ಕರಾವಳಿ

ಪುರಾತನ ಕಾಲದ ಜೈನ ತೀರ್ಥಂಕರರ ವಿಗ್ರಹ ಮಾರಾಟಕ್ಮೆ ಯತ್ನ ► ಐವರ ಬಂಧನ, ಲಕ್ಷಾಂತರ ಮೌಲ್ಯದ ಸ್ವತ್ತು ವಶ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.26. ಪ್ರಾಚೀನ ಕಾಲದ ಜೈನ ತೀರ್ಥಂಕರರ ಕಂಚಿನ ವಿಗ್ರಹಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಐವರನ್ನು ಬಂಧಿಸಿರುವ ಕುಂದಾಪುರ ಪಿಎಸ್ಐ ಹರೀಶ್ ಮತ್ತು ಸಿಬ್ಬಂದಿಗಳು ಜೈನ ತೀರ್ಥಂಕರರ ಐದು ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮಂಗಳೂರಿನ‌ ಪಡೀಲ್‌ ನಿವಾಸಿ ನೆವೀಲ್ ವಿಲ್ಲಿ ಮಸ್ಕರೇನಸ್, ಶಿವಮೊಗ್ಗ ತಾಳಗುಪ್ಪದ ಅನಿಲ್ ಪುಟಾರ್ಡೋ, ಮಂಗಳೂರಿನ ಕುಲ ಶೇಖರದ ಅಸ್ಟೀನ್ ಸಿಕ್ವೇರಾ, ಕುಂದಾಪುರದ ಜಾನ್ ಮತ್ತು‌ ಅನಿಲಾ ಎಂದು ಗುರುತಿಸಲಾಗಿದೆ. ಕೋಟೇಶ್ವರ ದೇವಸ್ಥಾನ ಬಳಿ ತೀರ್ಥಂಕರರ ಕಂಚಿನ ವಿಗ್ರಹಗಳನ್ನು ಮಾರಾಟಕ್ಕೆ […]

ಪುರಾತನ ಕಾಲದ ಜೈನ ತೀರ್ಥಂಕರರ ವಿಗ್ರಹ ಮಾರಾಟಕ್ಮೆ ಯತ್ನ ► ಐವರ ಬಂಧನ, ಲಕ್ಷಾಂತರ ಮೌಲ್ಯದ ಸ್ವತ್ತು ವಶ Read More »

ಕರಾವಳಿ

►► ಸಂಪಾದಕೀಯ ► ಭಗವಂತನು ಮನುಷ್ಯನಿಗೆ ಹಸಿವು ನೀಡಿರುವುದು ತಪ್ಪೇ…? ► ಅಲ್ಲ ಆತ ಬಡವನಾಗಿ ಹುಟ್ಟಿದ್ದು ತಪ್ಪೇ…?

(ನ್ಯೂಸ್ ಕಡಬ) newskadaba.com ಸಂಪಾದಕೀಯ, ಫೆ.26. ಭಗವಂತನು ಮನುಷ್ಯನಿಗೆ ಹಸಿವು ನೀಡಿರುವುದು ತಪ್ಪೇ…? ಅಲ್ಲ ಆತ ಬಡವನಾಗಿ ಹುಟ್ಟಿದ್ದು ತಪ್ಪೇ…? ಅಲ್ಲ ಆತ ಆದಿವಾಸಿಯಾಗಿ ಹುಟ್ಟಿದ್ದು ತಪ್ಪೇ…? ಅಲ್ಲ ಆತ ಕರಿಯವನಾಗಿ ಹುಟ್ಟಿದ್ದು ತಪ್ಪೇ.‌‌..? ಹೀಗೆಂದು ನಾವು ಅವಲೋಕಿಸುವ ಕಾಲ ಸನ್ನಿಹಿತವಾಗಿದೆ. ವಿದ್ಯಾವಂತರ ರಾಜ್ಯವಾದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಎಂಬಲ್ಲಿ ಫೆಬ್ರವರಿ 22 ರಂದು 30 ರ ಹರೆಯದ ಅದಿವಾಸಿ ಯುವಕನೋರ್ವನನ್ನು ಹಸಿವು ಸಹಿಸಲು ಸಾಧ್ಯವಾಗದೇ ‘ತುತ್ತು ಅನ್ನ ಕದ್ದ’ ಕಾರಣಕ್ಕಾಗಿ ಅಲ್ಲಿನ ವಿಘ್ನ ಸಂತೋಷಿಗಳು

►► ಸಂಪಾದಕೀಯ ► ಭಗವಂತನು ಮನುಷ್ಯನಿಗೆ ಹಸಿವು ನೀಡಿರುವುದು ತಪ್ಪೇ…? ► ಅಲ್ಲ ಆತ ಬಡವನಾಗಿ ಹುಟ್ಟಿದ್ದು ತಪ್ಪೇ…? Read More »

ಕರಾವಳಿ

ರೇಷನ್ ಕಾರ್ಡ್ ಇಲ್ಲದವರಿಗೆ ಸಂತಸದ ಸುದ್ದಿ ► ಫೆಬ್ರವರಿ 26 ರಂದು ಕಡಬದಲ್ಲಿ ‘ಸ್ಥಳದಲ್ಲೇ ಅರ್ಜಿ ಸಲ್ಲಿಸಿ – ರೇಷನ್ ಕಾರ್ಡ್ ವಿತರಣೆ’

(ನ್ಯೂಸ್ ಕಡಬ) newskadaba.com ಕಡಬ, ಫೆ.25. ತಾಲೂಕಿನಲ್ಲಿ ರೇಷನ್ ಕಾರ್ಡ್ ಮಾಡಿಸದೆ ಬಾಕಿ ಇರುವವರು, ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ದೊರೆಯದೇ ಇರುವವರಿಗೆ ಸಂತಸದ ಸುದ್ದಿ. ಫೆಬ್ರವರಿ 26 ಸೋಮವಾರದಂದು ನೂತನ ಕಡಬ ತಾಲೂಕಿನ ಪ್ರಸ್ತಾವಿತ 43 ಗ್ರಾಮಗಳ ಸಾರ್ವಜನಿಕರಿಗೆ ‘ಸ್ಥಳದಲ್ಲೇ ರೇಷನ್ ಕಾರ್ಡ್ ವಿತರಣಾ’ ಕಾರ್ಯಕ್ರಮ ನಡೆಯಲಿದೆ.ಎಸ್ ಸೋಮವಾರ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 04 ಗಂಟೆಯವರೆಗೆ ಕಡಬ ಗ್ರಾಮ ಪಂಚಾಯತ್ ಬಳಿಯಲ್ಲಿ ರೇಷನ್ ಕಾರ್ಡ್ ವಿತರಣಾ ಕಾರ್ಯಕ್ರಮ‌ ನಡೆಯಲಿದ್ದು, ಸಾರ್ವಜನಿಕರು ಇದರ

ರೇಷನ್ ಕಾರ್ಡ್ ಇಲ್ಲದವರಿಗೆ ಸಂತಸದ ಸುದ್ದಿ ► ಫೆಬ್ರವರಿ 26 ರಂದು ಕಡಬದಲ್ಲಿ ‘ಸ್ಥಳದಲ್ಲೇ ಅರ್ಜಿ ಸಲ್ಲಿಸಿ – ರೇಷನ್ ಕಾರ್ಡ್ ವಿತರಣೆ’ Read More »

ಕರಾವಳಿ

ಬಲ್ಯ: ಬೈಕಿಗೆ ಲಾರಿ ಢಿಕ್ಕಿ ► ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಫೆ.25. ಬೈಕ್‌ ಹಾಗೂ ಲಾರಿ‌ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ ಸವಾರನ ಕಾಲಿಗೆ ಗಾಯವಾದ ಘಟನೆ ಶನಿವಾರದಂದು ಕಡಬ ಠಾಣಾ ವ್ಯಾಪ್ತಿಯ ಬಲ್ಯ ಸಮೀಪದ ಪನ್ಯಾಡಿ‌ ಕ್ರಾಸ್ ನಲ್ಲಿ ನಡೆದಿದ್ದು, ಭಾನುವಾರದಂದು ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಬೈಕ್ ಸವಾರ ನೆಲ್ಯಾಡಿ ಗ್ರಾಮದ ಬರೆಮೇಲು ಬೊನ್ಯಸಾಗು ನಿವಾಸಿ ಬಾಲಕೃಷ್ಣ (42) ಎಂಬವರ ಕಾಲಿಗೆ ಬಲವಾದ ಗಾಯಗಳಾಗಿದ್ದು, ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಾಲಕೃಷ್ಣರವರು ನೀಡಿದ ದೂರಿನಂತೆ ಲಾರಿ ಚಾಲಕನ ವಿರುದ್ಧ

ಬಲ್ಯ: ಬೈಕಿಗೆ ಲಾರಿ ಢಿಕ್ಕಿ ► ಬೈಕ್ ಸವಾರನಿಗೆ ಗಾಯ Read More »

ಕರಾವಳಿ

ಬದುಕಿನೊಂದಿಗೆ ಬಡಿದಾಡಿದ ಹಳ್ಳಿಮನೆ ರೊಟ್ಟೀಸ್ ನ ಶಿಲ್ಪಾ ಇದೀಗ ಮಹೀಂದ್ರಾ ಸಂಸ್ಥೆಯ ‘ಮಹಿಳಾ ಸಾಧಕಿ’ ► ಹಳ್ಳಿಮನೆ ರೊಟ್ಟಿಯ ಆಹಾರ ಸವಿಯಲು ಮಂಗಳೂರಿಗೆ ಬರಲಿದ್ದಾರೆ ಕಂಪೆನಿಯ ಸಿಇಒ ಆನಂದ್ ಮಹೀಂದ್ರಾ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.25. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ಕೊಡಮಾಡುವ ಪ್ರಸಕ್ತ ಸಾಲಿನ ಮಹಿಳಾ ಸಾಧಕಿ ಪುರಸ್ಕಾರಕ್ಕೆ ಮಂಗಳೂರಿನ ಹಳ್ಳಿ ಮನೆ ರೊಟ್ಟೀಸ್ ಮಾಲಕಿ ಶಿಲ್ಪಾ ಅವರು ಆಯ್ಕೆಯಾಗಿದ್ದಾರೆ. ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 16 ಮಹಿಳೆಯರ ಪೈಕಿ ಕರಾವಳಿಯ ಹಳ್ಳಿ ಮನೆ ರೊಟ್ಟೀಸ್ ನ ಶಿಲ್ಪಾ ಓರ್ವರಾಗಿದ್ದಾರೆ. ಮಾರ್ಚ್ 7 ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ‌ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಶಿಲ್ಪಾ ಅವರಿಗೆ ದೆಹಲಿ ಪ್ರಯಾಣದ ವಿಮಾನ ಟಿಕೆಟ್ ಹಾಗೂ ವಸತಿ ವ್ಯವಸ್ಥೆಯನ್ನು

ಬದುಕಿನೊಂದಿಗೆ ಬಡಿದಾಡಿದ ಹಳ್ಳಿಮನೆ ರೊಟ್ಟೀಸ್ ನ ಶಿಲ್ಪಾ ಇದೀಗ ಮಹೀಂದ್ರಾ ಸಂಸ್ಥೆಯ ‘ಮಹಿಳಾ ಸಾಧಕಿ’ ► ಹಳ್ಳಿಮನೆ ರೊಟ್ಟಿಯ ಆಹಾರ ಸವಿಯಲು ಮಂಗಳೂರಿಗೆ ಬರಲಿದ್ದಾರೆ ಕಂಪೆನಿಯ ಸಿಇಒ ಆನಂದ್ ಮಹೀಂದ್ರಾ Read More »

ಕರಾವಳಿ

ಕಳೆದ 30 ವರ್ಷಗಳಿಂದ ‘ಡಾಮರೀಕರಣ ಭಾಗ್ಯ’ ಕಾಣದ ಮರ್ಧಾಳ – ಕೆರ್ಮಾಯಿ ಸಂಪರ್ಕ ರಸ್ತೆ ► ಚುನಾವಣೆ ಬಹಿಷ್ಕಾರದತ್ತ ಊರವರ ಚಿತ್ತ

(ನ್ಯೂಸ್ ಕಡಬ) newskadaba.com ಕಡಬ, ಫೆ.25. ಇಲ್ಲಿನ ಮರ್ಧಾಳದಿಂದ ಬಜಕೆರೆಯ ಮೂಲಕ ಕೋಡಿಂಬಾಳವನ್ನು ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಂಟ್ರ, 102 ನೆಕ್ಕಿಲಾಡಿ ಮತ್ತು ಐತ್ತೂರು ಸೇರಿದಂತೆ 3 ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದಾರೆ. ಸುಮಾರು 1000 ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕವಿರುವ ಈ ರಸ್ತೆಯ ಮೂಲಕವೇ ಬಜಕೆರೆ ರೈಲ್ವೇ ಸ್ಟೇಷನ್, ಕೆರ್ಮಾಯಿ ಸರಕಾರಿ ಪ್ರಾಥಮಿಕ ಶಾಲೆ, ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ

ಕಳೆದ 30 ವರ್ಷಗಳಿಂದ ‘ಡಾಮರೀಕರಣ ಭಾಗ್ಯ’ ಕಾಣದ ಮರ್ಧಾಳ – ಕೆರ್ಮಾಯಿ ಸಂಪರ್ಕ ರಸ್ತೆ ► ಚುನಾವಣೆ ಬಹಿಷ್ಕಾರದತ್ತ ಊರವರ ಚಿತ್ತ Read More »

ಕರಾವಳಿ

ಗೋಳಿತ್ತಡಿ: ಸ್ಕೂಟರ್ ಗೆ ಕಾರು‌ ಢಿಕ್ಕಿ ► ಸ್ಕೂಟರ್ ಸವಾರೆ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಫೆ.25. ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರೆ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಳಿತ್ತಡಿ ಎಂಬಲ್ಲಿ ಭಾನುವಾರದಂದು ನಡೆದಿದೆ. ಗಾಯಾಳುವನ್ನು ಸ್ಕೂಟರ್ ಸವಾರೆ ಮಂಗಳೂರಿನ ಚಾನೆಲೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಯಿಲ ಗ್ರಾಮದ ಕೊಲ್ಯ ನಿವಾಸಿ ಸೌಮ್ಯ ಎಂದು ಗುರುತಿಸಲಾಗಿದೆ. ಈಕೆ ತನ್ನ ಸ್ಕೂಟಿಯಲ್ಲಿ ಮುಖ್ಯ ರಸ್ತೆಗೆ ಬರುತ್ತಿದ್ದಾಗ ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರು ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ

ಗೋಳಿತ್ತಡಿ: ಸ್ಕೂಟರ್ ಗೆ ಕಾರು‌ ಢಿಕ್ಕಿ ► ಸ್ಕೂಟರ್ ಸವಾರೆ ಗಂಭೀರ Read More »

ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾದ ಬಂಟ್ಸ್ ಹಾಸ್ಟೆಲ್ ರಸ್ತೆ ► ಅಪಾಯಕಾರಿ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿದ ‘ಪಬ್ಲಿಕ್ ಹೀರೋ’ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.25. ನಗರದ ಬಂಟ್ಸ್‌ ಹಾಸ್ಟೆಲ್‌ ವೃತ್ತದ ಬಳಿ ಕಾಂಕ್ರೀಟ್‌ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿದ ಟ್ರಾಫಿಕ್‌ ಪೊಲೀಸ್‌ ರೇವಣ ಸಿದ್ದಪ್ಪರವರಿಗೆ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರದಂದು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಅವರು ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಅತೀ ಹೆಚ್ಚು ವಾಹನದ ಓಡಾಟದಿಂದಾಗಿ ಬಂಟ್ಸ್‌ ಹಾಸ್ಟೆಲ್‌ ಸರ್ಕಲ್‌ನಿಂದ ಮಲ್ಲಿಕಟ್ಟೆ ಕಡೆಗೆ ತೆರಳುವ ಕಾಂಕ್ರೀಟ್‌ ರಸ್ತೆಯಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಪಟ್ಟಿ ಸವೆದ ಪರಿಣಾಮ ಕಳೆದ ಕೆಲವು ದಿನಗಳ ಹಿಂದೆ ಮೇಲೆ ಬಂದಿತ್ತು. ಇದನ್ನು ಸಾರ್ವಜನಿಕರು

ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾದ ಬಂಟ್ಸ್ ಹಾಸ್ಟೆಲ್ ರಸ್ತೆ ► ಅಪಾಯಕಾರಿ ಕಬ್ಬಿಣದ ಪಟ್ಟಿಯನ್ನು ಸರಿಪಡಿಸಿದ ‘ಪಬ್ಲಿಕ್ ಹೀರೋ’ ಟ್ರಾಫಿಕ್ ಪೊಲೀಸ್ ರೇವಣ ಸಿದ್ದಪ್ಪ Read More »

ಕರಾವಳಿ

‘ರೀಚಾರ್ಜ್ ಮಾಡಿ – ವಿದ್ಯುತ್ ಬಳಸಿ’ ► ಬುದ್ಧಿವಂತರ ಜಿಲ್ಲೆ ಮಂಗಳೂರಿಗೆ ಬರುತ್ತಿದೆ ಹೊಸ ‘ಪ್ರಿ-ಪೇಯ್ಡ್’ ಕರೆಂಟ್ ಯೋಜನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.25. ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಬುದ್ಧಿವಂತರ ಜಿಲ್ಲೆ ಮಂಗಳೂರಿನಲ್ಲಿ ಹೊಸದೊಂದು ಸ್ಮಾರ್ಟ್ ಯೋಜನೆಯನ್ನು ಜಾರಿಗೆ ತರಲು ಮೆಸ್ಕಾಂ ಇಲಾಖೆ ಸಿದ್ಧವಾಗಿದೆ. ಮೊಬೈಲ್, ಡಿಟಿಎಚ್ ಸೇವೆಗಳಿಗೆ ರಿಚಾರ್ಜ್ ಮಾಡಿದಂತೆ ಇನ್ಮುಂದೆ ವಿದ್ಯುತ್ ಪಡೆಯಬೇಕಾದಲ್ಲಿ ಮೊದಲೇ ಪ್ರಿಪೈಡ್ ಮಾಡಿ ನಂತರ ವಿದ್ಯುತ್ ಬಳಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಹಕರು ಬಿಲ್ ಕಟ್ಟದೇ ಇರುವಂತಹ ಕಿರಿಕಿರಿಯನ್ನು ತಪ್ಪಿಸಲು ಮೆಸ್ಕಾಂ ಇಲಾಖೆಯು ಹೊಸದೊಂದು ಯೋಜನೆಯನ್ನು ಪರಿಚಯಿಸುತ್ತಿದ್ದು, ಪ್ರಾಯೋಗಿಕವಾಗಿ ಮಂಗಳೂರಿನಲ್ಲಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ನಾವು ರೀಚಾರ್ಜ್ ಮಾಡಿಕೊಂಡ

‘ರೀಚಾರ್ಜ್ ಮಾಡಿ – ವಿದ್ಯುತ್ ಬಳಸಿ’ ► ಬುದ್ಧಿವಂತರ ಜಿಲ್ಲೆ ಮಂಗಳೂರಿಗೆ ಬರುತ್ತಿದೆ ಹೊಸ ‘ಪ್ರಿ-ಪೇಯ್ಡ್’ ಕರೆಂಟ್ ಯೋಜನೆ Read More »

ಕರಾವಳಿ

ಮಂಗಳೂರು: ಫ್ಲಾಟ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ► ಮಹಿಳಾ ಪಿಂಪ್ ಸೇರಿ ಇಬ್ಬರ ಬಂಧನ, ಯುವತಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.24. ನಗರದ ಫ್ಲ್ಯಾಟೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಗಳನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಯುವತಿಯೋರ್ವಳನ್ನು ರಕ್ಷಿಸಿದ ಘಟನೆ ಶನಿವಾರದಂದು ನಡೆದಿದೆ. ಬಂಧಿತರನ್ನು ಅಡ್ಯಾರ್ ಪದವು ನಿವಾಸಿ ರಿಯಾಸ್ ಅಹಮ್ಮದ್ (35) ಮತ್ತು ಯುವತಿಯರನ್ನು ಫ್ಲಾಟ್ ನಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸುತ್ತಿದ್ದ ಮಹಿಳಾ ಪಿಂಪ್ ಎಂದು ಗುರುತಿಸಲಾಗಿದೆ. ಇವರು ನಗರದ ಕೊಡಿಯಾಲ್ ಬೈಲ್ ನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ

ಮಂಗಳೂರು: ಫ್ಲಾಟ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ► ಮಹಿಳಾ ಪಿಂಪ್ ಸೇರಿ ಇಬ್ಬರ ಬಂಧನ, ಯುವತಿಯ ರಕ್ಷಣೆ Read More »

ಕರಾವಳಿ
Scroll to Top