ಕರಾವಳಿ

ಕಡಬದಲ್ಲಿ ನಾಳೆ (ಅ.01) ‘ಹೋಟೆಲ್ ಹಳ್ಳಿಮನೆ’ ಶುಭಾರಂಭ ➤ ಕೇರಳದ ವಿಶೇಷ ಖಾದ್ಯ ಮರಗೆಣಸು – ಮೀನು ಸಾಂಬಾರ್ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಸೆ.30. ತಾಲೂಕು ಕೇಂದ್ರವಾದ ಕಡಬದ ಜನತೆಯ ಉಪಯೋಗಕ್ಕಾಗಿ ಇಲ್ಲಿನ ಟೋಮ್ ಬಝಾರ್ ಹಿಂಬದಿಯ ಕೊಲ್ಲೆಸಾಗು ಕಾಂಪ್ಲೆಕ್ಸ್ ನಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರಗಳನ್ನೊಳಗೊಂಡ ‘ಹೋಟೆಲ್ ಹಳ್ಳಿಮನೆ’ ಅಕ್ಟೋಬರ್ 01 ಮಂಗಳವಾರದಂದು ಶುಭಾರಂಭಗೊಳ್ಳಲಿದೆ. ಹಳ್ಳಿಮನೆಯಲ್ಲಿ ಚಾ, ಕಾಫಿ, ಬಾಳೆ ಎಲೆ ಊಟ, ಗಂಜಿ ಊಟ, ಬಿರಿಯಾನಿ, ಮರಗೆಣಸು ಮೀನು ಸಾಂಬಾರ್ ಹಾಗೂ ಹಲಾಲ್ ಚಿಕನ್ ದೊರೆಯಲಿದೆ. ಅಲ್ಲದೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯ ಕ್ಯಾಟರಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9880088180 ಅಥವಾ […]

ಕಡಬದಲ್ಲಿ ನಾಳೆ (ಅ.01) ‘ಹೋಟೆಲ್ ಹಳ್ಳಿಮನೆ’ ಶುಭಾರಂಭ ➤ ಕೇರಳದ ವಿಶೇಷ ಖಾದ್ಯ ಮರಗೆಣಸು – ಮೀನು ಸಾಂಬಾರ್ ಲಭ್ಯ Read More »

ಕರಾವಳಿ

ಕೊಯಿಲ ಕೆ.ಸಿ. ಫಾರ್ಮ್ ಬಳಿ ಅನುಮಾನಾಸ್ಪದವಾಗಿ ವರ್ತಿಸಿದ ಜೋಡಿ ➤ ಸಾರ್ವಜನಿಕರನ್ನು ಕಂಡು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಸೆ.28. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಜೋಡಿಯೊಂದು ಸಾರ್ವಜನಿಕರನ್ನು ಕಂಡ ಕೂಡಲೇ ಕಾರಿನಲ್ಲಿ ಪರಾರಿಯಾದ ಘಟನೆ ಶನಿವಾರದಂದು ಕಡಬ ಠಾಣಾ ವ್ಯಾಪ್ತಿಯ ಕೊಯಿಲದ ಕೆ.ಸಿ. ಫಾರ್ಮ್ ಬಳಿ ನಡೆದಿದೆ. ಕೊಯಿಲದ ಕೆ.ಸಿ. ಫಾರ್ಮ್ ನ ಗುಡ್ಡದ ಮೇಲೆ ಹಸಿರು ಹುಲ್ಲು ಬೆಳೆದಿದ್ದು, ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಲು ಹಲವರು ಬರುತ್ತಿದ್ದಾರೆ. ಶನಿವಾರದಂದು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಆಗಮಿಸಿದ ಜೋಡಿಯೊಂದು ಕೆ.ಸಿ‌. ಫಾರ್ಮ್ ಬಳಿ ಕಾರು ನಿಲ್ಲಿಸಿ ಅನುಮಾನಾಸ್ಪದವಾಗಿ ವರ್ತಿಸುವುದನ್ನು ಕಂಡ ಸಾರ್ವಜನಿಕರು ಅವರತ್ತ ಸಾಗುವುದನ್ನು

ಕೊಯಿಲ ಕೆ.ಸಿ. ಫಾರ್ಮ್ ಬಳಿ ಅನುಮಾನಾಸ್ಪದವಾಗಿ ವರ್ತಿಸಿದ ಜೋಡಿ ➤ ಸಾರ್ವಜನಿಕರನ್ನು ಕಂಡು ಪರಾರಿ Read More »

ಕರಾವಳಿ

ಬಲ್ಯ: ಮುಖ್ಯ ರಸ್ತೆಯಲ್ಲೇ ಕಾಡಾನೆ ಪ್ರತ್ಯಕ್ಷ

(ನ್ಯೂಸ್ ಕಡಬ) newskadaba.com ಕಡಬ, ಸೆ.28. ಉಪ್ಪಿನಂಗಡಿ – ಕಡಬ ಹೆದ್ದಾರಿಯ ಬಲ್ಯ ಸಮೀಪ ಶುಕ್ರವಾರ ತಡರಾತ್ರಿ ಕಾಡಾನೆ ಪ್ರತ್ಯಕ್ಷವಾಗಿದ್ದು, ರಾತ್ರಿ ಸಂಚರಿಸುವವರು ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಹಿಂದೆಯೂ ಅನೇಕ ಬಾರಿ ರಾತ್ರಿ ವೇಳೆಗಳಲ್ಲಿ ಕಾಡಾನೆ, ಕಡವೆ, ಜಿಂಕೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಬಲ್ಯ ಹಾಗೂ ಪದವು ಮಧ್ಯೆ ಕಂಡು ಬಂದಿದ್ದು, ಶುಕ್ರವಾರ ತಡರಾತ್ರಿ ಬಲ್ಯದಿಂದ ನೆಲ್ಯಾಡಿಗೆ ತೆರಳುವ ರಸ್ತೆಯಲ್ಲಿ ಕಾಡಾನೆ ಸಂಚರಿಸುವ ದೃಶ್ಯ ಕಂಡುಬಂದಿದೆ.

ಬಲ್ಯ: ಮುಖ್ಯ ರಸ್ತೆಯಲ್ಲೇ ಕಾಡಾನೆ ಪ್ರತ್ಯಕ್ಷ Read More »

ಕರಾವಳಿ

ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.27.2019-20ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ. (2018-19 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. 2019-20ನೇ ಸಾಲಿನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.) ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 31. ವಿದ್ಯಾರ್ಥಿಯು ಪರಿಶಿಷ್ಟ ಜಾತಿಗೆ ಸೇರಿರಬೇಕು. 1ನೇ ತರಗತಿಯಿಂದ 8ನೇ ತರಗತಿ ವಿದ್ಯಾರ್ಥಿಯ ಷೋಷಕರ ಕುಟುಂಬದ ಆದಾಯ ಮಿತಿ ವಾರ್ಷಿಕ ರೂ.6

ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ಪ.ಜಾತಿ/ಪ.ಪಂಗಡ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.27.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್‍ಪೂರ್ವ (1ನೇ ತರಗತಿಯಿಂದ 10ನೇ ತರಗತಿ) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಶಾಲೆಗಳಲ್ಲಿ ಸ್ಯಾಟ್ಸ್ ನಂಬರ್‍ನೊಂದಿಗೆ ಅರ್ಜಿ ಸಲ್ಲಿಸಬೇಕು. ನವೀಕರಣದ ವಿದ್ಯಾರ್ಥಿಗಳ ಅರ್ಜಿಗಳು ಸ್ವಯಂ ನವೀಕರಣ ಆಗಿರುವುದರಿಂದ ಆನ್‍ಲೈನ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾತ್ರ ಇಲಾಖೆಯ ವೆಬ್ ಸೈಟ್: www.ssp.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹೊಸದು ಮತ್ತು ನವೀಕರಣ

ಪ.ಜಾತಿ/ಪ.ಪಂಗಡ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಬಾಡಿಗೆಗೆ ವಾಹನ ಒದಗಿಸಲು ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.27.2019-20ನೇ ಸಾಲಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಜಿಲ್ಲಾ ಪಂಚಾಯತ್ ಮಂಗಳೂರು ಇವರ ಕಚೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ಟೆಂಡರ್ ಆಹ್ವಾನಿಸಲಾಗಿದೆ. ಮಾಸಿಕ ಬಾಡಿಗೆಗೆ ವಾಹನ ಒದಗಿಸಲು ಹಾಗೂ ಕಚೇರಿಯ ಪತ್ರ ವ್ಯವಹಾರಗಳನ್ನು ಗಣಕ ಯಂತ್ರಗಳಲ್ಲಿ ಬೆರಳಚ್ಚು ಮಾಡುವ ಮತ್ತು ಪ್ರಿಂಟ್ ಪ್ರತಿ ಸಿದ್ದಪಡಿಸಿ ಕೊಡುವ ಸೇವೆಯನ್ನು ಒದಗಿಸಲು ಆಸಕ್ತ ನೋಂದಾಯಿತ ಸಂಸ್ಥೆ/ ಏಜನ್ಸಿಗಳಿಂದ ಟೆಂಡರನ್ನು ಆಹ್ವಾನಿಸಲಾಗಿದೆ. ವಾಹನ ಒದಗಿಸುವ ಬಗ್ಗೆ ಟೆಂಡರ್ ಸಲ್ಲಿಕೆಗೆ ಕೊನೆಯ ದಿನ ಅಕ್ಟೋಬರ್ 18ರಂದು ಸಂಜೆ

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಬಾಡಿಗೆಗೆ ವಾಹನ ಒದಗಿಸಲು ಟೆಂಡರ್ ಆಹ್ವಾನ Read More »

ಕರಾವಳಿ

ಕಡಬದ ಅಡಿಗ ಟಿವಿಎಸ್ ನಲ್ಲಿ ಮೆಗಾ ಎಕ್ಸ್‌ಚೇಂಜ್ ಹಾಗೂ ಲೋನ್ ಮೇಳಕ್ಕೆ ಇಂದು ಕೊನೆ ➤ ಪ್ರತೀ ಖರೀದಿಗೆ ಸ್ಕ್ರ್ಯಾಚ್ & ವಿನ್ ಯೋಜನೆಯಡಿ ಖಚಿತ ಉಡುಗೊರೆ ➤ ಗ್ರಾಹಕರಿಗಾಗಿ 10 ಸಾವಿರ ರೂ‌. ಕ್ಯಾಶ್ ಬ್ಯಾಕ್ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಸೆ.27. ಟಿವಿಎಸ್ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಯ ಕಡಬದ ಅಧಿಕೃತ ಡೀಲರ್ ‘ಅಡಿಗ ಮೋಟಾರ್ಸ್’ನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲಾಗಿರುವ ಯಶಸ್ವೀ ಮೂರನೇ ವರ್ಷದ ‘ಮಹಾ ಎಕ್ಸ್‌ಚೇಂಜ್ ಮೇಳ ಹಾಗೂ ಲೋನ್ ಮೇಳ’ ಇಂದು ಕಡೇ ದಿನವಾಗಿದೆ. ಗ್ರಾಹಕರು ತಮ್ಮ ಯಾವುದೇ ಕಂಪೆನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ವಾಹನಗಳಿಗೆ ಎಕ್ಸ್‌ಚೇಂಜ್ ಮಾಡಬಹುದಾಗಿದ್ದು, ರೂ.2000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ಪಡೆಯಬಹುದಾಗಿದೆ ಮತ್ತು ನೂತನ TVS

ಕಡಬದ ಅಡಿಗ ಟಿವಿಎಸ್ ನಲ್ಲಿ ಮೆಗಾ ಎಕ್ಸ್‌ಚೇಂಜ್ ಹಾಗೂ ಲೋನ್ ಮೇಳಕ್ಕೆ ಇಂದು ಕೊನೆ ➤ ಪ್ರತೀ ಖರೀದಿಗೆ ಸ್ಕ್ರ್ಯಾಚ್ & ವಿನ್ ಯೋಜನೆಯಡಿ ಖಚಿತ ಉಡುಗೊರೆ ➤ ಗ್ರಾಹಕರಿಗಾಗಿ 10 ಸಾವಿರ ರೂ‌. ಕ್ಯಾಶ್ ಬ್ಯಾಕ್ ಆಫರ್ Read More »

ಕರಾವಳಿ

ದೀಕ್ಷಾ ಭೂಮಿ ಯಾತ್ರೆ ನಿಯೋಜನೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.27.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯದ ಡಾ. ಬಿ. ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದ ದೀಕ್ಷಾ ಭೂಮಿ ಯಾತ್ರೆಗೆ ನಿಯೋಜಿಸುವ ಕುರಿತು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 10. ಹೆಚ್ಚಿನ ಮಾಹಿತಿಗಾಗಿ ಆನ್‍ಲೈನ್ ವೆಬ್‍ಸೈಟ್: www.sw.kar.nic.in ನ್ನು ಸಂಪರ್ಕಿಸಬೇಕು ಎಂದು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದ.ಕ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ದೀಕ್ಷಾ ಭೂಮಿ ಯಾತ್ರೆ ನಿಯೋಜನೆಗೆ ಅರ್ಜಿ ಆಹ್ವಾನ Read More »

ಕರಾವಳಿ

ಗೃಹರಕ್ಷಕ ಕ್ಷೇಮಾಭಿವೃದ್ದಿ ನಿಧಿಯಿಂದ ಸಹಾಯ ಧನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.27.ಜಿಲ್ಲಾ ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಗೃಹರಕ್ಷಕರಿಗೆ ವೈದ್ಯಕೀಯ ಸಹಾಯ ಧನ ನೀಡಲಾಯಿತು. ಪ್ರತಿಯೊಬ್ಬ ಗೃಹರಕ್ಷಕರಿಗೂ ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿ ಇದ್ದು, ಇದರಲ್ಲಿ ಗೃಹರಕ್ಷಕರ ಹಾಗೂ ಅವರ ಮಕ್ಕಳ ವೈದ್ಯಕೀಯ ವೆಚ್ಚ ಹಾಗೂ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸಹಾಯ ಧನ ನೀಡಲಾಗುತ್ತದೆ. ಇದರಲ್ಲಿ ಪ್ರತಿ ಗೃಹರಕ್ಷಕರೂ ವರ್ಷಕ್ಕೆ ರೂ.50 ರಂತೆ ವಂತಿಕೆಯನ್ನು ನೀಡಿದ್ದು ಶೇಕಡಾ 60 ರಷ್ಟು ಗೃಹರಕ್ಷಕರೂ ಕವಾಯತಿಗೆ ಹಾಜರಾಗಿದ್ದಲ್ಲಿ ಅಂತಹ ಗೃಹರಕ್ಷಕರು ಈ ಸೌಲಭ್ಯವನ್ನು ಪಡೆಯಬಹುದು. ವೈದ್ಯಕೀಯ ವೆಚ್ಚಕ್ಕಾಗಿ ಅರ್ಜಿ ಸಲ್ಲಿಸುವಾಗ

ಗೃಹರಕ್ಷಕ ಕ್ಷೇಮಾಭಿವೃದ್ದಿ ನಿಧಿಯಿಂದ ಸಹಾಯ ಧನ Read More »

ಕರಾವಳಿ
Scroll to Top