ಚಾರ್ಮಾಡಿ ಘಾಟ್ ನಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ಸಂಚಕಾರ ► ಬೆಂಗಳೂರು ಪ್ರಯಾಣಿಸುವವರಿಗೆ ಸಂಪಾಜೆಯೇ ಉಪಕಾರ
(ನ್ಯೂಸ್ ಕಡಬ) newskadaba.com ಕಡಬ, ಜೂ.12. ಮಳೆಯ ಪ್ರಮಾಣ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯ ವಿವಿಧೆಡೆ ಗುಡ್ಡ ಕುಸಿದ ಪರಿಣಾಮ ಸಂಚಾರಕ್ಕೆ ತೊಡಕುಂಟಾಗಿದೆ. ಸೋಮವಾರದಂದು ಘಾಟ್ ರಸ್ತೆಯ ಎರಡನೇ ಹಾಗೂ ಮೂರನೇ ತಿರುವಿನ ಮಧ್ಯೆ ಮಣ್ಣು ಕುಸಿದು ಬಿದ್ದುದರಿಂದ ರಸ್ತೆ ತಡೆಯುಂಟಾಗಿ ಹಸನಬ್ಬ ಚಾರ್ಮಾಡಿ ಹಾಗೂ ಅವರ ತಂಡವು ಶ್ರಮವಹಿಸಿ ಒಂದು ಹಂತದ ತಡೆಯನ್ನು ತೆರವುಗೊಳಿಸಿದ ಪರಿಣಾಮ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಆದರೆ ಘಾಟಿ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮಂಗಳವಾರದಂದು ಮತ್ತೆ […]










