ಕರಾವಳಿ

ದೀಪಾವಳಿ ಹಬ್ಬದ ಪ್ರಯುಕ್ತ ► ಬಡ ಕುಟುಂಬಕ್ಕೆ ನೆರವು ನೀಡಿದ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್

(ನ್ಯೂಸ್ ಕಡಬ) newskadaba.com ಕಡಬ, ಅ.23. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್ ವತಿಯಿಂದ ಕೋಡಿಂಬಾಳ ಗ್ರಾಮದ ಓಂತ್ರಡ್ಕದಲ್ಲಿ ಬಡ ಕುಟುಂಬಕ್ಕೆ ಅಕ್ಕಿ, ಬಟ್ಟೆ, ಆಹಾರ ಸಾಮಾಗ್ರಿ, ಸಿಹಿತಿಂಡಿ ವಿತರಿಸಲಾಯಿತು. ಸಂಸ್ಥೆಯ ಮಾಲಕರಾದ ರಮೇಶ್ ಪಿ.ರವರು ಬಾಬು ಆಚಾರಿ ಹಾಗೂ ಕಲ್ಯಾಣಿ ಅವರಿಗೆ ಅಕ್ಕಿ, ಬಟ್ಟೆ, ಆಹಾರ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಕ್ಕಳಾದ ಹರೀಶ್, ಆಚಾರಿ, ಗೌರಮ್ಮ, ಮೋಹಿನಿ, ಸ್ಥಳೀಯರಾದ ಸುರೇಶ್, ಸುಂದರಿ, ಚರಿಷ್ಮಾ, ಅಜಾಶ್, ಹರ್ಷಿತಾ, ಸುರೇಶ್ ಪಾದೆರೆ ಉಪಸ್ಥಿತರಿದ್ದರು.

ದೀಪಾವಳಿ ಹಬ್ಬದ ಪ್ರಯುಕ್ತ ► ಬಡ ಕುಟುಂಬಕ್ಕೆ ನೆರವು ನೀಡಿದ ಕಡಬದ ಶ್ರೀದುರ್ಗಾ ಎಂಟರ್ಪ್ರೈಸಸ್ Read More »

ಕರಾವಳಿ

ತುಳುನಾಡಿನ ಸಂಪ್ರದಾಯದ ಆಚಾರ ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗುವಂತಿದೆ ► ಚಂದ್ರಹಾಸ ರೈ

(ನ್ಯೂಸ್ ಕಡಬ) newskadaba.com ಕಡಬ, ಅ.23. ನೂಜಿಬಾಳ್ತಿಲ-ರೆಂಜಿಲಾಡಿ ಶ್ರೀನೂಜಿ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ನೂಜಿಬೈಲ್ ತೆಗೆರ್ ತುಳುಕೂಟ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ದಿ.ಚಿನ್ನಪ್ಪ ಗೌಡ ಮಾರಪ್ಪೆರವರ ಸ್ಮರಣಾರ್ಥವಾಗಿ ಬೆನ್ನಿದ ಕಂಡೊಡ್ ನಮ್ಮ ಜವನೆರ್ ತುಳು ಸಂಸ್ಕ್ರತಿ ಉಳಿಸುವ ತುಳುಕ್ರೀಡೋತ್ಸವ ಆದಿತ್ಯವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ನಮ್ಮ ತುಳುನಾಡಿನ ಸಂಪ್ರದಾಯದಂತೆ ಒಬ್ಬ ನೆಂಟಸ್ತಿಕನಾಗಿ ಬಂದವನಿಗೆ ಅವನು ನಮ್ಮ ಮನೆಯನ್ನು ಪ್ರವೇಶಿಸಿದಲ್ಲಿಂದ ಅವನು ತೆರಳುವ ತನಕ ನಮ್ಮ ಸಂಪ್ರದಾಯ ಬದ್ಧ ನಡತೆ,

ತುಳುನಾಡಿನ ಸಂಪ್ರದಾಯದ ಆಚಾರ ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗುವಂತಿದೆ ► ಚಂದ್ರಹಾಸ ರೈ Read More »

ಕರಾವಳಿ

ಅಕ್ಟೋಬರ್ 27ರಂದು ಕಡಬದಲ್ಲಿ ► ಮರಳು ನೀತಿಯ ವಿರುದ್ಧ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.23.  ಜಿಲ್ಲಾಡಳಿತವು ಮರಳು ನೀತಿಯನ್ನು ಸಡಿಲಗೊಳಿಸಿ ಎಲ್ಲಾ ವರ್ಗದ ಜನತೆಗೆ ಅನುಕೂಲ ಮಾಡಿಕೊಡಬೇಕು. ತಪ್ಪಿದಲ್ಲಿ ಇದರ ವಿರುದ್ಧ ಅ. 27 ರಂದು ಕಡಬ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಎಚ್ಚರಿಸಿದರು. ಕಡಬ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮರಳು ನೀತಿಯಿಂದ ಜನರಿಗೆ ಆಗುತ್ತಿರುವ ಸಂಕಷ್ಟಗಳನ್ನು ನಿವಾರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮುತುರ್ವಜಿ ವಹಿಸಬೇಕೆಂದು ಆಗ್ರಹಿಸಿದರು. ಕಡಬ ತಾಲೂಕಿನಾದ್ಯಂತ ನೈರ್ಸಗಿಕ

ಅಕ್ಟೋಬರ್ 27ರಂದು ಕಡಬದಲ್ಲಿ ► ಮರಳು ನೀತಿಯ ವಿರುದ್ಧ ಪ್ರತಿಭಟನೆ Read More »

ಕರಾವಳಿ

ಕ್ಯಾನ್ಸರ್ ಪೀಡಿತ ಕಡಬದ ಬಾಲೆ ► ಬೇಕಿದೆ ದಾನಿಗಳ ಸಹಾಯಹಸ್ತ

(ನ್ಯೂಸ್ ಕಡಬ) newskadaba.com ಕಡಬ, ಅ. 23. ಹೃದ್ರೋಗ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿರುವ 11 ವರ್ಷದ ಬಾಲಕಿ ಶಹನಾಝ್ ಳ ಚಿಕಿತ್ಸೆಗೆ ಇದೀಗ ದಾನಿಗಳ ಸಹಾಯಹಸ್ತ ಬೇಕಾಗಿದೆ‌. ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಕಡಬ ಸಮೀಪದ ಕಲ್ಲಂತಡ್ಕ ಕುತ್ಯಾಡಿ ಎಂಬಲ್ಲಿ ವಾಸವಿರುವ ಇಸಾಕ್ ಹಾಗೂ ತಾಜುನ್ನಬಿ ದಂಪತಿಯ ಪುತ್ರಿ ಶಹನಾಝ್ ಹೃದ್ರೋಗ ಮತ್ತು ರಕ್ತದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಈ ಬಾಲಕಿಯನ್ನು ಮಂಗಳೂರಿನ ಅತ್ತಾವರದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಹನಾಝ್ ಪೆರ್ಲದ ಶಾಲೆಯಲ್ಲಿ 5ನೆ ತರಗತಿಯಲ್ಲಿ

ಕ್ಯಾನ್ಸರ್ ಪೀಡಿತ ಕಡಬದ ಬಾಲೆ ► ಬೇಕಿದೆ ದಾನಿಗಳ ಸಹಾಯಹಸ್ತ Read More »

ಕರಾವಳಿ

ಕರಾವಳಿ ಕಾಂಗ್ರೆಸ್ ನಾಯಕರ ಕಚ್ಚಾಟ ಮುಖ್ಯಮಂತ್ರಿಯ ಸಮ್ಮುಖದಲ್ಲಿ ಸ್ಪೋಟ ► ನೂಕಾಟ ತಳ್ಳಾಟಕ್ಕೆ ಸುಸ್ತಾದ ಪೊಲೀಸರು

(ನ್ಯೂಸ್ ಕಡಬ) newskadaba.com ಮಂಗಳೂರು, ಅ.22. ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಕಾಂಗ್ರೆಸ್ ನಾಯಕ ಹಾಗೂ ಸರ್ಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ ಮತ್ತು ಅಭಯಚಂದ್ರ ಜೈನ್ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಿನಲ್ಲೇ ತಳ್ಳಾಟ ನಡೆದಿದೆ. ಮುಖ್ಯಮಂತ್ರಿಯವರು ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಮುಖ್ಯಮಂತ್ರಿ ಪಕ್ಕ ನಿಲ್ಲಲು ಇಬ್ಬರು ನಾಯಕರು ಪೈಪೋಟಿ ನಡೆಸಿದರು. ಈ ಸಂದರ್ಭದಲ್ಲಿ ಐವನ್ ಡಿ ಸೋಜಾ ಅವರನ್ನು ಅಭಯಚಂದ್ರ ಜೈನ್ ತಳ್ಳಿದ್ದಾರೆ. ಮೂಡಬಿದ್ರೆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ಟಿಕೆಟ್

ಕರಾವಳಿ ಕಾಂಗ್ರೆಸ್ ನಾಯಕರ ಕಚ್ಚಾಟ ಮುಖ್ಯಮಂತ್ರಿಯ ಸಮ್ಮುಖದಲ್ಲಿ ಸ್ಪೋಟ ► ನೂಕಾಟ ತಳ್ಳಾಟಕ್ಕೆ ಸುಸ್ತಾದ ಪೊಲೀಸರು Read More »

ಕರಾವಳಿ

ಸುಬ್ರಹ್ಮಣ್ಯ: ಟೆಂಪೊ ಟ್ರಾವೆಲ್ಲರ್ – ಕೆಎಸ್ಸಾರ್ಟಿಸಿ ಬಸ್ ಮುಖಾಮುಖಿ ಢಿಕ್ಕಿ ► ಮೂವರಿಗೆ ಗಾಯ, ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.22. ಟೆಂಪೊ ಟ್ರಾವೆಲ್ಲರ್ ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ಸಂಭವಿಸಿ ಮೂವರು ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಘಟನೆಯಲ್ಲಿ ಬೆಂಗಳೂರಿನ ಯಲಹಂಕದ ಸೌಮ್ಯ(36), ಗಂಗಮ್ಮ(84) ಗಂಭೀರ ಗಾಯಗೊಂಡಿದ್ದು, ಪೂರ್ಣಿಮಾ(34) ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ‌.

ಸುಬ್ರಹ್ಮಣ್ಯ: ಟೆಂಪೊ ಟ್ರಾವೆಲ್ಲರ್ – ಕೆಎಸ್ಸಾರ್ಟಿಸಿ ಬಸ್ ಮುಖಾಮುಖಿ ಢಿಕ್ಕಿ ► ಮೂವರಿಗೆ ಗಾಯ, ಇಬ್ಬರು ಗಂಭೀರ Read More »

ಕರಾವಳಿ

ಗುಂಡ್ಯ: ಬೈಕ್ – ಸ್ಕಾರ್ಪಿಯೋ ಢಿಕ್ಕಿ ► ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ.22. ಬೈಕ್ ಮತ್ತು ಸ್ಕಾರ್ಪಿಯೊ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಚೆಕ್ ಪೊಸ್ಟ್ ಬಳಿ ಭಾನುವಾರದಂದು ನಡೆದಿದೆ. ಮೃತ ಸವಾರನನ್ನು ತುಮಕೂರು ನಿವಾಸಿ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ. ನವೀನ್ ಕುಮಾರ್‌ರವರು ಧರ್ಮಸ್ಥಳದಿಂದ ತುಮಕೂರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುಂಡ್ಯ: ಬೈಕ್ – ಸ್ಕಾರ್ಪಿಯೋ ಢಿಕ್ಕಿ ► ಬೈಕ್ ಸವಾರ ಮೃತ್ಯು Read More »

ಕರಾವಳಿ

ಕೆಂಜಾಳ: ಕಾರು ಮರಕ್ಕೆ ಢಿಕ್ಕಿ ಹೊಡೆದ ಪ್ರಕರಣ ► ಗಾಯಾಳು ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.21. ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಎಂಬಲ್ಲಿ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಶನಿವಾರದಂದು ನಡೆದಿದೆ. ಬೆಂಗಳೂರು ವಿಘ್ನೇಶ್ವರ ನಗರ ನಿವಾಸಿಗಳಿದ್ದ ತಂಡ ಧರ್ಮಸ್ಥಳ, ಸೌತಡ್ಕ ದೇವರ ದರ್ಶನ ಮುಗಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿನ ಮರಕ್ಕೆ ಢಿಕ್ಕಿ ಹೊಡೆದುದರಿಂದ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ವೆಂಕಟೇಶ್ ಎನ್ನುವವರು ಮೃತಪಟ್ಟು,

ಕೆಂಜಾಳ: ಕಾರು ಮರಕ್ಕೆ ಢಿಕ್ಕಿ ಹೊಡೆದ ಪ್ರಕರಣ ► ಗಾಯಾಳು ಓರ್ವ ಮೃತ್ಯು Read More »

ಕರಾವಳಿ

ಕಡಬ: ಮುಸ್ಲಿಂ ಧರ್ಮದ ಅವಹೇಳನ ಪ್ರಕರಣ ► ಆರೋಪಿಯ ಬಂಧನಕ್ಕೆ ಭಾನುವಾರ ಮಧ್ಯಾಹ್ನದ ಗಡುವು

(ನ್ಯೂಸ್ ಕಡಬ) newskadaba.com ಕಡಬ, ಅ.21. ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾದ ಮಸೀದಿಯ ಮೇಲೆ ಹನುಮಂತನ ಭಾವಚಿತ್ರವನ್ನಿರಿಸಿ ಮುಸ್ಲಿಂ ಧರ್ಮವನ್ನು ಅವಹೇಳನ ನಡೆಸಲಾಗಿದೆಯೆಂದು ಆರೋಪಿಸಿ ಕಡಬದ ಪಂಚಾಯತ್ ಬಿಲ್ಡಿಂಗ್ ನಲ್ಲಿರುವ ಗಣೇಶ್ ಮೊಬೈಲ್ ಸೆಂಟರ್‌ನ ನೌಕರ ಪ್ರದೀಪ್ ಎಂಬವರ ಮೇಲೆ ಕಡಬದ ವಿವಿಧ ಮುಸ್ಲಿಂ ಸಂಘಟನೆಗಳ ವತಿಯಿಂದ ಕಡಬ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು. ಕಡಬ ಪರಿಸರದ ಎಲ್ಲಾ ಮಸೀದಿಗಳು, ಎಸ್ಕೆಎಸ್ಸೆಸ್ಸೆಫ್, ಎಸ್ಸೆಸ್ಸೆಫ್, ಪಿಎಫ್ಐ ಕಡಬ ವಲಯ ಮೊದಲಾದವುಗಳಿಂದ ಹಲವು ದೂರುಗಳನ್ನು ನೀಡಲಾಯಿತು. ಪ್ರದೀಪ್ ಕಾಬಾದ ಫೊಟೋವನ್ನು

ಕಡಬ: ಮುಸ್ಲಿಂ ಧರ್ಮದ ಅವಹೇಳನ ಪ್ರಕರಣ ► ಆರೋಪಿಯ ಬಂಧನಕ್ಕೆ ಭಾನುವಾರ ಮಧ್ಯಾಹ್ನದ ಗಡುವು Read More »

ಕರಾವಳಿ

ಉಪ್ಪಿನಂಗಡಿ: ಅಕ್ರಮ ಗೋಮಾಂಸ ಸಾಗಾಟ ಪತ್ತೆ ► ವಾಹನ ಸಹಿತ ಓರ್ವ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.21. ಸುಮಾರು 300 ಕೆ.ಜಿ. ಗೋಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇನ್ನೋರ್ವ ಪರಾರಿಯಾದ ಘಟನೆ ಶನಿವಾರದಂದು ನಡೆದಿದೆ. ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದಲ್ಲಿ ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದಾಗ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹೊಳೆನರಸೀಪುರದ ಆನಂದ ಎಂಬಾತನನ್ನು ಬಂಧಿಸಿ ವಾಹನ ಸಹಿತ ಗೋಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನೋರ್ವ ಆರೋಪಿ ಹಾಸನದ ನಾಗರಾಜ್ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಉಪ್ಪಿನಂಗಡಿ: ಅಕ್ರಮ ಗೋಮಾಂಸ ಸಾಗಾಟ ಪತ್ತೆ ► ವಾಹನ ಸಹಿತ ಓರ್ವ ವಶಕ್ಕೆ Read More »

ಕರಾವಳಿ
Scroll to Top