ಕರಾವಳಿ

ತಮಿಳು ನಿರಾಶ್ರಿತರಿಗೆ ನಿವೇಶನ ಮಂಜೂರು ಕಡಬ ತಹಶೀಲ್ದಾರ್, ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಜೂ. 21. ಕಡಬ ತಾಲೂಕು ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿಗೆ ಸೇರಿದ ತಮಿಳು ನಿರಾಶ್ರಿತರಿಗೆ ನಿವೇಶನ ದೊರಕಿಸಿ ಕೊಟ್ಟವರನ್ನು ನಿರಾಶ್ರಿತರು ಸೇರಿಕೊಂಡು ಸನ್ಮಾನಿಸಿದ್ದಾರೆ.   ಅಧಿಕಾರಿಗಳಾದ ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಜೂರೆ, ಕಡಬ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಮತ್ತು ನಿವೇಶನಕ್ಕೆ ಶ್ರಮಿಸಿದ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಸಂಘಟನೆಯ ಸಂಚಾಲಕರಾದ ವಸಂತ ಕುಬಲಾಡಿ ಅವರನ್ನು ಕಡಬ ತಾಲೂಕು ಸೌಧದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. […]

ತಮಿಳು ನಿರಾಶ್ರಿತರಿಗೆ ನಿವೇಶನ ಮಂಜೂರು ಕಡಬ ತಹಶೀಲ್ದಾರ್, ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸನ್ಮಾನ Read More »

ಕರಾವಳಿ

ಕಡಬ: ಹಾವನ್ನು ನೋಡಿ ಹಠಾತ್ ಬ್ರೇಕ್ ಹಾಕಿದ ಆಟೋ ಚಾಲಕ ಪ್ರಯಾಣಿಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜೂ. 21. ರಸ್ತೆ ಅಡ್ಡ ದಾಟುತ್ತಿದ್ದ ಹಾವನ್ನು ನೋಡಿ ರಿಕ್ಷಾ ಚಾಲಕನೋರ್ವ ಹಠಾತ್ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಚರಂಡಿಗೆ ಬಿದ್ದು ಓರ್ವ ಪ್ರಯಾಣಿಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಶಾಂತಿಮೊಗರು ಸಮೀಪದ ಕೊಂಡಾಡಿ ಎಂಬಲ್ಲಿ ನಡೆದಿದೆ.   ಗಾಯಗೊಂಡವರನ್ನು ಪೆರಾಬೆ ಗ್ರಾಮದ ಸಾಮೆತಡ್ಕ ನಿವಾಸಿ ನಯಾಝ್ ಎಂದು ಗುರುತಿಸಲಾಗಿದೆ. ಆಲಂಕಾರಿನಿಂದ ಶಾಂತಿಮೊಗರು ಕಡೆಗೆ ಮಹಮ್ಮದ್ ಮುಸ್ತಾಫ ಎಂಬವರು ರಿಕ್ಷಾ ಚಲಾಯಿಸಿಕೊಂಡು ಬಂದಿದ್ದು ಕೊಂಡಾಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಹಾವೊಂದು ರಸ್ತೆಯಲ್ಲಿ

ಕಡಬ: ಹಾವನ್ನು ನೋಡಿ ಹಠಾತ್ ಬ್ರೇಕ್ ಹಾಕಿದ ಆಟೋ ಚಾಲಕ ಪ್ರಯಾಣಿಕನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಆನ್ ಲೈನ್ ವಂಚನೆ- ಲಿಂಕ್ ಕ್ಲಿಕ್ ಮಾಡಿ 27 ಲಕ್ಷ ರೂ.ಕಳೆದುಕೊಂಡ ಯುವಕ

(ನ್ಯೂಸ್ ಕಡಬ) newskadaba.com ಜೂ. 21. ಟೆಲಿಗ್ರಾಂ ಖಾತೆಗೆ ಬಂದ ಸಂದೆಶವನ್ನು ನಂಬಿದ ಯುವಕನೋರ್ವ 27 ಲಕ್ಷ ಕಳೆದುಕೊಂಡ ಘಟನೆ ಉಡುಪಿ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ.   ವಂಚನೆಗೊಳಗಾದವರನ್ನು ಆಶೀಕ್(33) ಎಂದು ಗುರುತಿಸಲಾಗಿದೆ. ಇವರ ಟೆಲಿಗ್ರಾಂ ಖಾತೆಗೆ ಮೇ.25 ರಂದು ನೇಹಾ ಕುಮಾರ್ ಎಂಬವರ ಖಾತೆಯಿಂದ ವರ್ಕ್ ಪ್ರಮ್ ಹೋಂ ಪಾರ್ಟ್ ಟೈಮ್ ಜಾಬ್ ಬಗ್ಗೆ ಮತ್ತು ಒನ್ ಟ್ರಾವೆಲ್ ಹೊಟೇಲ್ ಬುಕ್ಕಿಂಗ್ ಆನ್‌ಲೈನ್ ವೆಬ್‌ಸೈಟ್‌ ನಲ್ಲಿ ಹೊಟೆಲ್ ಗೆ ರಿವಿವ್ಯೂ ಹಾಕುವ ಬಗ್ಗೆ ಸಂದೇಶ ಬಂದಿದ್ದು,

ಆನ್ ಲೈನ್ ವಂಚನೆ- ಲಿಂಕ್ ಕ್ಲಿಕ್ ಮಾಡಿ 27 ಲಕ್ಷ ರೂ.ಕಳೆದುಕೊಂಡ ಯುವಕ Read More »

ಕರಾವಳಿ, ಕ್ರೈಮ್ ನ್ಯೂಸ್

ಚಾಕೊಲೇಟ್ ಮಾದರಿಯ ಮಾದಕ ದ್ರವ್ಯ ಮಾರಾಟ- ವ್ಯಕ್ತಿಯ ಬಂಧನ

(ನ್ಯೂಸ್ ಕಡಬ) newskadaba.com ಜೂ. 20. ಪಾನ್ ಶಾಪ್ ಒಂದರಲ್ಲಿ ವ್ಯಕ್ತಿಯೊಬ್ಬ ಚಾಕಲೇಟ್ ನಂತೆ ಕಾಣುವ ಮಾದಕ ದ್ರವ್ಯದ ಸುವಾಸನೆಯುಳ್ಳ ಚಾಕಲೇಟ್ ಮಾರಾಟ ನಡೆಸುತ್ತಿದ್ದ ವೇಳೆ ಮಂಗಳೂರು ಉಪವಿಭಾಗದ ಅಬಕಾರಿ ಪೊಲೀಸರು ದಾಳಿ ನಡೆಸಿ ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಧಿತನನ್ನು ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಎಂದು ಗುರುತಿಸಲಾಗಿದೆ. ಆತನಿಂದ 303 ಗ್ರಾಂ. ಬಮ್ ಬಮ್ ಚಾರ್ ಮಿನಾರ್ ಹೆಸರಿನ ಮಾದಕ ದ್ರವ್ಯ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಎನ್.ಡಿ.ಪಿ.ಎಸ್ ಆಕ್ಟ್ 1985 ಕಲಂ 8(c) 20(b)(11)(A)

ಚಾಕೊಲೇಟ್ ಮಾದರಿಯ ಮಾದಕ ದ್ರವ್ಯ ಮಾರಾಟ- ವ್ಯಕ್ತಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಮ್ಮೇಳನದ ಸಂಯೋಜಕರಾಗಿ ಕಡಬದ ಡಾ. ಮೀರಾಮಣಿ ಆಯ್ಕೆ

(ನ್ಯೂಸ್ ಕಡಬ) newskadaba.com ಜೂ. 20. ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ಜೂನ್ 22ರಿಂದ 28ರ ವರೆಗೆ ಆಯೋಜಿಸುತ್ತಿರುವ ವರ್ಲ್ಡ್ ಆರ್ಕಿಯಾಲಜಿಕಲ್ ಕಾಂಗ್ರೆಸ್ ಸಮ್ಮೇಳನದಲ್ಲಿ ಡಾ. ಮೀರಾಮಣಿಯವರು ಸಂಯೋಜಕರಾಗಿ ಸೆಕ್ರೆಡ್ ನರೇಟಿವ್ಸ್ ಆಂಡ್ ರಿಚುವಲ್ ಎಕ್ಸ್ ಪ್ರೆಷನ್ಸ್: ಎಕ್ಸ್ ಪ್ಲೋರಿಂಗ್ ಸೌತ್ ಏಷಿಯಾಸ್ ಫೋಕ್ ಟ್ರೆಡಿಷನ್ಸ್ ಆಂಡ್ ಕಲ್ಚರಲ್ ಕಂಟಿನ್ಯೂಟಿ ಗೆ ಆಯ್ಕೆಯಾಗಿದ್ದಾರೆ.   ಅವರು ಸಮ್ಮೇಳನದಲ್ಲಿ “ಡಿಜಿಟಲ್ ಪ್ರಿಸರ್ವೇಶನ್ ಆಂಡ್ ಕಲ್ಚರಲ್ ಹೆರಿಟೇಜ್ ಇನ್ ಇಂಡಿಯಾ- ವಿತ್ ಸ್ಪೆಷಲ್ ರೆಫರೆನ್ಸ್ ಟು ಇನ್ಸ್ಟಿಟ್ಯೂಷನಲ್ ರೆಪೊಸಿಟರೀಸ್ ಇನ್

ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಮ್ಮೇಳನದ ಸಂಯೋಜಕರಾಗಿ ಕಡಬದ ಡಾ. ಮೀರಾಮಣಿ ಆಯ್ಕೆ Read More »

ಕರಾವಳಿ

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪಿಕಪ್..!

(ನ್ಯೂಸ್ ಕಡಬ) newskadaba.com ಜೂ. 20. ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹವನವೊಂದು ರಸ್ತೆಯ ಪಕ್ಕದ ಚರಂಡಿಗೆ ಬಿದ್ದ ಘಟನೆ ಸಂಪಾಜೆ ಗೇಟ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಶುಕ್ರವಾರದಂದು ನಡೆದಿರುವ ಬಗ್ಗೆ ವರದಿಯಾಗಿದೆ.   ಸಂಪಾಜೆಯಿಂದ ಅರಮನೆ ಎಂಬಲ್ಲಿಯ ತೋಟಕ್ಕೆ ಪಿಕಪ್ ನಲ್ಲಿ ಕೆಲಸದವರನ್ನು ಮತ್ತು ಸಿಮೆಂಟ್ ಲೋಡ್ ಕೊಂಡೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.   ಪರಿಣಾಮ ಪಿಕಪ್ ವಾಹನದಲ್ಲಿದ್ದವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪಿಕಪ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಭೇಟಿ

(ನ್ಯೂಸ್ ಕಡಬ) newskadaba.com ಜೂ. 20. ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರು ರಾತ್ರಿ ವೇಳೆ ತೆರಳಿ ಜಿಪಿಎಸ್ ಫೋಟೋ ತೆಗೆದ ಬಳಿಕದ ಬೆಳವಣಿಗೆಯಲ್ಲಿ ನಡೆದ ಘಟನೆಗಳ ಹಿನ್ನೆಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಬುಧವಾರದಂದು ರಾತ್ರಿ ಕಡಬಕ್ಕೆ ಆಗಮಿಸಿ ಹಿಂದೂ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಮಂಗಳೂರಿಗೆ ಆಗಮಿಸಿದ್ದ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು, ಪುತ್ತೂರಿಗೆ ಆಗಮಿಸಿ ಬಳಿಕ ರಾತ್ರಿ ವೇಳೆ ಕಡಬಕ್ಕೆ ಭೇಟಿ ನೀಡಿದ್ದಾರೆ.   ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಯ ಬಳಿಕ ಕಾನೂನು ಸುವ್ಯವಸ್ಥೆ

ಕಡಬ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಭೇಟಿ Read More »

ಕರಾವಳಿ

ಕಡಬ ಸಮುದಾಯ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಡಬ ಬ್ಲಾಕ್ ಯೂತ್ ಕಾಂಗ್ರೆಸ್ ಮನವಿ

(ನ್ಯೂಸ್ ಕಡಬ) newskadaba.com ಜೂ. 20. ಕಡಬ ಸಮುದಾಯ ಆಸ್ಪತ್ರೆಗೆ ಖಾಯಂ ವೈದ್ಯಾಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿ ಕಡಬ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಶಾಕೀರ್ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರಿಗೆ ಮನವಿ ನೀಡಿದರು. ಕಡಬ ತಾಲೂಕು ಕೇಂದ್ರದಲ್ಲಿರುವ ಈ ಸಮುದಾಯ ಆಸ್ಪತ್ರೆ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ದಿನವೊಂದಕ್ಕೆ 300ಕ್ಕೂ ಹೆಚ್ಚು ವಿವಿಧ ಖಾಯಿಲೆಯ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಇಲ್ಲಿನ ಖಾಯಂ ವೈದ್ಯಾಧಿಕಾರಿ ನಿವೃತ್ತಿಯಾಗಿ ಎರಡು ವರ್ಷಗಳಾಗಿದ್ದು, ಹಲವು ಬಾರಿ

ಕಡಬ ಸಮುದಾಯ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಡಬ ಬ್ಲಾಕ್ ಯೂತ್ ಕಾಂಗ್ರೆಸ್ ಮನವಿ Read More »

ಕರಾವಳಿ

ಪುರಸಭೆ ಹೇಳಿದ್ದೇ ಬೇರೆ, ಅರಣ್ಯ ಇಲಾಖೆ ಕಡಿದದ್ದೇ ಬೇರೆ- ಸಾರ್ವಜನಿಕರ ಆಕ್ರೋಶ

(ನ್ಯೂಸ್ ಕಡಬ) newskadaba.com ಜೂ. 20. ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳ ರೆಂಬೆಯನ್ನು ಕಡಿಯಲು ಪುರಸಭೆ ಪಟ್ಟಿ ಸಲ್ಲಿಸಿದ್ದು, ಆದರೆ ಅರಣ್ಯ ಇಲಾಖೆಯು ಸೋಮೇಶ್ವರ ಕಡಲ ತೀರದಲ್ಲಿದ್ದ ಬೆಲೆ ಬಾಳುವ ಗಾಳಿ ಮರಗಳನ್ನು ಕಡಿದಿರುವ ಘಟನೆ ನಡೆದಿದೆ.   ಕಡಲ ತೀರದಲ್ಲಿ ಅಪಾಯದಲ್ಲಿದ್ದ ಎರಡು ಗಾಳಿ ಮರ ಸೇರಿದಂತೆ ಪುರಸಭೆ ಬಳಿ ಇರುವ ಬಸ್ ನಿಲ್ದಾಣದಲ್ಲಿ ಅಪಾಯಕಾರಿಯಾದ ಮರಗಳ ಪಟ್ಟಿ ಮಾಡಿ ರೆಂಬೆ ತೆಗೆಯಲು ಅರಣ್ಯ ಇಲಾಖೆಗೆ ಸೂಚಿಸಿತ್ತು. ಆದರೆ ಅರಣ್ಯ ಇಲಾಖೆ ಅದರ ಬದಲಾಗಿ

ಪುರಸಭೆ ಹೇಳಿದ್ದೇ ಬೇರೆ, ಅರಣ್ಯ ಇಲಾಖೆ ಕಡಿದದ್ದೇ ಬೇರೆ- ಸಾರ್ವಜನಿಕರ ಆಕ್ರೋಶ Read More »

ಕರಾವಳಿ

ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಕಡಬದ 2 ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

(ನ್ಯೂಸ್ ಕಡಬ) newskadaba.com ಜೂ. 20. ಕಾಂಗ್ರೆಸ್ ಪಕ್ಷದ ಧೀಮಂತ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ಸನ್ಮಾನ್ಯ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಫೈಝಲ್ ಕಡಬ ಅವರ ನೇತೃತ್ವದಲ್ಲಿ ಕಡಬದ ಎರಡು ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.   ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಸಿಹಿಯನ್ನು ಹಂಚಿ ಸಂಭ್ರಮದೊಂದಿಗೆ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.   ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್

ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಕಡಬದ 2 ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ Read More »

ಕರಾವಳಿ
Scroll to Top