ಕರಾವಳಿ

ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅನೇಕ ಕಡೆಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.ಜೆಪ್ಪು ಕುಡ್ಪಾಡಿ, ಕಾಟಿಪಳ್ಳ 2ನೇ ಬ್ಲಾಕ್, ಬಿಜೈ. ಪಣಂಬೂರು/ಬೈಕಂಪಾಡಿ ಉರ್ವಸ್ಟೋರ್/ಕೋಡಿಕಲ್/ಕೊಟ್ಟಾರ, ಯೆಯ್ಯಾಡಿ, ಬಿರಾವು, ಪಡುಪಣಂಬೂರು,. ಸೋಮೇಶ್ವರ ಉಚ್ಚಿಲ, ಬೆಳ್ಮ,, ಮೂಡು ಮಾರ್ನಾಡು, ಶಿರ್ತಾಡಿ, ಕಿನ್ಯ ಬಂಟ್ವಾಳ ತಾಲೂಕಿನಲ್ಲೂ ಅನೇಕ ಕಡೆಗಳಲ್ಲಿ ಅರ್ಜಿಅಹ್ವಾನಿಸಲಾಗಿದೆ. ಮುರತಗುಂಡಿ, ಹಳೇಗೇಟು, ಪುರಸಭೆ ವ್ಯಾಪ್ತಿಯ ಗೂಡಿನ ಬಳಿ , ಫರಂಗಿಪೇಟೆ, ಮೇರಮಜಲು, ಕೊಡ್ಮಣ್ ಬೆಳ್ತಂಗಡಿ ತಾಲೂಕಿನ ಪಿಲಿಗೂಡು, ಮೂಡುಕೋಡಿ, ಆರಂಬೋಡಿ, ರೆಖ್ಯ ಈ […]

ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ Read More »

ಕರಾವಳಿ

ವಿಕೋಪ ನಿರ್ವಹಣೆಗೆ ಅಧಿಕಾರಿಗಳ ತಂಡ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮಕೈಗೊಳ್ಳಲು ನೋಡಲ್ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದೆ.ಜಿಲ್ಲೆಯಾದ್ಯಂತ ಬುಧವಾರದಿಂದ ಮುಂಗಾರು ಮಳೆ ಬಿರುಸು ಪಡೆದಿದ್ದು, ನಗರದ ವಿವಿಧೆಡೆ ಧಾರಾಕಾರ ಮಳೆಯಿಂದಾಗಿ ಮರಗಳು ಬಿದ್ದು ಹಾಗೂ ರಸ್ತೆ ಕಾಮಗಾರಿಗಳಿಂದಾಗಿ ನೀರು ಹರಿಯುವಲ್ಲಿ ತೊಂದರೆಯಾಗಿತ್ತು. ಕಳೆದ ಸಾಲೀನ ಮಳೆಯ ಅನುಭವವನ್ನು ಹಿನ್ನಲೆಯಾಗಿರಿಸಿ ಜಿಲ್ಲಾಡಳಿತ ನೋಡಲ್ ಅಧಿಕಾರಿಗಳನ್ನೊಳಗೊಂಡಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕೈಗೊಂಡ ಕ್ರಮಗಳಿಂದಾಗಿ ಸಮಸ್ಯೆ ವರದಿಯಾದ ತಕ್ಷಣವೇ ಪರಿಹರಿಸಲು ಕ್ರಮಕೈಗೊಳ್ಳಲಾಗಿದೆ. ಕೃತಕ ನೆರೆಗೆ ಕಾರಣಗಳನ್ನು

ವಿಕೋಪ ನಿರ್ವಹಣೆಗೆ ಅಧಿಕಾರಿಗಳ ತಂಡ ನೇಮಕ Read More »

ಕರಾವಳಿ

ನೆಲ್ಯಾಡಿ: ಸಿಡಿಲು ಬಡಿದು ಯುವತಿಗೆ ಗಾಯ ➤ ಮೂರು ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.14. ಸಿಡಿಲು ಬಡಿದು ಯುವತಿಯೋರ್ವಳು ಗಾಯಗೊಂಡು ಮೂರು ಮನೆಗಳಿಗೆ ಹಾನಿಯಾದ ಘಟನೆ ಗೋಳಿತೊಟ್ಟು ಸಮೀಪದ ಮರ್ಲಾಪು ಎಂಬಲ್ಲಿ ಗುರುವಾರದಂದು ನಡೆದಿದೆ. ಮರ್ಲಾಪು ನಿವಾಸಿಗಳಾದ ಆದಮ್, ಅಬ್ದುಲ್ ಲತೀಫ್, ಆಸಿಯಮ್ಮ ಎಂಬವರ ಮನೆಗೆ ಸಿಡಿಲು ಬಡಿದಿದ್ದು ಮನೆ ಹಾನಿಗೊಂಡಿದೆ. ಆಸಿಯಮ್ಮ ಎಂಬವರ ಪುತ್ರಿ ರಹೀಮತ್ ಎಂಬವರು ಗಾಯಗೊಂಡು ನೆಲ್ಯಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲ್ಯಾಡಿ: ಸಿಡಿಲು ಬಡಿದು ಯುವತಿಗೆ ಗಾಯ ➤ ಮೂರು ಮನೆಗಳಿಗೆ ಹಾನಿ Read More »

ಕರಾವಳಿ

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.13. ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರದಂದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರಿಯಡ್ಕ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಕೂವೆಚ್ಚಾರು ನಿವಾಸಿ ಮೋನಪ್ಪ ಗೌಡರ ಪುತ್ರಿ ತೇಜ(18) ಎಂದು ಗುರುತಿಸಲಾಗಿದೆ. ತೇಜ ಇಂದು ಬೆಳಿಗ್ಗೆ ಪೆರಿಯಡ್ಕದ ಹಾಲಿನ ಸೊಸೈಟಿಗೆ ಹಾಲು ತೆಗೆದುಕೊಂಡು ಹೋಗಿದ್ದು, ವಾಪಸ್ ಮನೆಗೆ ಬಾರದೆ ಇದ್ದ ಕಾರಣ ಮನೆಯವರು ಹುಡುಕಾಡಿದಾಗ ಕುಂಟಿನಿ ಎಂಬಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಮರವೊಂದಕ್ಕೆ ನೇಣು ಬಿಗಿದು

ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ

ರಾಮಕುಂಜ: ಶಾಲಾ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಖಾಸಗಿ ಶಾಲಾ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ರಾಮಕುಂಜದಲ್ಲಿ ಸಂಭವಿಸಿದೆ. ಗಾಯಾಳು ಸವಾರನನ್ನು ಕೊೈಲ ಗ್ರಾಮದ ನೆಲ್ಯೊಟ್ಟು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ, ಇರ್ಫಾನ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಇರ್ಫಾನ್ ಇತ್ತೀಚೆಗೆ ಊರಿಗೆ ಬಂದಿದ್ದು, ಇಂದು ಬೆಂಗಳೂರಿಗೆ ಹೋಗುವವರಿದ್ದರು. ಗುರುವಾರ ಸಂಜೆ ತನ್ನ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿಗೆ ತೆರಳಿದ್ದು, ಮನೆಗೆ ಹಿಂತಿರುಗುತ್ತಿದ್ದಾಗ ರಾಮಕುಂಜ

ರಾಮಕುಂಜ: ಶಾಲಾ ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರ ಗಂಭೀರ Read More »

ಕರಾವಳಿ

ಆರಂಭದ ಮಳೆಗೆ ರಸ್ತೆಗಳೆಲ್ಲ ಕೆಸರುಮಯ➤ವಾಹನ ಸಂಚಾರ ಕಷ್ಟಕರ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.13. ಈ ವರ್ಷದ ಮಳೆಗಾಲ ಆರಂಭಗೊಂಡಿದ್ದು, ಕಳೆದ ಒಂದೆರಡು ದಿನದಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಕಡಬ ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆಗಳು ಕೆಸರುಮಯಗೊಂಡು ವಾಹನ ಸವಾರರು ಸಂಕಷ್ಟಪಡುತ್ತಿದ್ದಾರೆ. ಕಡಬ-ಕಲ್ಲುಗುಡ್ಡೆ ಸಂಪರ್ಕ ಕಲ್ಪಿಸುವ ರಸ್ತೆಯ ಕಡಬ ಹಳೆಸ್ಟೇಷನ್‍ನಿಂದ ಕಾಯರಡ್ಕ ವರೆಗೆ ಅಲ್ಲಲ್ಲಿ ರಸ್ತೆಗಳಲ್ಲಿ ಹೊಂಡ ಗುಂಡಿಗಳು ನಿರ್ಮಾಣಗೊಂಡು, ನೀರು ನಿಂತು ಕೆಸರುಮಯಗೊಂಡಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದು, ಅಪಾಯದ ಸ್ಥಿತಿ ತಂದೊಡ್ಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಸ್ತೆಯಲ್ಲಿ ಉಂಟಾಗಿರುವ

ಆರಂಭದ ಮಳೆಗೆ ರಸ್ತೆಗಳೆಲ್ಲ ಕೆಸರುಮಯ➤ವಾಹನ ಸಂಚಾರ ಕಷ್ಟಕರ Read More »

ಕರಾವಳಿ

ಮೂಲವ್ಯಾಧಿಗೆ ಇಲ್ಲಿದೆ ಸೂಕ್ತ ಪರಿಹಾರ

(ನ್ಯೂಸ್ ಕಡಬ) newskadaba.com. ಆರೋಗ್ಯ ಮಾಹಿತಿ:ಪದೇಪದೆ ಕಾಡುವ ಮಲಬದ್ಧತೆಗೆ ಕಡಿಮೆ ಪ್ರಮಾಣದಲ್ಲಿರುವಾಗ ಮನೆಯಲ್ಲಿಯೇ ಸರಳ ಉಪಾಯಗಳಿಂದ ನಿರ್ವಹಿಸಬಹುದು.ಮಲದ್ವಾರದ ಹೊರಗಡೆ ಅನುಭವಕ್ಕೆ ಬರುತ್ತಿರುವ ಮೂಲವ್ಯಾಧಿ ಗಡ್ಡೆಗೆ ಬೆರಳುಗಳ ಸಹಾಯದಿಂದ ಅಲೋವೆರಾ ಜೆಲ್​ನ್ನು ಪ್ರತಿದಿನ ಮಲವಿಸರ್ಜನೆ ನಂತರ ಹಚ್ಚಬೇಕು. ಹಿಪ್​ಬಾತ್ ಟಬ್​ನಲ್ಲಿ ಉಗುರುಬಿಸಿ ನೀರು ತುಂಬಿಸಿ ಇದಕ್ಕೆ 100 ಮಿ. ಆಪಲ್ ಸಿಡೆರ್ ವಿನೆಗರ್ ಸೇರಿಸಿ ಟಬ್​ನಲ್ಲಿ 20-30 ನಿಮಿಷ ಕುಳಿತುಕೊಳ್ಳುವುದು ಅನುಕೂಲಕರ. 5-6 ಚಮಚ ತ್ರಿಫಲಾ ಪುಡಿಯನ್ನು ಕುದಿಸಿ ಕಷಾಯ ತಯಾರಿಸಿ ಅರ್ಧ ಹಿಪ್ ಬಾತ್ ಟಬ್​ಗೆ ಉಗುರುಬಿಸಿ ನೀರು

ಮೂಲವ್ಯಾಧಿಗೆ ಇಲ್ಲಿದೆ ಸೂಕ್ತ ಪರಿಹಾರ Read More »

ಕರಾವಳಿ

ಕೊಣಾಜೆ: ಖಾಸಗಿ ಬಸ್ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.13. ಖಾಸಗಿ ಬಸ್ ಹಾಗೂ ಸುಝುಕಿ ಜಿಕ್ಸರ್‌ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೋಣಾಜೆ ಸಮೀಪದ ಅಸೈಗೋಳಿ ಎಂಬಲ್ಲಿ ಗುರುವಾರದಂದು ಸಂಭವಿಸಿದೆ. ಮೃತ ಸವಾರನನ್ನು ಪಜೀರ್ ನಿವಾಸಿ ಹರ್ಷಿತ್ ಎಂದು ಗುರುತಿಸಲಾಗಿದೆ. ಸ್ಟೇಟ್ ಬ್ಯಾಂಕ್ ನಿಂದ ಕೊಣಾಜೆ ಮಾರ್ಗವಾಗಿ ವಿಟ್ಲಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಹರ್ಷಿತ್ ಚಲಾಯಿಸುತ್ತಿದ್ದ ಬೈಕ್ ಅಸೈಗೋಳಿ ಸಮೀಪದ ತಿಬ್ಲೆಪದವು ತಿರುವಿನಲ್ಲಿ ಪರಸ್ಪರ ಢಿಕ್ಕಿಯಾಗಿ ಈ ದುರ್ಘಟನೆ

ಕೊಣಾಜೆ: ಖಾಸಗಿ ಬಸ್ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಕಡಬ: ಕೆಎಸ್ಸಾರ್ಟಿಸಿ ಬಸ್ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯದಲ್ಲಿ ಸಂಭವಿಸಿದೆ. ಮೃತ ಸವಾರನನ್ನು ಬಲ್ಯ ಮದ್ರಾಡಿ ನಿವಾಸಿ ರಾಮಚಂದ್ರ ಗೌಡ ಎಂಬವರ ಪುತ್ರ ಮೋಕ್ಷಿತ್(21) ಎಂದು ಗುರುತಿಸಲಾಗಿದೆ. ಮೋಕ್ಷಿತ್ ತನ್ನ ಪಲ್ಸರ್ ಬೈಕಿನಲ್ಲಿ ಬಲ್ಯದಿಂದ ಕಡಬಕ್ಕೆ ತೆರಳುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿಯುಂಟಾಗಿ ಈ ದುರ್ಘಟನೆ ಸಂಭವಿಸಿದೆ‌. ಮೃತದೇಹವನ್ನು ಕಡಬ ಸಮುದಾಯ

ಕಡಬ: ಕೆಎಸ್ಸಾರ್ಟಿಸಿ ಬಸ್ – ಬೈಕ್ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಹಳೆ ವಿದ್ಯಾರ್ಥಿ ಸಂಘ, ಹಂಪನಕಟ್ಟೆ ಮಂಗಳೂರು➤ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.13.ಹಳೆ ವಿದ್ಯಾರ್ಥಿ ಸಂಘ, ಹಂಪನಕಟ್ಟೆ ಮಂಗಳೂರು ಇವರು ಸಂಘದ ಅಧ್ಯಕ್ಷರಾಗಿರುವ ಬಿ ಧರ್ಮಣ್ಣ ನಾಯ್ಕ್ ಇವರ ನೇತೃತ್ವದಲ್ಲಿ ಹೊಸದಾಗಿ ನೇಮಕಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಇವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು. ಮತ್ತು ಶುಭೋದಯ ಕೂಡ್ಲು, ಕಾರ್ಯದರ್ಶಿ ಆರ್ ಲೋಹಿದಾಸ್, ಜೊತೆ ಕಾರ್ಯದರ್ಶಿ ಮೋಹನ್ ರಾವ್ ಹಾಗೂ ಸದಸ್ಯರಾದ ಬಿ.ಎನ್ ಸನಿಲ್, ಶ್ರೀನಿವಾಸ್ ನಾಯಕ್, ಸುರೇಶ್ ರಾವ್ ಮತ್ತು ಶಶಿಧರ್ ಶೆಟ್ಟಿಯವರು ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘ, ಹಂಪನಕಟ್ಟೆ ಮಂಗಳೂರು➤ಅಭಿನಂದನಾ ಕಾರ್ಯಕ್ರಮ Read More »

ಕರಾವಳಿ
Scroll to Top