ವೀರಕಂಬ: ದುಷ್ಕರ್ಮಿಗಳಿಂದ ಮಸೀದಿಗೆ ಕಲ್ಲೆಸೆತ
(ನ್ಯೂಸ್ ಕಡಬ) newskadaba.com ವಿಟ್ಲ, ಡಿ.28. ಕಲ್ಲಡ್ಕ ಸಮೀಪದ ವೀರಕಂಬ ಎಂಬಲ್ಲಿನ ಮಸೀದಿಯೊಂದಕ್ಕೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಬುಧವಾರದಂದು ತಡರಾತ್ರಿ ನಡೆದಿದೆ. ಘಟನೆಯಿಂದ ವೀರಕಂಬ ಬಳಿಯ ಮಸೀದಿಯ ನಾಲ್ಕು ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ. ಗುರುವಾರ ಬೆಳಿಗ್ಗೆ ನಮಾಝ್ ಮಾಡಲು ಬಂದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ವೀರಕಂಬ: ದುಷ್ಕರ್ಮಿಗಳಿಂದ ಮಸೀದಿಗೆ ಕಲ್ಲೆಸೆತ Read More »
ಕರಾವಳಿ








