ಪ್ರಸಾದದೊಂದಿಗೆ ದರ್ಶನ್ ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮೀ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಸೆ. 12. ಬಳ್ಳಾರಿ ಜೈಲಿನಲ್ಲಿ ಕೈದಿಯಾಗಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ, ಸಂಬಂಧಿ ಸುಶಾಂತ್ ನಾಯ್ಡು ಹಾಗೂ ವಕೀಲ ಸುನೀಲ್ ಗುರುವಾರದಂದು ಭೇಟಿ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಪತಿಗೊಸ್ಕರ ಡ್ರೈ ಫ್ರೂಟ್ಸ್, ಬಿಸ್ಕಟ್ ಹಾಗೂ ದೇವರ ಪ್ರಸಾದವಿರುವ ಬ್ಯಾಗ್ ತಂದಿದ್ದು, ಎಲ್ಲವನ್ನೂ ತಪಾಸನೆ ನಡೆಸಿದ ಬಳಿಕ ಒಳಗೆ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

ವಿಜಯಲಕ್ಷ್ಮೀ, ವಕೀಲರು ಮತ್ತು ಸಹೋದರ ದಿನಕರ್ ಜೊತೆ ಚಾರ್ಜ್ ಶೀಟ್ ಸಮೇತ ಜೈಲಿಗೆ ಬಂದಿದ್ದಾರೆ. ಈ ವೇಳೆ ದರ್ಶನ್ ನನ್ನು ಹೈ ಸೆಕ್ಯುರಿಟಿ ಸೆಲ್ ನಿಂದ ಸಂದರ್ಶಕರ ಕೋಣೆಗೆ ಜೈಲು ಸಿಬ್ಬಂದಿಗಳು ಕರೆತಂದಿದ್ದಾರೆ.

Scroll to Top