ತವರನ್ನು ಬಿಟ್ಟು ತೆರಳುವ ಹಾಗಾಗಿದೆ, ಥ್ಯಾಂಕ್ಯೂ ಮೈಸೂರು ➤ ಸುದ್ದಿಗಾರರ ಮುಂದೆ ಭಾವುಕರಾದ ರೋಹಿಣಿ ಸಿಂಧೂರಿ
(ನ್ಯೂಸ್ ಕಡಬ) newskadaba.com ಮೈಸೂರು, ಜೂ.07. ಮೈಸೂರಿನ ಜನತೆ ಸಾಕಷ್ಟು ಪ್ರೀತಿ ತೋರಿಸಿ ನನ್ನನ್ನು ಮನೆ ಮಗಳಂತೆ ನೋಡಿಕೊಂಡಿದ್ದಾರೆ. ಇಲ್ಲಿ ನನಗೆ ತವರೂರಿನ ಭಾವನೆ ಮೂಡಿದೆ. ಇಂದು ತವರನ್ನು ಬಿಟ್ಟು ತೆರಳುವ ಹಾಗಾಗಿದೆ. ಥ್ಯಾಂಕ್ಯೂ ಮೈಸೂರು. ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಸೋಮವಾರದಂದು ಭಾವುಕರಾದರು. ರಾಜಕೀಯ ಕೆಸರೆರಚಾಟಕ್ಕೆ ಕಳೆದ ಕೆಲವು ಸಮಯಗಳಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರಣರಾಗಿದ್ದರು. ಎಲ್ಲಾ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿಯ ಖಡಕ್ ರೂಲ್ಸ್ ಗೆ ಕಸಿವಿಸಿಗೊಂಡು ರೋಹಿಣಿ ಸಿಂಧೂರಿಯವರ ವಿರುದ್ಧ ಧ್ವನಿಯೆತ್ತಿದ್ದರು. […]








