ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಹೊತ್ತಿ ಉರಿದ ಲಾರಿ-ಸ್ಕೂಟರ್; ಓರ್ವ ಸಾವು

(ನ್ಯೂಸ್ ಕಡಬ) newskadaba.com ಜ.11 ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ-ಸ್ಕೂಟರ್ ಅಪಘಾತ ಸಂಭವಿಸಿ ಗೂಡ್ಸ್ ಲಾರಿ ಮತ್ತು ಸ್ಕೂಟರ್ ಸಂಪೂರ್ಣ ಹೊತ್ತಿ ಉರಿದ ಗೂಡ್ಸ್ ಘಟನೆ ಉಡುಪಿ ಉದ್ಯಾವರದ ಬಲಾಯಿಪಾದೆ ಎಂಬಲ್ಲಿ ತಡರಾತ್ರಿ ನಡೆದಿದೆ.

ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಮತ್ತು ಸ್ಕೂಟರ್ ಸುಟ್ಟು ಕರಕಲಾಗಿದೆ. ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಲಾರಿ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಲಾರಿಗೆ ಬೆಂಕಿಗಾಹುತಿಯಾಗಿದೆ. ಢಿಕ್ಕಿಯ ರಭಸಕ್ಕೆ ಲಾರಿಯ ಅಡಿ ಭಾಗಕ್ಕೆ ಆ್ಯಕ್ಟಿವಾ ಹೋಗಿ ಬಿದ್ದಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Also Read  ನೇಲ್ಯಡ್ಕ ಸರಕಾರಿ ಶಾಲೆಗೆ ಬಿಜೆಪಿ ಮುಖಂಡ ಅನಿಲ್‌ ಈಶೋರಿಂದ ಕಂಪ್ಯೂಟರ್ ಕೊಡುಗೆ

Nk Cake House

error: Content is protected !!
Scroll to Top