ಕ್ರೈಸ್ತ ಧರ್ಮಗುರು ವಂ| ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ ವಿಧಿವಶ ► ಇಚಿಲಂಪಾಡಿ, ಸಂಪ್ಯಾಡಿ, ನೆಲ್ಯಾಡಿ, ಪದವು ಸೇರಿದಂತೆ ಕರಾವಳಿಯ ಹಲವೆಡೆ ಸೇವೆ

(ನ್ಯೂಸ್ ಕಡಬ) newskadaba.com ಕಡಬ, ಸೆ.09. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲಂಕರ ಓರ್ಥೋಡೋಕ್ಸ್ ಸಿರಿಯನ್ ಚರ್ಚಿನ ವಿವಿಧ ದೇವಾಲಯಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ವಂದನೀಯ ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ (88) ಭಾನುವಾರದಂದು ಬೆಂಗಳೂರಿನ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ದಿ|ವಿ.ಐ. ಐಸ್ಸಾಕ್ ಹಾಗೂ ದಿ|ಬೀನಾಮ್ಮ ಐಸ್ಸಾಕ್ ರವರ ಹಿರಿಯ ಪುತ್ರರಾದ ಇವರು ಇಚಿಲಂಪಾಡಿ ಜೋರ್ಜಿಯನ್ ತೀರ್ಥಾಟಕ ಕೇಂದ್ರದ ಅಭಿವೃದ್ದಿಯಲ್ಲಿ ಗಣನೀಯ ಪಾತ್ರ ವಹಿಸಿದ್ದರು. 18 ವರ್ಷಗಳ ಕಾಲ ಇಚಿಲಂಪಾಡಿ ಜೋರ್ಜಿಯನ್ ತೀರ್ಥಾಟಕ ಕೇಂದ್ರದ ಧರ್ಮಗುರುಗಳಾಗಿ ಸೇವೆ […]

ಕ್ರೈಸ್ತ ಧರ್ಮಗುರು ವಂ| ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ ವಿಧಿವಶ ► ಇಚಿಲಂಪಾಡಿ, ಸಂಪ್ಯಾಡಿ, ನೆಲ್ಯಾಡಿ, ಪದವು ಸೇರಿದಂತೆ ಕರಾವಳಿಯ ಹಲವೆಡೆ ಸೇವೆ Read More »

ಕರ್ನಾಟಕ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಾಳೆ ಭಾರತ ಬಂದ್ ಹಿನ್ನೆಲೆ ► ಕಡಬದಲ್ಲೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಸೆ.09. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೆಪ್ಟೆಂಬರ್ 10 ಸೋಮವಾರದಂದು ಭಾರತ ಬಂದ್ ಗೆ ಕಾಂಗ್ರೆಸ್ ಕರೆ‌ ನೀಡಿದ್ದು, ಕಡಬದಲ್ಲೂ ಬಂದ್ ಇರಲಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ ಹೇಳಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಭಾರತ ಬಂದ್ ಗೆ ಕರೆ ನೀಡಿದ್ದರಿಂದ ಕಡಬದಲ್ಲಿನ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದರ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಾಳೆ ಭಾರತ ಬಂದ್ ಹಿನ್ನೆಲೆ ► ಕಡಬದಲ್ಲೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಮನವಿ Read More »

ರಾಷ್ಟ್ರೀಯ ನ್ಯೂಸ್

ನಾಳೆ ಭಾರತ ಬಂದ್ ಹಿನ್ನೆಲೆ ► ಜಿಲ್ಲೆಯಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.09. ಕಾಂಗ್ರೆಸ್ ಪಕ್ಷವು ಸೆಪ್ಟೆಂಬರ್ 10 ರಂದು ಭಾರತ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ, ಪದವಿ ಕಾಲೇಜುಗಳಿಗೆ ಸೋಮವಾರದಂದು ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಭಾರತ ಬಂದ್ ಹಿನ್ನೆಲೆ ► ಜಿಲ್ಲೆಯಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ Read More »

ಕರಾವಳಿ

ಕಡಬ: ರೆಫೆಲ್ ಡೀಲ್ ವಿರುದ್ದ ಮಂಗಳೂರಿನಲ್ಲಿನ ಪ್ರತಿಭಟನೆಯ ಪೂರ್ವಭಾವಿ ಸಭೆ ► ಚಹಾ ಮಾರಿ ಅಧಿಕಾರಕ್ಕೆ ಬಂದ ಮೋದಿ ಮುಂದೊಮ್ಮೆ ದೇಶವನ್ನೇ ಮಾರುತ್ತಾರೆ – ಎಂ.ಎಸ್.ಮಹಮ್ಮದ್ ವ್ಯಂಗ್ಯ

(ನ್ಯೂಸ್ ಕಡಬ) newskadaba.com ಕಡಬ, ಸೆ.09. ಕಳೆದ ನಾಲ್ಕುವರೆ ವರ್ಷದಿಂದ ಈ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರವು ದೇಶವನ್ನು ಅದಃಪತನಕ್ಕೆ ತಳ್ಳುತ್ತಿದ್ದು, ಯಾವುದೋ ಯೋಗದಿಂದ ಚಹಾ ಮಾರುತ್ತಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ತನ್ನ ಅನುಭವದ ಕೊರತೆಯ ಆಡಳಿತದಿಂದ ಮುಂದೊಮ್ಮೆ ಈ ದೇಶವನ್ನೇ ಮಾರಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಕಡಬ ಕಾಂಗ್ರೇಸ್ ಉಸ್ತುವಾರಿ ಎಂ.ಎಸ್. ಮಹಮ್ಮದ್ ವ್ಯಂಗ್ಯವಾಡಿದರು. ಅವರು ಭಾನುವಾರದಂದು ಕಡಬ ಕಾಂಗ್ರೇಸ್ ಕಛೇರಿಯಲ್ಲಿ ಸೋಮವಾರ ಇಂಧನ ಬೆಲೆ ಏರಿಕೆಯ ವಿರುದ್ದ ಕಾಂಗ್ರೇಸ್ ಭಾರತ್ ಬಂದ್

ಕಡಬ: ರೆಫೆಲ್ ಡೀಲ್ ವಿರುದ್ದ ಮಂಗಳೂರಿನಲ್ಲಿನ ಪ್ರತಿಭಟನೆಯ ಪೂರ್ವಭಾವಿ ಸಭೆ ► ಚಹಾ ಮಾರಿ ಅಧಿಕಾರಕ್ಕೆ ಬಂದ ಮೋದಿ ಮುಂದೊಮ್ಮೆ ದೇಶವನ್ನೇ ಮಾರುತ್ತಾರೆ – ಎಂ.ಎಸ್.ಮಹಮ್ಮದ್ ವ್ಯಂಗ್ಯ Read More »

ಕರಾವಳಿ

►► ವಿಶೇಷ ಲೇಖನ ► ಚಮತ್ಕಾರಿ ತೆಂಗಿನ ಎಣ್ಣೆಯ ಮೇಲೆ ವೃಥಾ ಆರೋಪವೇಕೆ ? ✍? ಸಹ್ಯಾದ್ರಿ ರೋಹಿತ್ ಕಡಬ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಸೆ.09. ಅನಾದಿ ಕಾಲದಿಂದಲೂ ತೆಂಗಿನೆಣ್ಣೆಯು ನಮ್ಮೆಲ್ಲರ ದೈನಂದಿನ ಜೀವನದಲ್ಲಿ ಬಳಕೆಯಾಗುತ್ತಿರುವ ಸಂಜೀವಿನಿಯಾಗಿದೆ. ತೆಂಗಿನ ಮರವನ್ನು ನಾವೆಲ್ಲರೂ “ಕಲ್ಪವೃಕ್ಷ“ ಎಂದು ಕರೆಯುತ್ತೇವೆ. ಇದರ ಕಾಯಿ, ನೀರು, ತಿರುಳು, ಸಿಪ್ಪೆ, ಗೆರಟೆ, ಮರ, ಎಲೆ(ಮಡಲು) ಹೀಗೆ ಪ್ರತಿಯೊಂದು ಭಾಗವು ಕೂಡ ಪ್ರಕೃತಿ ಮಾನವರಿಗೆ ನೀಡಿದ ಅತ್ಯುತ್ತಮ ವರದಾನವಾಗಿದೆ. ಭಾರತ, ಇಂಡೊನೇಷಿಯಾ, ಫಿಲಿಫ್ಪೈನ್ಸ್, ಬ್ರೆಜಿಲ್ ಹೀಗೆ ಹಲವು ದೇಶಗಳಲ್ಲಿ ತೆಂಗನ್ನು ಬೆಳೆಯುತ್ತಾರೆ. ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ತೆಂಗಿನೆಣ್ಣೆಗೆ ವಿಶಿಷ್ಟವಾದ ಸ್ಥಾನವಿದೆ. ಚರ್ಮ, ಕೂದಲು,

►► ವಿಶೇಷ ಲೇಖನ ► ಚಮತ್ಕಾರಿ ತೆಂಗಿನ ಎಣ್ಣೆಯ ಮೇಲೆ ವೃಥಾ ಆರೋಪವೇಕೆ ? ✍? ಸಹ್ಯಾದ್ರಿ ರೋಹಿತ್ ಕಡಬ Read More »

ವಿಶೇಷ ಲೇಖನಗಳು

ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ – ಬೆಳ್ಳಾರೆ ಪಿಎಸೈ ಈರಯ್ಯ ► ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಸೂಚನೆ

(ನ್ಯೂಸ್ ಕಡಬ) newskadaba.com ಸವಣೂರು, ಸೆ.09. ಗಣೇಶೋತ್ಸವಗಳ ಮೆರವಣಿಗೆಯಲ್ಲಿ ಡಿ.ಜೆ.ಸೌಂಡ್ಸ್‍ಗೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಿ, ಕಾನೂನು ಪಾಲನೆಗೆ ಸಹರಿಸಬೇಕು ಎಂದು ಬೆಳ್ಳಾರೆ ಠಾಣಾ ಉಪನಿರೀಕ್ಷಕ ಡಿ.ಎನ್ ಈರಯ್ಯ ಹೇಳಿದರು. ಅವರು ಶನಿವಾರದಂದು ಸಂಜೆ ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ನಡೆದ ವಿವಿಧ ಕಡೆಗಳ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಹೇಳಿದರು. ಕಾರ್ಯಕ್ರಮಗಳಲ್ಲಿ ಅನ್ಯಧರ್ಮದ ವ್ಯಕ್ತಿಗಳಿಗೆ, ಧರ್ಮಕ್ಕೆ ನೋವು ತರುವಂತಹ ಕೆಲಸ ಮಾಡಬೇಡಿ. ಶಾಂತಿ, ಸಂಯಮ, ಮಾನವೀಯತೆಯನ್ನು ಮೈಗೂಡಿಸಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆಯೊಂದಿಗೆ

ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ – ಬೆಳ್ಳಾರೆ ಪಿಎಸೈ ಈರಯ್ಯ ► ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಸೂಚನೆ Read More »

ಕರಾವಳಿ

ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ► ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

(ನ್ಯೂಸ್ ಕಡಬ) newskadaba.com ಉಡುಪಿ, ಸೆ.08. ನಡು ರಸ್ತೆಯಲ್ಲಿ ಚಲಿಸುತ್ತಿದ್ದ ಮಾರುತಿ 800 ಕಾರೊಂದು ಹಠಾತ್ತನೆ ಉಂಟಾದ ಬೆಂಕಿಯಿಂದಾಗಿ ಸುಟ್ಟು ಭಸ್ಮವಾದ ಘಟನೆ ಉಡುಪಿಯ ಜೋಡುಕಟ್ಟೆ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಮಹಿಳೆಯೋರ್ವರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಾರಿನ ಬಾನೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾಯವನ್ನರಿತು ತಕ್ಷಣವೇ ಕಾರನ್ನು ನಿಲ್ಲಿಸಿ ಹೊರಬಂದಿದ್ದಾರೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕ್ಷಣಮಾತ್ರದಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದ್ದು, ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ► ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು Read More »

ಕರಾವಳಿ

ಸುಬ್ರಹ್ಮಣ್ಯ: ಒಬ್ಬಂಟಿಯಾಗಿದ್ದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಕೊಲೆ ► ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.08. ಒಬ್ಬಂಟಿಯಾಗಿ ಜೀವನ‌ ಸಾಗಿಸುತ್ತಿದ್ದ ವ್ಯಕ್ತಿಯೋರ್ವರನ್ನು ಮನೆಯ ಕೊಠಡಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಅವರ ಮೃತದೇಹವು ಶನಿವಾರದಂದು ಕಂಡು ಬಂದಿದೆ. ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕಲ್ಲಾರು ನಿವಾಸಿ ಸುಬ್ರಹ್ಮಣ್ಯ ಕೆ.(58) ಕೊಲೆಗೀಡಾದ ದುರ್ದೈವಿ. 2007 ರಲ್ಲಿ ಹೆಂಡತಿಯನ್ನು ತೊರೆದಿದ್ದ ಇವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸುಬ್ರಹ್ಮಣ್ಯರು ಕೆಲವು ದಿನಗಳಿಂದ ಕಾಣದೆ ಇದ್ದುದರಿಂದ ಅನುಮಾನಗೊಂಡ ನೆರೆಯ ನಿವಾಸಿ ರಾಮಚಂದ್ರ ಎಂಬವರು ಮೃತರ ಸಹೋದರನಿಗೆ ಕರೆ‌ಮಾಡಿ ವಿಚಾರ ತಿಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರದಂದು ಮನೆಗೆ

ಸುಬ್ರಹ್ಮಣ್ಯ: ಒಬ್ಬಂಟಿಯಾಗಿದ್ದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಕೊಲೆ ► ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ Read More »

ಕರಾವಳಿ

ಕರಾವಳಿ ಕ್ರೈಸ್ತರ ವಿಶೇಷ ಹಬ್ಬ ‘ಮೋಂತಿ ಫೆಸ್ಟ್’ ✍? ರೇಷ್ಮಾ ವೀರ ಕ್ರಾಸ್ತಾ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಸೆ.08. ಭರತ ಭೂಮಿ ಪುಣ್ಯ ಭೂಮಿ, ಈ ಮಾತೃ ಭೂಮಿಯಲ್ಲಿ ಜನ್ಮ ತಾಳಿದ ನಾವೇ ಧನ್ಯರು. ಭಾರತ ಮಾತೆ ತನ್ನ ಬಾಹುಗಳಲ್ಲಿ ಹಲವಾರು ವೈಶಿಷ್ಠಗಳನ್ನು ಮೈಗೂಡಿಸಿಕೊಂಡಿದ್ಧಾಳೆ. ಈ ಭೂಮಿಯಲ್ಲಿ ಆಚರಿಸಲ್ಪಡುವ ಸಂಸ್ಕತಿ, ಸಂಪ್ರದಾಯ, ಆಚಾರ-ವಿಚಾರಗಳು ಒಂದಕ್ಕೊಂದು ಬೆಸೆದುಕೊಂಡಿದೆ ಎಂದರೆ ತಪ್ಪಾಗಲಾರದು. ಅದರಲ್ಲಿ ಕರಾವಳಿಯ ಕ್ರೈಸ್ತ ಬಾಂಧವರು ಆಚರಿಸುವ ಮೋಂತಿ ಫೆಸ್ಟ್ ಕೂಡ ಈ ಮಣ್ಣಿನ ಸೊಗಡಿನ ಜೊತೆ ಬೆರೆತು ಹೋಗಿದೆ. ಕನ್ನಡದಲ್ಲಿ ಹೊಸತೆನೆಯ ಹಬ್ಬ, ತುಳುವಿನಲ್ಲಿ ವೃದ್ದರ್, ಕೊಂಕಣಿಯಲ್ಲಿ ಮೊಂತಿ

ಕರಾವಳಿ ಕ್ರೈಸ್ತರ ವಿಶೇಷ ಹಬ್ಬ ‘ಮೋಂತಿ ಫೆಸ್ಟ್’ ✍? ರೇಷ್ಮಾ ವೀರ ಕ್ರಾಸ್ತಾ Read More »

ವಿಶೇಷ ಲೇಖನಗಳು

ಕುಲ್ಕುಂದ: ಚಾಲಕನ ನಿಯಂತ್ರಣ ತಪ್ಪಿ ಧರೆಗಿಳಿದ ಕಾರು ► ಬಿಳಿನೆಲೆ ಶಾಲೆಯ ಮುಖ್ಯ ಶಿಕ್ಷಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.08. ವಾಹನವೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿದ ಕಾರೊಂದು ರಸ್ತೆಯ ಎಡಬದಿಯಲ್ಲಿದ್ದ ಧರೆಗೆ ಢಿಕ್ಕಿಯಾಗಿ ನಜ್ಜುಗುಜ್ಜಾಗಿದ್ದು, ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಲ್ಕುಂದ ಸಮೀಪ ಶನಿವಾರದಂದು ನಡೆದಿದೆ. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಶರ್ಮರವರು ತನ್ನ ಮಾರುತಿ ಬ್ರೆಝಾ ಕಾರಿನಲ್ಲಿ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದಾಗ ಕುಲ್ಕುಂದ ಸಮೀಪ ಎದುರಿನಿಂದ ಬರುತ್ತಿದ್ದ ಕಾರೊಂದು ಢಿಕ್ಕಿಯಾಗುವುದನ್ನು ತಪ್ಪಿಸುವುದಕ್ಕಾಗಿ ರಸ್ತೆಯ ಎಡ ಬದಿಗೆ ತಿರುಗಿಸಿದ್ದಾರೆ. ತಕ್ಷಣವೇ

ಕುಲ್ಕುಂದ: ಚಾಲಕನ ನಿಯಂತ್ರಣ ತಪ್ಪಿ ಧರೆಗಿಳಿದ ಕಾರು ► ಬಿಳಿನೆಲೆ ಶಾಲೆಯ ಮುಖ್ಯ ಶಿಕ್ಷಕ ಅಪಾಯದಿಂದ ಪಾರು Read More »

ಕರಾವಳಿ
Scroll to Top