ರಾಷ್ಟ್ರೀಯ ನ್ಯೂಸ್

ಬಿಲ್ ಪಾವತಿಸಿಲ್ಲವೆಂದು ರೋಗಿಯನ್ನು ಆಸ್ಪತ್ರೆಯಲ್ಲಿ ಅಕ್ರಮವಾಗಿ ಇರಿಸುವಂತಿಲ್ಲ ► ಬಾಂಬೆ ಹೈಕೋರ್ಟ್ ಸೂಚನೆ

(ನ್ಯೂಸ್ ಕಡಬ) newskadaba.com ಮುಂಬೈ, ಜ.13. ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ರೋಗಿಯನ್ನು ಅಕ್ರಮವಾಗಿ ಇರಿಸಿಕೊಳ್ಳುವಂತಹುದು ಕಾನೂನು ಬಾಹಿರವಾಗಿದ್ದು, ಪ್ರತಿಯೊಬ್ಬನಿಗೂ ಇದರ ಬಗ್ಗೆ ಅರಿವು ಮೂಡಿಸುವಂತೆ ಬಾಂಬೆ ಹೈಕೋರ್ಟ್ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ‌. ಮುಂಬೈ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಸಾಮಾಜಿಕ ಹಿತಾಸಕ್ತಿ ದಾವೆಯನ್ನು ವಿಚಾರಣೆ ಸಡೆಸಿದ ಕೋರ್ಟ್ ‘ಯಾವುದೇ ರೋಗಿಯನ್ನು ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವುದು ಕಾನೂನು ಬಾಹಿರ’ ಎಂದು ಜಸ್ಟಿಸ್ ಎಸ್. ಸಿ. ಧರ್ಮಾಧಿಕಾರಿ ಹಾಗೂ ಭರತ್ ಡಂಗ್ರೆ ಅವರನ್ನೊಳಗೊಂಡ ಪೀಠವು ಹೇಳಿದೆ. ‘ರೋಗಿಗಳಿಗಿರುವ […]

ಬಿಲ್ ಪಾವತಿಸಿಲ್ಲವೆಂದು ರೋಗಿಯನ್ನು ಆಸ್ಪತ್ರೆಯಲ್ಲಿ ಅಕ್ರಮವಾಗಿ ಇರಿಸುವಂತಿಲ್ಲ ► ಬಾಂಬೆ ಹೈಕೋರ್ಟ್ ಸೂಚನೆ Read More »

ರಾಷ್ಟ್ರೀಯ ನ್ಯೂಸ್

ದಿನಾಲೂ ಸ್ವಲ್ಪಮಟ್ಟಿಗೆ ಏರಿಕೆಯಾಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ದರ ► ಪೆಟ್ರೋಲ್ ಲೀ.71.72 ಹಾಗೂ ಡೀಸೆಲ್‌ ಲೀ.6183

(ನ್ಯೂಸ್ ಕಡಬ) newskadaba.com ನವದೆಹಲಿ, ಜ.10. ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಪೆಟ್ರೋಲ್ ಬೆಲೆಯನ್ನು ಇದೀಗ ಕೇಂದ್ರ ಸರ್ಕಾರ ಸದ್ದಿಲ್ಲದೇ ಏರಿಕೆ ಮಾಡಿದೆ. ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ತೈಲ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಬೆಲೆ ಲೀಟರ್ ಗೆ 1.55 ರೂ., ಡೀಸೆಲ್ ಬೆಲೆ ಲೀಟರ್ ಗೆ 1.50 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 71.72 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 61.83 ರೂ. ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ

ದಿನಾಲೂ ಸ್ವಲ್ಪಮಟ್ಟಿಗೆ ಏರಿಕೆಯಾಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ದರ ► ಪೆಟ್ರೋಲ್ ಲೀ.71.72 ಹಾಗೂ ಡೀಸೆಲ್‌ ಲೀ.6183 Read More »

ರಾಷ್ಟ್ರೀಯ ನ್ಯೂಸ್

ಹೆತ್ತ ತಾಯಿಯನ್ನೇ ಟೆರೇಸಿನಿಂದ ತಳ್ಳಿಹಾಕಿ ಕೊಂದ ವಿದ್ಯಾವಂತ ಮಗ ► ಆರೋಪಿ ಸಹಾಯಕ ಪ್ರೊಫೆಸರ್ ಬಂಧನ

(ನ್ಯೂಸ್ ಕಡಬ) newskadaba.com ರಾಜ್ ಕೋಟ್, ಜ.06. ವೃದ್ಧ ತಾಯಿಯನ್ನು ಪಾಲನೆ ಮಾಡಲು ಕಷ್ಟವಾಗುತ್ತದೆ ಎಂದು ವಿದ್ಯಾವಂತ ಮಗನೇ ಟೆರೇಸ್ ನಿಂದ ತಳ್ಳಿ ಹಾಕಿ ಕೊಂದ ಹೃದಯ ವಿದ್ರಾವಕ ಘಟನೆ ರಾಜ್ ಕೋಟ್ ನಲ್ಲಿ ನಡೆದಿದೆ. ತಾಯಿಯನ್ನು ಕೊಂದ ಮಗನನ್ನು ರಾಜ್ ಕೋಟ್ ನ ಫಾರ್ಮಸಿ ಕಾಲೇಜ್ನ ಸಹಾಯಕ ಪ್ರೊಫೆಸರ್ ಸಂದೀಪ್ ನಾಥ್ವಾನಿ ಎಂದು ಗುರುತಿಸಲಾಗಿದೆ. ಈತ ತನ್ನ ತಾಯಿ ಜಯಶ್ರೀ ಬೆನ್ ರನ್ನು ಟೆರೆಸ್ ನಿಂದ ತಳ್ಳಿ ಹಾಕಿ ಕೊಂದ‌ ನಂತರ ಬಾಲ್ಕಣಿಯಲ್ಲಿ ಕುಳಿತಿದ್ದ ತಾಯಿ

ಹೆತ್ತ ತಾಯಿಯನ್ನೇ ಟೆರೇಸಿನಿಂದ ತಳ್ಳಿಹಾಕಿ ಕೊಂದ ವಿದ್ಯಾವಂತ ಮಗ ► ಆರೋಪಿ ಸಹಾಯಕ ಪ್ರೊಫೆಸರ್ ಬಂಧನ Read More »

ರಾಷ್ಟ್ರೀಯ ನ್ಯೂಸ್

ಶೀಘ್ರದಲ್ಲೇ ಬರಲಿದೆ 10 ರೂ‌. ನೂತನ ನೋಟು ► ನೂತನ ನೋಟಿನ ವಿನ್ಯಾಸ ಹೇಗಿದೆ ಎಂದು ತಿಳಿಯಬೇಕೆ…?

(ನ್ಯೂಸ್ ಕಡಬ) newskadaba.com ನವದೆಹಲಿ, ಜ.05. ಹತ್ತು ರೂ. ಮುಖಬೆಲೆಯ ನೂತನ ನೋಟನ್ನು ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಲಿದೆ ಎಂದು ಆರ್ ಬಿ ಐ ಪ್ರಕಟಿಸಿದೆ. 12.3 ಸೆಂ.ಮೀ. ಉದ್ದ ಹಾಗೂ 6.3 ಸೆಂ.ಮೀ. ಅಗಲ ನೂತನ ನೋಟಿನಲ್ಲಿ ಕೋನಾರ್ಕ್ ಪ್ರಸಿದ್ಧ ಸೂರ್ಯ ದೇವಸ್ಥಾನದ ವಿಶೇಷ ಚಿತ್ರಣ ಇರಲಿದೆ‌. ಚಾಕೊಲೇಟ್ ಕಂದು ಬಣ್ಣದಲ್ಲಿ ಮುದ್ರಣಗೊಳ್ಳಲಿರುವ ಈ ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿರಲಿದ್ದು, ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ರವರ ಸಹಿ ಇರಲಿದೆ ಎಂದು ಆರ್ಬಿಐ

ಶೀಘ್ರದಲ್ಲೇ ಬರಲಿದೆ 10 ರೂ‌. ನೂತನ ನೋಟು ► ನೂತನ ನೋಟಿನ ವಿನ್ಯಾಸ ಹೇಗಿದೆ ಎಂದು ತಿಳಿಯಬೇಕೆ…? Read More »

ರಾಷ್ಟ್ರೀಯ ನ್ಯೂಸ್

ಇಂದು ದೇಶಾದ್ಯಂತ ವೈದ್ಯರ ಮುಷ್ಕರ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.02. ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಇಂದು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ದೇಶಾದ್ಯಂತ ಈಗಾಗಲೇ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಸಂಜೆ 6 ಗಂಟೆಯವರೆಗೆ ತುರ್ತು ಸೇವೆ ಚಿಕಿತ್ಸೆ ಹೊರತುಪಡಿಸಿ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಭಾರತೀಯ ವೈದ್ಯಕೀಯ ಪರಿಷತ್ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ಮುಂದಾಗಿರುವ ಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದು, ಇದರ ಬದಲಿಗೆ ವೈದ್ಯಕೀಯ ಪರಿಷತ್ ಅನ್ನೇ

ಇಂದು ದೇಶಾದ್ಯಂತ ವೈದ್ಯರ ಮುಷ್ಕರ Read More »

ರಾಷ್ಟ್ರೀಯ ನ್ಯೂಸ್

ಬಿಎಸ್ಸೆನ್ನೆಲ್ ನಿಂದಲೂ ಬಂತು ಅಗ್ಗದ ಬೆಲೆಯ ಮೊಬೈಲ್ ಫೋನ್ ► ಕೇವಲ 346 ರೂ‌.ಗಳ ಮೊಬೈಲ್ ಫೋನ್ ಬಿಡುಗಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.31. ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಕಂಪೆನಿಗಳ ಪೈಪೋಟಿಯಿಂದ ಎಚ್ಚೆತ್ತಿರುವ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆಯು ಕೇವಲ 346 ರೂ. ಗಳಲ್ಲಿ ನೂತನ ಮೊಬೈಲ್ ಫೋನನ್ನು ಬಿಡುಗಡೆ ಮಾಡಿದೆ. ಡಿಟೆಲ್ ಡಿ1 ಫೀಚರ್ ಫೋನಿನಲ್ಲಿ ಬಿಎಸ್ಸೆನ್ನೆಲ್ ಸಿಮ್ ಕಾರ್ಡ್ ಇರಲಿದ್ದು, 153 ರೂ. ಹೆಚ್ಚುವರಿ ಪಾವತಿಸಿ ಮೊಬೈಲನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲಿ 103 ಟಾಕ್ ಟೈಮ್ ದೊರೆಯಲಿದ್ದು, ಬಿಎಸ್ಸೆನ್ನೆಲ್ ನಿಂದ ಬಿಎಸ್ಸೆನ್ನೆಲ್ ಗೆ ಪ್ರತಿ ನಿಮಿಷಕ್ಕೆ 15 ಪೈಸೆಯಂತೆ ದರವನ್ನು ವಿಧಿಸಲಾಗಿದ್ದು, ಉಳಿದ ನೆಟ್ವರ್ಕ್

ಬಿಎಸ್ಸೆನ್ನೆಲ್ ನಿಂದಲೂ ಬಂತು ಅಗ್ಗದ ಬೆಲೆಯ ಮೊಬೈಲ್ ಫೋನ್ ► ಕೇವಲ 346 ರೂ‌.ಗಳ ಮೊಬೈಲ್ ಫೋನ್ ಬಿಡುಗಡೆ Read More »

ರಾಷ್ಟ್ರೀಯ ನ್ಯೂಸ್

ನಾಳೆ(ಡಿ.30) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.29. ಬಿಡದಿಯಲ್ಲಿರುವ ಬಿವಿವಿ ಸಂಘದ ಅಮೃತಾ ಎಂಜಿನಿಯರಿಂಗ್ ಕಾಲೇಜಿನ ನೂತನ ಕ್ಯಾಂಪಸ್ ಅನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿಸೆಂಬರ್ 30 ಶನಿವಾರದಂದು ಲೋಕಾರ್ಪಣೆ ಮಾಡಲಿದ್ದಾರೆ. ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ವತಿಯಿಂದ ಬೆಂಗಳೂರಿನಲ್ಲಿ ನೂತನ ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಅನಂತ್‌ಕುಮಾರ್, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ನಾಳೆ(ಡಿ.30) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕಕ್ಕೆ Read More »

ರಾಷ್ಟ್ರೀಯ ನ್ಯೂಸ್

ಇನ್ಮುಂದೆ ಕಾರುಗಳಲ್ಲಿ ಸೇಫ್ಟಿ ಗಾರ್ಡ್‌ ಹಾಕಿದ್ದರೆ 5 ಸಾವಿರ ದಂಡ ► ಸುತ್ತೋಲೆ ಹೊರಡಿಸಿದ ಕೇಂದ್ರ ಹೆದ್ದಾರಿ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.26. ಕಾರುಗಳಲ್ಲಿ ಅಳವಡಿಸಲಾಗುವ ಕ್ರಾಶ್ ಗಾರ್ಡ್ ಗಳನ್ನು ಅಕ್ರಮ ಎಂದಿರುವ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಅಪಾಯಕಾರಿಯಾಗಿರುವ ಗಾರ್ಡ್ ಗಳನ್ನು ತೆಗೆಯಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ. ರಸ್ತೆ ಅಪಘಾತ ಸಂದರ್ಭಗಳಲ್ಲಿ ವಾಹನಗಳಿಗೆ ಅಳವಡಿಸಿರುವ ಗಾರ್ಡ್ ಗಳಿಂದ ಪಾದಚಾರಿಗಳಿಗೆ ಹೆಚ್ಚು ಅಪಾಯವಾಗುತ್ತಿದೆ ಎಂದು ತಿಳಿಸಿರುವ ಸಚಿವಾಲಯವು ತಕ್ಷಣವೇ ವಾಹನಗಳಲ್ಲಿ ಅಳವಡಿಸಿರುವ ಕ್ರಾಶ್ ಗಾರ್ಡ್ ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೇ ಬುಲ್ ಬಾರ್ ಅಳವಡಿಸಿರುವ ವಾಹನಗಳಿಗೆ ಭಾರೀ

ಇನ್ಮುಂದೆ ಕಾರುಗಳಲ್ಲಿ ಸೇಫ್ಟಿ ಗಾರ್ಡ್‌ ಹಾಕಿದ್ದರೆ 5 ಸಾವಿರ ದಂಡ ► ಸುತ್ತೋಲೆ ಹೊರಡಿಸಿದ ಕೇಂದ್ರ ಹೆದ್ದಾರಿ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ Read More »

ರಾಷ್ಟ್ರೀಯ ನ್ಯೂಸ್

ಹಳೆಯ ಮೊಬೈಲ್ ಗಳಲ್ಲಿ ವಾಟ್ಸಪ್ ಬಳಸುವವರಿಗೆ ಶಾಕಿಂಗ್ ನ್ಯೂಸ್ ► ಡಿ.31 ರಿಂದ ವಾಟ್ಸಪ್ ಸೇವೆ ಸ್ಥಗಿತ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.26. ವಾಟ್ಸ್‌ ಆ್ಯಪ್‌ ಕಂಪನಿಯು ಹಳೆಯ ವಿಂಡೋಸ್‌, ಬ್ಲ್ಯಾಕ್‌ಬೆರಿ ಫೋನ್‌ ಬಳಕೆದಾರರಿಗೆ ಹೊಸ ವರ್ಷಕ್ಕೆ ಹೊಸ ಆಘಾತ ನೀಡಿದ್ದು, ಇನ್ಮುಂದೆ ವಾಟ್ಸಪ್ ನ್ನು ಸ್ಥಗಿತಗೊಳಿಸಲಿದೆ. 2017ರ ಡಿ.31ರಿಂದ ‘ಬ್ಲ್ಯಾಕ್‌ಬೆರಿ 10’ ಮತ್ತು ‘ವಿಂಡೋಸ್‌ ಫೋನ್‌ 8.0’, ‘ಆಂಡ್ರಾಯ್ಡ್‌ 4.0’ ಮತ್ತು ಅದಕ್ಕಿಂತಲೂ ಹಳೆಯದಾದ ಪ್ಲಾಟ್‌ಫಾರಂಗಳಿಗೆ ಸೇವೆ ಸ್ಥಗಿತಗೊಳಿಸಲು ವಾಟ್ಸ್‌ಆ್ಯಪ್‌ ನಿರ್ಧರಿಸಿದೆ. ‘ವಾಟ್ಸ್‌ಆ್ಯಪ್‌’ ಮಾತೃ ಸಂಸ್ಥೆ ‘ಫೇಸ್‌ಬುಕ್‌’ ಈ ವಿಷಯ ಖಚಿತಪಡಿಸಿದ್ದು, ಈ ಪ್ಲಾಟ್‌ಫಾರಂಗಳಲ್ಲಿ ಆ್ಯಪ್‌ನ ವೈಶಿಷ್ಟ್ಯಗಳನ್ನು ಹೆಚ್ಚಿಸಲು ಅಗತ್ಯ ಅವಕಾಶಗಳು ಇಲ್ಲವಾದ್ದರಿಂದ

ಹಳೆಯ ಮೊಬೈಲ್ ಗಳಲ್ಲಿ ವಾಟ್ಸಪ್ ಬಳಸುವವರಿಗೆ ಶಾಕಿಂಗ್ ನ್ಯೂಸ್ ► ಡಿ.31 ರಿಂದ ವಾಟ್ಸಪ್ ಸೇವೆ ಸ್ಥಗಿತ Read More »

ರಾಷ್ಟ್ರೀಯ ನ್ಯೂಸ್

50 ಲಕ್ಷ ಮಿಸ್ ಕಾಲ್ ಲಭಿಸಿದ ಪಕ್ಷಕ್ಕೆ ಚುನಾವಣೆಯಲ್ಲಿ ಲಭಿಸಿದ್ದು 1417 ಮತಗಳು ► ಆರ್.ಕೆ ನಗರ ಉಪಚುನಾವಣೆ: ಬಿಜೆಪಿಯನ್ನು ಟ್ರೋಲ್ ಮಾಡಿದ ಜಿಗ್ನೇಶ್ ಮೇವಾನಿ

(ನ್ಯೂಸ್ ಕಡಬ) newskadaba.com ಅಹ್ಮದಾಬಾದ್, ಡಿ.25. ತಮಿಳುನಾಡಿನ ಆರ್.ಕೆ.ನಗರದ ಉಪ ಚುನಾವಣೆಯಲ್ಲಿ ಬಿಜೆಪಿ ಪಡೆದಿರುವ 1417 ಮತಗಳನ್ನು ಲೇವಡಿ ಮಾಡಿರುವ ದಲಿತ ನಾಯಕ‌, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ವಿಶ್ವದ ಅತೀ ದೊಡ್ಡ ಮಿಸ್ ಕಾಲ್ ಪಕ್ಷವನ್ನು ತಮಿಳುನಾಡಿನಲ್ಲಿ ನೋಟಾ ಹಿಂದಿಕ್ಕಿದೆ ಎಂದು ವ್ಯಂಗವಾಡಿದರು. ಆರ್.ಕೆ ನಗರದ ಉಪಚುನಾವಣೆ ಫಲಿತಾಂಶದ ಬಳಿಕ ಜಿಗ್ನೇಶ್ ಮೇವಾನಿ ಟ್ವಿಟರ್ ನಲ್ಲಿ ಬಿ.ಜೆ.ಪಿ ಯನ್ನು ವ್ಯಂಗ್ಯವಾಡುತ್ತಾ, ವಿಶ್ವದ ಅತೀ ದೊಡ್ಡ ಮಿಸ್ ಕಾಲ್ ಪಕ್ಷವಾಗಿರುವ ಬಿ.ಜೆ.ಪಿ ಗೆ ತಮಿಳುನಾಡಿನಲ್ಲಿ 50 ಲಕ್ಷಕ್ಕೂ

50 ಲಕ್ಷ ಮಿಸ್ ಕಾಲ್ ಲಭಿಸಿದ ಪಕ್ಷಕ್ಕೆ ಚುನಾವಣೆಯಲ್ಲಿ ಲಭಿಸಿದ್ದು 1417 ಮತಗಳು ► ಆರ್.ಕೆ ನಗರ ಉಪಚುನಾವಣೆ: ಬಿಜೆಪಿಯನ್ನು ಟ್ರೋಲ್ ಮಾಡಿದ ಜಿಗ್ನೇಶ್ ಮೇವಾನಿ Read More »

ರಾಷ್ಟ್ರೀಯ ನ್ಯೂಸ್
Scroll to Top