ಕರಾವಳಿ

ನೂಜಿಬಾಳ್ತಿಲದಲ್ಲಿ ಬೀದಿ ನಾಟಕ

(ನ್ಯೂಸ್ ಕಡಬ) newskadaba.com ಕಡಬ ಮಾ.28. ಜಿಲ್ಲಾ ಆರೋಗ್ಯ ಇಲಾಖಾ ಸಹಯೋಗದೊಂದಿಗೆ ನೂಜಿಬಾಳ್ತಿಲ ಗ್ರಾ.ಪಂ. ನೇತೃತ್ವದಲ್ಲಿ ಆರೋಗ್ಯ ಅರಿವಿನ ಸಿಂಚನ ಕಾರ್ಯಕ್ರಮವನ್ನು ಬೀದಿ ನಾಟಕದ ಮೂಲಕ ನೂಜಿಬಾಳ್ತಿಲ ಗ್ರಾ.ಪಂ.ವಠಾರದಲ್ಲಿ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆನಂದ ಎ, ಗ್ರಾ.ಪಂ.ಸದಸ್ಯೆ ರಜಿತಾ ಪದ್ಮನಾಭ, ಕಲ್ಲುಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ ಮೊದಲಾದವರು ಉಪಸ್ಥಿತರಿದ್ದರು. ಕಿರಿಯ ಆರೋಗ್ಯ ಸಹಾಯಕಿ ದಯಾಕಿರಣ ಸ್ವಾಗತಿಸಿ, ವಂದಿಸಿದರು.

ನೂಜಿಬಾಳ್ತಿಲದಲ್ಲಿ ಬೀದಿ ನಾಟಕ Read More »

ಕರಾವಳಿ

ಕಡಬದಲ್ಲಿ ಏಕಾಹ ಭಜನೋತ್ಸವ ► ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿ: ಸುಬ್ರಹ್ಮಣ್ಯ ಶ್ರೀ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಹಿಂದಿನ ಕಾಲದಲ್ಲಿ ದೇವರನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸು, ಯಾಗ ಯಜ್ಞಾದಿಗಳನ್ನು ಮಾಡಬೇಕಿತ್ತು. ಆದರೆ ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಸಂಕೀರ್ತನೆ ಸುಲಭಮಾರ್ಗ. ಅದರಲ್ಲಿಯೂ ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿಯಾಗಲು ಸಾಧ್ಯ ಎಂದು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 57ನೇ ವರ್ಷದ ಏಕಾಹ ಭಜನೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಭಜನೆ ಎಂಬುದು ದೇವರನ್ನು ಸಂತೃಪ್ತಿ ಪಡಿಸಲು ಇರುವ ಅತ್ಯಂತ

ಕಡಬದಲ್ಲಿ ಏಕಾಹ ಭಜನೋತ್ಸವ ► ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿ: ಸುಬ್ರಹ್ಮಣ್ಯ ಶ್ರೀ Read More »

ಕರಾವಳಿ

ಕಾಣಿಯೂರು ಕಲೆಂಜೋಡಿ ದಲಿತ ಕಾಲೋನಿ ರಸ್ತೆಗೆ ಮಾ.30ರೊಳಗೆ ಕಾಂಕ್ರೀಟಿಕರಣಕ್ಕೆ ಭರವಸೆ ► ಎ.2ರ ಪ್ರತಿಭಟನೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಾಣಿಯೂರು ಗ್ರಾಮದ ಕಲೆಂಜೋಡಿ ದಲಿತ ಕಾಲೋನಿ ರಸ್ತೆಗೆ ಮಂಜೂರಾದ ಅನುದಾನವನ್ನು ಬದಲಾಯಿಸಿದ ಬಗ್ಗೆ ಪ್ರತಿಭಟನೆಗೆ ಮುಂದಾದ ದಲಿತ ಮುಖಂಡರ ಬೇಡಿಕೆಗೆ ಸ್ಪಂಧಿಸಿದ ಪಿಡಬ್ಲ್ಯುಡಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಧಿಕಾರಿ ಗೋಕುಲದಾಸ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಮಾಡಿಸಿಕೊಡಲಾಗುವುದೆಂದು ಭರವಸೆ ನೀಡಿದರು. ಕಾಣಿಯೂರು ಗ್ರಾಮ ವ್ಯಾಪ್ತಿಯ ಕಲೆಂಜೋಡಿ ದಲಿತ ಕಾಲೋನಿಗೆ 2017-18ರ ಶಾಸಕರ ನಿಧಿಯಿಂದ ಬಿಡುಗಡೆಯಾದ ಕಾಂಕ್ರೀಟ್ ರಸ್ತೆಯನ್ನು ಅಕ್ರಮವಾಗಿ ದಲಿತ ಕಾಲೋನಿಗೆ ಕಾಂಕ್ರೀಟ್ ರಸ್ತೆಯನ್ನು ಮಾಡದೆ ಸ್ಥಳೀಯ ಮೇಲ್ವರ್ಗದ ನಿವಾಸಿಗಳ ರಸ್ತೆಗೆ

ಕಾಣಿಯೂರು ಕಲೆಂಜೋಡಿ ದಲಿತ ಕಾಲೋನಿ ರಸ್ತೆಗೆ ಮಾ.30ರೊಳಗೆ ಕಾಂಕ್ರೀಟಿಕರಣಕ್ಕೆ ಭರವಸೆ ► ಎ.2ರ ಪ್ರತಿಭಟನೆ ಮುಂದೂಡಿಕೆ Read More »

ಕರಾವಳಿ

ಕಡಬ: ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪುಜೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆಯ 145 ಮೀಟರ್ ಕಾಂಕ್ರಿಟ್ಕರಣ ಕಾಮಗಾರಿಗೆ ಗುದ್ದಲಿಪುಜೆ ಸೋಮವಾರ ನಡೆಯಿತು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಗುದ್ದಲಿಪುಜೆ ನೆರವೇರಸಿ ಮಾತನಾಡಿ, ಸುಳ್ಯ ಶಾಸಕರ ಸುಮಾರು 5 ಲಕ್ಷ ರೂ ಅನುದಾನದಲ್ಲಿ ರಸ್ತೆ ಕಾಂಕ್ರಿಟಿಕರಣ ನಡೆಸಲಾಗುವುದು ಎಂದರು. ಈ ಸಂದರ್ಭ ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಕಡಬ ಗ್ರಾಮ ಪಂಚಾಯಿತಿ ಸದಸ್ಯ ಆದಂ ಕುಂಡೋಳಿ, ಕಡಬ ಸಿ ಎ

ಕಡಬ: ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪುಜೆ Read More »

ಕರಾವಳಿ

ಹಳೆನೇರಿಂಕಿ ಕುಡಿಯುವ ನೀರಿನ ಘಟಕಕ್ಕೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಹಳೆನೇರಿಂಕಿ ಗ್ರಾಮದ ಕಲ್ಲೇರಿ ದಲಿತ ಕಾಲೋನಿಯಲ್ಲಿ ಕುಡಿಯುವ ನೀರಿನ ಘಟಕಕ್ಕೆ ಗುದ್ದಲಿ ಪುಜೆ ಸೋಮವಾರ ನಡೆಯಿತು. ತಾಲೂಕು ಪಂಚಾಯಿತಿ ಸದಸ್ಯೆ ತೇಜಶ್ವಿನಿ ಕಟ್ಟಪುಣಿ ಮಾತನಾಡಿ, ಸುಳ್ಯ ಶಾಸಕ ಎಸ್ ಅಂಗಾರ 2.30 ಲಕ್ಷ , ತಾಲೂಕು ಪಂಚಾಯಿತಿಯ 85 ಸಾವಿರ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿಯ 1ಲಕ್ಷದ 60 ಸಾವಿರ ರೂ ಅನುದಾನದಲ್ಲಿ ಕುಡಿಯುವ ನೀರಿನ ಘಟಕಕ್ಕೆ ಸಂಬಂದಪಟ್ಟಂತೆ ಕೊಳವೆಬಾವಿ, ಪಂಪ್ , ನೀರಿನ ಟ್ಯಾಂಕ್, ಪೈಪು ಅಳವಡಿಕೆಗೆ ಮಾಡಲಾಗುವುದು. ಕಾಮಗಾರಿ ಶೀಘ್ರದಲ್ಲಿ

ಹಳೆನೇರಿಂಕಿ ಕುಡಿಯುವ ನೀರಿನ ಘಟಕಕ್ಕೆ ಶಂಕುಸ್ಥಾಪನೆ Read More »

ಕರಾವಳಿ

ಅರಿಯಡ್ಕ: ಪೊಲೀಸರೆಂದು ಹೇಳಿ ಮನೆಗೆ ಬಂದ ಅಪರಿಚಿತರು ► ಠಾಣೆಗೆ ಬರಬೇಕೆಂದು ನಂಬಿಸಿ ವ್ಯಕ್ತಿಯ ಅಪಹರಣ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.27. ಪೊಲೀಸರೆಂದು ನಂಬಿಸಿ ವ್ಯಕ್ತಿಯೋರ್ವರನ್ನು ಅಪಹರಿಸಿದ ಘಟನೆ ತಾಲೂಕಿನ ಅರಿಯಡ್ಕ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕುತ್ಯಾಡಿ ಶ್ರೀಧರ ಎಂಬವರ ಮನೆಗೆ ಸೋಮವಾರ ರಾತ್ರಿ ಪೊಲೀಸ್ ಡ್ರೆಸ್ ಧರಿಸಿ ಇಬ್ಬರು ಬಂದಿದ್ದು, ಬಂದವರು ಸಂಪ್ಯ ಪೊಲೀಸ್ ಠಾಣೆಯಿಂದ ಬಂದಿರುತ್ತೇವೆ ನೀವು ಠಾಣೆಗೆ ಬನ್ನಿ ಎಂದು ತುಳು ಭಾಷೆಯಲ್ಲಿ ಹೇಳಿ ಶ್ರೀಧರರವರನ್ನು ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಈ ಬಗ್ಗೆ ಮಂಗಳವಾರದಂದು ಸಂಪ್ಯ ಠಾಣೆಯಲ್ಲಿ ಬಂದು ವಿಚಾರಿಸಿದಾಗ ಠಾಣೆಗೆ ಕರೆದುಕೊಂಡು

ಅರಿಯಡ್ಕ: ಪೊಲೀಸರೆಂದು ಹೇಳಿ ಮನೆಗೆ ಬಂದ ಅಪರಿಚಿತರು ► ಠಾಣೆಗೆ ಬರಬೇಕೆಂದು ನಂಬಿಸಿ ವ್ಯಕ್ತಿಯ ಅಪಹರಣ Read More »

ಕರಾವಳಿ

ಉಪ್ಪಿನಂಗಡಿ: ಹಾಡುಹಗಲೇ ವಿಷ ಸೇವಿಸಿ ಆತ್ಮಹತ್ಯೆಗೈದ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.27. ಇಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬೆಳ್ತಂಗಡಿ ತಾಲೂಕಿನ ರೆಖ್ಯ ನಿವಾಸಿ ಜಾಯ್ ಥಾಮಸ್ (50) ಎಂದು ಗುರುತಿಸಲಾಗಿದೆ. ಅವರು ಮಂಗಳವಾರದಂದು ಉಪ್ಪಿನಂಗಡಿ ಪೇಟೆಯಿಂದ ವಿಷ ಪದಾರ್ಥ ಖರೀದಿಸಿ ಉಪ್ಪಿನಂಗಡಿಯ ಆದಿತ್ಯ ಹೋಟೆಲ್ ಸಮೀಪ ಸೇವಿಸಿ ಕುಸಿದು ಬಿದ್ದಿದ್ದಾರೆನ್ನಲಾಗಿದೆ. ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ

ಉಪ್ಪಿನಂಗಡಿ: ಹಾಡುಹಗಲೇ ವಿಷ ಸೇವಿಸಿ ಆತ್ಮಹತ್ಯೆಗೈದ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್ Read More »

ಕರಾವಳಿ

ಬೆಳಂದೂರು ಅಬೀರ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬೀರ ಅಂಗನವಾಡಿ ಕೇಂದ್ರದಲ್ಲಿ ನೂತನ ಬಾಲವಿಕಾಸ ಸಮಿತಿಯನ್ನು ರಚನೆ ಮಾಡಲಾಯಿತು. ನೂತನ ಬಾಲವಿಕಾಸ ಸಮಿತಿಯ ಅಧ್ಯಕ್ಷರಾಗಿ ವಿಮಲ ಎನ್.ಎಮ್. ರವರು ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ್ ಪ್ರತಿನಿಧಿಯಾಗಿ ಪಂಚಾಯತ್ ಸದಸ್ಯರಾದ ಜಯಂತ ಅಬೀರ, ಶಾಲಾ ಮುಖ್ಯೋಪಾಧ್ಯಾಯರಾದ ಪುಂಡಲೀಕ ಪೂಜಾರ, ಆಶಾ ಕಾರ್ಯಕರ್ತೆ ಕುಸುಮ, ಅಂಗನವಾಡಿ ವ್ಯಾಪ್ತಿಗೆ ಬರುವ ಪ್ರಾಯಪೂರ್ವ ಬಾಲಕಿ ಮೋಹಿನಿ, ಮಕ್ಕಳ ತಾಯಂದಿರ ಪರವಾಗಿ ಜಯಶ್ರೀ ಮತ್ತು ಸೀತಾ, ಅಂಗನವಾಡಿ ಫಲಾನುಭವಿಯ ತಂದೆ ಗಿರಿಯಪ್ಪ ಮಾದೋಡಿ,

ಬೆಳಂದೂರು ಅಬೀರ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ರಚನೆ Read More »

ಕರಾವಳಿ

ಬೆಳಂದೂರು ಗ್ರಾಮದ ಬೂತ್ 2ರ ಬಿಜೆಪಿ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಬೆಳಂದೂರು ಗ್ರಾಮದ ಬೂತ್ 2ರ ಬಿಜೆಪಿ  ಸಮಿತಿಯ ಸಭೆಯು ಪ್ರತಿ 10 ದಿನಗಳಿಗೊಮ್ಮೆ ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ನಡೆಯುತ್ತಿದ್ದು ಈ ಬಾರಿಯ ಸಭೆಯು ಬಿಜೆಪಿ ಪಂಚಾಯತ್ ಸಮಿತಿಯ ಮಹಿಳಾ ಮೊರ್ಛದ ಕಾರ್ಯದರ್ಶಿಯಾದ ಚಂಪಾ ಕುಶಾಲಪ್ಪ ಗೌಡರ ಮನೆಯಲ್ಲಿ ಬೂತ್ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ನೀರಜರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿ ಪೇಜ್ ಪ್ರಮುಖರ ನೇಮಕ ಮಾಡಲಾಯಿತು. ಚುನಾವಣಾ ಪೂರ್ವ ಚಟುವಟಿಕೆಯ ಬಗ್ಗೆ ಚರ್ಚೆ ಮಾಡಲಾಯಿತು. ಸಭೆಯಲ್ಲಿ ದಕ್ಷಿಣ

ಬೆಳಂದೂರು ಗ್ರಾಮದ ಬೂತ್ 2ರ ಬಿಜೆಪಿ ಸಮಿತಿ ಸಭೆ Read More »

ಕರಾವಳಿ

ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಲ್ಲಿ 2 ಲಕ್ಷ ಮಂಜೂರು

(ನ್ಯೂಸ್ ಕಡಬ) newskadaba.com ಸವಣೂರು, ಮಾ.23. ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಲ್ಲಿ ದಿ.ಶೀನಪ್ಪ ಗೌಡ ಗಾಳಿಬೆಟ್ಟು ಇವರ ಪತ್ನಿಗೆ 2 ಲಕ್ಷ ಮೊತ್ತದ ಚೆಕ್ ನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಜನರಲ್ ಮೆನೇಜರ್ ಎಸ್.ಎಂ. ಗೋರ್ಬಲ್ ಅವರು ಕಾಣಿಯೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಂ. ಗೋರ್ಬಲ್ ಬ್ಯಾಂಕಿನ ಪ್ರತಿಯೊಬ್ಬ ಗ್ರಾಹಕರು ವರ್ಷಕ್ಕೆ ರೂ.330 ಮತ್ತು ರೂ.12 ರ ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಪ್ರಾದೇಶಿಕ ಪ್ರಬಂಧಕರಾದ

ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಲ್ಲಿ 2 ಲಕ್ಷ ಮಂಜೂರು Read More »

ಕರಾವಳಿ
Scroll to Top