ಯ .ಈ ನಿಟ್ಟಿನಲ್ಲಿ ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ಯುವಸಪ್ತಾಹದಲ್ಲಿ ಮಾಹಿತಿ ಮೇಳವನ್ನು ಜೋಡಿಸಿರುವುದು ಶ್ಲಾಘನೀಯ ಎಂದು ವಿಜಯ ಬ್ಯಾಂಕಿನ ನಿವೃತ ಅಧಿಕಾರಿ ಪಿ.ಡಿ.ಕೃಷ್ಣ ಕುಮಾರ್ ರೈ ಹೇಳಿದರು. ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಯುವ ಸಪ್ತಾಹದ 3ನೇ ದಿನದ ಕಾರ್ಯಕ್ರಮ ಕಾರು ಮತ್ತು ದ್ವಿಚಕ್ರ ವಾಹನಗಳ ಬುಕ್ಕಿಂಗ್ ಸಾಲ ಸೌಲಭ್ಯ ಹಾಗೂ ಮೊಬೈಲ್ ಸಿಮ್ ಮಾಹಿತಿ

ಸವಣೂರು ರಾಷ್ಟ್ರೀಯ ಯುವಸಪ್ತಾಹದಲ್ಲಿ ಮಾಹಿತಿ ಮೇಳ Read More »

ಕರಾವಳಿ

ಸವಣೂರು: ಬಿಜೆಪಿ ಸಂಸ್ಥಾಪನ ದಿನಾಚರಣೆ

(ನ್ಯೂಸ್ ಕಡಬ) newskadaba.com ಸವಣೂರು, ಎ.6.  ಬಿಜೆಪಿ ಸವಣೂರು ಬೂತ್ ಸಂಖ್ಯೆ 65ರಲ್ಲಿ ಬಿಜೆಪಿ ಸಂಸ್ಥಾಪನ ದಿನಅಚರಣೆ ಹಾಗೂ ಮಹಿಳಾ ಅಭಿಯಾನ ಮತ್ತು ಬಿಜೆಪಿ ಗೆಲ್ಲಿಸಲು ಮನೆಮನೆ ಬೇಟಿ ಕಾರ್ಯ ನಡೆಸಲಾಯಿತು. ಈ ಸಂದರ್ಭ ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಸ್ಥಾಪನ ದಿನಾಚರಣೆಯಂದೇ ಮಹಿಳಾ ಅಭಿಯಾನ ಹಾಗೂ ಮನೆಮನೆ ಭೇಟಿ ಕಾರ್ಯ ನಡೆಸುವ ಮೂಲಕ ಪ್ರಚಾರ ಆರಂಭವಾಗಿದೆ. ಈಗಾಗಲೇ ಕ್ಷೇತ್ರಾದ್ಯಂತ ಬಿಜೆಪಿ ಪರ ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದಾರೆ. ಪಕ್ಷವನ್ನು ಗೆಲ್ಲಿಸುವ

ಸವಣೂರು: ಬಿಜೆಪಿ ಸಂಸ್ಥಾಪನ ದಿನಾಚರಣೆ Read More »

ಕರಾವಳಿ
Scroll to Top