ನೂಜಿಬಾಳ್ತಿಲದಲ್ಲಿ ಬೀದಿ ನಾಟಕ
(ನ್ಯೂಸ್ ಕಡಬ) newskadaba.com ಕಡಬ ಮಾ.28. ಜಿಲ್ಲಾ ಆರೋಗ್ಯ ಇಲಾಖಾ ಸಹಯೋಗದೊಂದಿಗೆ ನೂಜಿಬಾಳ್ತಿಲ ಗ್ರಾ.ಪಂ. ನೇತೃತ್ವದಲ್ಲಿ ಆರೋಗ್ಯ ಅರಿವಿನ ಸಿಂಚನ ಕಾರ್ಯಕ್ರಮವನ್ನು ಬೀದಿ ನಾಟಕದ ಮೂಲಕ ನೂಜಿಬಾಳ್ತಿಲ ಗ್ರಾ.ಪಂ.ವಠಾರದಲ್ಲಿ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆನಂದ ಎ, ಗ್ರಾ.ಪಂ.ಸದಸ್ಯೆ ರಜಿತಾ ಪದ್ಮನಾಭ, ಕಲ್ಲುಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ ಮೊದಲಾದವರು ಉಪಸ್ಥಿತರಿದ್ದರು. ಕಿರಿಯ ಆರೋಗ್ಯ ಸಹಾಯಕಿ ದಯಾಕಿರಣ ಸ್ವಾಗತಿಸಿ, ವಂದಿಸಿದರು.
ನೂಜಿಬಾಳ್ತಿಲದಲ್ಲಿ ಬೀದಿ ನಾಟಕ Read More »
ಕರಾವಳಿ









