ಕರಾವಳಿ

ಛತ್ತೀಸ್‌ಗಢದಲ್ಲಿ ಭೀಕರ ವಿಮಾನ ದುರಂತ – ಇಬ್ಬರು ಪೈಲಟ್ ಮೃತ್ಯು

(ನ್ಯೂಸ್‌ ಕಡಬ) newskadaba.com,  ಎ.21: ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ಖಾಸಗಿ ವಿಮಾನವೊಂದು ಪತನಗೊಂಡ ಪರಿಣಾಮ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ದುರ್ಘಟನೆ ಸೋಮವಾರ ನಡೆದಿದೆ.ಜಶ್‌ಪುರ-ನಾರಾಯಣಪುರ ಪ್ರದೇಶದ ಅರಾ ಬೆಟ್ಟದ ಇಳಿಜಾರಿನಲ್ಲಿ ಈ ಜೆಟ್ ಪತನಗೊಂಡಿದ್ದು, ಅಪಘಾತದ ಬಳಿಕ ಸ್ಥಳದಿಂದ ದಟ್ಟ ಹೊಗೆ ಹಾಗೂ ಜ್ವಾಲೆಗಳು ಎದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಾಹಿತಿಯ ಪ್ರಕಾರ, ವಿಮಾನವು ಅರಾ ಬೆಟ್ಟಕ್ಕೆ ಡಿಕ್ಕಿ ಹೊಡೆದ ಬಳಿಕ ಪತನಗೊಂಡಿದೆ ಎಂದು ಹೇಳಲಾಗಿದೆ. ಆರಂಭಿಕ ವರದಿಗಳ ಪ್ರಕಾರ, ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ಸ್ಥಳದಲ್ಲೇ […]

ಛತ್ತೀಸ್‌ಗಢದಲ್ಲಿ ಭೀಕರ ವಿಮಾನ ದುರಂತ – ಇಬ್ಬರು ಪೈಲಟ್ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೆಣ ಇಡಲೂ ಹಣ ಕೊಡಬೇಕು – ಇಲ್ಲಿ ಸ್ಮಶಾನಕ್ಕೂ ಬಾಡಿಗೆ!

(ನ್ಯೂಸ್‌ ಕಡಬ) newskadaba.com,  ಎ.21: ಇಂದು ವಿಶೇಷವಾಗಿ ಬೆಂಗಳೂರು ಮಹಾನಗರಗಳಲ್ಲಿ ಅಥವಾ ಇತರೆಡೆ ಜೀವನಕ್ಕಾಗಿ ಮನೆ ಬಾಡಿಗೆ ಪಡೆಯೋದು ಸಾಮಾನ್ಯವಾಗಿದ್ದರೂ, ಭೂಮಿಯ ಮತ್ತೊಂದು ಭಾಗದಲ್ಲಿ ಸಾವಿನ ನಂತರವೂ “ಬಾಡಿಗೆ ವ್ಯವಸ್ಥೆ” ಇರುವ ವಿಚಿತ್ರ ಸಂಪ್ರದಾಯವೊಂದು ಅಸ್ತಿತ್ವದಲ್ಲಿದೆ. ಈ ವಿಶಿಷ್ಟ ಪದ್ಧತಿ ಇರುವ ಸ್ಥಳ ಬೊಲಿವಿಯ ಲಾ ಪಾಜ್‌ನಲ್ಲಿರುವ ಸಿಮೆಂಟೇರಿಯೋ ಜನರಲ್ ಎಂಬ ವಿಶ್ವದ ಅತಿದೊಡ್ಡ ಬಾಡಿಗೆ ಸ್ಮಶಾನ. ಇಲ್ಲಿ ಜನರು ತಮ್ಮ ಕುಟುಂಬ ಸದಸ್ಯರ ಅಂತ್ಯಕ್ರಿಯೆಯ ನಂತರ ಸಮಾಧಿ ಸ್ಥಳವನ್ನು ನಿರ್ದಿಷ್ಟ ಅವಧಿಗೆ ಬಾಡಿಗೆಗೆ ಪಡೆಯುತ್ತಾರೆ. ಆರಂಭದಲ್ಲಿ

ಹೆಣ ಇಡಲೂ ಹಣ ಕೊಡಬೇಕು – ಇಲ್ಲಿ ಸ್ಮಶಾನಕ್ಕೂ ಬಾಡಿಗೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎ.೨೪; ‘ದೇವ್ ದಾಸ್‌ನ ಲೀಲಾ’ ತುಳುಚಿತ್ರ ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ಎ.21: ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಈಗಾಗಲೇ ಸದ್ದು ಮಾಡಿರುವ ‘ದೇವ್ ದಾಸ್ ನ ಲೀಲಾ’ ತುಳು ಸಿನಿಮಾ ಎ.೨೪ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ತುಳು ಚಲನ ಚಿತ್ರಕ್ಕೆ ಮೊದಲ ಬಾರಿಗೆ ಬಾಲಿವುಡ್ ಟಚ್ ನೀಡಲಾಗಿದೆ ಎಂದು ನಾಯಕನಟ ಎಲ್ಟನ್ ಜೆಫ್ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಎ.೨೪ಕ್ಕೆ ದೇವ್ ದಾಸ್ ನ ಲೀಲಾ ಎಂಬ ವಿಭಿನ್ನ ಶೈಲಿಯ ತುಳು ಚಲನ ಚಿತ್ರ ಬಿಡುಗಡೆಯಾಗಲಿದೆ. ಚಿತ್ರವನ್ನು ಜಯಂತಿ ಪ್ರೊಡಕ್ಷನ್

ಎ.೨೪; ‘ದೇವ್ ದಾಸ್‌ನ ಲೀಲಾ’ ತುಳುಚಿತ್ರ ಬಿಡುಗಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ : ಗುಡುಗು ಸಹಿತ ಭಾರೀ ಮಳೆ – ಹಲವೆಡೆ ಹಾನಿ

(ನ್ಯೂಸ್‌ ಕಡಬ) newskadaba.com,  ಎ.21: ತಾಲೂಕಿನಲ್ಲಿ ಸೋಮವಾರ ಸಂಜೆ ,ಗುಡುಗು,ಸಿಡಿಲು ಸಹಿತ ಬಾರೀ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಉಜಿರೆಯ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಬೃಹತ್ ಗಾತ್ರದ ರೆಂಬೆಯೊಂದು ಮುರಿದುಬಿದ್ದಿದೆ. ಕಾರಿಗೆ ಹಾನಿಯಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತರೊಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮುಂಡಾಜೆ ಗ್ರಾ. ಪಂ. ವ್ಯಾಪ್ತಿಯ ಚಾಮುಂಡಿ ನಗರ ಪರಿಸರದಲ್ಲಿ ರಾಮಕ್ಕ ಎಂಬವರ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಈ ಪ್ರದೇಶದ ಇನ್ನೂ ನಾಲ್ಕು ಮನೆಗಳಿಗೆ ಭಾಗಶಃ ಹಾನಿ

ಬೆಳ್ತಂಗಡಿ : ಗುಡುಗು ಸಹಿತ ಭಾರೀ ಮಳೆ – ಹಲವೆಡೆ ಹಾನಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಟೀಲು ಜಾತ್ರೋತ್ಸವ: ಏಪ್ರಿಲ್ 21ರಂದು ‘ಗೋಲ್ಡನ್ ಟ್ರಾವೆಲ್ಸ್’ನಿಂದ ಉಚಿತ ಬಸ್ ಸೇವೆ

(ನ್ಯೂಸ್‌ ಕಡಬ) newskadaba.com,  ಎ.21: ಮಂಗಳೂರು: ಪ್ರಸಿದ್ಧ ಪುಣ್ಯಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರೋತ್ಸವದ ಸಂಭ್ರಮ ಕಳೆಗಟ್ಟಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಏಪ್ರಿಲ್ 21, ಮಂಗಳವಾರದಂದು ಮಂಗಳೂರು-ಕಟೀಲು ಮಾರ್ಗದಲ್ಲಿ ಸಂಚರಿಸುವ ‘ಗೋಲ್ಡನ್ ಟ್ರಾವೆಲ್ಸ್’ ಮಾಲೀಕತ್ವದ ಎಲ್ಲಾ ಬಸ್ಸುಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಮುಖ್ಯಾಂಶಗಳು: ಸೇವೆಯ ದಿನಾಂಕ: ಏಪ್ರಿಲ್ 21, 2026 (ಮಂಗಳವಾರ). ಸಮಯ: ಬೆಳಿಗ್ಗೆಯಿಂದ ಸಂಜೆಯವರೆಗೆ. ಬಸ್ಸುಗಳ ಸಂಖ್ಯೆ: ಕಟೀಲು ಮಾರ್ಗವಾಗಿ ಚಲಿಸುವ ಸಂಸ್ಥೆಯ ಎಲ್ಲಾ 8 ಸರ್ವಿಸ್ ಬಸ್ಸುಗಳು. ಉದ್ದೇಶ: ಪ್ರತೀ ವರ್ಷದಂತೆ

ಕಟೀಲು ಜಾತ್ರೋತ್ಸವ: ಏಪ್ರಿಲ್ 21ರಂದು ‘ಗೋಲ್ಡನ್ ಟ್ರಾವೆಲ್ಸ್’ನಿಂದ ಉಚಿತ ಬಸ್ ಸೇವೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ – ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ಎ.21: ನಗರದ ನಂತೂರು ಜಂಕ್ಷನ್‌ನಲ್ಲಿ ಎ.18ರಂದು ಸಂಚಾರ ನಿಯಂತ್ರಣ ಮಾಡುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ಅವಾಚ್ಯ ಪದ ಬಳಸಿ ಬೈದು, ಹಲ್ಲೆ ನಡೆಸಿ, ಮೊಬೈಲ್ ಕಿತ್ತು ನೆಲಕ್ಕೆ ಎಸೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಮಾಲಿಗೆರೆ ಹಾಲೇಶ ಎಂಬವರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಕಾನ್‌ಸ್ಟೇಬಲ್ ಪ್ರವೀಣ್ ಹಾಗೂ ಜಿ. ಚಂಪಾ ಜೊತೆ ತಾನು ನಂತೂರು ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನದ ವೇಳೆ ಬಿಕರ್ನಕಟ್ಟೆ ಕಡೆಗೆ

ಮಂಗಳೂರು : ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ – ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: ಮಾಣ್ಕಾಂ ಮೊತಿಯಾಂ-2 ಮಕ್ಕಳ ರಜಾ ಶಿಬಿರ

(ನ್ಯೂಸ್‌ ಕಡಬ) newskadaba.com,  ಎ.21: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇನ್ಫೆಂಟ್ ಮೇರಿ ಚರ್ಚ್ ಬಜ್ಜೋಡಿ ಇವರ ಸಹಯೋಗದೊಂದಿಗೆ ಮಾಂಡ್ ಸೊಭಾಣ್ ಸಂಸ್ಥೆಯ ಸಹಕಾರದೊಂದಿಗೆ ನಡೆಸುವ ಮಾಣ್ಕಾಂ ಮೊತಿಯಾಂ-2 ಮಕ್ಕಳ ರಜಾ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 20-4-2026 ರಂದು ಇನ್ಫೆಂಟ್ ಮೇರಿ ಸಭಾಭವನ ಬಜ್ಜೋಡಿ ಇಲ್ಲಿ ನೆರವೇರಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿದ್ದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕೊಂಕಣಿ ಮಕ್ಕಳು ಕೊಂಕಣಿ ಭಾಷೆಯನ್ನು ಕಲಿಯುವ ಅವಶ್ಯಕತೆ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: ಮಾಣ್ಕಾಂ ಮೊತಿಯಾಂ-2 ಮಕ್ಕಳ ರಜಾ ಶಿಬಿರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅನ್ನದಾತನಿಗೆ ಶಾಕ್: ಶೂನ್ಯ ಬಡ್ಡಿ ಸಾಲ ಕೇವಲ ಕನಸೇ? ಸಹಕಾರಿ ಬ್ಯಾಂಕ್‌ಗಳಲ್ಲಿ ಖಾಲಿಯಾಯ್ತಾ ಖಜಾನೆ?

(ನ್ಯೂಸ್‌ ಕಡಬ) newskadaba.com,  ಎ.21:  ​ ಬೆಂಗಳೂರು: ರಾಜ್ಯದ ಬೆನ್ನೆಲುಬಾದ ರೈತರಿಗೆ ಸಹಕಾರಿ ವಲಯದ ಮೂಲಕ ಸಿಗಬೇಕಿದ್ದ ಶೂನ್ಯ ಬಡ್ಡಿ ದರದ ಸಾಲ ಈಗ ಮರೀಚಿಕೆಯಾಗುತ್ತಿದೆ. ನಬಾರ್ಡ್‌ನಿಂದ ಸಿಗುತ್ತಿದ್ದ ಪುನರ್ಧನ ಸಾಲದ ಕಡಿತ ಮತ್ತು ಸಹಕಾರಿ ಸಂಘಗಳ ಆರ್ಥಿಕ ಮುಗ್ಗಟ್ಟಿನಿಂದಾಗಿ ರೈತರು ಮತ್ತೆ ಖಾಸಗಿ ಲೇವಾದೇವಿದಾರರ ಬಲೆಗೆ ಬೀಳುವ ಆತಂಕ ಎದುರಾಗಿದೆ. ಸಾಲ ವಿತರಣೆಯ ಗುರಿ ಮತ್ತು ವಾಸ್ತವ (2025-26) ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರ ನಿಗದಿಪಡಿಸಿದ್ದ ಗುರಿಗೂ, ವಾಸ್ತವವಾಗಿ ವಿತರಣೆಯಾದ ಸಾಲಕ್ಕೂ ಭಾರಿ ವ್ಯತ್ಯಾಸವಿದೆ: ವಿವರ

ಅನ್ನದಾತನಿಗೆ ಶಾಕ್: ಶೂನ್ಯ ಬಡ್ಡಿ ಸಾಲ ಕೇವಲ ಕನಸೇ? ಸಹಕಾರಿ ಬ್ಯಾಂಕ್‌ಗಳಲ್ಲಿ ಖಾಲಿಯಾಯ್ತಾ ಖಜಾನೆ? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಾಲ ಮಾಡಿ ತೆಗೆದುಕೊಂಡಿದ್ದ KTM ಬೈಕ್ ಕಳ್ಳತನ

(ನ್ಯೂಸ್‌ ಕಡಬ) newskadaba.com,  ಎ.21:  ​ ಯುವಕನೋರ್ವ ಸಾಲ ಮಾಡಿ ತೆಗದುಕೊಂಡಿದ್ದ ಕೆಟಿಎಂ ಬೈಕ್ ಅನ್ನು ಅದೇ ರಾತ್ರಿ ಕಳ್ಳರು ಕದ್ದೊಯ್ದ ಘಟನೆ ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. ಯುವಕ ಚಂದು ಬಹುದಿನಗಳ ನಂತರ ತನ್ನ ಕನಸಿನ ಬೈಕ್ ತೆಗೆದುಕೊಂಡಿದ್ದರು. ರಾತ್ರಿ ಮಲಗಿದ್ದ ವೇಳೆ ಬೈಕ್ ಕದ್ದು (Theft) ಕಳ್ಳರ ಗ್ಯಾಂಗ್ ಪರಾರಿಯಾಗಿದೆ. ಮನೆಯ ಮುಂದೆ ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಅನ್ನು ಬೈಕಿನಲ್ಲಿ ಬಂದು ಕ್ಷಣಾರ್ಧದಲ್ಲಿ ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರು ಬೈಕ್‌ ಕದ್ದು ಎಸ್ಕೇಪ್‌

ಸಾಲ ಮಾಡಿ ತೆಗೆದುಕೊಂಡಿದ್ದ KTM ಬೈಕ್ ಕಳ್ಳತನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಬಿರುಗಾಳಿ ಅಬ್ಬರ – ಯಕ್ಷಗಾನ ರಂಗಸ್ಥಳ ಧೂಳಿನಿಂದ ಆವೃತ

(ನ್ಯೂಸ್‌ ಕಡಬ) newskadaba.com,  ಎ.21:  ​ ನಗರದಾದ್ಯಂತ ಹಲವೆಡೆ ಸಂಜೆಯ ವೇಳೆಗೆ ಕೊಂಚ ಮಟ್ಟಿನ ಮಳೆಯಾಗಿದ್ದು ಬಿರುಗಾಳಿ ಅಬ್ಬರದಿಂದಾಗಿ ಯಕ್ಷಗಾನ ರಂಗಸ್ಥಳ ಧೂಳಿನಿಂದ ಆವೃತವಾದ ಘಟನೆ ನಡೆದಿದೆ. ಶಕ್ತಿನಗರದಲ್ಲಿ ಬೀಸಿದ ಬಿರುಗಾಳಿಯ ಪರಿಣಾಮ ಯಕ್ಷಗಾನ ಬಯಲಾಟದ ರಂಗಸ್ಥಳ ಧೂಳಿನಿಂದ ಆವರಿಸಿಕೊಂಡಿತ್ತು. ಯಕ್ಷಗಾನದ ಚೌಕಿ, ಹಾಗು ಕಾರ್ಯಕ್ರಮದ ಸಲುವಾಗಿ ಹಾಕಿದ್ದ ಶಾಮಿಯಾನ ಸೇರಿದಂತೆ ಅಲಂಕಾರಿಕ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ ಎಂದು ತಿಳಿದು ಬಂದಿದೆ.

ಮಂಗಳೂರು : ಬಿರುಗಾಳಿ ಅಬ್ಬರ – ಯಕ್ಷಗಾನ ರಂಗಸ್ಥಳ ಧೂಳಿನಿಂದ ಆವೃತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top