ಕಡಬ ತಾಲೂಕು ಉದ್ಘಾಟನೆ ಮಾ.8 ಶುಕ್ರವಾರ ಸಂಜೆಗೆ ಮುಂದೂಡಿಕೆ ► ಪುತ್ತೂರು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಇಂದು ಕಡಬದಲ್ಲಿ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಮಾ.06. ಬಹು ನಿರಿಕ್ಷಿತ ಕಡಬ ತಾಲೂಕು ಉದ್ಘಾಟನೆಯು ಮಾ.8ರಂದು ಸಂಜೆ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆಯು ಇಂದು ಬೆಳಿಗ್ಗೆ 11 ಗಂಟೆಗೆ ಕಡಬ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಸಹಾಯಕ ಕಮೀಷನ್ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಡಬ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಡಬದಲ್ಲಿ ನಡೆಯುವ ಪೂರ್ವಭಾವಿ ಸಭೆಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.

ಕಡಬ ತಾಲೂಕು ಉದ್ಘಾಟನೆ ಮಾ.8 ಶುಕ್ರವಾರ ಸಂಜೆಗೆ ಮುಂದೂಡಿಕೆ ► ಪುತ್ತೂರು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಇಂದು ಕಡಬದಲ್ಲಿ ಪೂರ್ವಭಾವಿ ಸಭೆ Read More »

ಕರ್ನಾಟಕ

ಕೊನೆಗೂ ಬಂತು ಕಡಬ ತಾಲೂಕು ಉದ್ಘಾಟನೆಗೆ ಅಧಿಕೃತ ಆದೇಶ..!! ► ಮಾ. 7 ಸಾಯಂಕಾಲ ಕಂದಾಯ ಸಚಿವರಿಂದ ನೂತನ ಕಡಬ ತಾಲೂಕಿಗೆ ಚಾಲನೆ, ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.05. ಕೊನೆಗೂ ಕಡಬ ಜನತೆಯ ಬಹುಕಾಲದ ಕನಸು ನನಸಾಗುವ ಸಂದರ್ಭಕ್ಕೆ ಗಳಿಗೆ ಕೂಡಿಬಂದಿದ್ದು, ನೂತನ ಕಡಬ ತಾಲೂಕಿನ ಅಧಿಕೃತ ಉದ್ಘಾಟನೆಯು ಮಾರ್ಚ್ 07 ಗುರುವಾರದಂದು ಸಂಜೆ 5.30 ಗಂಟೆಗೆ ನಡೆಯಲಿದೆ. ಈ ಬಗ್ಗೆ ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆಯವರ ದಕ್ಷಿಣ ಕನ್ನಡ ಪ್ರವಾಸದ ಸಮಯ ನಿಗದಿಯಾಗಿದ್ದು, ಗುರುವಾರ ಮಧ್ಯಾಹ್ನ ಮೂಡುಬಿದಿರೆ ತಾಲೂಕನ್ನು ಉದ್ಘಾಟಿಸಿ ಆ ಬಳಿಕ ಸಾಯಂಕಾಲ ಕಡಬ ತಾಲೂಕು ಉದ್ಘಾಟನೆ ಹಾಗೂ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಕಳೆದ

ಕೊನೆಗೂ ಬಂತು ಕಡಬ ತಾಲೂಕು ಉದ್ಘಾಟನೆಗೆ ಅಧಿಕೃತ ಆದೇಶ..!! ► ಮಾ. 7 ಸಾಯಂಕಾಲ ಕಂದಾಯ ಸಚಿವರಿಂದ ನೂತನ ಕಡಬ ತಾಲೂಕಿಗೆ ಚಾಲನೆ, ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ Read More »

ಕರಾವಳಿ

ಪಂಜ ಸೇರಿದಂತೆ ಹತ್ತಿರದ 7 ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರಿಸಲು ಆಗ್ರಹ ► ಕಡಬ ತಾಲೂಕು ಉದ್ಘಾಟನೆಗೆ ಕ್ರಮ ಕೈಗೊಳ್ಳುವಂತೆ ದೇವೇಗೌಡರಿಗೆ ಮನವಿ.

(ನ್ಯೂಸ್ ಕಡಬ) newskadaba.com ಕಡಬ, ಮಾ.05. ಮಾಜಿ ಪ್ರಧಾನಿ ರಾಷ್ಟ್ರೀಯ ಜೆಡಿಎಸ್ ಅಧ್ಯಕ್ಷ ಹೆಚ್.ಡಿ ದೇವೆಗೌಡರಲ್ಲಿ ಕಡಬ ತಾಲೂಕು ಉದ್ಘಾಟನೆಯೊಂದಿಗೆ ಅಭಿವೃದ್ದಿಗೆ ಅನುದಾನ ಒದಗಿಸುವಂತೆ ರಾಜ್ಯ ಸರಕಾರ ಹಾಗೂ ಮಂತ್ರಿಗಳಿಗೆ ಸಲಹೆ ನೀಡುವಂತೆ ರಾಜ್ಯ ಜೆಡಿಎಸ್ ಕಾರ್ಯದರ್ಶಿ, ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಮನವಿ ಮಾಡಿಕೊಂಡಿದ್ದಾರೆ. ಭಾನುವಾರದಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಿದ ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್‍ರ ನೇತೃತ್ವದ ನಿಯೋಗವು

ಪಂಜ ಸೇರಿದಂತೆ ಹತ್ತಿರದ 7 ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರಿಸಲು ಆಗ್ರಹ ► ಕಡಬ ತಾಲೂಕು ಉದ್ಘಾಟನೆಗೆ ಕ್ರಮ ಕೈಗೊಳ್ಳುವಂತೆ ದೇವೇಗೌಡರಿಗೆ ಮನವಿ. Read More »

ಕರ್ನಾಟಕ

►► Breaking News ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ ► ಗ್ಯಾಸ್ ಸೋರಿಕೆಯ ಭೀತಿ…!!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.03. ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರೊಂದು ಪಲ್ಟಿಯಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಲಾವತ್ತಡ್ಕ ಎಂಬಲ್ಲಿ ಭಾನುವಾರ ಅಪರಾಹ್ನ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ನೆಲ್ಯಾಡಿ – ಗುಂಡ್ಯ ನಡುವಿನ ಲಾವತ್ತಡ್ಕ ಎಂಬಲ್ಲಿಗೆ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದಾಗಿ ಗ್ಯಾಸ್ ಸೋರಿಕೆಯಾಗುತ್ತಿದ್ದು, ಹೆದ್ದಾರಿ ಸಂಚಾರದಲ್ಲಿ ತಡೆ ಉಂಟಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸುತ್ತಿದ್ದಾರೆ.

►► Breaking News ನೆಲ್ಯಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ ► ಗ್ಯಾಸ್ ಸೋರಿಕೆಯ ಭೀತಿ…!! Read More »

ಕರ್ನಾಟಕ

►► ಉದ್ಯೋಗ ಮಾಹಿತಿ – ಟಿವಿಎಸ್ ಶೋರೂಂ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ.02. ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಅನುಭವಿ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿನ ಮುಖ್ಯ ರಸ್ತೆಯ ವೈಭವ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ವಿತರಕರಾದ ಅಡಿಗ ಮೋಟಾರ್ಸ್ ನ ಕಡಬ, ಪಂಜ ಹಾಗೂ ಸುಬ್ರಹ್ಮಣ್ಯ ಶೋರೂಂಗಳಲ್ಲಿ ಕಾರ್ಯ ನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೇಲ್ಸ್ ಇನ್-ಚಾರ್ಜ್ (1 ವರ್ಷದ ಅನುಭವ ಹೊಂದಿರಬೇಕು) ಸ್ಥಳ: ಕಡಬ ಸೇಲ್ಸ್ ಎಕ್ಸಿಕ್ಯೂಟಿವ್ (ಹೊಸ ಅಥವಾ

►► ಉದ್ಯೋಗ ಮಾಹಿತಿ – ಟಿವಿಎಸ್ ಶೋರೂಂ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳು Read More »

ಉದ್ಯೋಗ

ಕಡಬ ತಾಲೂಕು ಉದ್ಘಾಟನೆಗೆ ಇನ್ನೆಷ್ಟು ದಿನ ಬೇಕು?

ವರದಿ: ವಿಜಯ ಕುಮಾರ್ ಕಡಬ ವರದಿಗಾರರು ಸುದ್ದಿ ಬಿಡುಗಡೆ ಕಡಬ ಜನತೆಯ ದುರಾದೃಷ್ಟವೋ, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೂ, ರಾಜಕೀಯ ಮೇಲಾಟವೋ? *ಮಾ.10ರೊಳಗೆ ಉದ್ಘಾಟನೆಯಾಗದಿದ್ದರೆ ಪ್ರತಿಭಟನೆ, ಸತ್ಯಾಗ್ರಹ-ಸೈಯದ್ ಮೀರಾ ಸಾಹೇಬ್ *ಮಾ.7ರಂದು ತಾಲೂಕು ಉದ್ಘಾಟನೆ-ಪಿ.ಪಿ.ವಗರ್ೀಸ್ *ತಾಲೂಕು ಉದ್ಘಾಟನೆ ಮುಂದೂಡಿಕೆ, ಪ್ರತಿಭಟನೆಗೆ ಸಿದ್ದತೆ-ಕೃಷ್ಣ ಶೆಟ್ಟಿ ಕಡಬ: ಬಹು ನಿರೀಕ್ಷಿತ ಕಡಬ ನೂತನ ತಾಲೂಕು ಉದ್ಘಾಟನೆ ಮತ್ತೆ ಅನಿಶ್ಚಿತತೆಯಲ್ಲಿದೆ. ಮಾಚರ್್ 1 ರ ಬದಲು 2 ರಂದು ಉದ್ಘಾಟನೆಗೆ ದಿನ ನಿಗದಿ ಮಾಡಲಾಗಿದೆ ಎನ್ನುವ ಮಾಹಿತಿ ಸುದ್ದಿಯಾದರೂ ಇದೀಗ ಮಾ.2ರಂದು ಕೂಡ

ಕಡಬ ತಾಲೂಕು ಉದ್ಘಾಟನೆಗೆ ಇನ್ನೆಷ್ಟು ದಿನ ಬೇಕು? Read More »

ಕರಾವಳಿ

ಮತ್ತೆ ಮುಂದೂಡಲ್ಪಟ್ಟ ಕಡಬ ತಾಲೂಕು ಉದ್ಘಾಟನಾ ಸಮಾರಂಭ ➤ ಮಾರ್ಚ್ 02 ರಂದು ನೂತನ ಕಡಬ ತಾಲೂಕಿಗೆ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.27. ಕಳೆದ ನಾಲ್ಕು ದಶಕಗಳಿಂದ ಕಡಬ ಪರಿಸರದ ಜನತೆ ಕಾತರದಿಂದ ಕಾಯುತ್ತಿದ್ದ ನೂತನ ಕಡಬ ತಾಲೂಕು ಉದ್ಘಾಟನೆ ಸಮಾರಂಭವು ಮತ್ತೆ ಮುಂದೂಡಿಕೆಯಾಗಿದ್ದು, ಮಾರ್ಚ್ 01 ಶುಕ್ರವಾರದ ಬದಲಾಗಿ ಮಾರ್ಚ್ 02 ಶನಿವಾರದಂದು ನಡೆಯಲಿದೆ. ಈ ಬಗ್ಗೆ ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಯವರು, ಮಾರ್ಚ್ 02 ಶನಿವಾರದಂದು ಅಪರಾಹ್ನ 03 ಗಂಟೆಗೆ ತಾಲೂಕು ಉದ್ಘಾಟನೆ ನಡೆಯಲಿದೆ ಎಂದು ಅಧಿಕೃತ ಆದೇಶ ಹೊರಡಿಸಿದ್ದಾರೆ‌. ಕಳೆದ ಮೂರು ಬಾರಿ ಉದ್ಘಾಟನೆಗೆ ದಿನ ನಿಗದಿಗೊಂಡರೂ,

ಮತ್ತೆ ಮುಂದೂಡಲ್ಪಟ್ಟ ಕಡಬ ತಾಲೂಕು ಉದ್ಘಾಟನಾ ಸಮಾರಂಭ ➤ ಮಾರ್ಚ್ 02 ರಂದು ನೂತನ ಕಡಬ ತಾಲೂಕಿಗೆ ಅಧಿಕೃತ ಚಾಲನೆ Read More »

ಕರ್ನಾಟಕ

ಕಲ್ಲಾಜೆ: ಮತ್ತೆ ಸಿಕ್ಕಿದ ಮಂಗನ ಕಳೇಬರ ➤ ಪದೇ ಪದೇ ಸಾಯುತ್ತಿರುವ ಮಂಗಗಳು…!

(ನ್ಯೂಸ್ ಕಡಬ) newskadaba.com ಕಡಬ, ಫೆ. 27. ಸತ್ತ ಮಂಗನ ಕಳೇಬರವೊಂದು ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಸಮೀಪದ ಬಜಕೆರೆ ಸೇತುವೆಯ ಸಮೀಪ ಬುಧವಾರದಂದು ಕಂಡುಬಂದಿದೆ. ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜಕೆರೆ ಸೇತುವೆ ಸಮೀಪದಲ್ಲಿ ಸತ್ತ ಸ್ಥಿತಿಯಲ್ಲಿ ಮಂಗನ ಕಳೇಬರ ಇದೆಯೆಂದು ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ, ಉಜಿರೆಯ ಮಂಗನ ಖಾಯಿಲೆ ಕ್ಷೇತ್ರ ಘಟಕದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಅದರಂತೆ ಅಧಿಕಾರಿಗಳು ಸ್ಥಳಕ್ಕಾಗಮಿಸುತ್ತಿದ್ದಾರೆ.

ಕಲ್ಲಾಜೆ: ಮತ್ತೆ ಸಿಕ್ಕಿದ ಮಂಗನ ಕಳೇಬರ ➤ ಪದೇ ಪದೇ ಸಾಯುತ್ತಿರುವ ಮಂಗಗಳು…! Read More »

ಕರಾವಳಿ

ಬಲ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಕ್ವಿಡ್ ಕಾರು ➤ ಇಬ್ಬರು ಗಂಭೀರ, ಮೂವರಿಗೆ ಸಣ್ಣಪುಟ್ಟ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಫೆ.24. ಚಾಲಕನ ನಿಯಂತ್ರಣ ತಪ್ಪಿದ ಹೊಸ ಕಾರೊಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡು, ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಸಮೀಪದ ದೇರಾಜೆ ಎಂಬಲ್ಲಿ ಭಾನುವಾರದಂದು ಸಂಭವಿಸಿದೆ. ಹಾಸನ ಮೂಲದ ಯುವಕರು ಕುಕ್ಕೇ ಸುಬ್ರಹ್ಮಣ್ಯ ದೇವರ ದರ್ಶನ ಮುಗಿಸಿ ಮಂಗಳೂರಿಗೆ ತೆರಳುತ್ತಿದ್ದಾಗ ಬಲ್ಯ ಸಮೀಪದ ದೇರಾಜೆ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ

ಬಲ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಕ್ವಿಡ್ ಕಾರು ➤ ಇಬ್ಬರು ಗಂಭೀರ, ಮೂವರಿಗೆ ಸಣ್ಣಪುಟ್ಟ ಗಾಯ Read More »

ಕರಾವಳಿ

ಸುಬ್ರಹ್ಮಣ್ಯ: ಕಿರು ಸೇತುವೆಗೆ ಢಿಕ್ಕಿ ಹೊಡೆದು ಕಮರಿಗೆ ಉರುಳಿದ ಇನ್ನೋವಾ ➤ ಮಹಿಳೆ ಸ್ಥಳದಲ್ಲೇ ಮೃತ್ಯು, ಐವರು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಫೆ.24. ಇನ್ನೋವಾ ಕಾರೊಂದು ಹೆದ್ದಾರಿ ಬದಿಯ ಕಿರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಕಮರಿಗೆ ಉರುಳಿದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ಭಾನುವಾರದಂದು ಸಂಭವಿಸಿದೆ. ಸುಬ್ರಹ್ಮಣ್ಯದಿಂದ ಗುಂಡ್ಯ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಅನಿಲ ಎಂಬಲ್ಲಿ ಕಮರಿಗೆ ಉರುಳಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಮಾಹಿತಿ ಇನ್ನಷ್ಟೇ

ಸುಬ್ರಹ್ಮಣ್ಯ: ಕಿರು ಸೇತುವೆಗೆ ಢಿಕ್ಕಿ ಹೊಡೆದು ಕಮರಿಗೆ ಉರುಳಿದ ಇನ್ನೋವಾ ➤ ಮಹಿಳೆ ಸ್ಥಳದಲ್ಲೇ ಮೃತ್ಯು, ಐವರು ಗಂಭೀರ Read More »

ಕರಾವಳಿ
Scroll to Top