ಕಲ್ಲಾಜೆ: ಮತ್ತೆ ಸಿಕ್ಕಿದ ಮಂಗನ ಕಳೇಬರ ➤ ಪದೇ ಪದೇ ಸಾಯುತ್ತಿರುವ ಮಂಗಗಳು…!



(ನ್ಯೂಸ್ ಕಡಬ) newskadaba.com ಕಡಬ, ಫೆ. 27. ಸತ್ತ ಮಂಗನ ಕಳೇಬರವೊಂದು ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಸಮೀಪದ ಬಜಕೆರೆ ಸೇತುವೆಯ ಸಮೀಪ ಬುಧವಾರದಂದು ಕಂಡುಬಂದಿದೆ.







ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜಕೆರೆ ಸೇತುವೆ ಸಮೀಪದಲ್ಲಿ ಸತ್ತ ಸ್ಥಿತಿಯಲ್ಲಿ ಮಂಗನ ಕಳೇಬರ ಇದೆಯೆಂದು ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ, ಉಜಿರೆಯ ಮಂಗನ ಖಾಯಿಲೆ ಕ್ಷೇತ್ರ ಘಟಕದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಅದರಂತೆ ಅಧಿಕಾರಿಗಳು ಸ್ಥಳಕ್ಕಾಗಮಿಸುತ್ತಿದ್ದಾರೆ.






error: Content is protected !!
Scroll to Top