ನ್ಯೂಸ್ ಕಡಬ

ಮೇ.12 – ವಿಶ್ವ ದಾದಿಯರ ದಿನ 

(ನ್ಯೂಸ್ ಕಡಬ) newskadaba.com ಮೇ.12. ಪ್ರತಿ ವರ್ಷ “ಮೇ 12ರಂದು ವಿಶ್ವ ದಾದಿಯರ ದಿನ” ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಖ್ಯಾತ ದಾದಿ ಪ್ಯಾರೆನ್ಸ್‌ ನೈಟಿಂಗೇಲ್ ಅವರು ಹುಟ್ಟಿದ ದಿನವೂ ಹೌದು. ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ “ವಿಶ್ವ ದಾದಿಯರ ದಿನ” ಎಂದು ಜಗತ್ತಿನಾದ್ಯಂತ ಮೇ 12ರಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. 2018ರ ಆಚರಣೆಯ ಧ್ಯೇಯ ವಾಕ್ಯವೆಂದರೆ “ಆರೋಗ್ಯ ಪ್ರತಿ ಮನುಷ್ಯನ ಮೂಲಭೂತ ಹಕ್ಕು” ಎಂಬುದಾಗಿರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೌಲಭ್ಯ ದೊರಕಬೇಕು […]

ಮೇ.12 – ವಿಶ್ವ ದಾದಿಯರ ದಿನ  Read More »

ಆರೋಗ್ಯ ಮಾಹಿತಿ

ಆಲಂಕಾರು: ಒಂದೇ ಕುಟುಂಬದ ಐವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ► ಅಧಿಕಾರಿಗಳ ಎಡವಟ್ಟಿಗೆ ಮತದಾರರು ಕಂಗಾಲು

(ನ್ಯೂಸ್ ಕಡಬ) newskadaba.com ಆಲಂಕಾರು, ಮೇ.12.  ಜೀವಂತವಾಗಿದ್ದರೂ ಮತದಾರರ ಪಟ್ಟಿಯಿಂದ ಒಂದೇ ಕುಟುಂಬದ 5 ಜನರ ಹೆಸರನ್ನು ಡಿಲೀಟ್ ಮಾಡಿದ ಪ್ರಕರಣ ಮತದಾನದ ವೇಳೆ ಬೆಳಕಿಗೆ ಬಂದಿದೆ. ಇದರಿಂದಾಗಿ ಈ 5ಮಂದಿ ಸದಸ್ಯರು ಮತದಾನ ಮಾಡಲು ಅಸಾಧ್ಯವಾಗಿ ಹಿಂತಿರುಗಿದರು. ಡಿಲೀಟ್ ಮಾಡಿರುವ ಘಟನೆ ತಿಳಿಯುತ್ತಿದ್ದಂತೆ ಒಂದು ಪಕ್ಷದ ಕಾರ್ಯಕರ್ತರು ಯಾರೋ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಮತದಾರರಿಗೆ ಅನ್ಯಾಯವಾಗಬಾರದು, ಮತ ಚಲಾಯಿಸಲು ಅವಕಾಶ ನೀಡಿ ಎಂದು ಆಗ್ರಹಿಸಿದರು. ಆದರೆ 6 ತಿಂಗಳಿನಿಂದ ವಾಸ್ತವ್ಯ ಇಲ್ಲದ ಜನರ ಹೆಸರನ್ನು ಮತದಾರರ

ಆಲಂಕಾರು: ಒಂದೇ ಕುಟುಂಬದ ಐವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ► ಅಧಿಕಾರಿಗಳ ಎಡವಟ್ಟಿಗೆ ಮತದಾರರು ಕಂಗಾಲು Read More »

ಕರಾವಳಿ

ಕೊಕ್ಕಡ: ಮತದಾನ ಮಾಡಿದ ಎಲ್ಲಾ 19 ಎಂಡೋ ಸಂತ್ರಸ್ಥರು

(ನ್ಯೂಸ್ ಕಡಬ) newskadaba.com ಕೊಕ್ಕಡ,ಮೇ.12. ಈ ಬಾರಿಯ ಮತದಾನವನ್ನು ಬಹಿಷ್ಕರಿಸುವುದಾಗಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿಯಿಯ ಅಧ್ಯಕ್ಷ ಶ್ರೀಧರ ಗೌಡ ಕೊಕ್ಕಡ ಎಂಡೋ ಸಂತ್ರಸ್ಥರ ಸಮಲೋಚನಾ ಸಭೆಯಲ್ಲಿ ಘೋಷಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ತಮ್ಮ ನಿಲುವನ್ನು ಬದಲಾಯಿಸಿದ ಶ್ರೀಧರ ಗೌಡರವರು ಎಂಡೋ ಸಂತ್ರಸ್ಥರು ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಎಲ್ಲಾ 19 ಎಂಡೋ ಸಂತ್ರಸ್ಥರು ಮತದಾನಕ್ಕೆ ಆಗಮಿಸಿ ಮತದಾನ ಮಾಡುವುದುರ ಮೂಲಕ ಶ್ರೀಧರ ಗೌಡರ ವಾಗ್ದಾನಕ್ಕೆ ಗೌರವ ಸಲ್ಲಿಸಿದರು.

ಕೊಕ್ಕಡ: ಮತದಾನ ಮಾಡಿದ ಎಲ್ಲಾ 19 ಎಂಡೋ ಸಂತ್ರಸ್ಥರು Read More »

ಕರಾವಳಿ

ಮತ ಚಲಾಯಿಸಿ ಹಸೆ ಮಣೆ ಏರಿದ ಮದುಮಗಳು!

(ನ್ಯೂಸ್ ಕಡಬ) newskadaba.com ಮಡಿಕೇರಿ,ಮೇ.12. ಇದೀಗ ವಿದಾನ ಸಭಾ ಚುನಾವಣೆಯು ಅತ್ಯಂತ ಬಿರುಸಿನಿಂದ ನಡೆಯಿತ್ತಿದ್ದು, ಮದುಮಗಳೊಬ್ಬಳು ಹಸೆಮಣೆ ಏರುವ ಮುನ್ನ ಚುನಾವಣಾ ಕೇಂದ್ರಕ್ಕೆ ಬಂದು ಮತ ಚಲಾಯಿಸುವುದರ ಮೂಲಕ ತನ್ನ ಜವಾಬ್ದಾರಿಯನ್ನು ವ್ಯಕ್ತ ಪಡಿಸಿದ್ದಾಳೆ. ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 131 ರ ಐಮಣಿಯಂಡ ಸ್ಮಿತಾ ಎಂಬವರು ಹಸೆ ಮಣೆ ಏರುವ ಮುನ್ನ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತಗಟ್ಟೆಗೆ ಅಲಂಕೃತವಾಗಿ ಬಂದು ಮತ ಚಲಾಯಿಸಿ ಹಿಂತಿರುಗಿದ್ದಾಳೆ.

ಮತ ಚಲಾಯಿಸಿ ಹಸೆ ಮಣೆ ಏರಿದ ಮದುಮಗಳು! Read More »

ಕರ್ನಾಟಕ

ಮತದಾರರನ್ನು ಕೊಂಡೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ ► ಸ್ಥಳದಲ್ಲೇ ಮೃತಪಟ್ಟ ಮಹಿಳೆ

(ನ್ಯೂಸ್ ಕಡಬ) newskadaba.com ಹಾಸನ,ಮೇ.12. ಮತದಾರರನ್ನು ಕೊಂಡೊಯ್ಯುತ್ತಿದ್ದ ಆಟೋಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆಯು ಹಾಸನ ಜಿಲ್ಲೆಯ ಬೇಲೂರು ರಸ್ತೆಯಲ್ಲಿ ಸಂಭವಿಸಿದೆ. ಇಂದು ಬೆಳಗ್ಗೆ ಮತದಾರರನ್ನು ಕೊಂಡೊಯ್ಯುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆಯು  ಬೇಲೂರು ರಸ್ತೆ ರಾಮೇನಹಳ್ಳಿ ಗೇಟ್ ಬಳಿ ಸಂಭವಿಸಿದ್ದು, ಆಟೋದಲ್ಲಿ ಇದ್ದ ಲಕ್ಷ್ಮಮ್ಮ(46) ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಇನ್ನೋರ್ವ ಮಹಿಳೆಗೆ ತೀರ್ವ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತದಾರರನ್ನು ಕೊಂಡೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ ► ಸ್ಥಳದಲ್ಲೇ ಮೃತಪಟ್ಟ ಮಹಿಳೆ Read More »

ಕರ್ನಾಟಕ

ಬೆಳ್ಳಾರೆ ಜ್ಞಾನದೀಪಕ್ಕೆ ಶೇ.100 ಫಲಿತಾಂಶ ► ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.12. 2017-18ನೇ ಸಾಲಿನ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಬೆಳ್ಳಾರೆ ಜ್ಞಾನದೀಪ ಶಿಕ್ಷಣ  ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಸಂಸ್ಥೆಯಲ್ಲಿ ನಡೆಯಿತು. ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ ತಂದುಕೊಟ್ಟ ಸಂಸ್ಥೆಯ ಎಲ್ಲಾ 16 ಮಂದಿ ವಿದ್ಯಾರ್ಥಿಗಳನ್ನು ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಭಿನಂದಿಸಿ ಮಾತನಾಡಿ, ಶೈಕ್ಷಣಿಕ ಜೀವನದಲ್ಲಿ ಒಮ್ಮೆ ಎಡವಿದರೂ ಆಸಕ್ತಿಯಿಂದ ಅಧ್ಯಯನ ನಡೆಸಿದಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಿದೆ ಎಂಬುದನ್ನು ಸಾಬೀತು

ಬೆಳ್ಳಾರೆ ಜ್ಞಾನದೀಪಕ್ಕೆ ಶೇ.100 ಫಲಿತಾಂಶ ► ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ Read More »

ಕರಾವಳಿ

ಸಬಳೂರು ಶಾಲೆಯಲ್ಲಿ ಬಿರುಸಿನ ಮತದಾನ

(ನ್ಯೂಸ್ ಕಡಬ) newskadaba.com  ಕೊೖಲ,ಮೇ.12. ಕಡಬ ತಾಲೂಕಿನ ಸುಳ್ಯ ವಿಧಾನ ಸಭಾ ಕ್ಷೇತ್ರದ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಬೆಳಿಗ್ಗೆ ಏಳು ಗಂಟೆಗೆ ಸರತಿ ಸಾಲು ನಿಂತು ಮತದಾನ ಮಾಡಿದರು.

ಸಬಳೂರು ಶಾಲೆಯಲ್ಲಿ ಬಿರುಸಿನ ಮತದಾನ Read More »

ಕರಾವಳಿ

ಪ್ರಥಮ ಮತದಾನದ ಸಂಭ್ರಮ

(ನ್ಯೂಸ್ ಕಡಬ) newskadaba.com ಕೊೖಲ,ಮೇ.12. ಶನಿವಾರ ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಿದ ಯುವಕ ಯುವತಿಯರು ತಮ್ಮ ಮತದಾನದ ಸಂಭ್ರಮವನ್ನು ಹಂಚಿಕೊಂಡರು. ಸುಳ್ಯ ವಿಧಾನಸಭಾ ಕ್ಷೇತ್ರದ ಕೊೖಲ ಗ್ರಾಮದ ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದ ಕೀರ್ತಿಕಾ ಬುಡಲೂರು, ಮೋಹನ್ ಖಂಡಿಗಾ, ಜಯಪ್ರಕಾಶ್ ಎಸ್, ಸುಧೀರ್ ಕೆರೆಕೋಡಿ, ವಿನೋದ್ ಏಣಿತಡ್ಕ ಮೊದಲಾದವರು ಮತದಾನ ಮಾಡಿದ ಬಳಿಕ ತಮ್ಮ ಸಂತೋಷವನ್ನು ಹಂಚಿಕೊಂಡರು.

ಪ್ರಥಮ ಮತದಾನದ ಸಂಭ್ರಮ Read More »

ಕರಾವಳಿ

ಕುಂತೂರು: ಮುಂದಿನ ಚುನಾವಣೆಗೆ ಮುನ್ನ ರಸ್ತೆ ದುರಸ್ತಿಗೊಳಿಸದಿದ್ದಲ್ಲಿ ಸ್ಥಳೀಯರಿಂದ ಚುನಾವಣೆ ಬಹಿಷ್ಕಾರ

(ನ್ಯೂಸ್ ಕಡಬ) newskadaba.com ಕಡಬ,ಮೇ.11. ಕಡಬ ತಾಲೂಕಿನ ಕುಂತೂರಿನಿಂದ ಕುಂಟ್ಯಾನ- ಇಡಾಳ-ಕೆದ್ದೊಟ್ಟೆ ಮಾರ್ಗವಾಗಿ ಪದವಿಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಮುಂದಿನ ಲೋಕ ಸಭಾ ಚುನಾವಣೆಗೆ ಮುನ್ನ ದುರಸ್ಥಿಗೊಳಿಸದೇ ಇದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಈ ಮಾರ್ಗವನ್ನು ಅಭಿವೃದ್ಧಿ ಪಡಿಸುವಂತೆ ರಾಜಕೀಯ ಮುಖಂಡರಲ್ಲಿ ಬೇಡಿಕೆಯಿಡಲಾಗಿತ್ತು, ಆದರೆ ಯಾರೊಬ್ಬರೂ ಇದಕ್ಕೆ ಸ್ಪಂದಿಸಿರಲಿಲ್ಲ. ಇದೀಗ ಸಾಮಾಜಿಕ ಜಾಲತಾಣವನ್ನು ತಮ್ಮ ಆಯುಧವಾಗಿ ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸ್ಥಳೀಯ ಯುವಕರು, ಘಟನೆಗೆ ಸಂಭಂದಿಸಿದಂತೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇದೀಗ ನಾವು

ಕುಂತೂರು: ಮುಂದಿನ ಚುನಾವಣೆಗೆ ಮುನ್ನ ರಸ್ತೆ ದುರಸ್ತಿಗೊಳಿಸದಿದ್ದಲ್ಲಿ ಸ್ಥಳೀಯರಿಂದ ಚುನಾವಣೆ ಬಹಿಷ್ಕಾರ Read More »

ಕರಾವಳಿ

ಅಧಿಕಾರಿಯೋರ್ವರ ತಪ್ಪಿನಿಂದಾಗಿ ಮತದಾನದಿಂದ ವಂಚಿತವಾದ ಕುಟುಂಬ

(ನ್ಯೂಸ್ ಕಡಬ) newskadaba.com ರಾಯಚೂರು, ಮೇ.11. ಬೂತ್ ಮಟ್ಟದ ಅಧಿಕಾರಿಯೋವ್ವರು ಮಾಡಿದ ತಪ್ಪಿನಿಂದಾಗಿ ಕುಟುಂಬವೊಂದು 2018ರ ವಿಧಾನ ಸಭಾ ಚುನಾವಣೆಯಿಂದ ವಂಚಿತವಾಗಿದೆ. ಬೂತ್ ಮಟ್ಟದ ಅಧಿಕಾರಿ ಇಕ್ಬಾಲ್ ಅಹ್ಮದ್ ಅವರು ‘ಮಾನವಿ’ ವಿಧಾನಸಭಾ ಕ್ಷೇತ್ರದ 16ನೇ ವಾರ್ಡಿನ ಸಲಾಲುದ್ದಿನ್ ಮತ್ತು ಅವರ ಕುಟುಂಬದವರ ಹೆಸರನ್ನು ತೆಗೆದುಹಾಕಿದ್ದಾರೆ. ಹಲವಾರು ವರ್ಷಗಳಿಂದಲೂ ಮಾನವಿಯಲ್ಲಿ ತಾವು ವಾಸ್ತವ್ಯ ಹೂಡಿದ್ದು, ತಮ್ಮ ಹೆಸರು ತೆಗೆದು ಹಾಕಿರುವುದರ ಹಿಂದೆ ರಾಜಕೀಯ ಕೈವಾಡವಿದೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಲಾಲುದ್ದಿನ್ ಅವರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಅಧಿಕಾರಿಯೋರ್ವರ ತಪ್ಪಿನಿಂದಾಗಿ ಮತದಾನದಿಂದ ವಂಚಿತವಾದ ಕುಟುಂಬ Read More »

ಕರ್ನಾಟಕ
Scroll to Top