ರಾಷ್ಟ್ರೀಯ ನ್ಯೂಸ್

ಲಾಕ್‌ಡೌನ್‌ ಸಡಿಲಿಕೆ ➤ 5 ರಾಜ್ಯಗಳಿಗೆ KSRTC ಸೇವೆ ಪುನಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 08: ಕೊವೀಡ್ 19 ಗೆ, ಎಲ್ಲವೂ ಸ್ತಭ್ಧವಾಗಿ, ಕೆಲಸ, ಕಾರ್ಯ, ಸಂಚಾರಗಳು ಸ್ಥಗಿತ ಗೊಂಡಿದ್ದವು.ಬಳಿಕ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್‍ನಲ್ಲಿ ರಿಲೀಫ್ ನೀಡುತ್ತ ಬಂದಿದೆ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಈಗಾಗಲೇ ಐದು ರಾಜ್ಯಗಳಿಗೆ ಅಂತರ್‌ ರಾಜ್ಯ ಬಸ್‌ ಸೇವೆ ಪುನರಾರಂಭಿಸಿದೆ. ಪ್ರಸ್ತುತ ನಿತ್ಯ 300 ಬಸ್‌ಗಳು ಸಂಚರಿಸುತ್ತಿವೆ. ಬಸ್‌ ಸೇವೆ ಆರಂಭಿಸುವ ಸಂಬಂಧ ರಾಜ್ಯ ಸರ್ಕಾರದ ಮನವಿಗೆ ಮಹಾ​ರಾಷ್ಟ್ರ, ಆಂಧ್ರಪ್ರದೇಶ, ಗೋವಾ, […]

ಲಾಕ್‌ಡೌನ್‌ ಸಡಿಲಿಕೆ ➤ 5 ರಾಜ್ಯಗಳಿಗೆ KSRTC ಸೇವೆ ಪುನಾರಂಭ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬೆಂಗಳೂರು : ಮಾಸ್ಕ್ ದಂಡದ ಮೊತ್ತ 1000ರೂ ಯಿಂದ 250 ರುಪಾಯಿಗೆ ಇಳಿಕೆ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 07: ಕೊರೊನಾ ಹವಾಳಿಯನ್ನ ತಡೆಗಟ್ಟಲು ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿತ್ತು. ಅದ್ರಂತೆ, ಮಾಸ್ಕ್ ಹಾಕದಿದ್ರೆ 1000 ದಂಡ ವಿಧಿಸುವ ನಿಯಮವನ್ನ ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಸಧ್ಯ ಸಾರ್ವಜನಿಕರ ಒತ್ತಯಕ್ಕೆ ಮಣಿದ ಸರ್ಕಾರ ದಂಡದ ಮೊತ್ತವನ್ನ ಕಡಿಮೆಗೊಳಿಸಿದೆ.   ಹೊಸ ನಿಯಮದಂತೆ ನಗರ ಪ್ರದೇಶಗಳಲ್ಲಿ 1000 ದಂಡದ ಮೊತ್ತವನ್ನ 250 ರೂಪಾಯಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ಯಿಂದ 100 ರೂಪಾಯಿಗೆ ಇಳಿಸಿದೆ. ಇನ್ನು ಈ ಅದೇಶ ತಕ್ಷಣಕ್ಕೆ ಜಾರಿಯಾಗುವಂತೆ

ಬೆಂಗಳೂರು : ಮಾಸ್ಕ್ ದಂಡದ ಮೊತ್ತ 1000ರೂ ಯಿಂದ 250 ರುಪಾಯಿಗೆ ಇಳಿಕೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ದೇಶದಲ್ಲಿ ಎಷ್ಟಿದೆ ಗೊತ್ತ ಕೋವಿಡ್ ಕೇಸ್..!?

 (ನ್ಯೂಸ್ ಕಡಬ) newskadaba.com ನವದೆಹಲಿ, ಅ. 07: ದೇಶದಲ್ಲಿ ಬುಧವಾರ 72,049 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 67 ಲಕ್ಷ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 67,57,132ಕ್ಕೆ ಏರಿಕೆಯಾಗಿದ್ದು, ಒಂದೇ ದಿನ 986 ಮಂದಿ ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 1,04,555ಕ್ಕೆ ತಲುಪಿದೆ. ಇನ್ನು 67,57,132 ಮಂದಿ ಸೋಂಕಿತರ ಪೈಕಿ ದೇಶದಲ್ಲಿ ಈ ವರೆಗೂ 57,44,694 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನು

ದೇಶದಲ್ಲಿ ಎಷ್ಟಿದೆ ಗೊತ್ತ ಕೋವಿಡ್ ಕೇಸ್..!? Read More »

ರಾಷ್ಟ್ರೀಯ ನ್ಯೂಸ್

ಪಬ್ಜಿಯಿಂದ ಪ್ರಾಣಹೋಯ್ತು ➤ 12 ವರ್ಷದ ಬಾಲಕನಿಗೆ ಹಾರ್ಟ್ ಅಟ್ಯಾಕ್… !

(ನ್ಯೂಸ್ ಕಡಬ) newskadaba.com ಈಜಿಪ್ಟ್, ಅ. 07: ಕೇವಲ 12 ವರ್ಷದ ಹುಡುಗನಿಗೆ ಮೊಬೈಲ್‌ ಅಂದ್ರೆ ಪಂಚಪ್ರಾಣವಾಗಿತ್ತು.‌ ಪಬ್‌ಜಿ ಗೇಮ್‌ ನಲ್ಲಿ ಸದಾ ಸಮಯ ಕಳೆಯುತ್ತಿದ್ದ. ಆದ್ರೀಗ ಇದೇ ಹುಚ್ಚು ಆತನ ಪ್ರಾಣ ತೆಗೆದಿದೆ. ಈಜಿಪ್ಟ್‌ನಲ್ಲಿ ಮೊಬೈಲ್ ಆಟ ಬಾಲಕನ ಪ್ರಾಣ ತೆಗೆದಿದೆ. ಬ್ರೇಕ್ ಇಲ್ಲದೆ ಒಂದೇ ಸಮನೆ ಮೊಬೈಲ್ ಗೇಮ್ ಆಡ್ತಿದ್ದನಂತೆ ಬಾಲಕ. ಪರಿಣಾಮ ಆತನಿಗೆ ಹಾರ್ಟ್‌ ಅಟ್ಯಾಕ್ ಆಗಿದೆ ಎಂದು ಮೂಲಗಳು ಹೇಳಿವೆ. ಆಟ ಆಡ್ತಾ ಆಡ್ತಾ ಅಲ್ಲೇ ಬಾಲಕ ಕುಸಿದು ಬಿದ್ದಿದ್ದಾನೆ. ತಕ್ಷಣ

ಪಬ್ಜಿಯಿಂದ ಪ್ರಾಣಹೋಯ್ತು ➤ 12 ವರ್ಷದ ಬಾಲಕನಿಗೆ ಹಾರ್ಟ್ ಅಟ್ಯಾಕ್… ! Read More »

ರಾಷ್ಟ್ರೀಯ ನ್ಯೂಸ್

ಡ್ರಗ್ಸ್ ಜಾಲದ ನಂಟು ಆರೋಪ ➤ ರಿಯಾ ಚಕ್ರವರ್ತಿಗೆ ಷರತ್ತು ಬದ್ಧ ಜಾಮೀನು

(ನ್ಯೂಸ್ ಕಡಬ) newskadaba.com ಮುಂಬೈ, ಅ. 07: ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರಾಗಿದೆ. ಮುಂಬೈ ಬಿಟ್ಟು ಹೊರಹೋಗುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ. ಇದರೊಂದಿಗೆ ರಿಯಾ ಚಕ್ರವರ್ತಿ ಜೈಲಿನಿಂದ ಇಂದು ಬಿಡುಗಡೆಯಾಗಲಿದ್ದಾರೆ.   ಹೀಗಾಗಿ 28 ದಿನಗಳ ಬಳಿಕ ರಿಯಾ ಚಕ್ರವರ್ತಿ ಜೈಲಿನಿಂದ ಹೊರಬರಲಿದ್ದಾರೆ. ರಿಯಾ ಚಕ್ರವರ್ತಿಗೆ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಸಿಕ್ಕಿದೆ. ಅಲ್ಲದೆ ರಿಯಾ

ಡ್ರಗ್ಸ್ ಜಾಲದ ನಂಟು ಆರೋಪ ➤ ರಿಯಾ ಚಕ್ರವರ್ತಿಗೆ ಷರತ್ತು ಬದ್ಧ ಜಾಮೀನು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹತ್ರಾಸ್‍ನಲ್ಲಿ ನಿಲ್ಲದ ದುರುಳರ ವಿಕೃತಿ ➤ ಅತ್ಯಾಚಾರಕ್ಕೊಳಕ್ಕಾಗಿ 6 ವರ್ಷದ ಬಾಲಕಿ ಮೃತ್ಯು.!

 (ನ್ಯೂಸ್ ಕಡಬ) newskadaba.com ಆಲಿಗಡ, ಅ. 07: ಹಾಥರಸ್‌ನಲ್ಲಿ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ಜಿಲ್ಲೆಯಲ್ಲಿನ ಆರು ವರ್ಷದ ಬಾಲಕಿ ತನ್ನ ಸಂಬಂಧಿಯಿಂದಲೇ ಅತ್ಯಾಚಾರಕ್ಕೊಳಗಾಗಿದ್ದಾಳೆ.   ಚಿಕಿತ್ಸೆ ವೇಳೆ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಹಾಥರಸ್‌ನ ಸದಾಬಾದ್ ಪ್ರದೇಶದ ಜಟೋಯಿ ಗ್ರಾಮದ ನಿವಾಸಿಯಾಗಿದ್ದ ಅಪ್ರಾಪ್ತೆಯು ಆಲಿಗಡ ಜಿಲ್ಲೆಯ ಇಗ್ಲಾಸ್ ಪ್ರದೇಶದ ಸಂಬಂಧಿಕರ ಮನೆಯಲ್ಲಿದ್ದಾಗ ಅತ್ಯಾಚಾರಕ್ಕೊಳಗಾಗಿದ್ದಳು. ಬಳಿಕ ಸೆಪ್ಟೆಂಬರ್‌ 17ರಂದು ಆಕೆಯನ್ನು ರಕ್ಷಿಸಲಾಗಿತ್ತು ಎಂದು ಹಿರಿಯ ಪೊಲೀಸ್

ಹತ್ರಾಸ್‍ನಲ್ಲಿ ನಿಲ್ಲದ ದುರುಳರ ವಿಕೃತಿ ➤ ಅತ್ಯಾಚಾರಕ್ಕೊಳಕ್ಕಾಗಿ 6 ವರ್ಷದ ಬಾಲಕಿ ಮೃತ್ಯು.! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೋವಿಡ್ ಪರೀಕ್ಷೆಗೆ ಹೊಳಪಡದಿದ್ದರೆ 3ವರ್ಷ ಜೈಲು ➤ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 07: ರಾಜ್ಯದಲ್ಲಿ ದಿನ ಕಳೆದಂತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ ಕೊವೀಡ್ ಗೆ ಬಲಿಯಾಗುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಲೇಯಿದೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು ಸಾರ್ವಜನಿಕರು  ನಿಲ್ರ್ಯಕ್ಷ ತೋರುತ್ತಿದ್ದಾರೆ. ಹೀಗಿರುವಾಗ ಸರ್ಕಾರದಿಂದ ಗುರುತಿಸಲ್ಪಡುವ ವ್ಯಕ್ತಿ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ 50 ಸಾವಿರ ರೂ. ವರೆಗೆ ದಂಡ ಹಾಗೂ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ವಿಧಿಸಲು ಮುಂದಾಗಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ

ಕೋವಿಡ್ ಪರೀಕ್ಷೆಗೆ ಹೊಳಪಡದಿದ್ದರೆ 3ವರ್ಷ ಜೈಲು ➤ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!! Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಅಟಲ್ ಸರಂಗದಲ್ಲಿ 72 ಗಂಟೆಗಳಲ್ಲಿ 3 ಅಪಘಾತ..! ➤ ಕಾರಣವೇನು ಗೊತ್ತೆ?!!

(ನ್ಯೂಸ್ ಕಡಬ) newskadaba.com ರೋಹ್ಟಾಂಗ್, ಅ. 06: ಅಟಲ್​ ಸುರಂಗ ಮಾರ್ಗದಲ್ಲಿ ಕಳೆದ 72 ಗಂಟೆಗಳಲ್ಲಿ ಮೂರು ಅಪಘಾತಗಳು ಸಂಭವಿಸಿದೆ ಎಂದು ಮಂಗಳವಾರ ವರದಿಯಾಗಿದೆ. ಹಿಮಾಚಲ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿತವಾಗಿರುವ ವಿಶ್ವದಲ್ಲೇ ಅತಿ ಉದ್ದದ ಅಟಲ್​ ಸುರಂಗವೂ ಮನಾಲಿ ಮತ್ತು ಲೇಹ್​ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದೆ.   ಅಪಘಾತಗಳೆಲ್ಲವೂ ನಿರ್ಲಕ್ಷ್ಯ ಮತ್ತು ವೇಗದ ಪ್ರಯಾಣದಿಂದಲೇ ಸಂಭವಿಸಿದ್ದು, ಸುರಂಗ ಮಾರ್ಗವೂ ತೆರೆದಾಗಿನಿಂದ ಪ್ರವಾಸಿಗರ ಅಸಭ್ಯ ವರ್ತನೆ ಗಮನಕ್ಕೆ ಬಂದಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಟಲ್ ಸರಂಗದಲ್ಲಿ 72 ಗಂಟೆಗಳಲ್ಲಿ 3 ಅಪಘಾತ..! ➤ ಕಾರಣವೇನು ಗೊತ್ತೆ?!! Read More »

ರಾಷ್ಟ್ರೀಯ ನ್ಯೂಸ್

ಈ ಬಾರಿ ಟಿ.ವಿ ಮೂಲಕವೂ ಪ್ರಸಾರವಾಗಲ್ಲ ದಸರಾ ಖಾಸಗಿ ದರ್ಬಾರ್!!

(ನ್ಯೂಸ್ ಕಡಬ) newskadaba.com ಮೈಸೂರು , ಅ. 06: ಕೊರೊನಾ ಸೋಂಕಿನ ಹಾವಳಿಯಿಂದ ಜಗದ್ವಿಖ್ಯಾತ ಮೈಸೂರು ದಸರಾವನ್ನ ಸರಳವಾಗಿ ಆಚರಿಸಲು ನಿರ್ಧರಿಸಲಾಗಿರುವುದರಿಂದ ಈ ಬಾರಿಯ ರಾಜ ದರ್ಬಾರ್ ನೋಡಲು ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರಿಗೆ ನಿರ್ಬಂಧವಿದ್ದರೂ ಟಿ.ವಿಗಳ ಮೂಲಕ ಈ ದಸರಾವನ್ನು ಸವಿಯುವ ಅವಕಾಶವಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಮಾಧ್ಯಮದವರಿಗೂ ನಿರ್ಬಂಧ ವಿಧಿಸಿರುವ ಕಾರಣ, ಖಾಸಗಿ ದಸರಾ ನೋಡುವ ಭಾಗ್ಯ ಈ ಬಾರಿ ಸಿಗುವುದಿಲ್ಲ. ಮೈಸೂರಿನಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳ ದೃಷ್ಟಿಯಿಂದ

ಈ ಬಾರಿ ಟಿ.ವಿ ಮೂಲಕವೂ ಪ್ರಸಾರವಾಗಲ್ಲ ದಸರಾ ಖಾಸಗಿ ದರ್ಬಾರ್!! Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ರಾತ್ರೋ ರಾತ್ರಿ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ ➤ ಏನು ಕಾರಣ ನೀಡಿದೆ ಗೊತ್ತ ಯುಪಿ ಸರ್ಕಾರ.?

(ನ್ಯೂಸ್ ಕಡಬ) newskadaba.com ಹತ್ರಾಸ್ , ಅ. 06.:ಲಕ್ನೋ: ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ ಮಾಡಿದ್ದಕ್ಕೆ ಕಾರಣವೇನೆಂದು ಯುಪಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಮಜಾಯಿಷಿ ನೀಡಿದೆ. ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಯೋಗಿ ಸರ್ಕಾರ ಅಂತ್ಯಸಂಸ್ಕಾರದ ಕಾರಣ ವಿವರಿಸಿದೆ. ‘ಪ್ರಕರಣ ಜಾತಿಯ ತಿರುವು ಪಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅಂತ್ಯ ಸಂಸ್ಕಾರ ಮಾಡಿದರೆ ಹಿಂಸಾಚಾರ ನಡೆಯುವ ಸಾಧ‍್ಯತೆಯಿತ್ತು. ಹೀಗಾಗಿ ಸಾರ್ವಜನಿಕರನ್ನು ದೂರವಿಟ್ಟು ರಾತ್ರೋ

ರಾತ್ರೋ ರಾತ್ರಿ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ ➤ ಏನು ಕಾರಣ ನೀಡಿದೆ ಗೊತ್ತ ಯುಪಿ ಸರ್ಕಾರ.? Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top