ತಿರುಪತಿ ದೇವಸ್ಥಾನಕ್ಕೆ ರೇಷ್ಮೆ ಬಟ್ಟೆ ಅರ್ಪಿಸಿದ ಚಂದ್ರಬಾಬು ನಾಯ್ಡು

(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 05.  ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶುಕ್ರವಾರ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಾಯ್ಡು ಅವರು ತಮ್ಮ ಪತ್ನಿಯೊಂದಿಗೆ ರಾಜ್ಯ ಸರ್ಕಾರದ ಪರವಾಗಿ ದೇವರಿಗೆ “ಪಟ್ಟು ವಸ್ತ್ರ” (ರೇಷ್ಮೆ ಬಟ್ಟೆ) ಅರ್ಪಿಸಿದರು. ದಂಪತಿ ರೇಷ್ಮೆ ಬಟ್ಟೆಗಳನ್ನು ಚಿನ್ನದ ತಟ್ಟೆಯಲ್ಲಿಟ್ಟು ತಲೆಯ ಮೇಲೆ ಹೊತ್ತುಕೊಂಡು ಮುಖ್ಯ ದ್ವಾರದ ಮೂಲಕ ದೇವಾಲಯವನ್ನು ಪ್ರವೇಶಿಸಿದರು.

ಅರ್ಪಣೆಯ ನಂತರ, ದೇವಾಲಯದ ಮುಖ್ಯ ಅರ್ಚಕರು ನಾಯ್ಡು ಅವರಿಗೆ ಪರಿವಟ್ಟಂ (ಪವಿತ್ರ ದಾರ) ಕಟ್ಟಿದರು, ಮುಖ್ಯಮಂತ್ರಿ ಹಣೆಗೆ ಸಾಂಪ್ರದಾಯಿಕ ತಿರುನಾಮಂ ಧರಿಸಿದ್ದರು. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಅವರು ನಾಯ್ಡು ಅವರಿಗೆ ಶ್ರೀ ವಾರಿಯ ಶೇಷ ವಸ್ತ್ರ (ಪವಿತ್ರ ಬಟ್ಟೆ) ನೀಡಿ ಗೌರವಿಸಿದರು.

Also Read  ಹಣ ದ್ವಿಗುಣ ಮಾಡುತ್ತೇನೆಂದು ನಂಬಿಸಿ ವಂಚನೆ!   ➤8.78 ಲಕ್ಷ ರೂ. ದೋಖಾ!!!

 

error: Content is protected !!
Scroll to Top